ಹಾಸನದ ಸಕಲೇಶಪುರ ತಾಲೂಕಿನ ಯಡೆಕುಮರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ, ದಕ್ಷಿಣ ಪಶ್ಚಿಮ ರೈಲ್ವೆಯು ಆರು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಿಗೆ ಬದಲಾಯಿಸಿದೆ. ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.

ಹಾಸನ/ಬೆಂಗಳೂರು/ಹುಬ್ಬಳ್ಳಿ (ಆ.02): ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakleshpur) ತಾಲೂಕಿನ ಯಡೆಕುಮರಿ (Yedakumari) ಸಮೀಪ ರೈಲ್ವೆ ಹಳಿ (Railway Track) ಮೇಲೆ ಸಂಭವಿಸಿರುವ ಗುಡ್ಡ ಕುಸಿತ (Landslide) ಹಿನ್ನೆಲೆಯಲ್ಲಿ ಮಣ್ಣು ತೆರವು (Debris Clearance) ಕಾರ್ಯಾಚರಣೆ ಭರದಿಂದ ಮುಂದುವರಿದಿದೆ. ಸುರಕ್ಷತಾ ದೃಷ್ಟಿಯಿಂದ ರೈಲು ಸಂಚಾರದಲ್ಲಿ (Train Operations) ತಾತ್ಕಾಲಿಕ ಬದಲಾವಣೆ ಮಾಡಲಾಗಿದ್ದು, ದಕ್ಷಿಣ ಪಶ್ಚಿಮ ರೈಲ್ವೆ (South Western Railway) 6 ಪ್ರಮುಖ ಎಕ್ಸ್‌ಪ್ರೆಸ್ (Express) ರೈಲುಗಳ ಮಾರ್ಗವನ್ನು (Route) ಬದಲಿಸಿದೆ.

ರೈಲ್ವೆ ಹಳಿಯ ಮೇಲಿದ್ದ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿರುವುದರಿಂದ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ (Subrahmanya Road) ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಹೀಗಾಗಿ ಹಲವು ದೂರ ಪ್ರಯಾಣದ ರೈಲುಗಳನ್ನು (Long Distance Trains) ಪರ್ಯಾಯ ಮಾರ್ಗಗಳ (Alternative Routes) ಮೂಲಕ ಸಂಚರಿಸಲಾಗುತ್ತಿದೆ.

1. ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್

  • ಅಸ್ತಿತ್ವದಲ್ಲಿರುವ ಮಾರ್ಗ: SSS ಹುಬ್ಬಳ್ಳಿ - ಅರಸೀಕೆರೆ - ಹಾಸನ - ಸಕಲೇಶಪುರ - ಸುಬ್ರಹ್ಮಣ್ಯ ರಸ್ತೆ - ಪಡೀಲ್ - ಮಂಗಳೂರು ಜಂಕ್ಷನ್
  • ಬದಲಿ ಮಾರ್ಗ: SSS ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು - ಮಂಗಳೂರು ಜಂಕ್ಷನ್
  • ಹಿಂದಿನ ಮಾರ್ಗ: ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟವಾಳ.

2. ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್

  • ಅಸ್ತಿತ್ವದಲ್ಲಿರುವ ಮಾರ್ಗ: ಮಂಗಳೂರು ಜಂಕ್ಷನ್ - ಪಡೀಲ್ - ಸುಬ್ರಹ್ಮಣ್ಯ ರಸ್ತೆ - ಸಕಲೇಶಪುರ - ಹಾಸನ - ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ
  • ಬದಲಿ ಮಾರ್ಗ: ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್‌ಎಸ್‌ಎಸ್ ಹುಬ್ಬಳ್ಳಿ
  • ಹಿಂದಿನ ಮಾರ್ಗ: ಬಂಟವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಅರಸೀಕೆರೆ, ಬೀರೂರು, ಕಡೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ.

3. ರೈಲು ಸಂಖ್ಯೆ. 16586 ಮುರ್ಡೇಶ್ವರ - SMVT ಬೆಂಗಳೂರು ಎಕ್ಸ್‌ಪ್ರೆಸ್*

  • ಅಸ್ತಿತ್ವದಲ್ಲಿರುವ ಮಾರ್ಗ: ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಪಡೀಲ್ - ಸುಬ್ರಹ್ಮಣ್ಯ ರಸ್ತೆ - ಸಕಲೇಶಪುರ - ಹಾಸನ - ಮೈಸೂರು - ಕೆಎಸ್ಆರ್ ಬೆಂಗಳೂರು
  • ಬದಲಿ ಮಾರ್ಗ: ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್‌ಪೆಟ್ಟೈ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು
  • ಹಿಂದಿನ ಮಾರ್ಗ: ಬಂಟವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಹೊಳೆ ನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಬೆಂಗಳೂರು ಕ್ಯಾಂಟ್, ಕೆಎಸ್‌ಆರ್ ಬೆಂಗಳೂರು.
  • ಕೊನೆ ನಿಲ್ದಾಣ: ರೈಲು KSR ಬೆಂಗಳೂರು ಬದಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ.

4. ರೈಲು ಸಂಖ್ಯೆ. 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್

  • ಅಸ್ತಿತ್ವದಲ್ಲಿರುವ ಮಾರ್ಗ: ಕಣ್ಣೂರು - ಮಂಗಳೂರು ಸೆಂಟ್ರಲ್ - ಮಂಗಳೂರು ಜಂಕ್ಷನ್ - ಪಡೀಲ್ - ಸುಬ್ರಹ್ಮಣ್ಯ ರಸ್ತೆ - ಸಕಲೇಶಪುರ - ಹಾಸನ - ಚನ್ನರಾಯಪಟ್ಟಣ - ಯಶವಂತಪುರ
  • ಬದಲಿ ಮಾರ್ಗ : ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು
  • ಹಿಂದಿನ ಮಾರ್ಗ: ಮಂಗಳೂರು ಜಂಕ್ಷನ್, ಬಂಟವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಬಿ ಜಿ ನಗರ, ಕುಣಿಗಲ್, ಯಶವಂತಪುರ, ಕೆಎಸ್‌ಆರ್ ಬೆಂಗಳೂರು.
  • ಕೊನೆ ನಿಲ್ದಾಣ: ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.

5. ರೈಲು ಸಂಖ್ಯೆ. 16511 KSR ಬೆಂಗಳೂರು - ಕೋಝಿಕೋಡ್ ಎಕ್ಸ್‌ಪ್ರೆಸ್

  • ಮೂಲ ನಿಲ್ದಾಣ ಬದಲಾವಣೆ: ರೈಲು KSR ಬೆಂಗಳೂರು (SBC) ಬದಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು (SMVB) ನಿಂದ ತಲುಪುತ್ತದೆ.
  • ಅಸ್ತಿತ್ವದಲ್ಲಿರುವ ಮಾರ್ಗ: ಯಶವಂತಪುರ - ಚನ್ನರಾಯಪಟ್ಟಣ - ಹಾಸನ - ಸಕಲೇಶಪುರ - ಸುಬ್ರಹ್ಮಣ್ಯ ರಸ್ತೆ - ಪಡೀಲ್ - ಮಂಗಳೂರು ಜಂಕ್ಷನ್ - ಮಂಗಳೂರು ಸೆಂಟ್ರಲ್ - ಕಣ್ಣೂರು - ಕೋಝಿಕ್ಕೋಡ್.
  • ಬದಲಿ ಮಾರ್ಗ: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು (SMVB) - ಜೋಲಾರ್‌ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್.
  • ಹಿಂದಿನ‌ ಮಾರ್ಗ: ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಬಿ ಜಿ ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟವಾಳ, ಮತ್ತು ಮಂಗಳೂರು ಜಂಕ್ಷನ್.

6.ರೈಲು ಸಂಖ್ಯೆ 16585 ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್

  • ಮೂಲ ಮಾರ್ಗ : ಕೆಎಸ್‌ಆರ್ ಬೆಂಗಳೂರು – ಮೈಸೂರು – ಹಾಸನ – ಸಕಲೇಶಪುರ – ಸುಬ್ರಹ್ಮಣ್ಯ ರಸ್ತೆ – ಪಡೀಲ್ – ಮಂಗಳೂರು ಜಂಕ್ಷನ್ – ತೋಕೂರು – ಮುರ್ಡೇಶ್ವರ.
  • ಬದಲಿ ಮಾರ್ಗ : ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಓಮಲೂರು ಜಂಕ್ಷನ್ – ಪೊದನೂರು ಜಂಕ್ಷನ್ – ಪಾಲಕ್ಕಾಡ್ ಜಂಕ್ಷನ್ – ಶೋರಣೂರು ಜಂಕ್ಷನ್ – ಕಣ್ಣೂರು – ತೋಕೂರು – ಮುರ್ಡೇಶ್ವರ.
  • ಹಿಂದಿನ‌ ಮಾರ್ಗ : ಕೆಎಸ್‌ಆರ್ ಬೆಂಗಳೂರು, ಬೆಂಗಳೂರು ಕ್ಯಾಂಟ್, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಜಂಕ್ಷನ್, ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಹಾಗೂ ಬಂಟ್ವಾಳ.

ಪ್ರಯಾಣಿಕರಿಗೆ ರೈಲ್ವೆ ಮನವಿ

ರೈಲುಗಳ (Train) ಮಾರ್ಗ ಮತ್ತು ಕೊನೆಯ ನಿಲ್ದಾಣಗಳಲ್ಲಿ (Terminal Station) ಬದಲಾವಣೆ ಮಾಡಿರುವುದರಿಂದ ಪ್ರಯಾಣಿಕರು ತಮ್ಮ ಪ್ರಯಾಣದ (Journey) ವೇಳಾಪಟ್ಟಿ (Schedule) ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಡೆಕುಮರಿ (Yedakumari) ಭಾಗದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಿ ರೈಲು ಸಂಚಾರವನ್ನು (Train Services) ಎಂದಿನಂತೆ ಪುನರಾರಂಭಿಸುವ ಸಾಧ್ಯತೆ ಇದೆ.