MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮೀನಾಕ್ಷಿ ಕಣ್ಣಿಗೆ ಬೆಚ್ಚಿದ ಭಾಗ್ಯಾ, ಹೊರ ಬರ್ತಿದೆ ಅಸಲಿ ವಿಲನ್ ಬಣ್ಣ

ಮೀನಾಕ್ಷಿ ಕಣ್ಣಿಗೆ ಬೆಚ್ಚಿದ ಭಾಗ್ಯಾ, ಹೊರ ಬರ್ತಿದೆ ಅಸಲಿ ವಿಲನ್ ಬಣ್ಣ

Colors Kannada Bhagyalakshmi Serial : ಭಾಗ್ಯಲಕ್ಷ್ಮಿ ಸೀರಿಯಲ್ ಹೊಸ ಟ್ವಿಸ್ ಪಡೆದುಕೊಂಡಿದೆ. ಇಷ್ಟು ದಿನ ಬರೀ ತಾಂಡವ್, ಶ್ರೇಷ್ಠಾಳಿಂದ ಸುಸ್ತಾಗಿದ್ದ ಭಾಗ್ಯಾಗೆ ಈಗ ಆದಿ ಮನೆಯಲ್ಲಿ ದೊಡ್ಡ ಶಾಕ್ ಸಿಗುವ ಸಾಧ್ಯತೆ ಇದೆ. 

2 Min read
Author : Roopa Hegde
Published : May 01 2026, 11:48 AM IST
Share this Photo Gallery
  • FB
  • TW
  • Linkdin
  • Whatsapp
16
 ಮೀನಾಕ್ಷಿಗೆ ಇನ್ನೊಂದು ಮುಖ ಇದ್ಯಾ?
Image Credit : Asianet News

ಮೀನಾಕ್ಷಿಗೆ ಇನ್ನೊಂದು ಮುಖ ಇದ್ಯಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಹೊಸ ದಾರಿ ಹಿಡಿದು ತುಂಬಾ ದಿನವಾಯ್ತು. ತಾಂಡವ್ ಜೈಲು ಸೇರಿದ್ದಾಯ್ತು. ಈಗ ಭಾಗ್ಯಾ, ಆದಿ ಮದುವೆ ಆಗಿ ಆದಿ ಮನೆಯಲ್ಲಿ ಹೊಸ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಮೀನಾಕ್ಷಿ ಹಾಗೂ ಆದಿ ತಂಗಿಯೇ ಭಾಗ್ಯಗೆ ವಿಲನ್. ಈ ಮಧ್ಯೆ ಇಂದು ಪ್ರಸಾರವಾಗ್ತಿರುವ ಪ್ರೋಮೋ ಹೊಸ ಗುಟ್ಟು ಬಿಟ್ಟುಕೊಡ್ತಿದೆ. ಮೀನಾಕ್ಷಿ ಬರೀ ವಿಲನ್ ಅಲ್ಲ ಖತರ್ನಾಕ್ ವಿಲನ್ ಅನ್ನೋದನ್ನು ತೋರಿಸಲಾಗ್ತಿದೆ.

26
ಮೀನಾಕ್ಷಿ ಕಣ್ಣಿಗೆ ಹೆದರಿದ ಸ್ವಾಮಿ
Image Credit : Asianet News

ಮೀನಾಕ್ಷಿ ಕಣ್ಣಿಗೆ ಹೆದರಿದ ಸ್ವಾಮಿ

ಭಾಗ್ಯ ಎಂದಿನಂತೆ ಆದಿ ಮನೆಯಲ್ಲೂ ಮನೆ ಜವಾಬ್ದಾರಿ ವಹಿಸಿಕೊಂಡಿದ್ದಾಳೆ. ಸ್ವಾಮಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳ್ತಿದ್ದಾಳೆ. ಭಾಗ್ಯಾ ಸ್ವಭಾವ, ಸ್ವಾಮಿಗೆ ಕಾಮತ್ ಹೆಂಡತಿಯ ನೆನಪು ತರಿಸಿದೆ. ಸ್ವಾಮಿ, ನೀವು ದೊಡ್ಡ ಯಜಮಾನಿ ತರ ಅಂತ ಸ್ವಾಮಿ ಹೇಳಿದ್ದಾರೆ. ಕಾಮತ್ ಹೆಂಡ್ತಿ ಸತ್ತ ಮೇಲೆ ಏನೆಲ್ಲ ಆಯ್ತು ಅಂತ ಹೇಳೋ ಮುನ್ನವೇ ಮೀನಾಕ್ಷಿ ಎಂಟ್ರಿಯಾಗಿದೆ. ಮೀನಾಕ್ಷಿ ದೊಡ್ಡ ಕಣ್ಣು ಬಿಡ್ತಿದ್ದಂತೆ ಸ್ವಾಮಿ ಬೆಚ್ಚಿದ್ದು, ಅಲ್ಲಿಂದ ಓಡಿ ಹೋಗಿದ್ದಾನೆ.

Related Articles

Related image1
ಸೀರೆ ಏನೋ ಬದಲಾಯ್ತು, ಆ ಸಿಂಗಲ್​ ಲೈನ್​ ಕೂದ್ಲು ಬದಲಾಯಿಸಿ ಪ್ಲೀಸ್​: Amruthadhaare ಫ್ಯಾನ್ಸ್​ ಮನವಿ
Related image2
Chandana Ananthakrishna: ಚಿನ್ನುಮರಿಯ ಅಂದಕ್ಕೆ ಜಯಂತ್ ಮಾತ್ರ ಅಲ್ಲ… ಫ್ಯಾನ್ಸ್ ಕೂಡ ಫಿದಾ
36
ಭಾಗ್ಯಾಗೆ ವಾರ್ನಿಂಗ್
Image Credit : Asianet News

ಭಾಗ್ಯಾಗೆ ವಾರ್ನಿಂಗ್

ಸ್ವಾಮಿ ಅಲ್ಲಿಂದ ಓಡಿ ಹೋಗ್ತಿದ್ದಂತೆ ಭಾಗ್ಯಾಗೆ ಮೀನಾಕ್ಷಿ ವಾರ್ನಿಂಗ್ ಮಾಡಿದ್ದಾಳೆ. ಆದಿಗೆ ಸದ್ಯ ಎಚ್ಚರವಾಗಿದೆ. ಮುಂದೆ ಮನೆಯವರಿಗೆ ತೊಂದ್ರೆ ಆದ್ರೆ ನಿನ್ನನ್ನು ಕ್ಷಮಿಸೋದಿಲ್ಲ. ನನ್ನ ಇನ್ನೊಂದು ಮುಖ ನೋಡ್ಬೇಕು ಎಂದಿದ್ದಾಳೆ.

46
ವೀಕ್ಷಕರ ಕಮೆಂಟ್
Image Credit : Asianet News

ವೀಕ್ಷಕರ ಕಮೆಂಟ್

ಮೀನಾಕ್ಷಿ ಭಯದ ಕಣ್ಣನ್ನು ನೋಡಿದ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮೀನಾಕ್ಷಿ ಸಾಮಾನ್ಯದವಳಲ್ಲ. ಅವಳೇ ಕಾಮತ್ ಹೆಂಡತಿಯನ್ನು ಕೊಂದಿರಬೇಕು. ಇನ್ಮುಂದೆ ಎಲ್ಲ ಒಂದೊಂದೆ ಹೊರಗೆ ಬರಬೇಕು. ಭಾಗ್ಯ ಎಲ್ಲ ಸತ್ಯ ಹೊರಗೆಳೆಯುತ್ತಾಳೆ ಅಂತ ವೀಕ್ಷಕರು ಕಮೆಂಟ್ ಮಾಡಿದ್ದಾರೆ.

56
ಎಚ್ಚರಗೊಂಡ ಆದಿ
Image Credit : Asianet News

ಎಚ್ಚರಗೊಂಡ ಆದಿ

ಸಿಹಿಕುಂಬಳಕಾಯಿ ತಿಂದು ಆದಿ ಪ್ರಜ್ಞೆ ತಪ್ಪಿದ್ದ. ಇದು ಭಾಗ್ಯಾಗೆ ಮತ್ತಷ್ಟು ಸಂಕಷ್ಟ ತಂದಿತ್ತು. ಮದುವೆಯಾಗಿ ಹೊಸ ಮನೆಗೆ ಬಂದಾಗಿಂದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ ಭಾಗ್ಯಾ ಆದಿ ವಿಷ್ಯದಲ್ಲಿ ಬಚಾವ್ ಆಗಿದ್ದಾಳೆ. ಕೊನೆಗೂ ಆದಿಗೆ ಪ್ರಜ್ಞೆ ಬಂದಿದೆ.

66
ಆದಿ ಮನೆಗೆ ಬರ್ತಾಳಾ ತನ್ವಿ?
Image Credit : Asianet News

ಆದಿ ಮನೆಗೆ ಬರ್ತಾಳಾ ತನ್ವಿ?

ಭಾಗ್ಯಾ ಜೊತೆ ಭಾಗ್ಯಾ ಮಕ್ಕಳನ್ನು ಆದಿ ಒಪ್ಪಿಕೊಂಡಾಗಿದೆ. ಇವರು ನನ್ನ ಮಕ್ಕಳು ಅಂತ ಗುಂಡಣ್ಣ ಹಾಗೂ ತನ್ವಿಗೆ ಮಕ್ಕಳ ಸ್ಥಾನ ನೀಡಿದ್ದಾರೆ. ಗುಂಡಣ್ಣನ ಮನವೊಲಿಸುವಲ್ಲಿ ಆದಿ ಯಶಸ್ವಿ ಆಗಿದ್ದಾನೆ ಕೂಡ. ಅಮ್ಮನಿಗಾಗಿ ಇದೇ ಮನೆಯಲ್ಲಿರಲು ಗುಂಡಣ್ಣ ಒಪ್ಪಿದ್ದಾನೆ. ಆದ್ರೆ ತನ್ವಿ ಒಪ್ಪುತ್ತಿಲ್ಲ. ತನ್ವಿಯನ್ನು ಮನೆಗೆ ಕರೆಯುವ ಪ್ರಯತ್ನ ಮಾಡಿ ಭಾಗ್ಯಾ ಸೋತಿದ್ದಾಳೆ. ಅವಳಿಗೆ ಸಮಾಧಾನ ಹೇಳಿದ ಆದಿ ಇನ್ನೆರಡು ದಿನಗಳಲ್ಲಿ ತನ್ವಿ ನಮ್ಮ ಮನೆಗೆ ಬರ್ತಾಳೆ ಅಂತ ಭರವಸೆ ನೀಡಿದ್ದಾನೆ. ಸದ್ಯ, ತನ್ವಿಯನ್ನು ಆದಿ ಹೇಗೆ ಕರೆತರ್ತಾನೆ ಎಂಬ ಕುತೂಹಲ ವೀಕ್ಷಕರಿಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಕಲರ್ಸ್ ಕನ್ನಡ
ಭಾಗ್ಯಲಕ್ಷ್ಮಿ ಧಾರಾವಾಹಿ

Latest Videos
Recommended Stories
Recommended image1
Chandana Ananthakrishna: ಚಿನ್ನುಮರಿಯ ಅಂದಕ್ಕೆ ಜಯಂತ್ ಮಾತ್ರ ಅಲ್ಲ… ಫ್ಯಾನ್ಸ್ ಕೂಡ ಫಿದಾ
Recommended image2
ಸೀರೆ ಏನೋ ಬದಲಾಯ್ತು, ಆ ಸಿಂಗಲ್​ ಲೈನ್​ ಕೂದ್ಲು ಬದಲಾಯಿಸಿ ಪ್ಲೀಸ್​: Amruthadhaare ಫ್ಯಾನ್ಸ್​ ಮನವಿ
Recommended image3
ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ
Related Stories
Recommended image1
ಸೀರೆ ಏನೋ ಬದಲಾಯ್ತು, ಆ ಸಿಂಗಲ್​ ಲೈನ್​ ಕೂದ್ಲು ಬದಲಾಯಿಸಿ ಪ್ಲೀಸ್​: Amruthadhaare ಫ್ಯಾನ್ಸ್​ ಮನವಿ
Recommended image2
Chandana Ananthakrishna: ಚಿನ್ನುಮರಿಯ ಅಂದಕ್ಕೆ ಜಯಂತ್ ಮಾತ್ರ ಅಲ್ಲ… ಫ್ಯಾನ್ಸ್ ಕೂಡ ಫಿದಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved