MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial Update: ಅಕ್ಕನಿಗೆ ಮಾತು ಕೊಟ್ಟ ನಿಧಿ; ಕರ್ಣನನ್ನು ಬಿಟ್ಕೊಟ್ಟು ಬೇರೆ ಹುಡುಗನನ್ನು ಮದುವೆ ಆಗ್ತಾಳಾ?

Karna Serial Update: ಅಕ್ಕನಿಗೆ ಮಾತು ಕೊಟ್ಟ ನಿಧಿ; ಕರ್ಣನನ್ನು ಬಿಟ್ಕೊಟ್ಟು ಬೇರೆ ಹುಡುಗನನ್ನು ಮದುವೆ ಆಗ್ತಾಳಾ?

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಪ್ರೀತಿ ವಿಷಯ ಮಾತ್ರ ದಿನದಿಂದ ದಿನಕ್ಕೆ ಇಕ್ಕಟ್ಟಿಗೆ ಸಿಲುಕುತ್ತಿದೆ. ಆದಷ್ಟು ಬೇಗ ತೇಜಸ್‌, ನಿತ್ಯಾ ಒಂದಾದರೆ ನಮ್ಮ ದಾರಿ ಸುಲಭ ಆಗುತ್ತದೆ ಎಂದು ಇವರು ಭಾವಿಸಿದ್ದರು. ಆದರೆ ಆ ರೀತಿ ಆಗ್ತಿಲ್ಲ. 

1 Min read
Author : Padmashree Bhat
Published : Feb 02 2026, 09:37 AM IST
Share this Photo Gallery
  • FB
  • TW
  • Linkdin
  • Whatsapp
17
ನಿತ್ಯಾಗೆ ಭರವಸೆ ಇಲ್ಲ
Image Credit : zee5

ನಿತ್ಯಾಗೆ ಭರವಸೆ ಇಲ್ಲ

ತೇಜಸ್‌ ಈಗಾಗಲೇ ನಿತ್ಯಾಗೆ ಬಾಯಿಗೆ ಬಂದ ಹಾಗೆ ಮಾತನಾಡಿ, ಅವಳ ಕ್ಯಾರೆಕ್ಟರ್‌ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಕರ್ಣ, ನಿತ್ಯಾಳನ್ನು ಅವನು ತಪ್ಪು ತಿಳಿದುಕೊಂಡಿದ್ದಾನೆ. ತೇಜಸ್‌ ಒಂದಲ್ಲ ಒಂದು ದಿನ ಸರಿ ಹೋಗ್ತಾನೆ, ನಮ್ಮ ಸಂಬಂಧ ಸರಿ ಹೋಗುತ್ತದೆ ಎಂದು ನಿತ್ಯಾಗೆ ಕೂಡ ಭರವಸೆ ಇಲ್ಲದಂತಾಗಿದೆ.

27
ಕರ್ಣನನ್ನು ಹೊಗಳಿದ ನಿತ್ಯಾ
Image Credit : zee5

ಕರ್ಣನನ್ನು ಹೊಗಳಿದ ನಿತ್ಯಾ

ಕರ್ಣನ ಒಳ್ಳೆಯ ಗುಣವನ್ನು ನಿತ್ಯಾ ಸದಾಕಾಲ ಪ್ರಶಂಸಿಸುತ್ತಾಳೆ. ಈಗಲೂ ಕೂಡ ಅವಳು, ಕರ್ಣನ ಬಳಿ, “ನನ್ನ ಪರವಾಗಿ ಮಾತನಾಡಿದ್ದಕ್ಕೆ ಥ್ಯಾಂಕ್ಯು. ಎಂದಿಗೂ ಯಾರನ್ನು ಬಿಟ್ಟುಕೊಡೋದಿಲ್ಲ. ಮನೆಯೊಳಗಡೆ, ಹೊರಗಡೆ ನನ್ನ ಬಗ್ಗೆ ಮಾತನಾಡಿದ್ರಿ” ಎಂದು ಹೇಳಿದ್ದಳು. ಆಗ ಕರ್ಣ ಇದು ನನ್ನ ಕರ್ತವ್ಯ ಎಂದಿದ್ದಾನೆ.

Related Articles

Related image1
Karna Serial: ಕುಡಿದ ಅಮಲಲ್ಲಿರೋನಿಗೆ ಬುದ್ಧಿ ಹೇಳೋ ಕರ್ಣಂಗೆ ಬುದ್ಧಿ ಇಲ್ವಾ? ಇವನೆಂಥ ಡಾಕ್ಟರ್​?
Related image2
Karna Serial ತೇಜಸ್‌ ಬಾವ, ಯಾಕೆ ಹೀಗೆ ಮಾಡಿದ್ರಿ? ಸಿಕ್ಕಾಪಟ್ಟೆ ಕೆಂಡಾಮಂಡಲರಾದ ವೀಕ್ಷಕರು!
37
ಆರೈಕೆ ಮಾಡೋಕೆ ನಿಧಿ ರೆಡಿ
Image Credit : zee5

ಆರೈಕೆ ಮಾಡೋಕೆ ನಿಧಿ ರೆಡಿ

ಇನ್ನು ನಿಧಿಗೂ ಕೂಡ ಅಕ್ಕನನ್ನು ಕಂಡ್ರೆ ಭಾರೀ ಇಷ್ಟ. ಈಗ ಅವಳು ಗರ್ಭಿಣಿ ಅಕ್ಕನ ಆರೈಕೆ ಮಾಡೋದರಲ್ಲಿ ಮುಂದಾಗಿದ್ದಾಳೆ. ಅಕ್ಕನ ಬಳಿ ಬಂದು “ಕಾಲು ನೋಯುತ್ತಿದೆಯಾ? ಸುಸ್ತಾಗಿದ್ದೀಯಾ, ನಾನು ಕಾಲು ಒತ್ತುತ್ತೀನಿ” ಎಂದು ಮುಂದೆ ಬಂದಿದ್ದಾಳೆ.

47
ನಿಧಿಗೆ ಸಲಹೆ ಕೊಟ್ಟ ನಿತ್ಯಾ
Image Credit : zee5

ನಿಧಿಗೆ ಸಲಹೆ ಕೊಟ್ಟ ನಿತ್ಯಾ

ಆಗ ನಿತ್ಯಾ, “ನೀನು ಯಾವಾಗಲೂ ನನ್ನ ಬಗ್ಗೆ ಯೋಚನೆ ಮಾಡಿದ್ರೆ ನಿನ್ನ ಜೀವನದ ಕಥೆ ಏನಾಗುತ್ತದೆ? ನೀನು ನನ್ನ ಬಗ್ಗೆ ಆಲೋಚನೆ ಮಾಡೋದು ಬಿಟ್ಟು, ನಿನ್ನ ಬಗ್ಗೆ ಆಲೋಚನೆ ಮಾಡಬೇಕು” ಎಂದು ನಿಧಿಗೆ ಹೇಳಿದ್ದಾಳೆ.

57
ನಿಧಿಗೆ ಬೇರೆ ಹುಡುಗನನ್ನು ಹುಡುಕ್ತಾಳಾ?
Image Credit : zee5

ನಿಧಿಗೆ ಬೇರೆ ಹುಡುಗನನ್ನು ಹುಡುಕ್ತಾಳಾ?

ನಿಧಿ ಪ್ರೀತಿಸುವ ಹುಡುಗ ಯಾರು ಎಂದು ಅವಳು ಹೇಳಿಲ್ಲ ಅಂದ್ರೆ ಬಹುಶಃ ನಿತ್ಯಾ ಅವಳಿಗೆ ಬೇರೆ ಹುಡುಗನನ್ನು ಹುಡುಕಿ ಮದುವೆ ಮಾಡಬಹುದಾ ಎಂಬ ಪ್ರಶ್ನೆ ಬಂದಿದೆ. ಈ ರೀತಿ ಕೂಡ ಆಗುವ ಸಾಧ್ಯತೆ ಇದೆ.

67
ಕರ್ಣನ ಮೇಲೆ ನಿತ್ಯಾಗೆ ಲವ್‌ ಆಗಬಹುದಾ?
Image Credit : zee5

ಕರ್ಣನ ಮೇಲೆ ನಿತ್ಯಾಗೆ ಲವ್‌ ಆಗಬಹುದಾ?

ಕರ್ಣನ ಒಳ್ಳೆಯತನವನ್ನು ನೋಡಿ ನಿತ್ಯಾಗೆ ಅವನ ಮೇಲೆ ಲವ್‌ ಆಗಬಹುದು. ಪ್ರೀತಿ ಎರಡು ಬಾರಿ ಕೂಡ ಹುಟ್ಟಬಹುದು, ಈ ವಿಷಯ ನಿಧಿಗೆ ಗೊತ್ತಾಗಿ, ತನ್ನ ಪ್ರೀತಿಯನ್ನು ಬಿಟ್ಟುಕೊಡಬಹುದಾ ಎಂಬ ಪ್ರಶ್ನೆ ಎದ್ದಿದೆ.

77
ಸದ್ಯ ನಿಧಿ-ಕರ್ಣ ಒಂದಾಗಲ್ಲ
Image Credit : zee5

ಸದ್ಯ ನಿಧಿ-ಕರ್ಣ ಒಂದಾಗಲ್ಲ

ಧಾರಾವಾಹಿಯಲ್ಲಿ ಏನೇ ಆಗಲಿ ಸದ್ಯ ನಿಧಿ-ಕರ್ಣ ಒಂದಾಗೋದಿಲ್ಲ, ಇವರಿಬ್ಬರು ಮದುವೆ ಆಗೋದು ಕೂಡ ಡೌಟ್‌ ಇದೆ. ಒಟ್ಟಿನಲ್ಲಿ ಕರ್ಣನಿಗೆ ನಿತ್ಯಾ-ನಿಧಿ ಇಬ್ಬರೂ ಗಂಟು ಬೀಳೋದು ಗ್ಯಾರಂಟಿ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್
Recommended image2
ಅನಸೂಯ ಮೈಕ್ ಬಿಸಾಕಿ ಹೋದಳು, ರಶ್ಮಿ ಶಾಕಿಂಗ್ ಕಾಮೆಂಟ್ಸ್! ಹೋಗುವ ಮುನ್ನ ಬೇಡಿಕೊಂಡಿದ್ದೇಕೆ?
Recommended image3
Amruthadhaare: ಅಡುಗೆಮನೆಯಲ್ಲಿ ಗೌತಮ್-ಭೂಮಿಕಾ ರೊಮ್ಯಾನ್ಸ್ : ಡುಮ್ಮಾ ಸರ್ ಫುಲ್ ಸುಸ್ತು
Related Stories
Recommended image1
Karna Serial: ಕುಡಿದ ಅಮಲಲ್ಲಿರೋನಿಗೆ ಬುದ್ಧಿ ಹೇಳೋ ಕರ್ಣಂಗೆ ಬುದ್ಧಿ ಇಲ್ವಾ? ಇವನೆಂಥ ಡಾಕ್ಟರ್​?
Recommended image2
Karna Serial ತೇಜಸ್‌ ಬಾವ, ಯಾಕೆ ಹೀಗೆ ಮಾಡಿದ್ರಿ? ಸಿಕ್ಕಾಪಟ್ಟೆ ಕೆಂಡಾಮಂಡಲರಾದ ವೀಕ್ಷಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved