MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ‘Shubhasya Sheegram Serial’... ಹೀರೋ ಆಗಿಯೇ ಬಿಟ್ಟ ಅಮೃತಧಾರೆಯ ವಿಲನ್ ಜೈದೇವ್

‘Shubhasya Sheegram Serial’... ಹೀರೋ ಆಗಿಯೇ ಬಿಟ್ಟ ಅಮೃತಧಾರೆಯ ವಿಲನ್ ಜೈದೇವ್

ಅಮೃತಧಾರೆ ಧಾರಾವಾಹಿಯಲ್ಲಿ ವಿಲನ್ ಜೈದೇವ್ ಪಾತ್ರಕ್ಕೆ ಖಡಕ್ ಅಭಿನಯ ಮಾಡುವ ಮೂಲಕ ವೀಕ್ಷಕರ ಮನ ಗೆದ್ದಿರುವ ರಾಣವ್ ಗೌಡ ಇದೀಗ ಹೀರೋ ಆಗಿ ಮಿಂಚಲು ರೆಡಿಯಾಗಿದ್ದಾರೆ. 

2 Min read
Pavna Das
Published : Aug 01 2025, 08:53 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ಪ್ರತಿಯೊಬ್ಬ ಪಾತ್ರಧಾರಿಯೂ, ಕೊಟ್ಟ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಾರೆ. ಅದರಲ್ಲೂ ವಿಲನ್ ಜೈದೇವ್ ಪಾತ್ರದಲ್ಲಿ ನಟಿಸುತ್ತಿರುವ ರಾಣವ್ ಗೌಡ ಖಡಕ್ ಡೈಲಾಗ್ ಗಳಿಗೆ, ಅಭಿನಯಕ್ಕೆ ಮನಸೋಲದವರು ಯಾರೂ ಇಲ್ಲ.

27
Image Credit : Asianet News

ವಿಲನ್ ಅಂದ್ರೆ ಹೀಗೆ ಇರಬೇಕು ಎನ್ನುವಷ್ಟು, ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ರಾಣವ್ ಗೌಡಾಗೆ (Raanav Gowda) ಸಿಕ್ಕಾಪಟ್ಟೆ ಅಭಿಮಾನಿಗಳು ಕೂಡ ಇದ್ದಾರೆ. ಇವರು ಹೀರೋ ಅಗುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಹೇಳಿದವರು ಇದ್ದಾರೆ. ಆ ಸಂದರ್ಭ ಇದೀಗ ಕೂಡಿ ಬಂದಿದೆ.

Related Articles

Related image1
Amruthadhaare: ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಇಂಗು ತಿಂದ ಮಂಗನಂತಾದ ಜೈದೇವ
Related image2
Amruthadhaare Serial Update: ಭೂಮಿಯ ಇನ್ನೊಂದು ಮಗುವನ್ನು ಹೊತ್ತೊಯ್ದನಾ ಆ ಪಾಪಿ ಜಯದೇವ್?
37
Image Credit : Asianet News

ಹ್ಪೊಸ ಚಾನೆಲ್ ಝೀ ಪವರ್ ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಶುಭಸ್ಯ ಶೀಘ್ರಂನಲ್ಲಿ ರಾಣವ್ ಗೌಡ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೊಮೊ ಬಿಡುಗಡೆಯಾಗಿದ್ದು, ಸಖತ್ ಆಗಿ ಮೂಡಿ ಬಂದಿದೆ.

47
Image Credit : Asianet News

ಧಾರಾವಾಹಿ ನಾಯಕಿ ನಾನು ಶುಭ, ಪದಕ್ಕ ನಾಗಣ್ಣನ ನಾಲ್ಕು ಮಕ್ಕಳಲ್ಲಿ ನಾನು ಎರಡನೆಯವಳು ಎಂದು ಹೇಳುತ್ತಾ ಪ್ರೊಮೋ ಶುರುವಾಗುತ್ತೆ. ಅಮ್ಮ ಅಂಗಡಿ ನೋಡಿಕೊಳ್ಳುತ್ತಿದ್ದರೆ, ಅಪ್ಪ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಮಗಳು ಶುಭ ತನ್ನ ಬೈಕ್ ಮೇಲೆ ಶ್ರೀ ಗಣೇಶ ಗ್ರಂದಿಗೆ ಸ್ಟೋರ್ಸ್ ಎಂದು ಬರೆದು ಅಂಗಡಿ ಸಾಮಾನುಗಳನ್ನು ಸಾಗಿಸುತ್ತಿರುತ್ತಾಳೆ.

57
Image Credit : Asianet News

ಇವರೆಲ್ಲರಿಗೂ ಆಸೆ ಇರೋದು ಹಿರಿಯ ಅಕ್ಕನ ಮದುವೆ. ಆದರೆ ಅಕ್ಕನಿಗೆ ಕಿವಿ ಕೇಳಿಸೋದಿಲ್ಲ. ತಂಗಿ ಶುಭ ಅಕ್ಕನಿಗೆ ಹೇಗಾದರು ಮಾಡಿ ಮದುವೆಯಾಗಲಿ ಎಂದು ಆಶಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಆಕೆಗೆ ಎದುರಾಗೋದು ನಾಯಕ, ಎಲ್ಲಾ ಸೀರಿಯಲ್ ನಂತೆ ಜಗಳದಿಂದಲೇ ಆರಂಭವಾಗುತ್ತೆ ಇವರಿಬ್ಬರ ಭೇಟಿ.

67
Image Credit : Asianet News

ಹೀರೋಗೆ ಮದುವೆ ಅಂದ್ರೇನೆ ಇಷ್ಟ ಇರೋದಿಲ್ಲ. ಕೊನೆಗೆ ಅಕ್ಕನಿಗೋಸ್ಕರ ತಂಗಿ ಅದೇ ಹುಡುಗನನ್ನು ಮದುವೆಯಾಗುವಂತಾಗುತ್ತದೆ. ಇಷ್ಟವಿಲ್ಲದೇ ಮದುವೆಯಾಗುವ ಈ ಜೋಡಿಗಳ ಜೀವನದಲ್ಲಿ ಮತ್ತೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ ಇರಬಹುದು. ಈ ಪ್ರೊಮೋ ನೋಡಿ ಜನ ಇದು ಗಟ್ಟಿಮೇಳ ಸೀರಿಯಲ್ ನಂತೆ ಇದೆಯಲ್ಲ ಎಂದಿದ್ದಾರೆ.

77
Image Credit : Asianet News

ಇನ್ನು ವೀಕ್ಷಕರಿಗೆ ವಿಲನ್ ಆಗಿದ್ದ ಜೈದೇವ್ ಇದೀಗ ಹೀರೋ ಆಗಿರೋದನ್ನು ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ. ಅಕ್ಕನ ಮದುವೇನೆ ಇವಳ ಕನಸು - ಅವನಿಗೆ ಮದುವೆ ಅಂದ್ರೇನೆ ಮುನಿಸು! ಒಡಹುಟ್ಟಿದವರ ಒಳಿತಿಗಾಗಿ ಉರಿದುಬೀಳೋರಿಬ್ರು ಒಂದಾದ್ರೆ?ಎನ್ನುವ ಟ್ಯಾಗ್ ಲೈನ್ ಇರುವ ಈ ಕಥೆಯಲ್ಲಿ ರಾಣವ್ ಗೌಡರನ್ನು ನಾಯಕನಾಗಿ ನೋಡಲು ಎಷ್ಟು ಜನ ಕಾಯ್ತಿದ್ದೀರಿ?

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved