MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss: ರಕ್ಷಿತಾ ಮೇಲೆ ಸುದೀಪ್​ ತೋರಿದ ಸಿಟ್ಟು ಅಶ್ವಿನಿ ಮೇಲೆ ಯಾಕಿಲ್ಲ? ವಿನಯ್ ಗೌಡ ಓಪನ್ನಾಗಿ ಹೇಳಿದ್ದೇನು?

Bigg Boss: ರಕ್ಷಿತಾ ಮೇಲೆ ಸುದೀಪ್​ ತೋರಿದ ಸಿಟ್ಟು ಅಶ್ವಿನಿ ಮೇಲೆ ಯಾಕಿಲ್ಲ? ವಿನಯ್ ಗೌಡ ಓಪನ್ನಾಗಿ ಹೇಳಿದ್ದೇನು?

ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಮೇಲೆ ಸುದೀಪ್ ಗರಂ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಆರೋಪಗಳಿಗೆ ಇದೀಗ ಮಾಜಿ ಸ್ಪರ್ಧಿ ವಿನಯ್ ಗೌಡ ಪ್ರತಿಕ್ರಿಯಿಸಿದ್ದು, ಸುದೀಪ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.  

2 Min read
Suchethana D
Published : Dec 19 2025, 05:07 PM IST
Share this Photo Gallery
  • FB
  • TW
  • Linkdin
  • Whatsapp
16
ರಕ್ಷಿತಾ ಶೆಟ್ಟಿ ಬಗ್ಗೆ ಸುದೀಪ್​
Image Credit : Instagram

ರಕ್ಷಿತಾ ಶೆಟ್ಟಿ ಬಗ್ಗೆ ಸುದೀಪ್​

ಕೆಲವು ವಾರಗಳ ಹಿಂದೆ ರಕ್ಷಿತಾ ಶೆಟ್ಟಿ (Bigg Boss Rakshita Shetty) ವಿಷಯದಲ್ಲಿ ಸುದೀಪ್​ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಇದ್ದರು. ಆದರೆ ಟಾಸ್ಕ್​​ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದರು. ಇದು ಅಶ್ವಿನಿಗೆ ಸಿಟ್ಟು ತರಿಸಿತ್ತು. ರಕ್ಷಿತಾ ತಂಡದ ವಿರುದ್ಧವೇ ಗಿಲ್ಲಿ ನಟ (Gilli Nata) ಎತ್ತಿ ಕಟ್ಟಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸುದೀಪ್​ ಅವರು ರಕ್ಷಿತಾ ವಿರುದ್ಧ ಗರಂ ಆಗಿದ್ದರು.

26
ರಕ್ಷಿತಾ ವಿರುದ್ಧ ಗರಂ
Image Credit : Instagram

ರಕ್ಷಿತಾ ವಿರುದ್ಧ ಗರಂ

ನೀವು ನನ್ನ ಪಿತ್ತವನ್ನು ನೆತ್ತಿಗೇರಿಸುತ್ತಾ ಇದ್ದೀರಿ ಎಂದಿದ್ದರು. ರಕ್ಷಿತಾ ಶೆಟ್ಟಿ ನಾನ್ಯಾವಾಗ ಇರಿಟೇಟ್​ ಮಾಡಿದ್ದೆ ಎಂದು ಗೊತ್ತಿಲ್ಲದೇ ಮರು ಪ್ರಶ್ನೆ ಮಾಡಿದಾಗ ಸುದೀಪ್​ ಏಕಾಏಕಿ ಹೀಗೆ ಗರಂ ಆಗಿದ್ದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು.

Related Articles

Related image1
Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ ಸುರಿದ ರಜತ್​
Related image2
Bigg Boss ಚೈತ್ರಾ, ಪ್ರತಿ ಶುಕ್ರವಾರ ಹುಷಾರ್​ ತಪ್ಪೋದು ಯಾಕೆ? ಕಿಡಿ ಹಚ್ಚಿ ಮಜಾ ತಗೊಂಡ ಗಿಲ್ಲಿ- ರಜತ್​
36
ಕೆಟ್ಟ ಕಮೆಂಟ್ಸ್​
Image Credit : Instagram

ಕೆಟ್ಟ ಕಮೆಂಟ್ಸ್​

ಅಶ್ವಿನಿ ಗೌಡ ಅವರು ಬರೀ ಜಗಳದಿಂದಲೇ ಕಿತ್ತಾಡುತ್ತಿದ್ದರೂ ಸುದೀಪ್​ ಅವರ ಬಗ್ಗೆ ಸಾಫ್ಟ್​ ಕಾರ್ನರ್​ ಆಗಿದ್ದು, ರಕ್ಷಿತಾ ಶೆಟ್ಟಿ ಬಡವಳು ಎನ್ನುವ ಕಾರಣಕ್ಕೆ ಪಿತ್ತ ನೆತ್ತಿಗೆ ಏರಿಸಿಕೊಂಡರು. ಅಶ್ವಿನಿ ಗೌಡ (Bigg Boss Ashwini Gowda) ವಿರುದ್ಧ ಕಿಚ್ಚನ ಪಿತ್ತ ನೆತ್ತಿಗೆ ಏರೋದಿಲ್ಲ ಯಾಕೆ ಎಂಬೆಲ್ಲಾ ಕಮೆಂಟ್ಸ್​ ಹರಿದಾಡಿದವು.

46
ವಿನಯ್​ ಗೌಡ ಏನಂದ್ರು?
Image Credit : Instagram

ವಿನಯ್​ ಗೌಡ ಏನಂದ್ರು?

ಇದಾದ ಮರು ವಾರವೇ ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತು. ಇದೀಗ ಈ ಬಗ್ಗೆ ಕಳೆದ ಬಿಗ್​ಬಾಸ್​ 10ರ ಸ್ಪರ್ಧಿಯಾಗಿದ್ದ ವಿನಯ್​ ಗೌಡ (Bigg Boss Vinay Gowda) ಅವರು ಮಾಧ್ಯಮದ ಜೊತೆ ಮಾತನಾಡಿ, ಇದರ ಬಗ್ಗೆ ಉತ್ತರಿಸಿದ್ದಾರೆ.

56
ಸುದೀಪ್​ಗೆ ಗೊತ್ತಿದೆ
Image Credit : Instagram

ಸುದೀಪ್​ಗೆ ಗೊತ್ತಿದೆ

ಸುದೀಪ್​ ಸರ್​ ಅವರಿಗೆ ಯಾರಿಗೆ, ಯಾವಾಗ, ಏನು ಹೇಳಬೇಕು ಎನ್ನುವುದು ಗೊತ್ತಿದೆ. ಅದಕ್ಕಾಗಿಯೇ ಅವರು ಇಷ್ಟೂ ಷೋಗಳನ್ನು ನಡೆಸಿಕೊಂಡು ಬಂದಿದ್ದಾರೆ. ರಕ್ಷಿತಾ ಶೆಟ್ಟಿಯೇ ತಾವು ಮಾಡಿದ್ದು ತಪ್ಪಾಯ್ತು ಎಂದು ಕೊನೆಗೆ ಒಪ್ಪಿಕೊಂಡು ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.. ಆದರೆ ಆ ಬಗ್ಗೆ ಯಾರೂ ಮಾತನಾಡದೇ ಸುಖಾಸುಮ್ಮನೇ ಏನೇನೋ ಆರೋಪ ಹೊರಿಸುತ್ತಾರೆ ಎಂದರು.

66
ಇವೆಲ್ಲಾ ನಿಜವಲ್ಲ
Image Credit : our own

ಇವೆಲ್ಲಾ ನಿಜವಲ್ಲ

ಸುದೀಪ್​ ಅವರಿಗೆ, ಯಾರಿಗೆ ಏನು ಹೇಳಬೇಕು ಎನ್ನೋದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಅವರು ಸಂದರ್ಭ, ಸಮಯ ಎಲ್ಲವನ್ನೂ ಮ್ಯಾನೇಜ್​ ಮಾಡಿ, ಸರಿಯಾದ ನಿರ್ಧಾರವನ್ನೇ ಮಾಡುತ್ತಾರೆ. ಸೋಷಿಯಲ್​ಮೀಡಿಯಾದಲ್ಲಿ ಯಾರೋ ಏನೋ ಹೇಳ್ತಾರೆ ಎನ್ನುವ ಮಾತ್ರಕ್ಕೆ ಅದೆಲ್ಲಾ ನಿಜವಾದದ್ದಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಿಚ್ಚ ಸುದೀಪ್
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಗಿಲ್ಲಿ ನಟ
ಅಶ್ವಿನಿ ಗೌಡ
ರಕ್ಷಿತಾ
ಮನರಂಜನಾ ಸುದ್ದಿ
ಟಿವಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Recommended image1
Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ ಸುರಿದ ರಜತ್​
Recommended image2
Bigg Boss Kannada: ಹಲ್ಲುಜ್ಜಲ್ಲ, ಹೀಗೆ ಊಟಕ್ಕೆ ಕೂರೋದು ಸರಿಯಲ್ಲ; Rakshita Shetty ಬಗ್ಗೆ ದೂರು ಒಂದೇ ಎರಡೇ?
Recommended image3
BBK 12: ಎಲ್ಲರೂ ಮಾಡುತ್ತಿದ್ದ ಆರೋಪ ಸತ್ಯ: ಕೊನೆಗೂ ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!
Related Stories
Recommended image1
Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ ಸುರಿದ ರಜತ್​
Recommended image2
Bigg Boss ಚೈತ್ರಾ, ಪ್ರತಿ ಶುಕ್ರವಾರ ಹುಷಾರ್​ ತಪ್ಪೋದು ಯಾಕೆ? ಕಿಡಿ ಹಚ್ಚಿ ಮಜಾ ತಗೊಂಡ ಗಿಲ್ಲಿ- ರಜತ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved