MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಭೂಮಿ ಅಂದ್ಕೊಂಡಿದ್ದೇ ಒಂದು; ಇಲ್ಲಿ ಆಗ್ತಿರೋದು ಇನ್ನೊಂದು! ಠಕ್ಕರ್‌ ಅಂದ್ರೆ ಇದೇ

Amruthadhaare Serial: ಭೂಮಿ ಅಂದ್ಕೊಂಡಿದ್ದೇ ಒಂದು; ಇಲ್ಲಿ ಆಗ್ತಿರೋದು ಇನ್ನೊಂದು! ಠಕ್ಕರ್‌ ಅಂದ್ರೆ ಇದೇ

ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್‌ ಹಾಗೂ ಗೌತಮ್‌ ಪರಿಚಯ ಆಗಿದ್ದು, ಮಗನನ್ನು ಗೌತಮ್‌ ಮುದ್ದು ಮಾಡಿದ್ದು ಎಲ್ಲವನ್ನು ಭೂಮಿ ನೋಡಿದ್ದಾಳೆ. “ನಮ್ಮಿಂದ ದೂರ ಇರಿ” ಅಂತ ಅವಳು ಪತಿಗೆ ಎಚ್ಚರಿಕೆ ಕೊಟ್ಟಿದ್ದಳು. ಹೀಗಾಗಿ ಭೂಮಿಯ ಮೇಲಿನ ಆಸೆಯನ್ನು ಬಿಟ್ಟು ಗೌತಮ್‌ ಹೊರಟಿದ್ದನು. 

1 Min read
Author : Padmashree Bhat
Published : Sep 30 2025, 07:00 AM IST
Share this Photo Gallery
  • FB
  • TW
  • Linkdin
  • Whatsapp
15
ಗೌತಮ್‌ನೇ ಕಾರಣ ಎಂದಿದ್ದ ಭೂಮಿ
Image Credit : zee5

ಗೌತಮ್‌ನೇ ಕಾರಣ ಎಂದಿದ್ದ ಭೂಮಿ

ಶಾಲೆ ಬಳಿ ಓರ್ವ ಕಾರ್‌ನಲ್ಲಿ ಬಂದು ಆಕಾಶ್‌ನನ್ನು ಕರೆದುಕೊಂಡು ಹೋಗಿದ್ದಾನೆ. ತನ್ನ ಫ್ರೆಂಡ್‌ ಗೌತಮ್‌ ಕಾರ್‌ ಕಳಿಸಿರಬಹುದು ಎಂದು ಆಕಾಶ್‌ ನಂಬಿ ಕಾರ್‌ ಹತ್ತಿದ್ದನು. ಆ ನಂತರ ಭೂಮಿಗೆ ಮಗನನ್ನು ಗೌತಮ್‌ ಕರೆದುಕೊಂಡು ಹೋಗಿದ್ದಾನೆ ಎಂದು ನಂಬಿ, ಫೋನ್‌ ಮಾಡಿದ್ದಾಳೆ. ‌

25
ಗೌತಮ್‌ ಬಳಿ ಭೂಮಿಕಾ ಮನವಿ
Image Credit : zee5

ಗೌತಮ್‌ ಬಳಿ ಭೂಮಿಕಾ ಮನವಿ

“ದಯವಿಟ್ಟು ಮಗನನ್ನು ಕಳಿಸಿಕೊಡಿ, ನಿಮ್ಮ ಮೇಲೆ ನನಗೆ ಯಾವುದೇ ಬೇಸರ ಇಲ್ಲ, ಕೋಪ ಮಾಡಿಕೊಳ್ಳೋದಿಲ್ಲ. ಸಂಜೆ ಸಿಕ್ಕಮೇಲೆ ನಿನಗೆ ಎಲ್ಲ ವಿಷಯವನ್ನು ಹೇಳ್ತೀನಿ ಅಂತ ಆಕಾಶ್‌ಗೆ ಹೇಳಿದ್ರಿ, ನೀವೇ ಕರೆದುಕೊಂಡು ಹೋಗಿರೋದು ಅಂತ ನನಗೆ ಗೊತ್ತಿದೆ” ಎಂದು ಗೌತಮ್‌ ಬಳಿ ಭೂಮಿ ಮನವಿ ಮಾಡಿದ್ದಳು. ಆಗ ಗೌತಮ್, “ನಾನು ಕರೆದುಕೊಂಡು ಹೋಗಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾನೆ.

Related Articles

Related image1
ಅಪ್ಪು ಹಾಡಿಗೆ Amruthadhaare ಅಪ್ಪ-ಮಗನ ಡೇ ಔಟ್​: ಕುಣಿದಾಡಿದ ಪುನೀತ್​ ರಾಜ್​ ಫ್ಯಾನ್ಸ್​
Related image2
Amruthadhaare Serial : ದಿಯಾಗಾಗಿ ಹೆಂಡ್ತೀನೇ ಬಿಟ್ಟ…ಈಗ ಅದೇ ಬೇಬಿಯಿಂದ ನಡೆಯುತ್ತಾ ಜೈದೇವ್ ಅಂತ್ಯ!
35
ಮಗನಿಗೆ ಏನೂ ಆಗೋಕೆ ಬಿಡೋದಿಲ್ಲ
Image Credit : zee5

ಮಗನಿಗೆ ಏನೂ ಆಗೋಕೆ ಬಿಡೋದಿಲ್ಲ

ಈ ಮೊದಲೇ ಗೌತಮ್‌ ಓರ್ವ ವ್ಯಕ್ತಿಯನ್ನು ಭೂಮಿಕಾ, ಆಕಾಶ್‌ ಮೇಲೆ ಕಣ್ಣಿಡಲು ನೇಮಕ ಮಾಡಿದ್ದನು. ಇದರಿಂದಾಗಿ ಆಕಾಶ್‌ ಕಿಡ್ನ್ಯಾಪ್‌ ಆಗಿರೋದು ಅವನ ಗಮನಕ್ಕೆ ಬಂದಿತ್ತು. ಮಲ್ಲಿ ಕೂಡ ಫೋನ್‌ ಮಾಡಿ, ಎಂಎಲ್‌ಎ ಆಕಾಶ್‌ನನ್ನು ಅಪಹರಣ ಮಾಡಿರಬಹುದು ಎಂಬ ಸಂದೇಹ ಎಂದು ತಿಳಿಸಿದ್ದಳು. ಆಗ ಗೌತಮ್‌, “ಹೌದು, ಅವನೇ ಕಿಡ್ನ್ಯಾಪ್‌ ಮಾಡಿರೋದು, ನನ್ನ ಮಗನಿಗೆ ಏನೂ ಆಗೋಕೆ ನಾನು ಬಿಡೋದಿಲ್ಲ” ಎಂದು ಹೇಳಿದ್ದನು.

45
ಮಗನನ್ನು ನೋಡಿ ಭೂಮಿ ಖುಷ್‌
Image Credit : zee5

ಮಗನನ್ನು ನೋಡಿ ಭೂಮಿ ಖುಷ್‌

ಕೊನೆಗೂ ಗೌತಮ್‌, ಕಿಡ್ನ್ಯಾಪ್‌ ಮಾಡಿಟ್ಟ ಜಾಗವನ್ನು ಹುಡುಕಿ ಹೋಗಿದ್ದಾನೆ. ಅಲ್ಲಿ ಅವನು ಫೈಟ್‌ ಮಾಡಿ ಆಕಾಶ್‌ನನ್ನು ಬಿಡಿಸಿದ್ದಾನೆ. ಎಂಎಲ್‌ಎಗೂ ಕೂಡ ನಾನು ಭೂಮಿ ಗಂಡ, ಆಕಾಶ್‌ ತಂದೆ ಎಂದು ಹೇಳಿದ್ದಾನೆ. ಆಕಾಶ್‌ ಅಂತೂ ಗೌತಮ್‌ ಫೈಟ್‌ ನೋಡಿ ಫುಲ್‌ ಖುಷಿಯಾಗಿದ್ದಾನೆ. ಕೊನೆಗೆ ಆಕಾಶ್‌ ಸೇಫ್‌ ಆಗಿ ಮನೆಗೆ ಬರುತ್ತಾನೆ. ಮಗನನ್ನು ಕಂಡು ಭೂಮಿ ದಿಲ್‌ ಖುಷ್‌ ಆಗುವುದು. 

55
ಮುಂದೆ ಏನಾಗುವುದು?
Image Credit : zee5

ಮುಂದೆ ಏನಾಗುವುದು?

ನಮ್ಮನ್ನು ಸೇಫ್‌ ಮಾಡಿದ ಗೌತಮ್‌ ಜೊತೆ ಭೂಮಿ ಇರಲು ಒಪ್ಪಿದರೂ ಒಪ್ಪಬಹುದು. ಇನ್ನೊಂದು ಕಡೆ ಗೌತಮ್‌ನನ್ನು ಬಿಟ್ಟು ಇರೋಕೆ ಆಕಾಶ್‌ ಒಪ್ಪದೆ ಇರಬಹುದು. ಎಂಎಲ್‌ಎ ಕಡೆಯಿಂದಾನೋ ಅಥವಾ ಬೇರೆ ಇನ್ಯಾರಿಂದಲೋ ಭೂಮಿಗೂ, ಆಕಾಶ್‌ಗೂ ಸಮಸ್ಯೆ ಆಗಬಾರದು ಅಂತ ಗೌತಮ್‌ ಅಲ್ಲೇ ಉಳಿದುಕೊಂಡರೂ ಕೂಡ ಆಶ್ಚರ್ಯವಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಗಿಲ್ಲಿ ಟ್ಯಾಟೂ ಹಾಕೋಕಿರೋ ಪ್ರಾಬ್ಲಂ ಏನು? ಫ್ಯಾನ್ಸ್ ಕೈನಲ್ಲಿ ಮಗನ ಮುಖ ನೋಡಿ ಕಣ್ಣೀರಿಟ್ಟ ಅಪ್ಪ ಅಮ್ಮ
Recommended image2
BBK 12: ಎಲ್ಲಾ ಬಿಟ್ಟು ಗಿಲ್ಲಿ ನಟನ ಕೂದಲಿನ ಬಗ್ಗೆ Kavya Shaiva-Rakshita ನಡುವೆ ಮಾತಿನ ಚಕಮಕಿ! ಆಗಿದ್ದೇನು?
Recommended image3
ಬಿಗ್ ಬಾಸ್‌ ಮಿಡ್ ವೀಕ್ ಎಲಿಮಿನೇಷನ್‌ ಶಾಕ್; ಮನೆಯಿಂದ ಹೊರಹೋಗಲು ರೆಡಿಯಾಗಿದ್ದೇನೆಂದ ಕಂಟೆಸ್ಟಂಟ್!
Related Stories
Recommended image1
ಅಪ್ಪು ಹಾಡಿಗೆ Amruthadhaare ಅಪ್ಪ-ಮಗನ ಡೇ ಔಟ್​: ಕುಣಿದಾಡಿದ ಪುನೀತ್​ ರಾಜ್​ ಫ್ಯಾನ್ಸ್​
Recommended image2
Amruthadhaare Serial : ದಿಯಾಗಾಗಿ ಹೆಂಡ್ತೀನೇ ಬಿಟ್ಟ…ಈಗ ಅದೇ ಬೇಬಿಯಿಂದ ನಡೆಯುತ್ತಾ ಜೈದೇವ್ ಅಂತ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved