MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನೀಚರಿಗಿಲ್ಲ ಉಳಿಗಾಲ; ಲಕ್ಷ್ಮೀಕಾಂತ್‌ಗೆ ಸಿಕ್ತು ಮಹಾಬಲ; ಮಲ್ಲಿ ಮೇಲೆ ಕೆಡಿ ಕಣ್ಣು

ನೀಚರಿಗಿಲ್ಲ ಉಳಿಗಾಲ; ಲಕ್ಷ್ಮೀಕಾಂತ್‌ಗೆ ಸಿಕ್ತು ಮಹಾಬಲ; ಮಲ್ಲಿ ಮೇಲೆ ಕೆಡಿ ಕಣ್ಣು

ಜೈದೇವ್‌ನ ಯಾವುದೇ ಹೆಜ್ಜೆಯನ್ನು ನಿರ್ಲಕ್ಷಿಸದಂತೆ ಆನಂದ್‌ಗೆ ಲಕ್ಷ್ಮೀಕಾಂತ್ ಎಚ್ಚರಿಸಿದರೆ, ಇತ್ತ ಶಕುಂತಲಾ ಮಲ್ಲಿ ವಿಚಾರದಲ್ಲಿ ಜಾಗರೂಕರಾಗಿರಲು ಮಗನಿಗೆ ಸಲಹೆ ನೀಡಿದ್ದಾಳೆ. ಪತ್ನಿ ಭೂಮಿಕಾಳ ಆರೋಗ್ಯದಲ್ಲಿನ ಬದಲಾವಣೆ ಗಮನಿಸಿದ ಗೌತಮ್‌ಗೆ ಆಕೆಗೆ ಕ್ಯಾನ್ಸರ್ ಇರುವ ಆಘಾತಕಾರಿ ಸತ್ಯ ತಿಳಿದಿದೆ.

2 Min read
Author : Mahmad Rafik
Published : Jul 18 2026, 07:49 PM IST
Share this Photo Gallery
  • FB
  • TW
  • Linkdin
  • Whatsapp
15
ಆನಂದ್‌ಗೆ ಲಕ್ಷ್ಮೀಕಾಂತ್‌ ಸಲಹೆ
Image Credit : zee kannada

ಆನಂದ್‌ಗೆ ಲಕ್ಷ್ಮೀಕಾಂತ್‌ ಸಲಹೆ

ನಮ್ಮ ಕಣ್ಣಿಗೆ ಕಾಣೋದು ಏನೋ ನಡೆಯುತ್ತಿದೆ ಎಂಬ ಅನುಮಾನವಿದೆ. ಶಕುಂತಲಾ ಹೇಳಿದ ಒಂದೇ ಮಾತಿಗೆ ಸಹಿ ಹಾಕಿದ್ದಾನೆ ಎಂಬ ವಿಷಯ ಕೇಳಿ ನನಗೆ ಅನುಮಾನವಿದೆ. ಜೈದೇವ್ ಯಾವುದೇ ಲಾಭವಿಲ್ಲದೇ ಕೆಲಸ ಮಾಡಲ್ಲ. ಜೈದೇವ್ ಬದಲಾಗೋಕೆ ಸಾಧ್ಯವೇ ಇಲ್ಲ. ಬದಲಾಗುವ ಸನ್ನಿವೇಶವನ್ನು ಮೀರಿಯೇ ಹೋಗಿದ್ದಾನೆ. ಯಾವುದೇ ಕ್ಷಣಕ್ಕೂ ನಾವು ಎಚ್ಚರ ತಪ್ಪಬಾರದು ಎಂದು ಆನಂದ್‌ಗೆ ಲಕ್ಷ್ಮೀಕಾಂತ್‌ ಸಲಹೆ ನೀಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜೈದೇವ್ ಮೇಲೆ ಆನಂದ್ ಕಣ್ಣು
Image Credit : zee kannada

ಜೈದೇವ್ ಮೇಲೆ ಆನಂದ್ ಕಣ್ಣು

ಜೈದೇವ್ ಮೇಲೆ ದ್ವೇಷ ಸಾಧಿಸಬೇಕು ಅನ್ನೋ ಉದ್ದೇಶ ನನಗಿಲ್ಲ. ಆದರೆ ಆತನ ಪ್ರತಿ ಹೆಜ್ಜೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಆನಂದ್‌ಗೆ ಲಕ್ಷ್ಮೀಕಾಂತ್ ಹೇಳಿ ಎಚ್ಚರಿಸಿದ್ದಾನೆ. ಲಕ್ಷ್ಮೀಕಾಂತ್‌ ಮಾತು ಕೇಳಿ ತಲೆಯಾಡಿಸಿದ ಆನಂದ್, ನಾವೆಲ್ಲರೂ ಚೆನ್ನಾಗಿದ್ದೇವೆ ಎಂದ ಕ್ಷಣವೇ ನಾವು ಯಾವ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಆನಂದ್ ಸಹ ಹೇಳಿದ್ದಾನೆ.

Related Articles

Related image1
ಸಿಸ್ಟರ್ ಬೆನ್ನ ಹಿಂದೆಯೇ ಬಿದ್ದ ಶಕುನಿ ಮಾಮಾ; ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಗಢ ಗಢ
Related image2
Amruthadhaare ಟ್ವಿಸ್ಟ್​- ಡಾಕ್ಟರ್​ vs ಕೊರವಂಜಿ; ಗೆಲ್ಲೋರು ಯಾರು? ಮಂಜುನಾಥನ ಸನ್ನಿಧಿಯಲ್ಲಿ ಪವಾಡ
35
ಮಲ್ಲಿ ವಿಷಯದಲ್ಲಿ ಎಚ್ಚರವಾಗಿರುವಂತೆ ಶಕುಂತಲಾ ಸಲಹೆ
Image Credit : Zee Kannada

ಮಲ್ಲಿ ವಿಷಯದಲ್ಲಿ ಎಚ್ಚರವಾಗಿರುವಂತೆ ಶಕುಂತಲಾ ಸಲಹೆ

ಇನ್ಮುಂದೆ ಮಲ್ಲಿ ವಿಚಾರದಲ್ಲಿ ಒಂದು ಹೆಜ್ಜೆ ಇಡಬೇಕಾದ್ರೆ ಸಾವಿರ ಸಲ ಯೋಚನೆ ಮಾಡಬೇಕು. ಒಂದು ತಪ್ಪು ಹೆಜ್ಜೆ ಹಲವು ಕಷ್ಟಗಳನ್ನು ಎದುರಿಸಬೇಕು. ನೀನು ಮಾಡುವ ಒಂದು ತಪ್ಪಿಗಾಗಿ ಮಲ್ಲಿ ಕಾಯ್ತಿದ್ದಾಳೆ. ಇಷ್ಟು ವರ್ಷ ನಾನು ಕೋಪದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ಈಗ ಪಶ್ಚತ್ತಾಪ ಅನುಭವಿಸುತ್ತಿದ್ದೇನೆ. ಮಲ್ಲಿ ಆರ್ಡಿನರಿ ಹೆಣ್ಣು ಅಲ್ಲ, ಆಕೆ ಈಗ ಪೊಲೀಸ್ ಆಫಿಸರ್ ಎಂದು ಕೆಡಿ ಮಗನಿಗೆ ಶಕುಂತಲಾ ಎಚ್ಚರಿಸಿದ್ದಾಳೆ. ಮಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಜೈದೇವ್‌ನನ್ನು ಶಕುಂತಲಾ ತಡೆದಿದ್ದಾಳೆ.

45
ನಿರ್ದೇಶಕರ ಎಡವಟ್ಟು
Image Credit : Zee Kannada

ನಿರ್ದೇಶಕರ ಎಡವಟ್ಟು

ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ಜೊತೆಯಾಗಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಆವರಣದಲ್ಲಿದ್ದ ಕೊರವಂಜಿ ಇಬ್ಬರ ಕೈಗಳನ್ನು ನೋಡಿ ಭವಿಷ್ಯ ನುಡಿದಿದ್ದಾಳೆ. ಕೊರವಂಜಿ ಭೂಮಿಕಾಳ ಬಲಗೈ ನೋಡಿ ಭವಿಷ್ಯ ಹೇಳಿದ್ದಾಳೆ. ಆದ್ರೆ ಮಹಿಳೆಯರ ಭವಿಷ್ಯ ನೋಡಲು ಎಡಗೈ ನೋಡುತ್ತಾರೆ. ನಿರ್ದೇಶಕರು ಇಲ್ಲಿ ಎಡವಿದ್ದಾರೆ ಎಂದು ಸೀರಿಯಲ್ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

55
ಭೂಮಿಕಾಗೆ ರಕ್ತದ ವಾಂತಿ
Image Credit : Zee Kannada

ಭೂಮಿಕಾಗೆ ರಕ್ತದ ವಾಂತಿ

ಇತ್ತ ಗೌತಮ್ ಜೊತೆ ಊಟಕ್ಕೆ ಕುಳಿತಾಗಲೇ ಭೂಮಿಕಾಗೆ ರಕ್ತದ ವಾಂತಿಯಾಗಿದೆ. ತನಗೆ ಬ್ಲಡ್ ವಾಮಿಟ್ ಆಗಿರೋದು ಗಂಡನಿಗೆ ಗೌತಮ್‌ಗೆ ಗೊತ್ತಾಗದಂತೆ ಭೂಮಿಕಾ ನಟಿಸಿದ್ದಾಳೆ. ಆದ್ರೆ ನೆಚ್ಚಿನ ಮಡದಿ ಭೂಮಿಕಾ ಆರೋಗ್ಯದಲ್ಲಿ ಬದಲಾವಣೆ ಆಗುತ್ತಿರೋದು ಗೌತಮ್ ಗಮನಕ್ಕೆ ಬಂದಿದೆ. ಮನೆಯಲ್ಲಿ ಸಿಕ್ಕ ಮೆಡಿಕಲ್ ರಿಪೋರ್ಟ್ ಹಿಡಿದು ಆಸ್ಪತ್ರೆಗೆ ಹೋದ ಗೌತಮ್‌ಗೆ, ಪತ್ನಿಗೆ ಕ್ಯಾನ್ಸರ್ ಇರೋ ಶಾಕಿಂಗ್ ವಿಷಯ ಗೊತ್ತಾಗಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Amruthadhaare ಟ್ವಿಸ್ಟ್​- ಡಾಕ್ಟರ್​ vs ಕೊರವಂಜಿ; ಗೆಲ್ಲೋರು ಯಾರು? ಮಂಜುನಾಥನ ಸನ್ನಿಧಿಯಲ್ಲಿ ಪವಾಡ
Recommended image2
ಅಪ್ಪ, ಅಮ್ಮನನ್ನು ಒಂದು ಮಾಡಲು ಪ್ರಯತ್ನಪಟ್ಟಿದ್ದೆ: ಓಂ ಪ್ರಕಾಶ್‌, ರೇಖಾ ದಾಸ್‌ ಮಗಳು ನಟಿ ಸಾತ್ವಿಕಾ
Recommended image3
Karna Serial Update: ಶೀಘ್ರದಲ್ಲಿ ನಿತ್ಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ? ಧಾರಾವಾಹಿಯಿಂದ ಹೊರ ಬಂದ ನಮ್ರತಾ!
Related Stories
Recommended image1
ಸಿಸ್ಟರ್ ಬೆನ್ನ ಹಿಂದೆಯೇ ಬಿದ್ದ ಶಕುನಿ ಮಾಮಾ; ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಗಢ ಗಢ
Recommended image2
Amruthadhaare ಟ್ವಿಸ್ಟ್​- ಡಾಕ್ಟರ್​ vs ಕೊರವಂಜಿ; ಗೆಲ್ಲೋರು ಯಾರು? ಮಂಜುನಾಥನ ಸನ್ನಿಧಿಯಲ್ಲಿ ಪವಾಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved