Vastu Tips: ಸ್ಯಾಲರಿ ಬಂದ ತಕ್ಷಣ ಖಾಲಿಯಾಗುತ್ತಾ? ಹಣ ಉಳಿಸಲು ವಾಸ್ತು ನಿಯಮ ಪಾಲಿಸಿ
ತಿಂಗಳು ಮುಗಿಯೋದ್ರೊಳಗೆ ನಿಮ್ಮ ಸಂಬಳ ಖಾಲಿಯಾಗುತ್ತಾ? ಹಾಗಿದ್ರೆ ನೀವು ಈ ವಾಸ್ತು ನಿಯಮಗಳನ್ನು ಪಾಲಿಸಿ. ಇದರಿಂದ ಜೇಬಲ್ಲಿ ಹಣ ಉಳಿಯಲು ಸಾಧ್ಯವಾಗುತ್ತೆ.

ಸಾಮಾನ್ಯವಾಗಿ ಸಂಬಳ ಬಂದ ತಕ್ಷಣ ಖರ್ಚಾಗುತ್ತದೆ ಮತ್ತು ನಂತರ ಇಡೀ ತಿಂಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಇದೆಲ್ಲವೂ ವಾಸ್ತು ದೋಷಗಳಿಂದ (Vastu Dosha) ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳನ್ನು ಪಾಲಿಸಿದ್ರೆ ಮಾತ್ರ ನಿಮ್ಮ ಜೇಬಲ್ಲಿ ಉಳಿಯಲು ಸಾಧ್ಯವಾಗುತ್ತೆ.
ವಾಸ್ತು ದೋಷಗಳು ದುಂದುಗಾರಿಕೆಯನ್ನು ಹೆಚ್ಚಿಸುತ್ತವೆ
ವಾಸ್ತು ದೋಷಗಳು ದುಂದುಗಾರಿಕೆಗೆ ಕಾರಣವಾಗುತ್ತವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಜನರು ಬಯಸದೆಯೇ ಹಣವನ್ನು ಖರ್ಚು ಮಾಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಣ ಉಳಿಯದಿದ್ದರೆ ಮತ್ತು ಯಾವುದೇ ಕಾರಣವಿಲ್ಲದೆ ಬಹಳಷ್ಟು ಹಣವನ್ನು ಖರ್ಚು ಮಾಡುತ್ತಿದ್ದರೆ, ಇದೆಲ್ಲವೂ ವಾಸ್ತು ದೋಷಗಳಿಂದಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ವಾಸ್ತುವಿಗೆ (Vaastu Tips) ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಬೇಕು.
ದಿಕ್ಕುಗಳು ಸಹ ಖರ್ಚಿಗೆ ಕಾರಣವಾಗುತ್ತೆ
ವಾಸ್ತು ಶಾಸ್ತ್ರದ ಪ್ರಕಾರ, ನೈಋತ್ಯ-ಪಶ್ಚಿಮ ದಿಕ್ಕನ್ನು ಖರ್ಚಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಾಕರ್ (locker) ಅಥವಾ ಹಣಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಇರಿಸಿದರೆ, ವೆಚ್ಚಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ.
ಈ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಬೇಡೀ
ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಹಸಿರು ಸಸ್ಯವನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು. ಇದಲ್ಲದೆ, ವಾಲ್ಪೇಪರ್ (wall paper) ಅಥವಾ ಶೋ ಪೀಸನ್ನು ಈ ದಿಕ್ಕಿನಲ್ಲಿ ಇಡುವುದು ಸಹ ಅಶುಭ. ಯಾವುದೇ ಪ್ರಮುಖ ದಾಖಲೆಗಳನ್ನು ಈ ದಿಕ್ಕಿನಲ್ಲಿ ಇಡಬೇಡಿ.
ಖರ್ಚುಗಳನ್ನು ತಪ್ಪಿಸಲು ವಾಸ್ತು ಸಲಹೆಗಳು
ನೀವು ಖರ್ಚುಗಳನ್ನು ತಪ್ಪಿಸಲು ಬಯಸಿದರೆ, ಯಾವಾಗಲೂ ನೈಋತ್ಯ ದಿಕ್ಕನ್ನು ಖಾಲಿಯಾಗಿ ಮತ್ತು ಸ್ವಚ್ಛವಾಗಿಡಿ. ಈ ದಿಕ್ಕಿನಲ್ಲಿ ಗೋಡೆಗಳನ್ನು ಲೈಟ್ ಕ್ರೀಮ್ ಅಥವಾ ಡಸ್ಕಿ ಬಿಳಿ ಬಣ್ಣದಲ್ಲಿ ಪೈಂಟ್ ಮಾಡೋದ್ರಿಂದ ಸುಖಾ ಸುಮ್ಮನೆ ಖರ್ಚಾಗೋದಿಲ್ಲ.
ಆರ್ಥಿಕ ಸ್ಠಿತಿ ಸುಧಾರಿಸುತ್ತೆ
ವಾಸ್ತು ನಿಯಮಗಳ ಪ್ರಕಾರ ನೈಋತ್ಯ-ಪಶ್ಚಿಮ ದಿಕ್ಕನ್ನು ಸರಿಪಡಿಸಿದರೆ, ಖರ್ಚುಗಳು ಸ್ವಯಂಚಾಲಿತವಾಗಿ ನಿಯಂತ್ರಣಕ್ಕೆ ಬರುತ್ತವೆ. ಇದರೊಂದಿಗೆ, ಮನೆಯ ಆರ್ಥಿಕ ಸ್ಥಿತಿಯೂ (economical condition) ಸುಧಾರಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿ ಬರುತ್ತದೆ.