MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಇವತ್ತು ಲಕ್ಷ್ಮೀ ನಿವಾಸ ಸೀರಿಯಲ್ ನೋಡೋರಿಗೆ 'ಸಂತೋಷ' ಆಗುತ್ತೆ!

ಇವತ್ತು ಲಕ್ಷ್ಮೀ ನಿವಾಸ ಸೀರಿಯಲ್ ನೋಡೋರಿಗೆ 'ಸಂತೋಷ' ಆಗುತ್ತೆ!

ಲಕ್ಷ್ಮೀ ನಿವಾಸದಲ್ಲಿ ಇಂದು ಹೈಡ್ರಾಮ. ತಾಯಿ ಲಕ್ಷ್ಮೀಯ ತವರು ಮನೆಯ ಆಸ್ತಿಯ ಮೇಲೆ ಕಣ್ಣು ಹಾಕಿದ ಸಂತೋಷ್, ತಾಯಿಗೆ ತಿಳಿಯದಂತೆ ಸಹಿ ಹಾಕಿಸಿಕೊಂಡು ಮಾವನಿಗೆ ನೋಟಿಸ್ ಕಳುಹಿಸಿದ್ದ. ಇದನ್ನು ತಿಳಿದ ಶ್ರೀನಿವಾಸ್, ಮಗ ಸಂತೋಷ್‌ಗೆ ಏಟು ನೀಡಿದ್ದಾರೆ.

2 Min read
Mahmad Rafik
Published : Jul 02 2025, 02:57 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Zee Kannada@FB

ಲಕ್ಷ್ಮೀ ನಿವಾಸ ಕನ್ನಡದ ಟಾಪ್ ಧಾರಾವಾಹಿ ಆಗಿದೆ. ಆದ್ರೆ ಇಂದಿನ ಸಂಚಿಕೆ ವೀಕ್ಷಕರಿಗೆ ಸಂತೋಷವನ್ನುಂಟು ಮಾಡಲಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸಂತೋಷ್ ಮತ್ತು ಹರೀಶ್ ತಂದೆ-ತಾಯಿಯನ್ನು ಹಂಚಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಮೊದಲ ಬಾರಿಗೆ ಹಿರಿಯ ಮಗ ಸಂತೋಷ್‌ನ ಕಪಾಳಕ್ಕೆ ಏಟು ನೀಡಿದ್ದಾರೆ.

28
Image Credit : Zee Kannada@FB

ತಾಯಿ ಲಕ್ಷ್ಮೀ ಕೋಟ್ಯಧೀಶ ಕುಟುಂಬದಿಂದ ಬಂದಿರುವ ವಿಷಯ ಸಂತೋಷ್‌ಗೆ ಗೊತ್ತಾಗಿದೆ. ಮೊದಲೇ ಕಾಸಿಗೂ ಲೆಕ್ಕಾಚಾರ ಹಾಕುವ ಸಂತೋಷ್‌ನಿಗೆ ತಾಯಿ ತವರಿನ ಆಸ್ತಿ ಮೇಲೆ ಕಣ್ಣು ಹಾಕಿದ್ದನು. ತಮ್ಮ ಹರೀಶ್‌ ಜೊತೆಗೂಡಿ ಆಸ್ತಿ ಲಪಟಾಯಿಸಲು ಸಂತೋಷ್ ಪ್ಲಾನ್ ಮಾಡಿದ್ದನು.

Related Articles

Related image1
ಅದಕ್ಕೆ 'ಕಾಂಪ್ರಮೈಸ್'​ ಆದ್ರೆ ಮಾತ್ರ ನೀವು ಸೆಲೆಕ್ಟ್​ ಅಂತಂದ್ರು! ಲಕ್ಷ್ಮೀ ನಿವಾಸ ಚಿನ್ನುಮರಿ ಸ್ಟೋರಿ ಕೇಳಿ...
Related image2
ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್​!
38
Image Credit : Zee Kannada@FB

ಅಜ್ಜಿಯ ವಿಮೆ ಹಣದ ಅರ್ಜಿ ಎಂದು ಹೇಳಿ, ಲಾಯರ್ ನೋಟಿಸ್‌ಗೆ ತಾಯಿ ಲಕ್ಷ್ಮೀಯಿಂದ ಸಹಿ ಮಾಡಿಸಿಕೊಂಡಿದ್ದನು. ಈ ನೋಟಿಸ್‌ನ್ನು ಮಾವ ನರಸಿಂಹನಿಗೆ ಕಳುಹಿಸಿದ್ದನು. ಇತ್ತೀಚೆಗಷ್ಟೇ ತಂಗಿ ಲಕ್ಷ್ಮೀ ಮೇಲಿನ ದ್ವೇಷ ಕಡಿಮೆಯಾಗಿತ್ತು. ತಂಗಿಯನ್ನು ಭೇಟಿಯಾಗುವ ಹೋಗಿದ್ದ ವೇಳೆ ಲಕ್ಷ್ಮೀ ಮೇಲೆ ಸರಗಳ್ಳರು ಅಟ್ಯಾಕ್ ಮಾಡಿದ್ದರು.

48
Image Credit : Zee Kannada@FB

ಪ್ರಜ್ಞೆ ಕಳೆದುಕೊಂಡಿದ್ದ ಲಕ್ಷ್ಮೀಯನ್ನು ನರಸಿಂಹ ಮತ್ತು ಲಲಿತಾ ಕಾರ್‌ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ವೆಂಕಿ ಕೈಯಲ್ಲಿ ಹಣದ ಬ್ಯಾಗ್ ನೀಡಿ ಹಿಂದಿರುಗಿದ್ದರು. ಆದ್ರೆ ಸ್ವಾಭಿಮಾನಿ ಲಕ್ಷ್ಮೀ ಹಣದ ಬ್ಯಾಗ್‌ನ್ನು ಚೆಲುವಿ-ವೆಂಕಿ ಮೂಲಕ ಹಿಂದಿರುಗಿಸಿದ್ದಳು.

58
Image Credit : Zee Kannada@FB

ಲಕ್ಷ್ಮೀ ಮತ್ತು ಶ್ರೀನಿವಾಸ್ ಇಬ್ಬರು ಸ್ವಾಭಿಮಾನಿಗಳು. ಆದ್ರೆ ಇವರ ಮಕ್ಕಳಾದ ಹರೀಶ್ ಮತ್ತು ಸಂತೋಷ್‌ಗೆ ಸ್ವಾಭಿಮಾನವೇ ಇಲ್ಲ. ತಾಯಿ ಬೇಡ ಅಂತ ಬಿಟ್ಟು ಬಂದಿರುವ ಆಸ್ತಿ ಮೇಲೆ ಹರೀಶ್-ಸಂತೋಷ್‌ ಕಣ್ಣಾಕಿದ್ದಾರೆ. ತಾಯಿಗೆ ತಿಳಿಯದಂತೆ ಸಹಿ ಹಾಕಿಸಿಕೊಂಡು ಮಾವನಿಗೆ ನೋಟಿಸ್ ಕಳುಹಿಸಿದ್ದಾರೆ. ಆಸ್ತಿ ಕೇಳಿ ತಂಗಿ ನೋಟಿಸ್ ಕಳುಹಿಸಿದ್ದಾಳೆ ಎಂದು ತಿಳಿದು ನರಸಿಂಹ ಕೋಪಗೊಂಡಿದ್ದಾನೆ.

68
Image Credit : Zee Kannada@FB

ತಾಯಿ ಬಳಿ ಸಹಿ ಹಾಕಿಸಿಕೊಂಡು ಆಸ್ತಿ ಕೇಳಿ ನೋಟಿಸ್ ಕಳುಹಿಸಿರುವ ವಿಷಯವನ್ನು ಪತ್ನಿ ಸಿಂಚನಾ ಮುಂದೆ ಹರೀಶ್ ಹೇಳುತ್ತಿರೋದನ್ನು ಲಕ್ಷ್ಮೀ ಕೇಳಿಸಿಕೊಂಡಿದ್ದಾಳೆ. ಕೂಡಲೇ ಈ ವಿಷಯವನ್ನು ಗಂಡನಿಗೆ ತಿಳಿಸಿದ್ದಾಳೆ.

78
Image Credit : Zee Kannada@FB

ಮಗನ ನೀಚ ಬುದ್ಧಿಗೆ ಕೆಂಡವಾದ ಶ್ರೀನಿವಾಸ್, ಮನೆಗೆ ಬಂದು ಮಗ ಸಂತೋಷ್ ಕೆನ್ನೆಗೆ ಏಟು ನೀಡಿದ್ದಾನೆ. ಗುಳಿಗೆ ಸಿದ್ದ ಒಳಗೊಳಗೆ ಮೆದ್ದ ಅನ್ನೋ ವ್ಯಕ್ತಿ ನೀನು. ಯಾಕೆ ನೋಟಿಸ್ ಕಳುಹಿಸಿದ್ದೀಯಾ ಎಂದು ಮಗನನ್ನು ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.

88
Image Credit : Zee Kannada Facebook

ಈ ಸೀರಿಯಲ್ ಪ್ರೋಮೋ ನೋಡಿದ ಲಕ್ಷ್ಮೀ ನಿವಾಸ, ಯಾವಾಗ್ಲೋ ಹೊಡಿಬೇಕಿತ್ತು. ತುಂಬಾ ಲೇಟ್ ಆಗಿ ಹೋಡಿದ್ರಿ ಇರಲಿ. ಇವತ್ತು ಲಕ್ಷ್ಮಿ ನಿವಾಸ ನೋಡುವವರಿಗೆಲ್ಲಾ ಒಂಥರಾ ಸಂತೋಷವಾಗತ್ತೆ, ಮನಸಿಗೆ ಹಾಯ್ ಅನ್ನಿಸತ್ತೆ. ಈ ದೃಶ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ರು. ತಾಳ್ಮೆಗೂ ಒಂದು ಮಿತಿ ಇರತ್ತೆ ಅನ್ನೋದು ಇದಕ್ಕೆ ಎಂದು ಕಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
ಅಂದು ಸುದೀಪ್​ಗೆ ಆ್ಯಕ್ಸಿಡೆಂಟ್​! Bigg Boss ವೀಕೆಂಡ್​ನಲ್ಲಿ ನಡೆದದ್ದೇನು? ಕಿಚ್ಚನಿಂದ ಶಾಕಿಂಗ್​ ವಿಷ್ಯ ರಿವೀಲ್​
Recommended image2
Bigg Boss ಮನೇಲಿ ಆ ವಿಷಯ ಹೇಳೋಕೆ ಧೈರ್ಯ ಇರೋ ಪ್ರಪಂಚದ ಮೊದಲ ಗಂಡ ಅಂದ್ರೆ ವಿ ರವಿಚಂದ್ರನ್!‌ ಡೌಟ್‌ ಬೇಡ
Recommended image3
Karna Serial: ಅಮ್ಮ ಇರಬೇಕು ಅನ್ನೋದು ಇದಕ್ಕೆ ನೋಡಿ: ಮಗ ಕರ್ಣನನ್ನು ಉಳಿಸಿದ ಮಾಲತಿ
Related Stories
Recommended image1
ಅದಕ್ಕೆ 'ಕಾಂಪ್ರಮೈಸ್'​ ಆದ್ರೆ ಮಾತ್ರ ನೀವು ಸೆಲೆಕ್ಟ್​ ಅಂತಂದ್ರು! ಲಕ್ಷ್ಮೀ ನಿವಾಸ ಚಿನ್ನುಮರಿ ಸ್ಟೋರಿ ಕೇಳಿ...
Recommended image2
ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved