- Home
- Entertainment
- TV Talk
- ಪ್ರೇಮಿಗಳ ದಿನದ ಮುನ್ನವೇ ಗುಡ್ನ್ಯೂಸ್ ಕೊಟ್ಟ Brahmagantu ಜೋಡಿ! ಫ್ಯಾನ್ಸ್ ಫುಲ್ ಖುಷ್
ಪ್ರೇಮಿಗಳ ದಿನದ ಮುನ್ನವೇ ಗುಡ್ನ್ಯೂಸ್ ಕೊಟ್ಟ Brahmagantu ಜೋಡಿ! ಫ್ಯಾನ್ಸ್ ಫುಲ್ ಖುಷ್
ಬ್ರಹ್ಮಗಂಟು ಸೀರಿಯಲ್ನಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದ್ದು, ಚಿರು ದೀಪಾಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಇಬ್ಬರೂ ಒಂದಾಗಿದ್ದಾರೆ. ಆದರೆ, ಸೌಂದರ್ಯಳ ಕುತಂತ್ರ ಇನ್ನೂ ಬಯಲಾಗಬೇಕಿದ್ದು, ಹೊಸ ಸೀರಿಯಲ್ಗಳ ಪ್ರೊಮೋದಿಂದಾಗಿ ಬ್ರಹ್ಮಗಂಟು ಅಂತ್ಯವಾಗುವ ಸೂಚನೆ ಸಿಕ್ಕಿದೆ.

ಒಂದಾದ ಚಿರು-ದೀಪಾ
ಬ್ರಹ್ಮಗಂಟು ಸೀರಿಯಲ್ (Brahmagantu) ಚಿರು ಮತ್ತು ದೀಪಾ ಅಭಿಮಾನಿಗಳನ್ನು ಫುಲ್ ಖುಷ್ ಮಾಡಿದ್ದಾರೆ. ಇನ್ನೇನು ಪ್ರೇಮಿಗಳ ದಿನಕ್ಕೆ ಎರಡೇ ದಿನ ಬಾಕಿ ಇರುವಾಗಲೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ.
ಉಂಗುರ ತೊಡಿಸಿದ ಚಿರು
ಇದೀಗ ನರಸಿಂಹನಿಗೆ ಸತ್ಯದ ಅರಿವಾಗಿದೆ. ಅದೇ ರೀತಿ, ಚಿರು, ದೀಪಾಗೆ ಬಾಗಿನ ತಂದು ಕಾಲಿಗೆ ಉಂಗುರ ತೊಡಿಸುವ ಮೂಲಕ, ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಈ ಮೂಲಕ ಚಿರು ಮತ್ತು ದೀಪಾ ಒಂದಾಗಿದ್ದಾರೆ.
ಎಲ್ಲಾ ತಪ್ಪು ದೂರ
ಚಿರು ಮೇಲಿದ್ದ ಕೋಪ ದೀಪಾಗೆ ಕಡಿಮೆಯಾಗಿದ್ದರೂ, ಚಿರು ನೇರವಾಗಿ ಇಷ್ಟಪಡುತ್ತೇನೆ ಎಂದು ಹೇಳುವವರೆಗೂ ಆತನ ಜೊತೆ ಹೋಗಲ್ಲ ಎಂದು ಹಟ ಹಿಡಿದಿದ್ದಳು. ಅದೇ ಇನ್ನೊಂದೆಡೆ ದೀಪಾಳ ಅಣ್ಣ ನರಸಿಂಹ ಕೂಡ ಚಿರು ಬಗ್ಗೆ ತಪ್ಪು ತಿಳಿದುಕೊಂಡಿದ್ದ.
ಸೌಂದರ್ಯಳ ಕುತಂತ್ರ
ಇನ್ನೇನಿದ್ದರೂ ಚಿರುಗೆ ದೀಪಾನೇ ದಿಶಾ ಎನ್ನುವ ಸತ್ಯ ಗೊತ್ತಾಗಬೇಕಿದೆ. ಸತ್ಯ ಗೊತ್ತಾದರೆ ಏನಾಗುತ್ತದೋ ತಿಳಿದಿಲ್ಲ. ಅದೇ ಇನ್ನೊಂದೆಡೆ, ಸೌಂದರ್ಯಳ ಕುತಂತ್ರವೂ ಬಯಲಾಗಬೇಕಿದೆ.
ಅರ್ಚನಾ ಮತ್ತು ರಾಹುಲ್
ಅರ್ಚನಾ ಮತ್ತು ರಾಹುಲ್ ಕೂಡ ಒಂದಾಗುವುದು ಬಾಕಿ ಇದೆ. ಇಷ್ಟಾದರೆ ಸೀರಿಯಲ್ ಒಂದು ಅಂತ್ಯಕ್ಕೆ ಬರಲಿದೆ. ಆದರೆ ಸದ್ಯ ಅದು ಮುಗಿಯುವ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಎರಡು ಹೊಸ ಸೀರಿಯಲ್
ಇದಾಗಲೇ ಎರಡು ಹೊಸ ಸೀರಿಯಲ್ಗಳ ಪ್ರೊಮೋ ಬಿಡುಗಡೆಯಾಗಿರುವ ಕಾರಣದಿಂದ ಪುಟ್ಟಕ್ಕನ ಮಕ್ಕಳ ಜೊತೆ ಇನ್ಯಾವ ಸೀರಿಯಲ್ ಮುಗಿಯಲಿದೆ ಎನ್ನುವ ಕುತೂಹಲವಿದೆ. ಅದು ಬ್ರಹ್ಮಗಂಟೇ ಇರಬೇಕು ಎನ್ನುವುದು ಹಲವರ ಅಭಿಮತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

