- Home
- Entertainment
- TV Talk
- Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್ ಪ್ರೇಮಿಗಳು ಗರಂ
Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್ ಪ್ರೇಮಿಗಳು ಗರಂ
ಮಾಡದ ತಪ್ಪಿಗೆ ಕರ್ಣ ಜೈಲು ಸೇರಿದ್ದು, ಆತನ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಈ ವಿಷಯವನ್ನು ಪತ್ನಿ ನಿಧಿ ಜೈಲಿನಲ್ಲಿರುವ ಕರ್ಣನಿಗೆ ತಿಳಿಸಿದಾಗ ಆತ ಕುಸಿದು ಹೋಗುತ್ತಾನೆ. ಈ ಬೆಳವಣಿಗೆಯು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ಣ ಜೈಲುಪಾಲು
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ತಾನು ಮಾಡದ ತಪ್ಪಿಗೆ ಕರ್ಣ ಜೈಲುಪಾಲಾಗಿದ್ದಾನೆ. ಡೇಟ್ ಬಾರ್ ಆಗಿರೋ ಮೆಡಿಸಿನ್ ಆಸ್ಪತ್ರೆಯಲ್ಲಿ ವಿಲನ್ಸ್ ತಂದಿಟ್ಟು ರೋಗಿಗಳ ಪ್ರಾಣಕ್ಕೆ ಕುತ್ತಾಗಿದ್ದರಿಂದ ಕರ್ಣನನ್ನು ಅರೆಸ್ಟ್ ಮಾಡಲಾಗಿದೆ.
ಆಸ್ಪತ್ರೆ ಸೀಜ್
ಅದೇ ಇನ್ನೊಂದೆಡೆ, ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಎಲ್ಲಾ ಪೇಷಂಟ್ಗಳನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಅಜ್ಜಿಯ ಆರೋಗ್ಯವೂ ಹಾಳಾಗಿ ಆಸ್ಪತ್ರೆ ಸೇರಿದ್ದಾಳೆ.
ಅಜ್ಜಿ ಆಸ್ಪತ್ರೆಗೆ
ಒಮ್ಮೆ ಅಜ್ಜಿಯನ್ನು ಮಾತನಾಡಿಸುವುದಾಗಿ ಕರ್ಣ ಪೊಲೀಸ್ ಬಳಿ ಕೇಳಿಕೊಂಡರೂ ಅದು ನಿಯಮದ ಉಲ್ಲಂಘನೆ ಆಗಿರುವ ಕಾರಣ ಫೋನ್ ಕೊಟ್ಟಿಲ್ಲ.
ನಿಧಿ ಜೈಲಿಗೆ
ಇದೀಗ, ನಿಧಿ ಕರ್ಣನನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾಳೆ. ಅಜ್ಜಿಯ ವಿಷಯವನ್ನು ಕರ್ಣ ಕೇಳಿದಾಗ, ಅವರು ಚೆನ್ನಾಗಿದ್ದಾರೆ ಎಂದು ಹೇಳಿದ್ದಾಳೆ ನಿಧಿ.
ವಿಷಯ ಹೇಳಿದ ನಿಧಿ
ಆದರೆ, ಇದೇ ವೇಳೆ ಆಸ್ಪತ್ರೆ ಸೀಜ್ ಆಗಿದ್ದು, ಪೇಷಂಟ್ಗಳನ್ನು ಬೇರೆ ಕಡೆ ಶಿಫ್ಟ್ ಮಾಡಿರೋ ವಿಷಯಗಳನ್ನೆಲ್ಲಾ ಕರ್ಣನಿಗೆ ಹೇಳಿದಾಗ ಆತ ಕುಸಿದು ಹೋಗಿದ್ದಾನೆ.
ವೀಕ್ಷಕರು ಗರಂ
ಇದನ್ನು ನೋಡಿ ಸೀರಿಯಲ್ ಪ್ರೊಮೋ ವೀಕ್ಷಕರು ನಿಧಿಯ ಕ್ರಮಕ್ಕೆ ಗರಂ ಆಗಿದ್ದಾರೆ. ಇಂಥ ಸ್ಥಿತಿಯಲ್ಲಿ ಇದನ್ನೆಲ್ಲಾ ಕರ್ಣನಿಗೆ ನಿಧಿ ಯಾಕೆ ಹೇಳಬೇಕಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿಧಿ ಕರ್ಣನನ್ನು ಕಾಪಾಡ್ತಾಳಾ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

