- Home
- Entertainment
- TV Talk
- Aase Serial: ಅಲ್ಲಿ ಮೀನಮ್ಮಾ ಮಳೆಯಲ್ಲಿ ನೆನಿತಿದ್ರೆ… ಇಲ್ಲಿ ಎಲ್ಲಾ ಬಿಟ್ಟು ಸನ್ಯಾಸಿ ಆಗ್ಬಿಟ್ರಾ ಸೂರ್ಯ ?
Aase Serial: ಅಲ್ಲಿ ಮೀನಮ್ಮಾ ಮಳೆಯಲ್ಲಿ ನೆನಿತಿದ್ರೆ… ಇಲ್ಲಿ ಎಲ್ಲಾ ಬಿಟ್ಟು ಸನ್ಯಾಸಿ ಆಗ್ಬಿಟ್ರಾ ಸೂರ್ಯ ?
ಆಸೆ ಧಾರಾವಾಹಿ ನಟಿ ಪ್ರಿಯಾಂಕಾ ಕಾಡು ಮೇಡು ಅಲೆಯುತ್ತಿದ್ದರೆ, ನಟ ನಿನಾದ್ ಹರಿತ್ಸ ಸೀರಿಯಲ್ ಗೆ ಬ್ರೇಕ್ ಕೊಟ್ಟು ಹೆಂಡ್ತಿ ಜೊತೆ ಶಾಂತಿ ಹರಸಿ ಹೊರಟಂತಿದೆ.

ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ಕನ್ನಡಿಗರ ಮನಸನ್ನು ಗೆದ್ದಿರುವ ಸಾಮಾನ್ಯ ಕುಟುಂಬದ ಕಥೆಯನ್ನು ಹೊಂದಿರುವ ಸೀರಿಯಲ್ ಆಸೆ. ಈ ಸೀರಿಯಲ್ ನಾಯಕ ಸೂರ್ಯ ಹಾಗೂ ನಾಯಕಿ ಮೀನಾ ಪಾತ್ರಗಳು ಜನರಿಗೆ ಸಿಕ್ಕಾಪಟ್ಟೆ ಹಿಡಿಸಿದೆ. ಇತ್ತೀಚೆಗೆ ಮೀನಾ ಪಾತ್ರಧಾರಿ ಪ್ರಿಯಾಂಕಾ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ಕಾಡು ಮೇಡು ಅಲೆದಿದ್ದರು.
ಇದೀಗ ನಟ ನಿನಾದ್ ಹರಿತ್ಸ (Ninaad Harithsa) ಸೀರಿಯಲ್ ನಿಂದ ಕೊಂಚ ಬಿಡುವು ಮಾಡಿಕೊಂಡು ಪತ್ನಿ ರಮ್ಯಾ ಜೊತೆ ಮಂದಾರ ಗಿರಿ ಬೆಟ್ಟಕ್ಕೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯ, ನೀರು, ಬೆಟ್ಟ ಗುಡ್ಡಗಳ ನಡುವೆ ಶಾಂತವಾಗಿ ಸಮಯ ಕಳೆದಿದ್ದಾರೆ. ಅಲ್ಲಿನ ಫೋಟೊಗಳನ್ನು ಪತ್ನಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಿನಾದ್ ಮತ್ತು ರಮ್ಯಾ ಜೊತೆಯಾಗಿ ಕ್ವಾಲಿಟಿ ಸಮಯ ಕಳೆದಿದ್ದು, ಇಬ್ಬರು ಒಬ್ಬರನ್ನೊಬ್ಬರ ಕೈ ಹಿಡಿದುಕೊಂಡು, ಭುಜದ ಮೇಲೆ ತಲೆಯಾನಿಸಿ ಪ್ರಕೃತಿಯಲ್ಲಿ ಕಳೆದು ಹೋಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೊದಲ್ಲಿ ಧ್ಯಾನ ಸ್ಥಿತಿಯಲ್ಲಿರುವ ನಿನಾದ್ ಅವರನ್ನು ಕಾಣಬಹುದು.
ಇಬ್ಬರ ಜೋಡಿ ನೋಡಿ ನಿನಾದ್ ಅವರ ನಾಗಿಣಿ ಸೀರಿಯಲ್ ಕೋ ಸ್ಟಾರ್ ನಮೃತಾ ಗೌಡ (Namratha Gowda), ಫೇವರಿಟ್ ಕಪಲ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಇತರ ಅಭಿಮಾನಿಗಳು ಸಹ ಕಾಮೆಂಟ್ ಮಾಡಿ ಮುದ್ದಾದ ಜೋಡಿ, ಯಾವಾಗಲೂ ಹೀಗೆ ಇರಿ ಎಂದು ಹಾರೈಸಿದ್ದಾರೆ.
ನಾಗಿಣಿ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ನಿನಾದ್ ಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟ ಧಾರಾವಾಹಿ ಆಸೆ (Aase Serial). ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ, ಎಲ್ಲರಿಂದಲೂ ಬೈಸಿಕೊಳ್ಳುವ ಕುಡುಕ ಸೂರ್ಯನ ಜೀವನದಲ್ಲಿ ಅಚಾನಕ್ ಆದ ಮದುವೆ ಏನೆಲ್ಲಾ ಬದಲಾವಣೆ ತರುತ್ತೆ ಅನ್ನೋದು ಸೀರಿಯಲ್ ಕಥೆ. ಸೂರ್ಯನ ನಟನೆಗೆ ಜನರು ಫಿದಾ ಆಗಿದ್ದಾರೆ. ಅವರ ನಟನೆ, ಕಥೆ ನೋಡಿದರೆ, ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳೇನೋ ಎನಿಸುತ್ತೆ. ಅಷ್ಟೊಂದು ಹಚ್ಚಿಕೊಂಡಿದ್ದಾರೆ ಜನ.