MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Varun Aaradhya: ಯುಟ್ಯೂಬ್​ ಆದಾಯದ ಗುಟ್ಟು ಬಿಚ್ಚಿಟ್ಟ 'ಬೃಂದಾವನ' ನಟ ವರುಣ್ ಆರಾಧ್ಯ: ಹೇಗಿರತ್ತೆ ಲೈಫ್​

Varun Aaradhya: ಯುಟ್ಯೂಬ್​ ಆದಾಯದ ಗುಟ್ಟು ಬಿಚ್ಚಿಟ್ಟ 'ಬೃಂದಾವನ' ನಟ ವರುಣ್ ಆರಾಧ್ಯ: ಹೇಗಿರತ್ತೆ ಲೈಫ್​

'ಬೃಂದಾವನ' ಧಾರಾವಾಹಿ ಖ್ಯಾತಿಯ ನಟ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ವರುಣ್ ಆರಾಧ್ಯ, ತಮ್ಮ ಬದುಕಿನ ಏರಿಳಿತಗಳ ಬಗ್ಗೆ ಮಾತನಾಡಿದ್ದಾರೆ. ಕೇವಲ ಯುಟ್ಯೂಬ್ ಆದಾಯದಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು, ಅದಕ್ಕೆ ಮಾಡುವ ಹೂಡಿಕೆ ಮತ್ತು ಖರ್ಚುಗಳ ಬಗ್ಗೆ ವಿವರಿಸಿದ್ದಾರೆ.

2 Min read
Author : Suchethana D
Published : Jul 23 2026, 01:39 PM IST
Share this Photo Gallery
  • FB
  • TW
  • Linkdin
  • Whatsapp
16
ಬೃಂದಾವನ ನಟ
Image Credit : Varun Aradhya Instagram

ಬೃಂದಾವನ ನಟ

'ಬೃಂದಾವನ' ಧಾರಾವಾಹಿ (Brindavana Serial) ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ವರುಣ್ ಆರಾಧ್ಯ ಅವರು ಕಿರುತೆರೆ ನಟ ಮಾತ್ರ ಅಲ್ಲದೇ, ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಕೂಡ ಹೌದು. ಬಹುತೇಕ ನಟರಂತೆ ಬದುಕಿನಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ವರುಣ್​ ಅವರು, . ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದರು. ತಮ್ಮ ಕುಟುಂಬ ಸದಸ್ಯರಿಗೆ ಬರುತ್ತಿರುವ ಕೆಟ್ಟ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಕೆಂಡ ಕಾರಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​
Image Credit : our own

ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​

ಇದರ ನಡುವೆಯೇ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಆದಾಯದ ಕುರಿತು ಖುದ್ದು ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಆಗಿರುವ ವರುಣ್​ ಅವರು ಮಾತನಾಡಿದ್ದಾರೆ. ಅಷ್ಟಕ್ಕೂ ಇದಾಗಲೇ ಹಲವಾರು ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಇದರಿಂದಲೇ ಜೀವನ ನಡೆಸುವವರು ಇದ್ದಾರೆ. ಪೇಯ್ಡ್​ ಪ್ರಮೋಷನ್​, ಜಾಹೀರಾತು ಎಲ್ಲಾ ಬಂದಾಗ ಸುಲಭದಲ್ಲಿ ಜೀವನ ಮಾಡಬಹುದು. ಆದರೆ ಸರಿಯಾದ ರೀತಿಯಲ್ಲಿ, ಅಶ್ಲೀಲತೆಯ ಸೋಂಕು ಇಲ್ಲದೇ ಪ್ರಾಮಾಣಿಕವಾಗಿ ಯುಟ್ಯೂಬ್​ ನಡೆಸಿಕೊಂಡು ಹೋಗುವವರಿಗೆ ಆಗುವ ಸಮಸ್ಯೆ ಏನು, ಇದರ ಆದಾಯದಿಂದ ಹೊಟ್ಟೆ ತುಂಬತ್ತಾ ಎಲ್ಲವುಗಳ ಬಗ್ಗೆ ನಟ ಮಾತನಾಡಿದ್ದಾರೆ.

Related Articles

Related image1
ಇನ್​ಸ್ಟಾ ಫೋಟೋಗೆ 'ಸುಂದರಿ' ಎಂದು ಕಮೆಂಟ್​: ಬೆಂಗಳೂರು ಯುವಕನ ವಿರುದ್ಧ ಕ್ರಿಮಿನಲ್​ ಕೇಸ್​! ಕೋರ್ಟ್​ ಹೇಳಿದ್ದೇನು
Related image2
CJP ಪ್ರತಿಭಟನೆ ಕುರಿತು ನೀಟ್​ ಟಾಪರ್​ ಅಚ್ಚರಿಯ​ ಹೇಳಿಕೆ: ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
36
ಯುಟ್ಯೂಬ್​ ಆದಾಯದ ಬಗ್ಗೆ ನಟ
Image Credit : Instagram

ಯುಟ್ಯೂಬ್​ ಆದಾಯದ ಬಗ್ಗೆ ನಟ

ಹಲವರಿಗೆ ಕೇವಲ ಯೂಟ್ಯೂಬ್‌ ಮಾಡಿಕೊಂಡು ಜೀವನ ಸಾಗಿಸೋದಕ್ಕೆ ಆಗಲ್ಲ. ಅದರ ಜೊತೆಗೆ ಬೇರೆ ಕೆಲಸ ಇದ್ದರೆ ಬದುಕು ಸಾಗುತ್ತದೆ. ಯುಟ್ಯೂಬ್​ ಒಂದನ್ನೇ ನಂಬಿಕೊಂಡು ಇರಲಿ ಆಗುವುದಿಲ್ಲ ಎಂದಿದ್ದಾರೆ ವರುಣ್​. ನಾವು ಯೂಟ್ಯೂಬ್‌ನಲ್ಲಿ ಏನು ವಿಡಿಯೋಗಳನ್ನ ಮಾಡ್ತಿದ್ದೇವೆ ಅದಕ್ಕೆ ನಾವು ಅಷ್ಟೇ ಬಂಡವಾಳನ್ನೂ ಹೂಡಬೇಕಾಗುತ್ತದೆ. ಯೂಟ್ಯೂಬ್‌ನಿಂದ ಬರೋ ದುಡ್ಡನ್ನ ಮತ್ತೆ ನಾವು ಅಲ್ಲಿಗೆ ಹಾಕಬೇಕು. ಒಂದು ವಿಡಿಯೋ ಮಾಡಬೇಕು ಎಂದರೆ, ಅಲ್ಲಿ ಅಷ್ಟೇ ಖರ್ಚುಗಳಿರುತ್ತವೆ. ಕ್ಯಾಮೆರಾ ಮತ್ತು ಎಡಿಟಿಂಗ್‌ ಟೀಮ್‌ ಇರುತ್ತೆ. ಹಾಗಾಗಿ, ಅದರ ಜೊತೆಗೆ ಬಿಜಿನೆಸ್ಸೋ ಅಥವಾ ಇನ್ನಾವುದೋ ಕೆಲಸ ಇದ್ದರೆ ಉತ್ತಮ ಎಂದಿದ್ದಾರೆ ವರುಣ್​.

46
ಟ್ರಾವೆಲ್‌ ಬ್ಯುಸಿನೆಸ್‌
Image Credit : our own

ಟ್ರಾವೆಲ್‌ ಬ್ಯುಸಿನೆಸ್‌

ಅಂದಹಾಗೆ ವರುಣ್​ ಅವರದ್ದು ಪಂದು ಟ್ರಾವೆಲ್‌ ಬ್ಯುಸಿನೆಸ್‌ ಇದೆ. ಅದರ ಜೊತೆ ಕಿರುತೆರೆಯಲ್ಲಿ ನಟನೆ ಹಾಗೂ ಯುಟ್ಯೂಬ್​ ಕೂಡ ಇರುವ ಕಾರಣ, ಮ್ಯಾನೇಜ್​ ಮಾಡುತ್ತಿದ್ದಾರೆ. ನಟ, ಮೊದಲು ಟಿಕ್‌ ಟಾಕ್‌ನಲ್ಲಿ ವಿಡಿಯೋ ಮಾಡುತ್ತಿದ್ದರು. ಬಳಿಕ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ ಫೇಮಸ್‌ ಆದರು. ಈ ಮೂಲಕವೇ ʻಬೃಂದಾವನʼ ಧಾರಾವಾಹಿಯಲ್ಲಿ ನಟಿಸುವ ಆಫರ್‌ ಸಿಕ್ಕಿತು. ಆದರೆ, ಕೆಲ ತಿಂಗಳಲ್ಲೇ ಆ ಧಾರಾವಾಹಿ ಮುಗಿದಿದ್ದು, ಸದ್ಯ ಯೂಟ್ಯೂಬ್‌ ವ್ಲಾಗ್‌ ಜೊತೆಗೆ ತಮ್ಮದೇ ಟ್ರಾವೆಲ್‌ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ವರುಣ್‌ ಆರಾಧ್ಯ.

56
'ಬೃಂದಾವನ' ಆಫರ್ ಬಂದಿದ್ದು ಹೇಗೆ?:
Image Credit : our own

'ಬೃಂದಾವನ' ಆಫರ್ ಬಂದಿದ್ದು ಹೇಗೆ?:

ವರುಣ್ ಆರಾಧ್ಯ ಅವರಿಗೆ 'ಬೃಂದಾವನ' ಸೀರಿಯಲ್ ಆಫರ್ ಬಂದ ಕಥೆಯೇ ಒಂದು ವಿಚಿತ್ರ ಅನುಭವ. ರೀಲ್ಸ್ ಮತ್ತು ಡಬ್ಬಿಂಗ್ ಮಾಡುತ್ತಿದ್ದ ಅವರಿಗೆ ಒಂದು ದಿನ ಮಧ್ಯರಾತ್ರಿ 1 ಗಂಟೆಗೆ (Midnight 1 AM) ಪ್ರಸಿದ್ಧ ನಿರ್ದೇಶಕ ರಾಮ್‌ಜಿ ಅವರ ಪ್ರೊಡಕ್ಷನ್‌ನಿಂದ ಕರೆ ಬಂದಿತ್ತು. 'ಅಷ್ಟು ರಾತ್ರಿಯಲ್ಲಿ ಯಾರೋ ಕಾಲ್ ಮಾಡಿ ನಟಿಸುವ ಅವಕಾಶ ಇದೆ ಅಂದಾಗ, ಅದು ಪ್ರ್ಯಾಂಕ್ (Prank) ಅಥವಾ ಫೇಕ್ ಇರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದು ನಿಜವಾದ ಆಫರ್ ಆಗಿತ್ತು' ಎಂದಿದ್ದಾರೆ.

66
ನಟನೆಯಲ್ಲಿ ಸೈ
Image Credit : our own

ನಟನೆಯಲ್ಲಿ ಸೈ

ತಕ್ಷಣವೇ ಆಡಿಷನ್‌ಗೆ (Audition) ಹೋದ ವರುಣ್, ಅಲ್ಲಿ ನೀಡಲಾದ ಸ್ಕ್ರಿಪ್ಟ್ (Script) ಓದಿ ನಟಿಸಿ ತೋರಿಸಿದರು. ಅವರ ನಟನೆಯನ್ನು ಮೆಚ್ಚಿದ ತಂಡ ತಕ್ಷಣವೇ ಅವರನ್ನು ಸರಣಿಗೆ ಆಯ್ಕೆ ಮಾಡಿಕೊಂಡಿತು. ದುರದೃಷ್ಟವಶಾತ್ ಈ ಧಾರಾವಾಹಿ ಕೆಲವೇ ತಿಂಗಳುಗಳಲ್ಲಿ ಅಂತ್ಯವಾಯಿತಾದರೂ, ವರುಣ್ ಅವರಿಗೆ ಇದು ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಸದ್ಯ ಟ್ರೋಲ್‌ಗಳ ಸಂಕಷ್ಟದಿಂದ ಹೊರಬಂದಿರುವ ವರುಣ್ ಆರಾಧ್ಯ, ತಮ್ಮ ಕರಿಯರ್ (Career) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
Latest Videos
Recommended Stories
Recommended image1
ಗಂಟಲಲ್ಲಿ ಸಿಲುಕಿಕೊಂಡ ಆಹಾರ, ಸಾವಿನ ದವಡೆಯಿಂದ ಪಾರಾದ ಪ್ರಖ್ಯಾತ ಸೀರಿಯಲ್‌ ನಟ
Recommended image2
ಜೈಲಿನ ಸೀರೆ ಬಿಟ್ಟು ಬೋಲ್ಡ್​ ಅವತಾರದಲ್ಲಿ 'ರಾಣಿ' ಸೀರಿಯಲ್​ ಕಾವೇರಿ: ಮದ್ವೆಯಾಗದೇ ಮಗು ಪಡೆದ ನಟಿ ಸ್ಟೋರಿ ಕೇಳಿ
Recommended image3
ದಾಂಪತ್ಯ ಜೀವನಕ್ಕೆ ಕಾಲಿಟ್ಟ MrBeast… ಪ್ರಪಂಚದ ಶ್ರೀಮಂತ ಯೂಟ್ಯೂಬರ್ ಕೈಹಿಡಿದ ಬ್ಯೂಟಿ ಯಾರು?
Related Stories
Recommended image1
ಇನ್​ಸ್ಟಾ ಫೋಟೋಗೆ 'ಸುಂದರಿ' ಎಂದು ಕಮೆಂಟ್​: ಬೆಂಗಳೂರು ಯುವಕನ ವಿರುದ್ಧ ಕ್ರಿಮಿನಲ್​ ಕೇಸ್​! ಕೋರ್ಟ್​ ಹೇಳಿದ್ದೇನು
Recommended image2
CJP ಪ್ರತಿಭಟನೆ ಕುರಿತು ನೀಟ್​ ಟಾಪರ್​ ಅಚ್ಚರಿಯ​ ಹೇಳಿಕೆ: ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved