MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಮಲ್ಲಿ ತಂಟೆಗೆ ಬಂದ ಜೈ ದೇವ್ ಎದುರು ಬೆಂಕಿ ಚೆಂಡಾದ ಭೂಮಿಕಾ

Amruthadhaare Serial: ಮಲ್ಲಿ ತಂಟೆಗೆ ಬಂದ ಜೈ ದೇವ್ ಎದುರು ಬೆಂಕಿ ಚೆಂಡಾದ ಭೂಮಿಕಾ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಕೆನ್ನೆಗೆ ಹೊಡೆಯೋದಕ್ಕೆ ಬಂದ ಜೈದೇವ್ ಗೆ ಕಪಾಳ ಮೋಕ್ಷ ಮಾಡಿ ಚೆನ್ನಾಗಿ ಬೆಂಡೆತ್ತಿದ್ದಾಳೆ ಭೂಮಿಕಾ.

2 Min read
Pavna Das
Published : Jun 23 2025, 07:15 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಅಮೃತಧಾರೆಯಲ್ಲಿ (Amruthadhaare) ಇದೀಗ ಭೂಮಿಕಾ ಎದುರು ಜೈದೇವ್ ಅಸಲಿ ಮುಖವಾಡ ಕಳಚಿ ಬಿದ್ದಿದ್ದು, ಜೈದೇವ್ ನೀಚ ಬುದ್ದಿಗೆ ಸರಿಯಾಗಿಯೇ ಪಾಠ ಕಲಿಸುತ್ತಾಳೆ ಭೂಮಿಕಾ. ಇವತ್ತಿನ ಪ್ರೊಮೋ ಬಿಡುಗಡೆಯಾಗಿದ್ದು, ಭೂಮಿ ಕೈಯಿಂದ ಜೈದೇವ್ ಗೆ ಕಪಾಳ ಮೋಕ್ಷ ಆಗಿದೆ.

27
Image Credit : Asianet News

ಅಷ್ಟಕ್ಕೂ ಆಗಿರೋದು ಏನು? ಸುಜನ್ ಜೊತೆ ಕಾರಲ್ಲಿ ಮನೆಗೆ ವಾಪಾಸ್ ಬರುತ್ತಿರುವ ಭೂಮಿಕಾಗೆ, ಜೈದೇವ್ ಯಾವುದೋ ಹುಡುಗಿ ಜೊತೆ ಬಟ್ಟೆಯಂಗಡಿ ಒಳಗೋಗಿರೋದು ಕಂಡಿದೆ, ಭೂಮಿಕಾ ಅಲ್ಲೇ ಇಳಿದು, ಯಾರ ಜೊತೆ ಜೈದೇವ್ ಇದ್ದಾನೆ ಅನ್ನೋದನ್ನು ನೋಡಿದ್ರೆ, ದಿಯಾ ಇರುವುದು ಕಂಡು ಬಂದಿದೆ. ಹಾಗಿದ್ರೆ ಇಷ್ಟು ದಿನ ಜೈ ದೇವ್ ಮಾಡಿರೋದೆಲ್ಲಾ ಬರಿ ನಾಟಕ ಅನ್ನೋದು ಭೂಮಿಕಾಗೆ ಅರ್ಥ ಆಗಿದೆ.

Related Articles

Related image1
Amruthadhaare Serial: ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್
Related image2
Amruthadhaare Serial: ಗೌತಮ್‌ ಮುಂದೆ ಶಕುಂತಲಾ ಮುಖವಾಡ ಕಳಚಿಬಿತ್ತು, ಈ ವಾರದ ಚಪ್ಪಾಳೆ ಅಪ್ಪಿಗೆ!
37
Image Credit : Asianet News

ಈಗ ತನ್ನ ತವರು ಮನೆಗೆ ಹೋಗದ ಭೂಮಿಕಾ, ನೇರವಾಗಿ ಗಂಡನ ಮನೆಗೆ ಬಂದಿದ್ದಾಳೆ, ಮಲ್ಲಿ ಮುಂದೆ ಜೈದೇವ್ ಬಗ್ಗೆ ಹೇಳಿದ್ದಾಳೆ. ಮಲ್ಲಿ ತನಗೆ ಈಗಾಗಲೇ ಎಲ್ಲಾ ಗೊತ್ತಿದೆ ಅನ್ನೋದನ್ನು ಹೇಳಿ ಏನೇನು ನಡೆದಿದೆ, ಎಲ್ಲವನ್ನೂ ಭೂಮಿಕಾ ಎದುರು ಬಾಯ್ಬಿಡುತ್ತಾಳೆ. ಇದರಿಂದ ಭೂಮಿಕಾ ಕಿಡಿಕಾರುತ್ತಾಳೆ.

47
Image Credit : Asianet News

ಇನ್ನೊಂದು ಕಡೆ ಮನೆಗೆ ವಾಪಾಸ್ ಬಂದ ಜೈದೇವ್, ಮಲ್ಲಿ ಮುಂದೆ ನಿಂತು, ಆಕೆಯನ್ನು ಕೆಣಕುತ್ತಾನೆ, ನಿನ್ನಿಂದ ಏನು ಮಾಡಲು ಆಗಲ್ಲ ಎನ್ನುತ್ತಾನೆ. ಇದರಿಂದ ಕೋಪಗೊಂಡ ಮಲ್ಲಿ, ದಿಯಾ ಮೂರು ಬಿಟ್ಟವಳು, ಇಬ್ಬರಿಗೂ ಮರ್ಯಾದೆ ಇಲ್ಲ ಜೋಡಿ ಚೆನ್ನಾಗಿದೆ. ಇನ್ನು ಮಾಡೋದೇನು ಅವಳಿಗೆ ಮಾಡಿದ ಹಾಗೆ ನಿಮಗೂ ಪೊರಕೆ ಸೇವೆ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ ಮಲ್ಲಿ. ಇದನ್ನು ಕೇಳಿ ಕೆರಳಿದ ಜೈದೇವ್ ಮಲ್ಲಿಗೆ ಹೊಡೆಯೋದಕ್ಕೆ ಕೈ ಎತ್ತುತ್ತಾನೆ.

57
Image Credit : Asianet News

ಅಷ್ಟೇ ಜೈದೇವ್ ಕೆನ್ನೆಗೆ ಜೋರಾಗಿ ಒಂದು ಏಟು ಬೀಳುತ್ತೆ. ಭೂಮಿಕಾ ಜೈದೇವ್ ಗೆ ಕಪಾಳ ಮೋಕ್ಷ ಮಾಡುತ್ತಾ, ಇಷ್ಟು ಚೀಪ್ ಆಗಿ ರೂಡ್ ಆಗಿ ವರ್ತಿಸುವ ನಿಮಗೆ ಏನೂ ಅನಿಸೋದೆ ಇಲ್ವ? ಮನುಷ್ಯತ್ವಾನೆ ಇಲ್ವಾ? ಹೆಂಡ್ತಿ ಜೊತೆ ಹೇಗೆ ನಡ್ಕೋಬೇಕು, ನಡಿಸ್ಕೊಂಡು ಹೋಗ್ಬೇಕು ಅನ್ನೋದು ಗೊತ್ತಿಲ್ವಾ ನಿಮಗೆ ಎನ್ನುತ್ತಾಳೆ.

67
Image Credit : Asianet News

ಕೊನೆಗೆ ಪ್ರಾಣಿಗಳಿಗೂ ಒಂದಷ್ಟು ಎಥಿಕ್ಸ್ ಅಂತಾ ಇದೆ, ನೀವು ಅದಕ್ಕಿಂತಲೂ ಕೆಟ್ಟದಾಗಿ ನಡೆದುಕೊಳ್ಳುತ್ತೀದ್ದೀರಿ ಜೈದೇವ್ ಎನ್ನುತ್ತಾಳೆ ಭೂಮಿಕಾ. ಇದನ್ನು ಕೇಳಿ ಹಲ್ಲು ಕಡೆಯುತ್ತಾ ಜೈದೇವ್ ಏನ್ ಮಾತಾಡ್ತಾ ಇದ್ದೀರಾ ಎಂದಾಗ ಭೂಮಿ, ಇರುವ ವಿಷಯವನ್ನೆ ಮಾತನಾಡ್ತಿದ್ದೀನಿ. ಇವತ್ತು ನಿಮ್ಮ ಅವತಾರನ ನಾನು ನನ್ನ ಕಣ್ಣಾರೆ ನೋಡಿದ್ದೀನಿ ಎನ್ನುತ್ತಾಳೆ ಭೂಮಿಕಾ.

77
Image Credit : Asianet News

ಈ ಪ್ರೊಮೋವನ್ನು ಜನರು ಮೆಚ್ಚಿಕೊಂಡಿದ್ದು, ಸೂಪರ್ ಭೂಮಿಕಾ,ನಾರಿ ಮುನಿದರೆ ಮಾರಿ ಅಂತ ತೋರ್ಸಬಿಟ್ಟೆ, ಭೂಮಿ ಅಕ್ಕ ಜೈ ಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಅತ್ತಿಗೆ ಅಂದರೆ ಹೀಗೆ ಇರಬೇಕು ಎಷ್ಟು ಅಂದ್ರೆ ಟೀಚರ್ ಅಲ್ವಾ? ಪಾಠ ಮಾಡೋಕೋ ಗೊತ್ತು, ಅದನ್ನ ಹೇಗೆ ಸರಿ ಮಾಡೋದು ಅಂತಾನು ಗೊತ್ತು ಎಂದು ಮೆಚ್ಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಮೃತಧಾರೆ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
Bigg Boss ಶೋನ ಅರ್ಧ ಜರ್ನಿ ಮುಗೀತು, ಈ ವಾರ ಮನೆಯಿಂದ ಹೊರಗಡೆ ಬರೋ ಘಟಾನುಘಟಿ ಯಾರು?
Recommended image2
Women Card ಪ್ಲೇ ಮಾಡಬೇಡಿ, ಈ ಬಾರಿಯಂತೂ Bigg Boss ರಾಜಮಾತೆ ಅಶ್ವಿನಿ ಗೌಡ ಬೆಂಡೆತ್ತಿದ ಕಿಚ್ಚ ಸುದೀಪ್
Recommended image3
BBK 12: ಎರಡು ಬಿಟ್ರೆ ಹಲ್ಲು ಸೆಟ್‌ ಉದುರಿ ಹೋಗಬೇಕು-ಅಶ್ವಿನಿ ಗೌಡಗೆ ಛಡಿಏಟು ಕೊಟ್ಟ ಗಿಲ್ಲಿ ನಟ
Related Stories
Recommended image1
Amruthadhaare Serial: ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್
Recommended image2
Amruthadhaare Serial: ಗೌತಮ್‌ ಮುಂದೆ ಶಕುಂತಲಾ ಮುಖವಾಡ ಕಳಚಿಬಿತ್ತು, ಈ ವಾರದ ಚಪ್ಪಾಳೆ ಅಪ್ಪಿಗೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved