MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಮಲ್ಲಿಯ ಏಟಿಗೆ ಜೈದೇವ್​ ನಶೆ ಇಳಿದೋಯ್ತು! ಭಾಗ್ಯಮ್ಮನ ಹಿಂದೆ ಹೋದವನ ಸ್ಥಿತಿ ಚಿಂತಾಜನಕ

Amruthadhaare: ಮಲ್ಲಿಯ ಏಟಿಗೆ ಜೈದೇವ್​ ನಶೆ ಇಳಿದೋಯ್ತು! ಭಾಗ್ಯಮ್ಮನ ಹಿಂದೆ ಹೋದವನ ಸ್ಥಿತಿ ಚಿಂತಾಜನಕ

ಅಮೃತಧಾರೆ ಧಾರಾವಾಹಿಯಲ್ಲಿ, ಅನಿರೀಕ್ಷಿತವಾಗಿ ಒಂದೇ ದೇವಸ್ಥಾನದಲ್ಲಿ ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ ಸೇರುತ್ತಾರೆ. ಅಲ್ಲಿ ಜೈದೇವ್, ಆಕಾಶ್‌ನನ್ನು ಹಿಡಿದು ಮಲ್ಲಿಯ ಬಗ್ಗೆ ಸತ್ಯ ಹೇಳುವಷ್ಟರಲ್ಲಿ, ಮಲ್ಲಿ ಹಿಂದಿನಿಂದ ಬಂದು ಅವನ ತಲೆಗೆ ಹೊಡೆದು ಕೆಳಗೆ ಬೀಳಿಸುತ್ತಾಳೆ.

1 Min read
Suchethana D
Published : Dec 03 2025, 07:11 PM IST
Share this Photo Gallery
  • FB
  • TW
  • Linkdin
  • Whatsapp
17
ಎಲ್ಲರೂ ಒಂದೆಡೆ
Image Credit : zee kannada facebook

ಎಲ್ಲರೂ ಒಂದೆಡೆ

ಅಮೃತಧಾರೆಯಲ್ಲಿ (Amruthadhaare) ಇನ್ನೇನು ಎಲ್ಲರೂ ಒಂದಾಗುವ ಟೈಮ್​ ಬಂದೇ ಬಿಟ್ಟಿದೆ. ಮಲ್ಲಿ ಮತ್ತು ಮಗ ಆಕಾಶ್​ನನ್ನು ಕರೆದುಕೊಂಡು ಭೂಮಿಕಾ ದೇವಾಲಯಕ್ಕೆ ಹೋಗಿದ್ದರೆ, ಅದೇ ದೇವಾಲಯಕ್ಕೆ ಗೌತಮ್​ನೂ ಬಂದಿದ್ದಾನೆ.

27
ಮನೆಬಿಟ್ಟ ಭಾಗ್ಯಮ್ಮ
Image Credit : zee5

ಮನೆಬಿಟ್ಟ ಭಾಗ್ಯಮ್ಮ

ಮಗ-ಸೊಸೆ ಬೆಂಗಳೂರಿನಲ್ಲಿಯೇ ಇರುವುದು ತಿಳಿದು ಅವರನ್ನು ಹುಡುಕಿ ಮನೆಬಿಟ್ಟ ಭಾಗ್ಯಮ್ಮ ಕೂಡ ಅದೇ ದೇವಾಲಯಕ್ಕೆ ಬಂದಿದ್ದಾಳೆ. ಆಟೊದಲ್ಲಿ ಭೂಮಿಕಾ ಹೋಗುವುದನ್ನು ನೋಡಿದ್ದ ಅವಳು ಅದರ ಹಿಂದೆನೇ ಬಂದು ದೇವಾಲಯ ಸೇರಿದ್ದಾಳೆ.

Related Articles

Related image1
ನಕ್ಕಳಾ ರಾಜಕುಮಾರಿ! ಸ್ಪಂದನಾ ಕಣ್ಣೀರು ಒರೆಸಲು 'ಜಿಂಕೆ ಮರಿನಾ' ಹಾಡಿಗೆ Bigg Boss Boys ಸ್ಟೆಪ್​
Related image2
Karna Serial: ಬೆಟ್ಟದ ತುದಿಯಲ್ಲಿ ಕೊನೆಗೂ ಸತ್ಯದ ಅನಾವರಣ: ನಿತ್ಯಾಗೆ ಶಾಕ್​- ನಿಧಿ ಮುಂದಿನ ನಡೆ ಏನು?
37
ಶಕುಂತಲಾ ಮಾತು
Image Credit : Instagram

ಶಕುಂತಲಾ ಮಾತು

ಅದೇ ಇನ್ನೊಂದೆಡೆ, ಗ್ರಹಚಾರ ಸರಿಯಿಲ್ಲ, ಪೂಜೆ ಮಾಡಿಸಿಕೊಂಡು ಬಾ ಎಂದು ಜೈದೇವ್​ ಮತ್ತು ದಿಯಾಳನ್ನು ಶಕುಂತಾ ಒತ್ತಾಯಪೂರ್ವಕವಾಗಿ ಕಳುಹಿಸಿದ್ದಾಳೆ.

47
ದೇವಸ್ಥಾನಕ್ಕೆ ಜೈದೇವ
Image Credit : Instagram

ದೇವಸ್ಥಾನಕ್ಕೆ ಜೈದೇವ

ಮನಸ್ಸಿಲ್ಲದ ಮನಸ್ಸಿನಿಂದ ಜೈದೇವ ಬಂದಿದ್ದಾನೆ. ಫುಲ್​ ಟೈಟ್​ ಆಗಿ ಕಾರಿನಲ್ಲಿ ಆತ ಕುಳಿತಿದ್ದರೆ, ದಿಯಾ ದೇವಸ್ಥಾನದ ಒಳಗೆ ಹೋಗಿದ್ದಾಳೆ.

57
ಭಾಗ್ಯಮ್ಮ ಪ್ರತ್ಯಕ್ಷ
Image Credit : Instagram

ಭಾಗ್ಯಮ್ಮ ಪ್ರತ್ಯಕ್ಷ

ಕಾರಿನ ಕುಳಿತ ಜೈದೇವ್​ಗೆ ಭಾಗ್ಯಮ್ಮ ಕಾಣಿಸಿದ್ದಾಳೆ. ಭಾಗ್ಯಮ್ಮ ದೇವಸ್ಥಾನ ಒಳ ಹೊಕ್ಕಿದ್ದನ್ನು ನೋಡಿದ ಆತ ಅವಳ ಹಿಂದೆಯೇ ಬಂದಿದ್ದಾನೆ. ಅದಕ್ಕೂ ಮೊದಲು ಭೂಮಿಕಾ, ಮಲ್ಲಿ ಹೋಗಿದ್ದನ್ನು ಆತ ಗಮನಿಸಿರಲಿಲ್ಲ.

67
ಆಕಾಶ್​ನನ್ನು ಕಂಡ ಜೈದೇವ
Image Credit : Instagram

ಆಕಾಶ್​ನನ್ನು ಕಂಡ ಜೈದೇವ

ಅಲ್ಲಿ ಜೈದೇವ್​ಗೆ ಆಕಾಶ್​ ಕಾಣಿಸಿದ್ದಾನೆ. ಇವನನ್ನು ನೋಡಿ ಆಕಾಶ್​ ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಆತ ಹಿಡಿದುಕೊಂಡು ಬಿಟ್ಟಿದ್ದಾನೆ. ಆಕಾಶ್​ ಅವರನನ್ನು ನೋಡಿ ಗುರುತೇ ಇಲ್ಲದ ಹಾಗೆ ಮಾಡಿದರೂ, ಜೈದೇವ ತನ್ನ ಗುರುತು ಹೇಳಿದ್ದಾನೆ.

77
ಜೈದೇವ್​ ತತ್ತರ
Image Credit : Instagram

ಜೈದೇವ್​ ತತ್ತರ

ಕೊನೆಗೆ ಮಲ್ಲಿಯ ಫೋಟೋ ಬಗ್ಗೆ ಪ್ರಶ್ನಿಸಿದ್ದಾನೆ. ಅವರು ನಿಮಗೆ ಏನಾಗಬೇಕು ಎಂದು ಆಕಾಶ್​ ಕೇಳಿದ್ದಾನೆ. ಆ ಬಗ್ಗೆ ಜೈದೇವ್​ ಎಲ್ಲಾ ಸತ್ಯ ನುಡಿಯುವುದರಲ್ಲಿ ಇದ್ದ. ಅದನ್ನು ಮರೆಯಿಂದಲೇ ಕೇಳಿಸಿಕೊಳ್ಳುತ್ತಿದ್ದ ಮಲ್ಲಿ ಅಲ್ಲೇ ಇದ್ದ ಕೋಲಿಯಿಂದ ಜೈದೇವನ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಆ ಹೊಡೆತಕ್ಕೆ ಜೈದೇವ ತತ್ತರಿಸಿ ಹೋಗಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಟಿವಿ ಶೋ
ಜೀ ಕನ್ನಡ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ನಕ್ಕಳಾ ರಾಜಕುಮಾರಿ! ಸ್ಪಂದನಾ ಕಣ್ಣೀರು ಒರೆಸಲು 'ಜಿಂಕೆ ಮರಿನಾ' ಹಾಡಿಗೆ Bigg Boss Boys ಸ್ಟೆಪ್​
Recommended image2
ಹುಚ್ಚ ವೆಂಕಟ್‌ಗೆ ಇದೆಂಥಾ ಸ್ಥಿತಿ, ಕಣ್ಣಿಗೆ ಆಪರೇಷನ್‌ ಆಗ್ಬೇಕು ಆದ್ರೆ ಅವರ ಬ್ಯಾಂಕ್‌ ಅಕೌಂಟ್‌ನಲ್ಲಿರೋದು 6 ರೂಪಾಯಿ 56 ಪೈಸೆ!
Recommended image3
Karna Serial: ಬೆಟ್ಟದ ತುದಿಯಲ್ಲಿ ಕೊನೆಗೂ ಸತ್ಯದ ಅನಾವರಣ: ನಿತ್ಯಾಗೆ ಶಾಕ್​- ನಿಧಿ ಮುಂದಿನ ನಡೆ ಏನು?
Related Stories
Recommended image1
ನಕ್ಕಳಾ ರಾಜಕುಮಾರಿ! ಸ್ಪಂದನಾ ಕಣ್ಣೀರು ಒರೆಸಲು 'ಜಿಂಕೆ ಮರಿನಾ' ಹಾಡಿಗೆ Bigg Boss Boys ಸ್ಟೆಪ್​
Recommended image2
Karna Serial: ಬೆಟ್ಟದ ತುದಿಯಲ್ಲಿ ಕೊನೆಗೂ ಸತ್ಯದ ಅನಾವರಣ: ನಿತ್ಯಾಗೆ ಶಾಕ್​- ನಿಧಿ ಮುಂದಿನ ನಡೆ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved