MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ತುತ್ತಿಗೆ ಕನ್ನ ಹಾಕಿದ ಅತ್ತೆಗೆ ಚಳಿ ಬಿಡಿಸಿದ ಗುಂಡಮ್ಮ; ಶಿವು ಮಾವನಿಗೆ ಪುಟ್ಟ ಕಥೆ ಹೇಳಿದ ಪಾರು!

ತುತ್ತಿಗೆ ಕನ್ನ ಹಾಕಿದ ಅತ್ತೆಗೆ ಚಳಿ ಬಿಡಿಸಿದ ಗುಂಡಮ್ಮ; ಶಿವು ಮಾವನಿಗೆ ಪುಟ್ಟ ಕಥೆ ಹೇಳಿದ ಪಾರು!

Annayya Serial: ಗುಂಡಮ್ಮ ತನ್ನ ಅತ್ತೆಯ ವಿರುದ್ಧ ಧ್ವನಿ ಎತ್ತುತ್ತಾಳೆ ಮತ್ತು ಶಿವುವಿನ ತಾಯಿಯ ಬಗ್ಗೆ ಪಾರ್ವತಿಯ ಕುತೂಹಲ ಹೆಚ್ಚುತ್ತದೆ. ಗುಂಡಮ್ಮನ ಅತ್ತೆ ಆಹಾರ ನೀಡದೆ ಕಷ್ಟ ಕೊಡುತ್ತಿರುವುದಕ್ಕೆ ಗುಂಡಮ್ಮ ಕ್ಲಾಸ್ ತೆಗೆದುಕೊಂಡಿದ್ದಾಳೆ. ಶಿವುವಿನ ತಾಯಿಯ ಬಗ್ಗೆ ತಿಳಿದುಕೊಳ್ಳಲು ಪಾರ್ವತಿ ಕಥೆಯ ಮೂಲಕ ಪ್ರಯತ್ನಿಸುತ್ತಾಳೆ.

1 Min read
Mahmad Rafik
Published : May 15 2025, 02:37 PM IST
Share this Photo Gallery
  • FB
  • TW
  • Linkdin
  • Whatsapp
15

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ದಿನದಿಂದ ದಿನಕ್ಕೆ ತಿರುವುಗಳನ್ನು ನೀಡುವ ಮೂಲಕ ಪ್ರೇಕ್ಷಕರ ವರ್ಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ನಂಬರ್ 1 ಪಟ್ಟದಿಂದ ಅತ್ತಿತ್ತ ಆಗುತ್ತಿರುವ ಅಣ್ಣಯ್ಯ ಧಾರಾವಾಹಿಯ ರೋಚಕ ತಿರುವುಗಳು ನೋಡುಗರಿಗೆ ಇಷ್ಟವಾಗುತ್ತಿದೆ.

25

ಮದುವೆಯಾಗಿ ಬಂದಾಗಿನಿಂದಲೂ ಗುಂಡಮ್ಮನಿಗೆ ಅತ್ತೆ ಹೊಟ್ಟೆ ತುಂಬಾ ಊಟ ಹಾಕುತ್ತಿಲ್ಲ. ಹಾಗಾಗಿ ಅರ್ಧ ಹೊಟ್ಟೆಯಲ್ಲಿ ಗುಂಡಮ್ಮ ದಿನಗಳನ್ನು ಮುಂದೂಡುತ್ತಿದ್ದಳು. ಆಸ್ಪತ್ರೆಯಲ್ಲಿ ಗೋಡಂಬಿ ಅಣ್ಣನ ಮುಂದೆ ತನ್ನೆಲ್ಲಾ ಕಷ್ಟಗಳನ್ನು ಹೇಳಿ ಗುಂಡಮ್ಮ ಕಣ್ಣೀರು ಹಾಕಿದ್ದಳು.

Related Articles

Related image1
Annayya Serial: ಪಾರು ಲೈಸೆನ್ಸ್‌ ನಾಶ; ಮಾವನ ವಿರುದ್ಧವೇ ಸಿಡಿದೆದ್ದ ಶಿವು; ಮಾರಿಗುಡಿ ಡಾನ್‌ ಸುಮ್ನಿರ್ತಾಳಾ?
Related image2
Photos: 25ನೇ ವಯಸ್ಸಿಗೆ ಹೊಸ ಮನೆಗೆ ಕಾಲಿಟ್ಟ Annayya Serial ನಿಶಾ ರವಿಕೃಷ್ಣನ್;‌ ಗಟ್ಟಿಮೇಳ ತಂಡ ಭಾಗಿ!
35

ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಅತ್ತೆಗೆ ಗುಂಡಮ್ಮ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ. ಧೈರ್ಯವಾಗಿ ಏನು ನಿಮ್ಮ ಸಮಸ್ಯೆ ಎಂದು ಕೇಳಿದ್ದಾಳೆ. ತಾಯಿ ಮಾಕಳವ್ವ ಶಿವಣ್ಣನ ಮೈಮೇಲೆ ಬಂದು ತುತ್ತಿಗೂ, ಮುತ್ತಿಗೂ ಕೈ ಹಾಕಬಾರದು ಎಂದು ಹೇಳಿಕೆ ನೀಡಿದ್ದಳು. ಈ ಮಾತು ನೆನಪಾಗುತ್ತಲೇ ಗುಂಡಮ್ಮನ ಅತ್ತೆ ಎಸ್ಕೇಪ್ ಆಗಿದ್ದಾಳೆ.

45
ANNAYYA

ANNAYYA

ಇತ್ತ ಶಿವು ಮಾವನ ತಾಯಿ ಶಾರದಾ ಬಗ್ಗೆ ತಿಳಿದುಕೊಳ್ಳಲು ಪಾರ್ವತಿ ಪ್ರಯತ್ನಿಸುತ್ತಿದ್ದಾಳೆ. ಈ ಹಿಂದೆ ತಾಯಿ ಬಗ್ಗೆ ವಿಚಾರಿಸಿದ್ದಕ್ಕೆ ಶಿವು ಕೋಪಗೊಂಡಿದ್ದನು. ಎಂದಿಗೂ ತಾಯಿಯ ಕುರಿತು ಕೇಳಬೇಡ ಎಂದು ಕೇಳಿಕೊಂಡಿದ್ದನು. ನಂತರ ಕೋಪಗೊಂಡಿದ್ದಕ್ಕೆ ಪಾರ್ವತಿಯನ್ನು ಕೂಸುಮರಿ ಮಾಡಿದ್ದನು.

55

ಇಂದಿನ ಪ್ರೋಮೋದಲ್ಲಿ ಮಾವ ಶಿವುಗೆ ಪಾರ್ವತಿ ಪುಟ್ಟದಾದ ಕಥೆಯೊಂದನ್ನು ಹೇಳಿದ್ದಾಳೆ. ಒಂದೂರಿನಲ್ಲಿ ಓರ್ವನಿಗೆ ನಾಲ್ವರು ಸೋದರಿಯರಿದ್ದರು. ಆದ್ರೆ ಅವರ ತಾಯಿಯೇ ಮಿಸ್ ಆಗಿದ್ದಳು ಎಂದು ಪಾರ್ವತಿ ಹೇಳುತ್ತಾನೆ. ನನ್ನ ತಾಯಿಯ ವಿಷಯ ಮುಗಿದ ಅಧ್ಯಾಯ ಎಂದು ಶಿವು ಕೈ ಮುಗಿಯುತ್ತಾನೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಣ್ಣಯ್ಯ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved