MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • 'ಕಬ್ಜ' ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಉಪೇಂದ್ರ!

'ಕಬ್ಜ' ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಉಪೇಂದ್ರ!

ಕಬ್ಜ ಬಿಡುಗಡೆಗೆ ಕೌಂಟ್‌ಡೌನ್‌ ಶುರು... ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೊರಟ ಉಪ್ಪಿ ಆಂಡ್ ಟೀಂ.....

1 Min read
Vaishnavi Chandrashekar
Published : Mar 16 2023, 08:45 AM IST
Share this Photo Gallery
  • FB
  • TW
  • Linkdin
  • Whatsapp
16

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಮಾರ್ಚ್‌ 17ರಂದು ವಿಶ್ವಾದಾದ್ಯಂತ ಬಿಡುಗಡೆ ಆಗುತ್ತಿದೆ. ಬಿಡುಗಡೆ ಒಂದು ದಿನ ಮುನ್ನ ಇಡೀ ಚಿತ್ರತಂಡ ತಿರುಪತಿಗೆ ಭೇಟಿ ನೀಡಿದ್ದಾರೆ. 

26

'ತಿರುಪತಿಗೆ ಹೊರಟಿದ್ದೀವಿ' ಎಂದು ಬರೆದುಕೊಂಡಿರುವ ಉಪ್ಪಿ ವಿಮಾನದಲ್ಲಿ ಕುಳಿತುಕೊಂಡಿರುವ ಸೆಲ್ಫಿ ಹಂಚಿಕೊಂಡಿದ್ದಾರೆ. ಉಪ್ಪಿ ಜೊತೆ ನಿರ್ದೇಶಕ ಆರ್‌ ಚಂದ್ರ, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಹಲವರಿದ್ದಾರೆ.

36

ಕೆಲವು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉಪೇಂದ್ರ, ಕಿಚ್ಚ ಸುದೀಪ್, ತಾನ್ಯಾ ಹೋಪ್, ಆರ್‌ ಚಂದ್ರ,ಶ್ರೀಯಾ ಶರಣ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ನಿರ್ಮಾಪಕ ಕೆಪಿ ಶ್ರೀ ಕಾಂತ್‌ ಭಾಗಿಯಾಗಿದ್ದರು.

46

'ಉಪ್ಪಿ ಕಿಚ್ಚ ಶಿವಣ್ಣ ಸಹಕಾರದಿಂದ ಕಬ್ಜ ಸಿನಿಮಾ ರೆಡಿಯಾಗಿದೆ.  ಕಬ್ಜ ಪೋಸ್ಟರ್‌ ನೋಡಿ ಅಪ್ಪು ಸರ್‌ ನಾನು ಈ ಸಿನಿಮಾದಲ್ಲಿ ಎಲ್ಲಾ ಪ್ರಮೋಷನ್‌ನಲ್ಲಿ ಇರ್ತೀನಿ ಅಂದಿದ್ರು. ಆದರೆ ಅವರಿಲ್ಲ ಅವರ ಆಶೀರ್ವಾದ ನಮ್ಮ ಮೇಲಿದೆ' ಎಂದು ಆರ್‌ ಚಂದ್ರು ಹೇಳಿದ್ದರು.

56

' ಆರ್‌ ಚಂದ್ರು ಒಂದು ರೀತಿ ವಾಮನ. ಈ ವಾಮನ ತುಳಿದಿದ್ದು ಸಮಸ್ಯೆಗಳನ್ನ. ಕಬ್ಜ ಸಿನಿಮಾ ಟೆಕ್ನೀಷಿಯನ್ಸ್‌ ಸಿನಿಮಾ ಎನ್ನಬಹುದು' ಎಂದು ಉಪೇಂದ್ರ ಮಾತನಾಡಿದ್ದರು.

66

'ಕೆಪಿ ಶ್ರೀಕಾಂತ್ ಅವರ ಆಶೀರ್ವಾದ ಇರೋ ಕಡೆ ಎಲ್ಲಾ ಚೆನ್ನಾಗಿ ನಡೆಯುತ್ತದೆ. ಕಬ್ಜ ಸಿನಿಮಾ ನನ್ನ ಲೈಫ್‌ನಲ್ಲಿ ಆಗಾಗ ಬರ್ತಾ ಇರಲಿ. ಚಂದ್ರು ತುಂಬಾ ಒಳ್ಳೆಯ ವ್ಯಕ್ತಿ. ಸಿನಿಮಾ ಕ್ಲಿಪ್ಪಿಂಗ್ ನೋಡಿ ಪಾತ್ರ ಒಪ್ಪಿಕೊಂಡಿಲ್ಲ ಸ್ನೇಹಕ್ಕಾಗಿ ಒಪ್ಪಿಕೊಂಡೆ' ಎಂದು ಸುದೀಪ್ ಹೇಳಿದ್ದರು. 

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಸ್ಯಾಂಡಲ್‌ವುಡ್
ಉಪೇಂದ್ರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved