MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ? ಸುಳಿವು ಕೊಟ್ಟ ವಾಹಿನಿ!

Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ? ಸುಳಿವು ಕೊಟ್ಟ ವಾಹಿನಿ!

'ಕರಿಮಣಿ' ಧಾರಾವಾಹಿ ಅಂತ್ಯ ಆಗೋದು ಪಕ್ಕಾ ಆಗಿದೆ. ಈಗಾಗಲೇ ವಾಹಿನಿ ಕೂಡ ಅಂತಿಮ ಸಂಚಿಕೆಗಳು ಪ್ರಸಾರವಾಗಲಿದೆ ಎಂದು ಹೇಳಿಕೊಂಡಿದೆ. ಶನಿವಾರ ಹಾಗೂ ಭಾನುವಾರ ಸಂಜೆ ಆರು ಗಂಟೆಗೆ ಈ ಧಾರಾವಾಹಿಯ ಕ್ಲೈಮ್ಯಾಕ್ಸ್‌ ಎಪಿಸೋಡ್‌ಗಳು ಪ್ರಸಾರ ಆಗಲಿವೆಯಂತೆ. 

2 Min read
Author : Padmashree Bhat
| Updated : Jul 25 2025, 04:12 PM IST
Share this Photo Gallery
  • FB
  • TW
  • Linkdin
  • Whatsapp
16
ಸದ್ಯ ಏನಾಗಿದೆ?
Image Credit : jiohotstar

ಸದ್ಯ ಏನಾಗಿದೆ?

ಬ್ಲ್ಯಾಕ್‌ರೋಸ್‌ ವೇಷ ಹಾಕಿದ್ದು ಅರುಂಧತಿ ಎನ್ನೋದು ಇಡೀ ಮನೆಯವರಿಗೆ ಗೊತ್ತಾಗಿದೆ. ಯಾರು ಎಷ್ಟೇ ಹೇಳಿದರೂ ಕೂಡ ಕರ್ಣ ಮಾತ್ರ ತನ್ನ ಮಲತಾಯಿ ಅರುಂಧತಿ ವಿಲನ್‌ ಅಲ್ಲ ಎಂದು ನಂಬಿದ್ದನು. ಅರುಂಧತಿಯ ಹೆತ್ತ ಮಗ ಭರತ್‌ ಕೂಡ ತಾಯಿಯನ್ನು ವಿರೋಧಿಸಿದ್ದನು. ಇನ್ನು ಅರುಂಧತಿ ಮನೆಯವರು ಕೂಡ ಅವಳ ನಿಜವಾದ ಮುಖವಾಡ ನೋಡಿ ಹೆದರಿದ್ದಾರೆ. ನಾವು ಪುಣ್ಯಕೋಟಿ ಗೋವು, ದೇವರು ಎಂದಕೊಂಡವಳು ದೆವ್ವ ಎನ್ನೋದು ಅವರಿಗೆ ಅರ್ಥ ಆಗಿದೆ.

26
ಸವಾಲು ಹಾಕಿದ ಅರುಂಧತಿ ಮಗ ಭರತ್
Image Credit : jiohotstar

ಸವಾಲು ಹಾಕಿದ ಅರುಂಧತಿ ಮಗ ಭರತ್

ಕರ್ಣನನ್ನು ಅರುಂಧತಿಯೇ ಕಾಲಿನಲ್ಲಿ ಒದ್ದು, ತಲೆಗೆ ಹೊಡೆದು ಸಾಯಿಸಿದ್ದಾಳೆ. ಕರ್ಣ ಸತ್ತು ಹೋಗಿದ್ದಾನೆ, ಮನೆಯಲ್ಲಿ ಇರೋರೆಲ್ಲರೂ ತಾವು ಹೇಳಿದ ಮಾತನ್ನು ಕೇಳಬೇಕು ಅಂತ ಅವಳು ತಾಕೀತು ಮಾಡಿದ್ದಳು. ಆದರೆ ಭರತ್‌ ಮಾತ್ರ ಕರ್ಣ ಬಂದು ನಿನಗೆ ಅಂತ್ಯ ಹಾಡ್ತಾನೆ ಎಂದು ಸವಾಲು ಹಾಕಿದ್ದಾನೆ.

Related Articles

Related image1
Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೆಯ ದಿನದ ಸಂಚಿಕೆಯಲ್ಲಿ ಏನಾಗಲಿದೆ?
Related image2
Karimani Serial: ಕರ್ಣನ ಎದುರೇ ಕಳಚಿದ ಅರುಂಧತಿ ಮುಖವಾಡ! ಇದು ಖುಷಿತಂದ್ರೂ ವೀಕ್ಷಕರಿಗೆ ಭಾರೀ ಬೇಸರ ಆಗ್ತಿರೋದ್ಯಾಕೆ?
36
ಕರ್ಣನಿಲ್ಲದೆ ಬದುಕೋಲ್ಲ ಎಂದ ಸಾಹಿತ್ಯ
Image Credit : jiohotstar

ಕರ್ಣನಿಲ್ಲದೆ ಬದುಕೋಲ್ಲ ಎಂದ ಸಾಹಿತ್ಯ

ಆಯುರ್ವೇದ ಪಂಡಿತರೊಬ್ಬರು ಕರ್ಣನಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಕರ್ಣ ಏಳಬೇಕು ಅಂತ ತಾಯಿ ಅನುರಾಧಾ ದೇವರ ಮೊರೆ ಹೋಗಿದ್ದಾಳೆ, ಇನ್ನು ಕರ್ಣ ಬದುಕಿ ಬರಬೇಕು, ಕರ್ಣನಿಲ್ಲದೆ ನಾನಿಲ್ಲ, ಕರ್ಣನನ್ನು ಪ್ರೀತಿ ಮಾಡ್ತೀನಿ ಎಂದು ಸಾಹಿತ್ಯ ಹೇಳಿದ್ದಾಳೆ.

46
ಸಾಹಿತ್ಯಾ ಪ್ರೀತಿಗೋಸ್ಕರ ಕರ್ಣ ಬದುಕಿ ಬರ್ತಾನಾ?
Image Credit : jiohotstar

ಸಾಹಿತ್ಯಾ ಪ್ರೀತಿಗೋಸ್ಕರ ಕರ್ಣ ಬದುಕಿ ಬರ್ತಾನಾ?

ಸಾಹಿತ್ಯ ಮೇಲೆ ಕರ್ಣನಿಗೆ ಲವ್‌ ಆಗಿತ್ತು. ಅವನು ಈ ಪ್ರೀತಿಯನ್ನು ಹೇಳಿಕೊಂಡರೂ ಕೂಡ ಅವಳು ಮಾತ್ರ ಒಪ್ಪಲಿಲ್ಲ. ಈಗ ಕರ್ಣನ ಮೇಲೆ ಸಾಹಿತ್ಯಗೆ ಲವ್‌ ಆಗಿದೆ. ಅವಳೀಗ ಅವನ ಮುಂದೆ ಕೂತು ನೀವಿಲ್ಲದೆ ನನಗೆ ಬದುಕಿಲ್ಲ, ನೀವು ನನಗೆ ಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಸಾಹಿತ್ಯಳ ಪ್ರೀತಿಗೋಸ್ಕರ ಅವನು ಎದ್ದು ಬರುತ್ತಾನಾ ಎಂದು ಕಾದು ನೋಡಬೇಕಿದೆ.

56
ದೊಡ್ಡ ಆಕ್ಷನ್‌ ಸೀನ್‌
Image Credit : jiohotstar

ದೊಡ್ಡ ಆಕ್ಷನ್‌ ಸೀನ್‌

ಹೊಸದಾಗಿ ಪ್ರೋಮೋ ರಿಲೀಸ್‌ ಆಗಿದ್ದು, ಕರ್ಣ ಎದ್ದು ಬಂದು ಅರುಂಧತಿಗೆ ಠಕ್ಕರ್‌ ಕೊಡ್ತಾನೆ. ಕರ್ಣ ಎದ್ದು ಅರುಂಧತಿ ಹಾಗೂ ಪ್ರಸನ್ನನ ಅಂತ್ಯಸಂಸ್ಕಾರ ಮಾಡೋದು ಪಕ್ಕಾ ಎನ್ನಲಾಗ್ತಿದೆ. ಅರುಂಧತಿ ಹಾಗೂ ಕರ್ಣ ನಡುವೆ ದೊಡ್ಡ ಮಟ್ಟದಲ್ಲಿ ಆಕ್ಷನ್‌ ದೃಶ್ಯಗಳು ನಡೆಯಲಿವೆ. 

66
ಪ್ರೇಮ ನಿವೇದನೆ
Image Credit : jiohotstar

ಪ್ರೇಮ ನಿವೇದನೆ

ಆನಂತರ ಸಾಹಿತ್ಯ ಕರ್ಣನಿಗೆ ಪ್ರೇಮ ನಿವೇದನೆ ಮಾಡ್ತಾಳೆ. ಆರಂಭದಲ್ಲಿ ಪ್ರೀತಿಯನ್ನು ಒಪ್ಪಿಕೊಳ್ಳದ ಕರ್ಣ ಸ್ವಲ್ಪ ಆಟ ಆಡಿಸುತ್ತಾನೆ. ಇಡೀ ಕುಟುಂಬ ಖುಷಿಯಿಂದ ಇರಲಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. ಈ ಟ್ವಿಸ್ಟ್‌ನಿಂದಲೇ ಈ ಧಾರಾವಾಹಿ ಅಂತ್ಯ ಆಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕರಿಮಣಿ ಧಾರಾವಾಹಿ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
'ನಿಮ್ಮ ಚಿನ್ನುಗೆ ನೀವೇ ಶಾ* ಹಾಕ್ಬಿಡಿ..' ಪ್ರಾಣಿಕಾಮ ಪ್ರಚೋದನೆ ಆರೋಪದಲ್ಲಿ ಬಿಗ್‌ಬಾಸ್‌ ಡಾಗ್‌ ಸತೀಶ್‌ ವಿರುದ್ಧ ಎಫ್‌ಐಆರ್‌!
Recommended image2
Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ
Recommended image3
Rani Serial: ಜೈಲಲ್ಲಿರೋ ತಾಯಿಗೋಸ್ಕರ ಗೋಗರೆದ ಪುಟಾಣಿ ಮಗಳು; ಕಂಬನಿ ಹಾಕಿದ ಕನ್ನಡಿಗರು!
Related Stories
Recommended image1
Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೆಯ ದಿನದ ಸಂಚಿಕೆಯಲ್ಲಿ ಏನಾಗಲಿದೆ?
Recommended image2
Karimani Serial: ಕರ್ಣನ ಎದುರೇ ಕಳಚಿದ ಅರುಂಧತಿ ಮುಖವಾಡ! ಇದು ಖುಷಿತಂದ್ರೂ ವೀಕ್ಷಕರಿಗೆ ಭಾರೀ ಬೇಸರ ಆಗ್ತಿರೋದ್ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved