- Home
- Entertainment
- TV Talk
- BBK 12: ರಕ್ಷಿತಾಗೆ ಅನ್ಯಾಯ ಮಾಡಿದ್ರಾ ಅಶ್ವಿನಿ ಗೌಡ? ಧನುಷ್ ಅಚ್ಚರಿ ಹೇಳಿಕೆ, ಪುಟ್ಟಿಗೆ ಸಿಗಲಿಲ್ಲ ಮನ್ನಣೆ?
BBK 12: ರಕ್ಷಿತಾಗೆ ಅನ್ಯಾಯ ಮಾಡಿದ್ರಾ ಅಶ್ವಿನಿ ಗೌಡ? ಧನುಷ್ ಅಚ್ಚರಿ ಹೇಳಿಕೆ, ಪುಟ್ಟಿಗೆ ಸಿಗಲಿಲ್ಲ ಮನ್ನಣೆ?
ಕೆಂಪು ತಂಡದ ನಾಯಕಿ ಅಶ್ವಿನಿ ಗೌಡ, ಕ್ಯಾಪ್ಟನ್ಸಿ ಟಾಸ್ಕ್ಗೆ ಅಭಿಷೇಕ್ ಅವರನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. 'ಹನಿ ಹನಿ ಡ್ರಮ್ ಕಹಾನಿ' ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಕ್ಷಿತಾ ಶೆಟ್ಟಿಯನ್ನು ಕಡೆಗಣಿಸಲಾಗಿದೆ ಎಂದು ಧನುಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶ್ವಿನಿ ಗೌಡ
ಕೆಂಪು ತಂಡದ ನಾಯಕಿಯಾಗಿರುವ ಅಶ್ವಿನಿ ಗೌಡ ತಮ್ಮ ತಂಡದಲ್ಲಿ ಆಟವಾಡಿದ ಅಭಿಷೇಕ್ ಮತ್ತು ಧ್ರುವಂತ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡಿದ್ದಾರೆ. ಕ್ಯಾಪ್ಟನ್ಸಿ ಆಟಕ್ಕೆ ಸದಸ್ಯರನ್ನು ಆಯ್ಕೆ ವೇಳೆ ಅಶ್ವಿನಿ ಗೌಡ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡ್ರಾ ಎಂಬ ಚರ್ಚೆಗಳು ಶುರುವಾಗಿವೆ. ಈ ಚರ್ಚೆಗೆ ಕಾರಣ ಧನುಷ್ ಆಡಿದ ಮಾತುಗಳು.
ಹನಿ ಹನಿ ಡ್ರಮ್ ಕಹಾನಿ ಟಾಸ್ಕ್
ಹನಿ ಹನಿ ಡ್ರಮ್ ಕಹಾನಿ ಟಾಸ್ಕ್ನಲ್ಲಿ ಅಶ್ವಿನಿ ಗೌಡ ತಂಡದ ಪರವಾಗಿ ರಕ್ಷಿತಾ ಶೆಟ್ಟಿ ಆಟವಾಡಿದ್ದರು. ಗುರಾಣಿ ಹಿಡಿದು ನಿಂತು ರಕ್ಷಿತಾ ಶೆಟ್ಟಿ, ಎದುರಾಳಿಗಳನ್ನು ತಡೆಯುವ ಕೆಲಸವನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಎದುರಾಳಿಗಳ ಕೈಯಲ್ಲಿದ್ದ ಬಕೆಟ್ ಒಡೆದು ಹಾಕುತ್ತಾರೆ. ಇದರಿಂದ ಡ್ರಮ್ಗೆ ನೀರು ತುಂಬಿಸುವ ಪ್ರಕ್ರಿಯೆ ವಿಳಂಬವಾಗುವಂತೆ ನೋಡಿಕೊಳ್ಳುತ್ತಾರೆ. ಇದೇ ಆಟದ ವೇಳೆ ಕಾಲು ಜಾರಿ ರಕ್ಷಿತಾ ಬೀಳುತ್ತಾರೆ.
ರಕ್ಷಿತಾ ಶೆಟ್ಟಿ ಆಟ
ಆದ್ರೆ ರಕ್ಷಿತಾ ಶೆಟ್ಟಿ ಆಟಕ್ಕೆ ಸಾಸಿವೆ ಕಾಳಿನಷ್ಟು ಮೆಚ್ಚುಗೆ ಸಿಗುತ್ತದೆ. ಟಾಸ್ಕ್ ಮುಗಿಯುತ್ತಿದ್ದಂತೆ ರಕ್ಷಿತಾ ತನ್ನ ಪಾಡಿಗೆ ಉಳಿಯುತ್ತಾರೆ. ಹನಿ ಹನಿ ಡ್ರಮ್ ಕಹಾನಿ ವಿನ್ ಬಳಿಕ ಯಾವ ಆಟಗಾರರನ್ನು ಕ್ಯಾಪ್ಟನ್ಸಿ ಓಟಕ್ಕೆ ಅಯ್ಕೆ ಮಾಡುತ್ತೀರಿ ಎಂದು ಅಶ್ವಿನಿ ಗೌಡ ಅವರಿಗೆ ಬಿಗ್ಬಾಸ್ ಕೇಳುತ್ತಾರೆ. ತಮ್ಮದೇ ಕೆಲವೊಂದು ಕಾರಣಗಳನ್ನು ನೀಡಿ ಅಭಿಷೇಕ್ ಅವರನ್ನು ಆಯ್ಕೆ ಮಾಡುತ್ತಾರೆ.
ಅಭಿಷೇಕ್
ಈ ಹಿಂದಿನ ವಾರದಲ್ಲಿ ಅಭಿಷೇಕ್ ಅವರನ್ನು ನಾಮಿನೇಟ್ ಮಾಡಲು ಅಶ್ವಿನಿ ಗೌಡ ಮುಂದಾಗಿರುತ್ತಾರೆ. ಆದ್ರೆ ಈ ಬಾರಿ ಅಭಿಷೇಕ್ ಅವರನ್ನು ಅಶ್ವಿನಿ ಗೌಡ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆ ಮಾಡಿದ್ದಾರೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕ್ಯಾಪ್ಟನ್ಸಿ ಆಟಕ್ಕೆ ರಕ್ಷಿತಾ ಹೆಸರು ಸೂಕ್ತವಾಗಿತ್ತು ಎಂದು ಸ್ಪಂದನಾ ಮುಂದೆ ಧನುಷ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: BBK 12: ಅಶ್ವಿನಿ, ಗಿಲ್ಲಿ ಬಳಿಕ ಮತ್ತೋರ್ವ ಸ್ಪರ್ಧಿ ವಿರುದ್ಧ ದಾಖಲಾಯ್ತು ದೂರು; ಹಳೇ ಕೇಸ್ ರೀ ಓಪನ್
ಅಭಿಷೇಕ್ ಜೊತೆ ಧನುಷ್
ಈ ಆಟದಲ್ಲಿ ಅಭಿಷೇಕ್ ಜೊತೆ ಧನುಷ್ ಸಹ ಡ್ರಮ್ ಹೊತ್ತುಕೊಂಡಿರುತ್ತಾರೆ. ಈ ಟಾಸ್ಕ್ನಲ್ಲಿ ಅಭಿಷೇಕ್ ಅವರಿಗಿಂತ ರಕ್ಷಿತಾ ತುಂಬಾ ಆಕ್ರಮಣಕಾರಿಯಾಗಿ ಆಟವಾಡಿರೋದನ್ನು ಧನುಷ್ ಗಮನಿಸಿದ್ದಾರೆ. ಇನ್ನು ವಂಶದ ಕುಡಿ ಅಂತಾ ಕರೆಯುವ ಗಿಲ್ಲಿ ನಟ ಎರಡೂ ಟಾಸ್ಕ್ಗಳಲ್ಲಿ ರಕ್ಷಿತಾ ಶೆಟ್ಟಿಯನ್ನು ಆಯ್ಕೆ ಮಾಡಿಕೊಳ್ಳದಿರೋದರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Bigg Boss Kannada 12: ರಘು ಮುಂದೆ ರಕ್ಷಿತಾ ಹೇಳಿದ ಮಾತಿಗೆ ಅಭಿಮಾನಿಗಳಿಂದ ಬಹುಪರಾಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್ಸ್ಪಾಟಿಂಗ್ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.

