- Home
- Entertainment
- TV Talk
- ಪಬ್ಲಿಕ್ನಲ್ಲೇ ಪ್ರಶ್ನೆ ಕೇಳಿದ ಸೀರಿಯಲ್ ನಟಿ, ವೀಕ್ಷಕರ ಮನಸ್ಸಿನ ಮಾತು ಹೇಳಿದ Ravi Shankar Guruji
ಪಬ್ಲಿಕ್ನಲ್ಲೇ ಪ್ರಶ್ನೆ ಕೇಳಿದ ಸೀರಿಯಲ್ ನಟಿ, ವೀಕ್ಷಕರ ಮನಸ್ಸಿನ ಮಾತು ಹೇಳಿದ Ravi Shankar Guruji
Sri Ravi Shankar Guruji on Akanksha Chamola: ಖುಷಿಯಾಗಿರೋದು ಜನರಿಗೆ ಇಷ್ಟ ಆಗಲ್ವಾ? ಯಾಕೆ ನನ್ನನ್ನ ಹೀಗೆ ಜಡ್ಜ್ ಮಾಡ್ತಾರೆ? ಸದಾ ನಗ್ತಾ ಇರೋದು ತಪ್ಪಾ? ಅಂತ ಕಿರುತೆರೆ ನಟಿ ಆಕಾಂಕ್ಷಾ ಚಮೋಲಾ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಆಕಾಂಕ್ಷಾಗೆ ಇರುವ ಸಮಸ್ಯೆ ಏನು?
ಕಿರುತೆರೆಯ ಅದರಲ್ಲಿಯೂ ಅನುಪಮಾ ಧಾರಾವಾಹಿಯ 'ಅನುಜ್' ಅಲಿಯಾಸ್ ಗೌರವ್ ಖನ್ನಾ ಅವರ ಪತ್ನಿ ಆಕಾಂಕ್ಷಾ ಚಮೋಲಾ ಅವರು ಆಗಾಗ ಒಂದಲ್ಲ ಒಂದು ಕಾರಣಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ, ತಮ್ಮಿಷ್ಟದಂತೆ ಬಿಂದಾಸ್ ಆಗಿ ಬದುಕುವ ನಟಿಯರಲ್ಲಿ ಆಕಾಂಕ್ಷಾ ಕೂಡ ಒಬ್ಬರು.
ಇದೀಗ ನಟಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ ಬಳಿ ತಮ್ಮ ಸಮಸ್ಯೆಯೊಂದನ್ನು ಹೇಳಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆ ಸಮಸ್ಯೆ ಬೇರೇನೂ ಅಲ್ಲ, ಅವರ ಖುಷಿ ಖುಷಿಯಾದ ಸ್ವಭಾವವೇ ಅವರಿಗೆ ಮುಳುವಾಗಿದೆಯಂತೆ. ಹಾಗಾದ್ರೆ ಆಕಾಂಕ್ಷಾ ಗುರೂಜಿ ಬಳಿ ಹೇಳಿಕೊಂಡಿದ್ದೇನು? ಇಲ್ಲಿದೆ ವಿವರ.
ದುಃಖದಲ್ಲಿರೋದು ಟ್ರೆಂಡ್ ಆಗಿದ್ಯಾ?
ಆಕಾಂಕ್ಷಾ ಅವರು, "ಜನ ನನ್ನನ್ನು ತುಂಬಾ ಜಡ್ಜ್ ಮಾಡುತ್ತಾರೆ. ಈಗಂತೂ ನನ್ನ ಖುಷಿಯ ಸ್ವಭಾವವೇ ಜನರಿಗೆ ಇಷ್ಟ ಆಗ್ತಿಲ್ಲ ಅಂತ ಅನಿಸುತ್ತಿದೆ. ಗುರೂಜಿ, ನೀವಂತೂ ಯಾವಾಗ್ಲೂ ಮಜವಾಗಿರಿ, ಖುಷಿಯಾಗಿರಿ ಅಂತ ಹೇಳ್ತೀರಾ. ನಾನೂ ಹಾಗೇ ಇರಲು ಪ್ರಯತ್ನಿಸುತ್ತೇನೆ. ಆದರೆ ಜನರಿಗೆ ಅದು ಇಷ್ಟವಾಗುತ್ತಿಲ್ಲ. 'ಇವಳ್ಯಾಕೆ ಇಷ್ಟು ಖುಷಿಯಾಗಿದ್ದಾಳೆ, ಯಾವಾಗ್ಲೂ ಕುಣಿತಾ, ನಗುತ್ತಾ ಇರ್ತಾಳೆ?' ಅಂತ ಆಡಿಕೊಳ್ಳುತ್ತಾರೆ.
ದುಃಖದಲ್ಲಿ ಇರುವುದೇ ಈಗಿನ ಟ್ರೆಂಡ್ ಆಗಿಬಿಟ್ಟಿದೆಯಾ? ಅಥವಾ ನಾನು ದುಃಖದಲ್ಲಿ, ಸೀರಿಯಸ್ ಆಗಿ, ಮೆಚ್ಯೂರ್ ಆಗಿ ಕಾಣಿಸಿಕೊಂಡರೆ ಮಾತ್ರ ಜನ ನನ್ನನ್ನು ಒಪ್ಪಿಕೊಳ್ಳುತ್ತಾರಾ?" ಎಂದು ಪ್ರಶ್ನಿಸಿದ್ದಾರೆ.
ನಗುತ್ತ ಉತ್ತರ ಕೊಟ್ಟ ಗುರೂಜಿ
ಆಕಾಂಕ್ಷಾ ಅವರ ಮಾತನ್ನು ಶಾಂತವಾಗಿ ಕೇಳಿದ ಶ್ರೀ ಶ್ರೀ ರವಿಶಂಕರ್, ನಗುತ್ತಲೇ ಉತ್ತರ ಕೊಟ್ಟರು. "ಜನ ಏನು ಹೇಳ್ತಾರೆ ಅನ್ನೋದು ನಿನಗೆ ಯಾಕೆ ಬೇಕು? ನೀನು ಖುಷಿಯಾಗಿರಬೇಕು ಅಂತ ಅನಿಸಿದರೆ ಹಾಗೆಯೇ ಇರು" ಎಂದರು. ಅಷ್ಟೇ ಅಲ್ಲ, 'ಕುಚ್ ತೋ ಲೋಗ್ ಹೇ ಎಂಬ ಹಳೆಯ ಹಾಡನ್ನು ಸಹ ನೆನಪಿಸಿದರು.
ಜನರ ಮುಂದೆ ತೋರಿಸೋದು ಬೇಡ!
ಮಾತನ್ನು ಮುಂದುವರಿಸಿದ ಅವರು, "ನೀನು ಯಾವಾಗಲೂ ಖುಷಿಯಾಗಿರುವುದು ಒಳ್ಳೆಯದೇ, ಆದರೆ ಅದನ್ನು ಎಲ್ಲರ ಮುಂದೆ ತೋರಿಸುವುದು ಅನಿವಾರ್ಯವಲ್ಲ. ಕೆಲವೊಮ್ಮೆ ಜನ ನಮ್ಮ ಖುಷಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ, ನಮ್ಮ ಸಂತೋಷವನ್ನು ಸ್ವಲ್ಪ ನಿಯಂತ್ರಣದಲ್ಲಿಟ್ಟುಕೊಂಡು ವ್ಯಕ್ತಪಡಿಸಬೇಕು. ಪೂರ್ತಿ ಖುಷಿಯನ್ನು ಎಲ್ಲರಿಗೂ ತೋರಿಸುವ ಅಗತ್ಯವಿಲ್ಲ" ಎಂದು ಸಲಹೆ ನೀಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

