ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಅವನ ಮಗ ಆಕಾಶ್ (ಅಪ್ಪು) ನಡುವಿನ ಬಾಂಧವ್ಯ ಕೊಡಗಿನಲ್ಲಿ ಗಟ್ಟಿಯಾಗುತ್ತಿದೆ, ಆದರೆ ಆಕಾಶ್‌ಗೆ ಸತ್ಯ ತಿಳಿದಿಲ್ಲ. ಇನ್ನೊಂದೆಡೆ, ಎಂಎಲ್‌ಎಯಿಂದ ಭೂಮಿಕಾಗೆ ಅಪಾಯ ಎದುರಾಗಿದ್ದು, ಕಥೆಯಲ್ಲಿ ದೊಡ್ಡ ತಿರುವು ಬರುವ ಸಾಧ್ಯತೆಯಿದೆ.

ಪುನೀತ್​ ರಾಜ್​ ಕುಮಾರ್​ ಅವರು ಅವರ ಅಭಿಮಾನಿಗಳ ಅಪ್ಪು ಆಗಿದ್ದವರು. ಹಲವಾರು ಮಂದಿಯ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಅಪ್ಪು ಎಂದೇ ಕರೆಯುವುದು. ಅದೇ ರೀತಿ, ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಕೂಡ ಗೌತಮ್​ ಮತ್ತು ಭೂಮಿಕಾ ಮಗನನ್ನು ಅಪ್ಪು ಎಂದೇ ಹೆಸರು ಇಟ್ಟಿದ್ದಾರೆ. ಅವನ ಹೆಸರು ಆಕಾಶ್​ ಎಂದು ಇಟ್ಟಿದ್ದರೂ ಮನೆಯಲ್ಲಿ ಕರೆಯುವುದು ಅಪ್ಪು ಎಂದೇ. ಈಗ ಅಪ್ಪು ಮತ್ತು ಅಪ್ಪನ ಬಾಂಡಿಂಗ್​ ಜೋರಾಗಿ ನಡೆಯುತ್ತಿದೆ. ಆಕಾಶ್​ಗೆ ಇವನೇ ತನ್ನ ಅಪ್ಪ ಎನ್ನುವುದು ತಿಳಿದಿಲ್ಲವಾದರೂ ಕಣ್ಣು ಅರಿಯದಿದ್ದರೂ ಎನ್ನುತ್ತಾರಲ್ಲ, ಹಾಗೆ ಅಪ್ಪನ ಜೊತೆ ಕ್ಲೋಸ್​ ಆಗಿದ್ದಾನೆ, ಈ ವಿಷಯ ಇನ್ನಷ್ಟೇ ಭೂಮಿಕಾಗೆ ಗೊತ್ತಾಗುವುದರಲ್ಲಿದೆ. ಮುಂದೇನು ಎನ್ನುವ ಕುತೂಹಲವೂ ಇದೆ.

ಅಪ್ಪ-ಮಗನ ಡೇ ಔಟ್​

ಸದ್ಯ ಸೀರಿಯಲ್​ ಪ್ರಿಯರಿಗೆ ತಿಳಿದಿರುವಂತೆ ಅಮೃತಧಾರೆ ಸೀರಿಯಲ್​ ಶೂಟಿಂಗ್​ ಕೊಡಗಿನಲ್ಲಿ ನಡೆಯುತ್ತಿದೆ. ಇಲ್ಲಿಯೇ ಮನೆ ಮಾಡಿಕೊಂಡಿದ್ದಾಳೆ ಭೂಮಿಕಾ. ಇದೀಗ ಗೌತಮ್​ ಮತ್ತು ಮಗ ಆಕಾಶ್​ನ ಡೇ ಔಟ್​ ಶುರುವಾಗಿದೆ. ಕೊಡಗಿನ ಕೂರ್ಗ್ ಫನ್​ ವರ್ಲ್ಡ್​ನಲ್ಲಿ ಸೀರಿಯಲ್​ನ ಈ ಅಪ್ಪ-ಮಗ ಸಕತ್​ ಎಂಜಾಯ್​ ಮಾಡುವುದನ್ನು ನೋಡಬಹುದು. ಈ ಹಾಡಿನ ಬ್ಯಾಂಕ್​ಗ್ರೌಂಡ್​ನಲ್ಲಿ ಅಪ್ಪು ಅರ್ಥಾತ್​ ಪುನೀತ್​ ರಾಜ್​ ಕುಮಾರ್​ (Puneeth Rajkumar) ಅವರ ಅಪ್ಪು ಚಿತ್ರದ ಜಾಲಿ ಗೋ ಜಾಲಿ ಗೋ (Appu - "Jolly Go Jolly Go") ಹಾಡಿನ ಹಿನ್ನೆಲೆಯಲ್ಲಿ ಅಪ್ಪ-ಮಗನ ಡೇ ಔಟ್​ ತೋರಿಸಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಅಪ್ಪುವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಜಾಲಿ ರೈಡ್​ ಮಾಡಿದ ಅಪ್ಪ-ಮಗ

ಇದರಲ್ಲಿ ಫನ್​ ವರ್ಲ್ಡ್​ನ ವಿವಿಧ ಆಟಗಳನ್ನು ತೋರಿಸಲಾಗಿದೆ. ಅದೇ ರೀತಿ ತ್ರಿಡಿ-4D ಗಳಲ್ಲಿ ಅಪ್ಪ-ಮಗ ಜಾಲಿ ಮಾಡಿದ್ದನ್ನು ನೋಡಬಹುದು. ಅದೇ ರೀತಿ ರೋಪ್​ನಲ್ಲಿ ಆಕಾಶ್​ ಆಟವಾಡಿದ್ದನ್ನು ನೋಡಬಹುದು. ಒಟ್ಟಿನಲ್ಲಿ ಅಪ್ಪ-ಮಗನ ಬಾಂಡಿಂಗ್​ ಕಂಡು ನೆಟ್ಟಿಗರು ಇಬ್ಬರನ್ನೂ ಬೇಗ ಒಂದು ಮಾಡಿಸಿ, ಸತ್ಯ ಗೊತ್ತಾಗುವ ಹಾಗೆ ಮಾಡಿ ಎಂದು ಹೇಳುತ್ತಿದ್ದಾರೆ.

ಇನ್ನೊಂದೆಡೆ ಸೀರಿಯಲ್​ ಟ್ವಿಸ್ಟ್​?

ಆದರೆ ಅದೇ ಇನ್ನೊಂದೆಡೆ, ಸೀರಿಯಲ್​ನಲ್ಲಿ ಆಕಾಶ್​ ಕಿಡ್​ನ್ಯಾಪ್​ ಆಗುವ ಸಾಧ್ಯತೆಯೂ ಇದೆ. ಭೂಮಿಕಾ ಎಂಎಲ್​ಎ ಮಗನ ಮೇಲೆ ಆ್ಯಕ್ಷನ್​ ತೆಗೆದುಕೊಂಡಿರೋದು. ಅವನ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು. ಇದು ಎಂಎಲ್​ಎ ಕೋಪಕ್ಕೆ ಕಾರಣವಾಗಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪುತ್ತಿಲ್ಲ. ಬೇರೆ ಟೀಚರ್ಸ್​ ಹೇಳಿದರೂ ಆಕೆ ಅದನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಈಗ ಆತನಿಂದ ಭೂಮಿಕಾ ಪ್ರಾಣಕ್ಕೆ ಅಪಾಯ ಇದೆ ಎನ್ನುವುದಂತೂ ಸುಳ್ಳಲ್ಲ. ರಾಜಕಾರಣಿಗಳು ಎಂದರೆ ಅಷ್ಟು ಸುಲಭ ಅಲ್ಲವಲ್ಲ! ಆತ ಇನ್ನೇನು ಮಾಡ್ತಾನೋ ಎನ್ನುವ ಭಯ ವೀಕ್ಷಕರಿಗೆ.

View post on Instagram