MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial Update: ಭೂಮಿಯ ಇನ್ನೊಂದು ಮಗುವನ್ನು ಹೊತ್ತೊಯ್ದನಾ ಆ ಪಾಪಿ ಜಯದೇವ್?

Amruthadhaare Serial Update: ಭೂಮಿಯ ಇನ್ನೊಂದು ಮಗುವನ್ನು ಹೊತ್ತೊಯ್ದನಾ ಆ ಪಾಪಿ ಜಯದೇವ್?

‘ಅಮೃತಧಾರೆʼ ಧಾರಾವಾಹಿಯಲ್ಲಿ ಈಗಾಗಲೇ ಮಗಳನ್ನು ಕಳೆದುಕೊಂಡು ಗೌತಮ್‌ ಚಿಂತೆಯಲ್ಲಿದ್ದಾನೆ, ಈಗ ಇನ್ನೊಂದು ಮಗು ಕಿಡ್ನ್ಯಾಪ್‌ ಆಗಿದೆಯಾ? 

1 Min read
Padmashree Bhat
Published : Jul 26 2025, 09:11 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee5

‘ಅಮೃತಧಾರೆʼ ಧಾರಾವಾಹಿಯಲ್ಲಿ ಈಗಾಗಲೇ ಗೌತಮ್‌, ಭೂಮಿಕಾ ಅವಳಿ ಮಕ್ಕಳಲ್ಲಿ ಜಯದೇವ್‌ ಒಂದು ಮಗುವನ್ನು ಎತ್ತಿಕೊಂಡು ಹೋಗಿ ಎಸೆದಿದ್ದಾನೆ. ಈಗ ಮನೆಗೆ ಬಂದಿರೋ ಅವನಿಗೆ ಗೌತಮ್‌ ಕ್ಯಾಕರಿಸಿ ಉಗಿದು ಹೊರಗಡೆ ಕಳಿಸಿದ್ದನು. ಈಗ ಅವನು ಮತ್ತೊಂದು ಮಗುವನ್ನು ಕಿಡ್ನ್ಯಾಪ್‌ ಮಾಡಿದ್ದಾನಾ?

25
Image Credit : zee5

ಭೂಮಿಕಾ ಹಾಗೂ ಗೌತಮ್‌ ಇಬ್ಬರೂ ಲಾಂಗ್‌ ಡ್ರೈವ್‌ ಹೋಗಿದ್ದರು. ಆಗ ಅವರ ಮಗ ಆಕಾಶ್‌ ಮಲಗಿದ್ದನು. ಆ ಮಗುವನ್ನು ಸುಧಾ, ಮಲ್ಲಿ ನೋಡಿಕೊಳ್ತೀವಿ ಎಂದು ಹೇಳಿದ್ದರು. ಆ ಸಮಯ ನೋಡಿಕೊಂಡು ಮತ್ತೆ ಗೌತಮ್‌ ಮನೆಗೆ ಬಂದಿರೋ ಜಯದೇವ್‌ ಮಾಸ್ಕ್‌ ಹಾಕಿಕೊಂಡು ಆ ಮಗು ಕಿಡ್ನ್ಯಾಪ್‌ ಮಾಡಲು ನೋಡಿದ್ದಾನೆ.

Related Articles

Related image1
Amruthadhaare Serial: ಒಂಟಿಯಾಗಿರೋ ಮಲ್ಲಿ ಲೈಫ್​ಗೆ ಹೊಸ ಎಂಟ್ರಿ? ಯಾರೀತ?
Related image2
Amruthadhaare Serial Update: ಎಲ್ಲರಿಗೂ ಒಂದು ನ್ಯಾಯ, ಮಲ್ಲಿಗೆ ಮಾತ್ರ ಬೇರೆ ನ್ಯಾಯ? ಧರ್ಮಕ್ಕಾಗಿ ಬೇಡಿಕೆಯಿಟ್ಟ ವೀಕ್ಷಕರು!
35
Image Credit : zee5

ರೂಮ್‌ವೊಳಗಡೆ ಬಂದು ನಿನ್ನ ಸಹೋದರಿ ಬೇರೆ ಕಡೆ ಇದ್ದಾಳೆ, ನೀನು ಯಾಕೆ ಇಲ್ಲಿರಬೇಕು ಎಂದು ಹೇಳಿ ಆ ಮಗುವನ್ನು ಅವನು ಎತ್ತಿಕೊಂಡಿದ್ದಾನೆ. ಅದನ್ನು ಮಲ್ಲಿ ನೋಡಿ ತಡೆದಿದ್ದಾಳೆ. ಅದೇ ಸಮಯಕ್ಕೆ ಸುಧಾ ಕೂಡ ಬಂದಿದ್ದಾಳೆ. ಸುಧಾ ಹಾಗೂ ಮಲ್ಲಿ ಇಬ್ಬರೂ ಆ ಮಾಸ್ಕ್‌ ಬಿಚ್ಚಲು ನೋಡಿದ್ದಾರೆ. ಸದ್ಯ ಪ್ರೋಮೋದಲ್ಲಿ ಇಷ್ಟೇ ರಿವೀಲ್‌ ಆಗಿದೆ.

45
Image Credit : zee5

ಜಯದೇವ್‌ ಅಂತ ಗೊತ್ತಾದರೆ ಈ ವಿಷಯ ಗೌತಮ್‌ ಕಿವಿ ತಲುಪಿದರೆ ನನ್ನ ಮಗಳನ್ನು ಇವನೇ ಕಿಡ್ನ್ಯಾಪ್‌ ಮಾಡಿದ್ದಾನೆ ಅಂತ ಗೊತ್ತಾಗಲೂಬಹುದು. ಒಂದು ವೇಳೆ ಜಯದೇವ್‌ ಮಾಸ್ಕ್‌ ತೆಗೆಯಲು ಅವಕಾಶ ಕೊಡದೆ ಹಾಗೆ ಓಡಿ ಹೋಗೋ ಚಾನ್ಸ್‌ ಕೂಡ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

55
Image Credit : zee5

ಮಗನನ್ನು ಒಂದು ನಿಮಿಷ ಕೂಡ ಬಿಟ್ಟಿರದ ಭೂಮಿಗೆ ಈ ವಿಷಯ ಗೊತ್ತಾದರೆ ಗಾಬರಿ ಆಗುತ್ತಾಳೆ. ಆರೋಗ್ಯದ ದೃಷ್ಟಿಯಿಂದ ಅವಳಿಗೆ ಈ ರೀತಿಯ ವಿಷಯಗಳು ಗೊತ್ತಾಗಬಾರದು. ಒಟ್ಟಿನಲ್ಲಿ ಈ ಕಿಡ್ನ್ಯಾಪ್‌ ವಿಷಯ ಯಾವ ರೀತಿಯ ಟ್ವಿಸ್ಟ್‌ ಕೊಡುತ್ತದೆ ಎಂದು ಕಾದು ನೋಡಬೇಕಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved