- Home
- Entertainment
- TV Talk
- Rajesh Nataranga: ಅಣ್ಣಾವ್ರ ಮನೆಯಲ್ಲಿ ಭಕ್ತನಾಗಿ ಧನ್ಯನಾದೆ… ಗಾಜನೂರಿನಲ್ಲಿ ರಾಜೇಶ್ ನಟರಂಗ
Rajesh Nataranga: ಅಣ್ಣಾವ್ರ ಮನೆಯಲ್ಲಿ ಭಕ್ತನಾಗಿ ಧನ್ಯನಾದೆ… ಗಾಜನೂರಿನಲ್ಲಿ ರಾಜೇಶ್ ನಟರಂಗ
ಅಮೃತಧಾರೆಯಲ್ಲಿ ಗೌತಮ್ ದಿವಾನ್ ಆಗಿ ಮಿಂಚುತ್ತಿರುವ ನಟ ರಾಜೇಶ್ ನಟರಂಗ ಇತ್ತೀಚಿಗೆ ಗಾಜನೂರಿನಲ್ಲಿನ ಅಣ್ಣಾವ್ರ ಮನೆಗೆ ಭೇಟಿ ನೀಡಿ ಧನ್ಯತಾ ಭಾವವನ್ನು ಅನುಭವಿಸಿದ್ದಾರೆ.

ಕನ್ನಡ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿರುವ ನಟ ರಾಜೇಶ್ ನಟರಂಗ (Rajesh Nataranga), ಇದೀಗ ಡಾ. ರಾಜಕುಮಾರ್ ಅವರ ಗಾಜನೂರಿನ ಮನೆಗೆ ಭೇಟಿ ನೀಡಿದ್ದು, ಧನ್ಯತಾ ಭಾವ ಅನುಭವಿಸುತ್ತಿರುವುದಾಗಿ ನಟ ತಿಳಿಸಿದ್ದಾರೆ.
ನಟ ರಾಜೇಶ್ ನಟರಂಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗಾಜನೂರಿನ (gajanur) ಅಣ್ಣಾವ್ರ ಮನೆಯಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳ ಜೊತೆಗೆ ರಾಜೇಶ್ ‘ನಿರಂತರ ಚೈತನ್ಯ “ಅಣ್ಣಾವ್ರ ಮನೆಯಲ್ಲಿ” ಭಕ್ತನಾಗಿ ಧನ್ಯನಾದೆ.. ಎಂದು ಬರೆದುಕೊಂಡಿದ್ದಾರೆ.
ಅಣ್ಣಾವ್ರು ತಮ್ಮ ಬಾಲ್ಯವನ್ನು ಕಳೆದಿದ್ದಂತಹ ಪುಟ್ಟದಾದ ಹಳ್ಳಿ ಮನೆಯೊಳಗೆ ಕುಳಿತು, ಮನೆಯ ಜಗಲಿಯ ಮೇಲೆ ಕುಳಿತು ಅಣ್ಣಾವ್ರ ಇರುವಿಕೆಯ ಅನುಭವ ಪಡೆದಿರುವಂತೆ ಆನಂದಿಸಿದ್ದಾರೆ. ಮನೆಯೊಳಗೆ ಡಾ. ರಾಜ್ ಕುಮಾರ್ (Dr Rajkumar( ಅವರ ಫೋಟೊಗಳನ್ನು ಸಹ ಕಾಣಬಹುದು.
ಅಣ್ಣಾವ್ರ ಮನೆಯಲ್ಲಿ ರಾಜೇಶ್ ನಟರಂಗ ಅವರನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಒಬ್ಬ ಅದ್ಬುತ ನಟನ ಮನೆಯಲ್ಲಿ ಇನ್ನೊಬ್ಬ ನಟ, ನೀವೊಬ್ಬ ಅದ್ಭುತ ನಟನೂ ಹೌದು, ಒಬ್ಬ ದೊಡ್ಡ ಅಭಿಮಾನಿಯೂ ಹೌದು, ಈ ಫೋಟೊಗಳನ್ನು ನೋಡಿ ತುಂಬಾನೇ ಸಂತೋಷವಾಯಿತು ಎಂದಿದ್ದಾರೆ.
ರಾಜೇಶ್ ನಟರಂಗ ಕುರಿತು ಹೇಳೊದಾದ್ರೆ ಇವರು ಸಿನಿಮಾ ಜೊತೆಗೆ ಸದ್ಯ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಗೌತಮ್ ದಿವಾನ್ ಆಗಿ ನಟಿಸುತ್ತಿದ್ದಾರೆ. ನಟನ ಮನಮುಟ್ಟುವಂತಹ ನೈಜ್ಯ ಅಭಿನಯಕ್ಕೆ ಜನರು ಮನ ಸೋತಿದ್ದಾರೆ. ರಾಜೇಶ್ ಅವರು ಗೌತಮ್ ದಿವಾನ್ ಪಾತ್ರವನ್ನು ಪರಾಕಾಯ ಪ್ರವೇಶ ಮಾಡಿದಂತೆ ನಟಿಸುತ್ತಾರೆ. ಅದಕ್ಕಾಗಿ ಈ ಪಾತ್ರವನ್ನು ಜನರು ಇಷ್ಟೊಂದು ಇಷ್ಟ ಪಡೋದು.
ಸದ್ಯ ಸೀರಿಯಲ್ ನಲ್ಲಿ ಏನಾಗ್ತಿದೆ ಅಂದ್ರೆ, ಗೌತಮ್ ದಿವಾನ್ (Goutham Diwan) ಪತ್ನಿ ಭೂಮಿಕಾ ಗರ್ಭಿಣಿ. ತನ್ನ ಮೇಲೆ ದಾಳಿ ಆದ ಬಳಿಕ, ಭಯದಿಂದ ಗೌತಮ್, ತನ್ನ ಎಲ್ಲಾ ಆಸ್ತಿಯನ್ನು ಭೂಮಿಕಾ ಮತ್ತು ಹುಟ್ಟುವ ಮಗುವಿನ ಹೆಸರಿಗೆ ಮಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಜೈ, ಭೂಮಿಕಾ ಮಗು ಈ ಭೂಮಿಗೆ ಕಾಲಿಡೋದಕ್ಕೂ ಮುಂಚೆನೆ ಇಲ್ಲವಾಗಿಸುವ ಯೋಚನೆ ಮಾಡಿದ್ದಾನೆ. ಇದೆಲ್ಲವೂ ಗೌತಮ್ ಗೆ ಗೊತ್ತಾಗುತ್ತಾ? ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.