- Home
- Entertainment
- TV Talk
- ಕಿರುತೆರೆ ನಟ ಭರತ್ ಬೊಪ್ಪಣ್ಣ ಆಸ್ಪತ್ರೆಗೆ ದಾಖಲು; 15 ದಿನಗಳಿಂದ ಚಿಕಿತ್ಸೆ ಪಡೆಯುವಂತದ್ದು ಏನಾಗಿದೆ?
ಕಿರುತೆರೆ ನಟ ಭರತ್ ಬೊಪ್ಪಣ್ಣ ಆಸ್ಪತ್ರೆಗೆ ದಾಖಲು; 15 ದಿನಗಳಿಂದ ಚಿಕಿತ್ಸೆ ಪಡೆಯುವಂತದ್ದು ಏನಾಗಿದೆ?
15 ದಿನಗಳಿಂದ ಆಯುರ್ವೆದ ಚಿಕಿತ್ಸೆ ಪಡೆಯುತ್ತಿರುವ ಕಿರುತೆರೆ ನಟ ಭರತ್ ಬೋಪಣ್ಣ .. ಚಿಕಿತ್ಸೆ ಬಗ್ಗೆ ಮಾತನಾಡಿದ ನಟ..

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಭಿನಯಿಸಿರುವ ನಟ ಭರತ್ ಬೋಪಣ್ಣ (Bharath Bopanna).
2016ರಲ್ಲಿ ಆದ spinal disc herniation ಈಗಲೂ ನರಳುತ್ತಿರುವ ಭರತ್ ಆಯುರ್ವೇದ ಚಿಕಿತ್ಸೆ ಶುರು ಮಾಡಿದ್ದಾರೆ. 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಇದ್ದಕ್ಕಿದ್ದಂತೆ ನೋವು ಹೆಚ್ಚಾಗಿ ನಡೆದಾಡಲು ಕಷ್ಟ ಪಡುತ್ತಿದ್ದೆ ಆಗ ಒಂದು ತಿಂಗಳು ಸಂಪೂರ್ಣವಾಗಿ ಬೆಡ್ ರೆಸ್ಟ್ ತೆಗೆದುಕೊಂಡಿರುವೆ' ಎಂದು ಭರತ್ ಟೈಮ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
'ಆಪರೇಶನ್ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ಕೊಟ್ಟರು ಆದರೆ ಅದರಿಂದ ಸುಮಾರು 6 ತಿಂಗಳು ಕ್ಯಾಮೆರಾದಿಂದ ದೂರ ಉಳಿಯಬೇಕಾಗುತ್ತದೆ'
'ನನ್ನ ಸಹೋದರನ ಸಲಹೆ ಪ್ರಕಾರ ಆಯುರ್ವೇದ ಚಿಕಿತ್ಸೆ ಪಡೆಯಲು ಮುಂದಾದೆ. ಆಯುರ್ವೇದ ಆಯ್ಕೆ ಮಾಡಿಕೊಂಡಿದ್ದು ಒಳ್ಳೆಯದಾಯ್ತು ಬೇಗ ಗುಣವಾಗುತ್ತಿರುವೆ'
'ದಿನ ಮಸಾಜ್ ಥೆರಪಿ ನೀಡುತ್ತಿದ್ದಾರೆ ಇದರ ಜೊತೆ ಹಳೆ ಕಾಲದ ರೀತಿ ಕಷಾಯ ಕುಡಿಯುತ್ತಿರುವೆ. ಖಾರ ಮತ್ತು ಉಪ್ಪು ಪದಾರ್ಥಗಳ್ನು ಸಂಪೂರ್ಣವಾಗಿ ಬಿಟ್ಟಿರುವೆ'
'ಜೀರ್ಣಶಕ್ತಿ ಹೆಚ್ಚಾಗಬೇಕು ಎಂದು ಸಂಪೂರ್ಣವಾಗಿ ಪ್ರೋಟಿನ್ ಅಂಶ ಇರುವ ಪದಾರ್ಥಗಳನ್ನು ಬಿಟ್ಟಿರುವೆ. ಇನ್ನು 9 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿರುತ್ತೀನಿ' ಎಂದು ಭರತ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.