MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಅಕ್ಕಿಯ ಈ ಸರಳ ಪರಿಹಾರಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸತ್ತೆ!

ಅಕ್ಕಿಯ ಈ ಸರಳ ಪರಿಹಾರಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸತ್ತೆ!

ಅಕ್ಕಿಯನ್ನು ಕೇವಲ ಅನ್ನ ಮಾಡಲು ಮಾತ್ರವಲ್ಲ ಹಿಂದೂ ಧರ್ಮದಲ್ಲಿ ಹಲವಾರು ಕಾರಣಕ್ಕೆ ಅಕ್ಕಿಯನ್ನು ಬಳಕೆ ಮಾಡಲಾಗುತ್ತೆ. ಅಕ್ಕಿ ಎಂದರೆ ಅಕ್ಷತೆ, ಇದನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಧಾನ್ಯವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಆರಾಧನೆಯಲ್ಲಿ ಯಾವುದೇ ವಸ್ತುವಿನ ಕೊರತೆಯಿದ್ದರೆ, ಆ ವಸ್ತುವಿನ ಬದಲು ಅಕ್ಕಿಯನ್ನು ಅರ್ಪಿಸಬಹುದು. ಪ್ರತಿಯೊಬ್ಬ ದೇವರಿಗೆ ಅರ್ಪಿಸಬಹುದಾದ ಏಕೈಕ ಧಾನ್ಯವೆಂದರೆ ಅಕ್ಕಿ ಎಂದು ಹೇಳಲಾಗುತ್ತೆ.

2 Min read
Suvarna News
Published : Nov 04 2022, 01:40 PM IST
Share this Photo Gallery
  • FB
  • TW
  • Linkdin
  • Whatsapp
18

ಜೀವನದಲ್ಲಿ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ, ಸಂಪೂರ್ಣ ಫಲಿತಾಂಶ ಸಿಗೋದಿಲ್ಲ ಮತ್ತು ಯಾವಾಗಲೂ ಜೀವನದಲ್ಲಿ ಒಂದಲ್ಲ ಒಂದು ಕೊರತೆಯಿರುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೀವನದ ಎಲ್ಲಾ ಸಂತೋಷಗಳನ್ನು ಪಡೆಯಲು ಅದೃಷ್ಟವು(Luck) ಬಲವಾಗಿರುವುದು ಬಹಳ ಮುಖ್ಯ. 
 

28

ಅನೇಕ ಬಾರಿ ಅದೃಷ್ಟ ಕೆಲವು ಕಾರಣಗಳಿಗಾಗಿ ನಮ್ಮನ್ನು ಬೆಂಬಲಿಸೋದಿಲ್ಲ. ಆಗ, ಅಕ್ಕಿಯ(Rice) ಕೆಲವು ಸಣ್ಣ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅದೃಷ್ಟವನ್ನು ಬಲಪಡಿಸಬಹುದು. ಹಾಗಾಗಿ ಅಂತಹ ಕೆಲವು ಕ್ರಮಗಳನ್ನು ಇಲ್ಲಿ ತಿಳಿದುಕೊಳ್ಳೋಣ, ಅದು ನಿಮ್ಮ ಹಣೆಬರಹವನ್ನು ಬದಲಾಯಿಸಬಹುದು.

38

ಹಣದ (Money) ಕೊರತೆಯನ್ನು ನೀಗಿಸುತ್ತೆ
ಹಿಂದೂ ಧರ್ಮದಲ್ಲಿ, ಅಕ್ಷತೆ ಎಂದರೆ ಪೂಜೆಯಲ್ಲಿ ಬಳಸುವ ಅಕ್ಕಿ, ಅದನ್ನು ಕುಂಕುಮದೊಂದಿಗೆ ತಿಲಕವಾಗಿ ಹಣೆಯ ಮೇಲೆ ಹಚ್ಚೋದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.ಇದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ತಿಳಿಸುತ್ತೇವೆ.

48

ತಾಮ್ರದ ಲೋಟದಲ್ಲಿ ಕುಂಕುಮದೊಂದಿಗೆ ಸ್ವಲ್ಪ ಅಕ್ಕಿಯನ್ನು ಹಾಕಿ ಮತ್ತು ಇದನ್ನು ಸೂರ್ಯ (Sun) ದೇವರಿಗೆ ಅರ್ಘ್ಯ ಅರ್ಪಿಸೋದರಿಂದ  ಅದೃಷ್ಟ ಒಲಿಯುತ್ತೆ ಮತ್ತು ವ್ಯಕ್ತಿಯು ಎಂದಿಗೂ ಹಣದ ಕೊರತೆ ಎದುರಿಸೋದಿಲ್ಲ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ. ನೀವೂ ಇದನ್ನು ಟ್ರೈ ಮಾಡಿ ನೋಡಬಹುದು.

58
</p>

</p>

ತಾಯಿ ಲಕ್ಷ್ಮಿಯ (Goddess Lakshmi) ಆಶೀರ್ವಾದ ಪಡೆಯಲು ನೀವೇನು ಮಾಡಬೇಕು ನೋಡಿ?
ನಂಬಿಕೆಯ ಪ್ರಕಾರ, ಹುಣ್ಣಿಮೆಯ ದಿನದಂದು, ಬೆಳಿಗ್ಗೆ ಎದ್ದು ಸ್ನಾನ ಮಾಡಿ, 21 ಅಕ್ಕಿಯ ಕಾಳುಗಳನ್ನು ಶುದ್ಧವಾದ ಕೆಂಪು ರೇಷ್ಮೆ ಬಟ್ಟೆಯಲ್ಲಿ ಇರಿಸಿ ಮತ್ತು ಮಾತೆ ಲಕ್ಷ್ಮಿಯ ಮುಂದೆ ಇಟ್ಟು ಪೂಜೆ ಮಾಡಿ. 

68

ಪೂಜೆಯ ನಂತರ, ಈ ಗಂಟನ್ನು ನಿಮ್ಮ ಮನೆಯಲ್ಲಿ ಸಂಪತ್ತಿನ (Wealth) ಸ್ಥಾನದಲ್ಲಿ ಇರಿಸಿ. ಅಂದರೆ ಯಾವ ಜಾಗದಲ್ಲಿ ನೀವು ಹಣ, ಚಿನ್ನವನ್ನು ಇಡುತ್ತೀರೋ ಆ ಜಾಗದಲ್ಲಿ ಇರಿಸಿ. ಹೀಗೆ ಮಾಡೋದರಿಂದ, ವ್ಯಕ್ತಿಯು ಎಂದಿಗೂ ಹಣದ ಕೊರತೆ ಎದುರಿಸೋದಿಲ್ಲ ಮತ್ತು ಮನೆಯಲ್ಲಿನ ಹಣ ಯಾವಾಗಲೂ ತುಂಬಿರುತ್ತೆ ಎಂದು ನಂಬಲಾಗಿದೆ.

78

ಭಗವಾನ್ ಶಿವನಿಗೆ (Lord shiv) ಅಕ್ಷತೆ ಅರ್ಪಿಸಿ
ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಮತ್ತು ದಣಿವರಿಯದೆ ಕೆಲಸ ಮಾಡಿದ ನಂತರವೂ, ಅವನು ತನ್ನ ಕಠಿಣ ಪರಿಶ್ರಮಕ್ಕೆ ಸಾಕಷ್ಟು ಫಲಿತಾಂಶ ಪಡೆಯದಿದ್ದರೆ,  ಆ ವ್ಯಕ್ತಿ ಸೋಮವಾರ ಅರ್ಧ ಕೆಜಿ ಅಕ್ಕ್ಕಿಯೊಂದಿಗೆ ಶಿವ ದೇವಾಲಯಕ್ಕೆ ಹೋಗಿ ಶಿವ ನಾಮವನ್ನು ಜಪಿಸುತ್ತಾ ಮುಷ್ಟಿ ಅಕ್ಷತೆಯನ್ನು ಅರ್ಪಿಸಬೇಕು.

88

ಅಕ್ಷತೆ ಅರ್ಪಿಸಿದ ನಂತರ, ಉಳಿದ ಅಕ್ಕಿಯನ್ನು ಬಡ ಅಥವಾ ನಿರ್ಗತಿಕ ವ್ಯಕ್ತಿಗೆ ದಾನ (Donate) ಮಾಡಬೇಕು. ಸತತ ಐದು ಸೋಮವಾರಗಳ ಕಾಲ ಈ ಪರಿಹಾರವನ್ನು ಮಾಡೋದರಿಂದ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕ್ರಮೇಣ ಕೊನೆಗೊಳ್ಳುತ್ತೆ ಎನ್ನುವ ನಂಬಿಕೆ ಇದೆ. ಹಾಗಾಗಿ ನೀವು ಸಹ ಹಣದ ಕೊರತೆ ಅನುಭವಿಸುತ್ತಿದ್ದರೆ ಈ ಪರಿಹಾರಗಳನ್ನು ಒಂದು ಸಲ ಟ್ರೈ ಮಾಡಿ ನೋಡಿ.   

About the Author

SN
Suvarna News
ಅಕ್ಕಿ
ಆಹಾರ
ಅದೃಷ್ಟ
ಜ್ಯೋತಿಷ್ಯ

Latest Videos
Recommended Stories
Recommended image1
Vastu Tips: ಹೊಸ ವರ್ಷಕ್ಕೂ ಮೊದ್ಲು ಈ ವಸ್ತುಗಳನ್ನ ತಂದ್ರೆ, ಮನೆ ತುಂಬಾ ಹಣವೋ ಹಣ!
Recommended image2
Vastu Tips: 2026ರ ಹೊಸ ವರ್ಷ ಬೊಂಬಾಟ್ ಆಗಿರಬೇಕು ಅಂದ್ರೆ ಹೀಗೆ ನೆಗೆಟಿವ್ ಎನರ್ಜಿ ದೂರ ಮಾಡಿ
Recommended image3
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved