- Home
- Entertainment
- TV Talk
- Karna Serial Update: ಪ್ರಿಯತಮನ ಜೊತೆ ಹಸೆಮಣೆ ಏರಿದ ನಿತ್ಯಾ; ಈ ಬಾರಿಯೂ ತೇಜಸ್ನಿಂದಲೇ ಅಡ್ಡಿ ಆಗೋದು ಪಕ್ಕಾ!
Karna Serial Update: ಪ್ರಿಯತಮನ ಜೊತೆ ಹಸೆಮಣೆ ಏರಿದ ನಿತ್ಯಾ; ಈ ಬಾರಿಯೂ ತೇಜಸ್ನಿಂದಲೇ ಅಡ್ಡಿ ಆಗೋದು ಪಕ್ಕಾ!
Karna Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ತೇಜಸ್ ಮದುವೆ ಮಾಡಿಸೋಣ ಎಂದು ಕರ್ಣ ನಿಧಿ ಜೊತೆಗೆ ಹೊರಗಡೆ ಹೋಗಿದ್ದಾನೆ. ಅಲ್ಲಿ ನಿತ್ಯಾ ಮದುವೆ ತಯಾರಿ ನಡೆದಿದೆ. ನಿಧಿಯನ್ನು ಪ್ರೀತಿಸುವ ಕರ್ಣ, ನಿತ್ಯಾಗೆ ಏನೇ ತೊಂದರೆ ಬಂದರೂ ಕೂಡ ಅವಳನ್ನು ಕಾಪಾಡ್ತಾನೆ.

ತೇಜಸ್ಗೆ ಹೊಟ್ಟೆಕಿಚ್ಚು
ನಿತ್ಯಾ ಪದೇ ಪದೇ ಕರ್ಣನ ಬಗ್ಗೆ ಮಾತಾನಾಡೋದು, ತೇಜಸ್ಗೆ ಇರಿಸು ಮುರಿಸು ತಂದಿದೆ. ನಿತ್ಯಾಗೆ ಏನೇ ಸಮಸ್ಯೆ ಬಂದರೂ ಕೂಡ, ಕರ್ಣ ಅವಳ ಬಳಿ ಬಂದು ಕಾಪಾಡುತ್ತಾನೆ. ಇದು ಕೂಡ ತೇಜಸ್ಗೆ ಹೊಟ್ಟೆಕಿಚ್ಚು ತಂದಿದೆ.
ನಯನತಾರಾ ಮಾಸ್ಟರ್ಪ್ಲ್ಯಾನ್
ಇನ್ನೊಂದು ಕಡೆ ನಿತ್ಯಾ ಹಾಗೂ ತೇಜಸ್ ಮದುವೆ ಆಗೋಕೆ ಎಲ್ಲ ತಯಾರಿಯೂ ನಡೆದಿದೆ. ಅತ್ತ ನಯನತಾರಾ ಇವರ ಖುಷಿಯನ್ನು ಹಾಳು ಮಾಡಲು ನಿತ್ಯಾಳನ್ನು ಸಾಯಿಸಲು, ಎಲ್ಲ ಪ್ಲ್ಯಾನ್ ಮಾಡಿದ್ದಾಳೆ. ಆದರೆ ಇದು ನಡೆಯೋದಿಲ್ಲ ಬಿಡಿ.
ಡಿಮ್ಯಾಂಡ್ ಮಾಡಿದ ನಿತ್ಯಾ
ಮದುವೆ ಮಂಟಪ ರೆಡಿಯಾಗಿದೆ, ಎಲ್ಲ ತಯಾರಿಯೂ ಆಗಿತ್ತು. ಆಗ ನಿತ್ಯಾ ಬಳಿ “ನಿಮ್ಮ ಮದುವೆ ದಿನ, ಈ ದಿನಕ್ಕೋಸ್ಕರ ತುಂಬ ಒದ್ದಾಡಿದ್ದಿರಿ, ನಿಮಗೆ ಏನು ಬೇಕು” ಎಂದು ಕರ್ಣ ಕೇಳಿದ್ದಾನೆ. ಆಗ ನಿತ್ಯಾ ಒಂದು ಡಿಮ್ಯಾಂಡ್ ಇಟ್ಟಿದ್ದಳು.
ಆಸೆ ಈಡೇರಿಸಿದ ಕರ್ಣ
ನಿತ್ಯಾಗೆ ಮೆಹೆಂದಿ ಹಾಕಿಸಿಕೊಳ್ಳಬೇಕು ಎಂಬ ಆಸೆ ಇತ್ತಂತೆ. ಅದರಂತೆ ನಿತ್ಯಾ ಮೆಹೆಂದಿ ಹಾಕಿಸಿಕೊಂಡಿದ್ದಾಳೆ. ಕರ್ಣ ಅವಳ ಆಸೆಯನ್ನು ಈಡೇರಿಸಿದ್ದಾನೆ. ಇನ್ನು ಮದುವೆಗೆ ಎಲ್ಲವೂ ಸಜ್ಜಾಗಿದೆ.
ಮದುವೆ ಆಗಲಿದ್ಯಾ?
ತೇಜಸ್, ನಿತ್ಯಾ ಮದುವೆ ಮಂಟಪದಲ್ಲಿ ಕೂತಿದ್ದಾರೆ. ಆ ವೇಳೆ ಮದುವೆ ಆಗೋದು ಡೌಟ್ ಎನ್ನಲಾಗಿದೆ. ಈ ಬಾರಿ ಕೂಡ ಏನಾದರೂ ಸಮಸ್ಯೆ ಬರಬಹುದು. ಇಷ್ಟು ಸುಲಭಕ್ಕೆ ಇವರ ಮದುವೆಯಾದರೆ, ನಿಧಿ-ಕರ್ಣ ಜೀವನ ಕೂಡ ಆರಾಮಾಗಿ ಇರುವುದು. ಹೀಗಾಗಿ ಇನ್ನೇನಾದರೂ ಟ್ವಿಸ್ಟ್ ಕೊಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

