MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಸರಿಗಮಪ ಫೈನಲಿಸ್ಟ್ ಇವರೇ… ಲಹರಿಗೆ ಸ್ಥಾನ ನೀಡದ ಶೋ ವಿರುದ್ಧ ವೀಕ್ಷಕರು ಗರಂ

ಸರಿಗಮಪ ಫೈನಲಿಸ್ಟ್ ಇವರೇ… ಲಹರಿಗೆ ಸ್ಥಾನ ನೀಡದ ಶೋ ವಿರುದ್ಧ ವೀಕ್ಷಕರು ಗರಂ

ಸರಿಗಮಪ ರಿಯಾಲಿಟಿ ಶೋನ 6 ಜನ ಫೈನಲಿಸ್ಟ್ ಗಳ ಹೆಸರು ಪ್ರಕಟವಾಗಿದ್ದು, ಲಹರಿ ಮಹೇಶ್ ಗೆ ಸ್ಥಾನ ನೀಡದ್ದು ನೋಡಿ ವೀಕ್ಷಕರು ಕಿಡಿ ಕಾರಿದ್ದಾರೆ. 

2 Min read
Pavna Das
Published : May 26 2025, 02:15 PM IST| Updated : May 26 2025, 02:22 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಝೀ ಕನ್ನಡದ (Zee Kannada) ಜನಪ್ರಿಯವಾದ ಸಂಗೀತ ರಿಯಾಲಿಟಿ ಶೋ ಸರಿಗಮಪ ಸ್ಪರ್ಧೆ ಅಂತಿಮ ಹಂತವನ್ನು ತಲುಪಿದೆ. ಕಾರ್ಯಕ್ರಮದಲ್ಲಿ ಇದೀಗ ಫೈನಲ್ ಗೆ ಇನ್ನು ಒಂದೇ ಹಂತ ಬಾಕಿ ಇದೆ. ಅಷ್ಟರಲ್ಲೇ ವೀಕ್ಷಕರು ಶೋ ಮೇಲೆ ಗರಂ ಆಗಿದ್ದಾರೆ.

27
Image Credit : Asianet News

ಹೌದು, ಸರಿಗಮಪ (Saregamapa) ಅತ್ಯಂತ ಜನಪ್ರಿಯವಾದ ಸಂಗೀತ ಕಾರ್ಯಕ್ರಮವಾಗಿದ್ದು, ರಾಜ್ಯದ ಮೂಲೆ ಮೂಲೆಯಿಂದ ಅಷ್ಟೇ ಯಾಕೆ ಕನ್ನಡ ಹಾಡು ಹಾಡುವ ಬೇರೆ ರಾಜ್ಯದ ಸ್ಪರ್ಧಿಗಳು ಸಹ ಇಲ್ಲಿ ಬಂದು ಹಾಡುವ ಮೂಲಕ ಗಮನ ಸೆಳೆಯುತ್ತಾರೆ.

Related Articles

Related image1
Now Playing
Zee Kannada: ಒಂದೇ ರಿಯಾಲಿಟಿ ಶೋನಲ್ಲಿ ಯಶ್, ಸುದೀಪ್, ದರ್ಶನ್ ! ಇದು ನಿಜಾನಾ..? ಏಪ್ರಿಲ್ ಫೂಲ್ ಐಡಿಯಾನಾ..?
Related image2
Reality shows: ಬಾಲಿವುಡ್ ಸೆಲೆಬ್ರಿಟಿ ಸಂಭಾವನೆ ಪಡೆಯೋದು ಕೋಟಿಯಲ್ಲಿ, ಅದೂ ಒಂದು ಸಂಚಿಕೆಗೆ!
37
Image Credit : Asianet News

ಈ ಬಾರಿ ಒಬ್ಬರಿಗಿಂತ ಒಬ್ಬರು ಎನ್ನುವಂತೆ ರಾಜ್ಯದೆಲ್ಲೆಡೆಯಿಂದ ಸಿನಿಯರ್, ಜೂನಿಯರ್ ಸೇರಿ ಅದ್ಭುತ ಕಲಾವಿದರ ದಂಡೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಇದೀಗ ಮೂರು ತಿಂಗಳು ನಡೆದ ಸ್ಪರ್ಧೆಯಲ್ಲಿ ಕೊನೆಯ ಸುತ್ತಿಗೆ ಆರು ಜನರು ಆಯ್ಕೆಯಾಗಿದ್ದಾರೆ.

47
Image Credit : Asianet News

ಆರಂಭದಿಂದಲೂ ಶಿವನ ಹಾಡುಗಳನ್ನು ಹಾಡುತ್ತಾ, ತೀರ್ಪುಗಾರರ ಜೊತೆಗೆ ವೀಕ್ಷಕರೆ ಮನಗೆದ್ದ ಶಿವಾನಿ ಸ್ವಾಮಿ ಎರಡು ವಾರಗಳ ಮುನ್ನವೇ ಟಿಕೆಟ್ ಟು ಫಿನಾಲೆ ಪ್ರಶಸ್ತಿ ಪಡೆದಿದ್ದರು. ಇವರ ಜೊತೆಗೆ ಉಡುಪಿಯ ಆರಾಧ್ಯ ರಾವ್ ಕೂಡ ಫಿನಾಲೆ ಟಿಕೆಟ್ ಪಡೆದಿದ್ದರು.

57
Image Credit : Asianet News

ಕಳೆದ ವಾರ ನಡೆದ ಸೆಮಿ ಫಿನಾಲೆಯಲ್ಲಿ (Semi Finale) ರಶ್ಮಿ ಧರ್ಮೇಂದ್ರ, ಬಾಳು ಬೆಳಗುಂದಿ, ದ್ಯಾಮೇಶ ಹಾಗೂ ಅಮೋಘ ವರ್ಷ ಆಯ್ಕೆಯಾಗುವ ಮೂಲಕ ಒಟ್ಟು 6 ಜನ ಸ್ಪರ್ಧಿಗಳು ಫಿನಾಲೆ ತಲುಪಿದ್ದರು. ಆದರೆ ಸೀಸನ್ ಪೂರ್ತಿ ಅದ್ಭುತವಾಗಿ ಹಾಡಿಕೊಂಡು ಬಂದಂತಹ ಲಹರಿಗೆ ಸ್ಥಾನ ಸಿಕ್ಕಿಲ್ಲ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ.

67
Image Credit : Asianet News

ಲಹರಿ ಮಹೇಶ್(Lahari Mahesh) ಅದ್ಭುತವಾದ ಗಾಯಕಿ, ಆಕೆ ಸೀಸನ್ ಆರಂಭದಿಂದಲೂ ಟಫ್ ಕಾಂಪಿಟೀಶನ್ ಕೊಟ್ಟು, ಕನ್ನಡದ ಶ್ರೇಯಾ ಘೋಷಲ್ ಈಕೆಆಗ್ತಾಳೆ ಎನ್ನುವ ಹೊಗಳಿಕೆಯನ್ನು ಪಡೆದಿದ್ದರು. ಇವರು ಫಿನಾಲೆ ಹಂತ ತಲುಪುತ್ತಾರೆ ಎನ್ನುವ ಭರವಸೆ ಎಲ್ಲರಿಗೂ ಇತ್ತು. ಆದರೆ ಆಕೆಯ ಬದಲಾಗಿ ದ್ಯಾಮೇಶ್, ಬಾಳು ಬೆಳಗುಂದಿ ಫೈನಲ್ ತಲುಪಿರುವುದು ವೀಕ್ಷಕರಿಗೆ ಕೋಪ ತರಿಸಿದೆ.

77
Image Credit : Asianet News

ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ವೀಕ್ಷಕರು ಶೋ ವಿರುದ್ಧ ಕಿಡಿ ಕಾರಿದ್ದು, ಲಹರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಿಜವಾದ ಗಾಯಕರಿಗೆ ಬೆಲೆನೇ ಇಲ್ಲ, ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ವೈರಲ್ ಸ್ಟಾರ್ ಗಳನ್ನು ಟಿಆರ್ ಪಿಗಾಗಿ ಉಳಿಸಿಕೊಂಡು, ಲಹರಿಯಂತಹ ಕಂಟೆಸ್ಟಂಟ್ ನ್ನು ಆಯ್ಕೆ ಮಾಡದಿರುವುದು ತುಂಬಾನೆ ಬೇಸರ ತಂದಿದೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ

Latest Videos
Recommended Stories
Recommended image1
Sobhita Dhulipala: ತಂದೆಯಾಗಲಿದ್ದಾರೆ ನಾಗ ಚೈತನ್ಯ.. ಸಮಂತಾಗೆ ದೊಡ್ಡ ಆಘಾತ!
Recommended image2
ಬಿಗ್ ಬಾಸ್: ಮೇಕಪ್ ಮಾಡ್ಕೊಳ್ಳೋ ಗ್ಯಾಪ್‌ನಲ್ಲಿ ಕಾವ್ಯಾಗೆ 'ಲವ್ ಪ್ರಪೋಸ್' ಮಾಡೇಬಿಟ್ಟ ಗಿಲ್ಲಿ ನಟ!
Recommended image3
Bigg Boss: ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್​? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್​
Related Stories
Recommended image1
Now Playing
Zee Kannada: ಒಂದೇ ರಿಯಾಲಿಟಿ ಶೋನಲ್ಲಿ ಯಶ್, ಸುದೀಪ್, ದರ್ಶನ್ ! ಇದು ನಿಜಾನಾ..? ಏಪ್ರಿಲ್ ಫೂಲ್ ಐಡಿಯಾನಾ..?
Recommended image2
Reality shows: ಬಾಲಿವುಡ್ ಸೆಲೆಬ್ರಿಟಿ ಸಂಭಾವನೆ ಪಡೆಯೋದು ಕೋಟಿಯಲ್ಲಿ, ಅದೂ ಒಂದು ಸಂಚಿಕೆಗೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved