MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial:‌ ಮತ್ತೆ ಜೆಡಿ ಮಹಾಪ್ಲ್ಯಾನ್, ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ; ಥೂ..

Amruthadhaare Serial:‌ ಮತ್ತೆ ಜೆಡಿ ಮಹಾಪ್ಲ್ಯಾನ್, ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ; ಥೂ..

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಶಾಕುಂತಲಾ ಮಾಡಿದ ಕೆಲಸ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ. ಶಕುಂತಲಾ ಮತ್ತೆ ತನ್ನ ಬುದ್ಧಿಯನ್ನು ಬಿಡದಿರೋದನ್ನು ನೋಡಿ ಏನಿದು ಹೀಗೆ ಆಗ್ತಿದೆಯಲ್ಲಾ ಎಂದು ಬೇಸರ ಮಾಡಿಕೊಂಡಿದ್ದಾರೆ. 

1 Min read
Author : Padmashree Bhat
Published : Jul 03 2026, 10:23 AM IST
Share this Photo Gallery
  • FB
  • TW
  • Linkdin
  • Whatsapp
15
ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ್ದು ಕೂತಿಲ್ಲ?
Image Credit : zee5

ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ್ದು ಕೂತಿಲ್ಲ?

ಈ ಹಿಂದೆ ಜೆಡಿಯೇ ಸ್ವತಃ ತನ್ನ ತಾಯಿಗೆ ಬಾಯಿಗೆ ಬಂದ ಹಾಗೆ ಬೈದು, ಮನೆಯಿಂದ ಹೊರಹಾಕಿದ್ದನು. ಆಗ ಗೌತಮ್‌ ಈ ಹಿಂದೆ ಅವಳು ಮಾಡಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಮನೆಗೆ ಕರೆದುಕೊಂಡು ಬಂದು ಆಶ್ರಯ ಕೊಟ್ಟಿದ್ದನು. ಇದನ್ನು ಶಕುಂತಲಾ ನೆನಪಿನಲ್ಲಿ ಇಟ್ಟುಕೊಂಡಂತಿಲ್ಲ. ದೇವಸ್ಥಾನದಲ್ಲಿ ಕೂತು ಭಿಕ್ಷೆ ಬೇಡಿದ್ದು ಶಕುಂತಲಾಗೆ ನೆನಪಿಲ್ಲ ಎಂದು ಕಾಣುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜಯದೇವ್‌ನನ್ನು ಜೈಲಿಗೆ ಕಳಿಸಿದ್ದ ಶಕುಂತಲಾ
Image Credit : zee5

ಜಯದೇವ್‌ನನ್ನು ಜೈಲಿಗೆ ಕಳಿಸಿದ್ದ ಶಕುಂತಲಾ

ಗೌತಮ್‌ ಪದೇ ಪದೇ ಒಳ್ಳೆಯತನ ತೋರಿಸಿದರೂ ಕೂಡ ಅವಳಿಗೆ ಬುದ್ಧಿ ಬರ್ತಿಲ್ಲ. ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಎನ್ನೋ ತರ ಆಯ್ತು. ಮತ್ತೆ ಅವಳು ಜೆಡಿಯನ್ನು ಕಾಪಾಡುತ್ತಿದ್ದಾಳೆ. ಗೌತಮ್‌ ಮಗಳು ಮಿಂಚುವನ್ನು ಜಯದೇವ್‌ ಕಿಡ್ನ್ಯಾಪ್‌ ಮಾಡಿದ್ದನು, ಆ ಮಕ್ಕಳ ಹುಟ್ಟುಹಬ್ಬದಂದು ಕೇಕ್‌ನಲ್ಲಿ ಬಾಂಬ್‌ ಇಟ್ಟಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಶಕುಂತಲಾಳೇ ಜಯದೇವ್‌ನನ್ನು ಜೈಲಿಗೆ ಕಳಿಸಿದ್ದಳು.

Related Articles

Related image1
Amruthadhaare: ಬಯಲಾಯ್ತು ತಾಯಿ-ಮಗನ ರಹಸ್ಯ ಆಟ! ನಿಟ್ಟುಸಿರು ಬಿಟ್ಟಿದ್ಯಾಕೆ ವೀಕ್ಷಕರು
Related image2
Amruthadhaare Serial: ಇನ್ಫೋಸಿಸ್‌ ನಾರಾಯಣ್‌ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್‌ ದಿವಾನ್
35
ಶಕುಂತಲಾ ಕುರುಡು ಪ್ರೀತಿ
Image Credit : zee5

ಶಕುಂತಲಾ ಕುರುಡು ಪ್ರೀತಿ

ಈಗ ಮತ್ತೆ ಅವಳು ಜಯದೇವ್‌ನನ್ನು ಜೈಲಿನಿಂದ ಬಿಡಿಸಿದ್ದಾಳೆ. ಏನೇ ಆದರೂ ನಾನು ನನ್ನ ಮಕ್ಕಳನ್ನು ಬಿಟ್ಟುಕೊಡೋದಿಲ್ಲ ಎಂದು ಅವಳು ಗುಡುಗಿದ್ದಾಳೆ. ಜಯದೇವ್‌ ತನಗೆ ಏನೇ ಮಾಡಿದರೂ ಕೂಡ, ಅವನು ನನ್ನ ಮಗನೇ ಎಂದು ಕುರುಡು ಪ್ರೀತಿಯಿಂದ ಅವಳು ಈ ರೀತಿ ಮಾಡಿದ್ದಾಳೆ.

45
ಮತ್ತೆ ಗೌತಮ್‌ ಸಾಮ್ರಾಜ್ಯ ಮರಳಿ ಪಡೆಯುತ್ತಾರಾ?
Image Credit : zee5

ಮತ್ತೆ ಗೌತಮ್‌ ಸಾಮ್ರಾಜ್ಯ ಮರಳಿ ಪಡೆಯುತ್ತಾರಾ?

ಶಕುಂತಲಾ ಹೀಗೆಲ್ಲ ಮಾಡಿದ್ದು ನೋಡಿ ವೀಕ್ಷಕರಿಗೆ ಸಿಟ್ಟು ಬಂದಿದೆ, ಇಷ್ಟು ಕಷ್ಟ ಅನುಭವಿಸಿದರೂ ಕೂಡ ಅವಳಿಗೆ ಬುದ್ಧಿ ಬಂದಿಲ್ಲ ಎಂದು ವೀಕ್ಷಕರು ಸಿಟ್ಟಾಗಿದ್ದಾರೆ. ಅತ್ತ ಗೌತಮ್‌-ಭೂಮಿಕಾ ತಮ್ಮ ಮಕ್ಕಳ ಜೊತೆಗೆ ಚೆನ್ನಾಗಿದ್ದರೆ, ಇತ್ತ ಅಮ್ಮ-ಮಗ ಹೇಗೆ ಗೌತಮ್‌ ಸಾಮ್ರಾಜ್ಯವನ್ನು ಮರಳಿ ಪಡೆಯಬಹುದು ಎಂದು ಯೋಜನೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

55
ಮುಂದೆ ಏನಾಗಬಹುದು?
Image Credit : zee5

ಮುಂದೆ ಏನಾಗಬಹುದು?

ಶಕುಂತಲಾ ಬುದ್ಧಿ ಗೌತಮ್‌, ಭೂಮಿಗೆ ಗೊತ್ತಾದರೆ ಅವರು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ತಾವಾಯ್ತು, ತಮ್ಮ ಜೀವನ ಆಯ್ತು ಎಂದು ಊರು ಬಿಟ್ಟು ಹೋಗಿದ್ದ ಭೂಮಿ, ಗೌತಮ್‌ ಮತ್ತೆ ದಿವಾನ್‌ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾರೆ. ಒಂದು ವೇಳೆ ಆಸ್ತಿಯನ್ನು ಜಯದೇವ್-ಶಕುಂತಲಾಗೆ ಬಿಟ್ಟುಕೊಟ್ಟರೂ ಕೂಡ ಅದನ್ನು ಅವರಿಗೆ ಉಳಿಸಿಕೊಳ್ಳಲು ಬರೋದಿಲ್ಲ ಎನ್ನೋದು ಸಾಬೀತಾಗಿದೆ. ಹೀಗಾಗಿ ಗೌತಮ್‌ ಮುಂದಿನ ನಿರ್ಧಾರ ಏನು ಎನ್ನೋದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Karna Serialನಲ್ಲಿ ಅಮೃತಧಾರೆ ಸ್ಟೋರಿ ರಿಪೀಟ್​? ಆಸ್ತಿ ಬರೆದು ಕೊಟ್ಟ ಕರ್ಣ- ಜೈದೇವ್​ ಆಗ್ತಾನಾ ಸಂಜಯ್​
Recommended image2
ಮದುವೆ ಬಗ್ಗೆ ಬಾಯ್ಬಿಟ್ಟ Bigg Boss ವಿನ್ನರ್‌ ಹನುಮಂತು! ಹುಡುಗಿಯ ಬಗ್ಗೆ ರಿವೀಲ್‌ ಮಾಡಿ ಸಿಕ್ಕಿಬಿದ್ರು
Recommended image3
ಶ್ರೀ ಗಂಧದ ಗುಡಿ: ಹರಿ ಜಪಿಸುತ್ತಿರುವ ಆ 'ಅನಿತಾ' ಯಾರು? ಚಂದನಾಗೆ ಹೊಟ್ಟೆಯುರಿ ಕೊಟ್ಟ ಚಲುವೆ ಹಿನ್ನೆಲೆ ಇಲ್ಲಿದೆ!
Related Stories
Recommended image1
Amruthadhaare: ಬಯಲಾಯ್ತು ತಾಯಿ-ಮಗನ ರಹಸ್ಯ ಆಟ! ನಿಟ್ಟುಸಿರು ಬಿಟ್ಟಿದ್ಯಾಕೆ ವೀಕ್ಷಕರು
Recommended image2
Amruthadhaare Serial: ಇನ್ಫೋಸಿಸ್‌ ನಾರಾಯಣ್‌ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್‌ ದಿವಾನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved