MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರಕ್ಷಿತ್​ ಶೆಟ್ಟಿಗೆ ಮುಳುವಾಯ್ತು 'ಬ್ಯಾಚುಲರ್​ ಪಾರ್ಟಿ': ಹೈಕೋರ್ಟ್​ನಿಂದ 25 ಲಕ್ಷ ರೂ ದಂಡ! ಆಗಿದ್ದೇನು

ರಕ್ಷಿತ್​ ಶೆಟ್ಟಿಗೆ ಮುಳುವಾಯ್ತು 'ಬ್ಯಾಚುಲರ್​ ಪಾರ್ಟಿ': ಹೈಕೋರ್ಟ್​ನಿಂದ 25 ಲಕ್ಷ ರೂ ದಂಡ! ಆಗಿದ್ದೇನು

ನಟ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. 2012ರ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ MTR ಮ್ಯೂಸಿಕ್ ಸಂಸ್ಥೆಯ ಹಾಡನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಅಸಲಿ ವಿಷ್ಯ ಇಲ್ಲಿದೆ!

2 Min read
Author : Suchethana D
Published : Apr 01 2026, 12:06 PM IST
Share this Photo Gallery
  • FB
  • TW
  • Linkdin
  • Whatsapp
16
ಮತ್ತೊಮ್ಮೆ ರಕ್ಷಿತ್​ ಶೆಟ್ಟಿ ಸದ್ದು
Image Credit : Instagram

ಮತ್ತೊಮ್ಮೆ ರಕ್ಷಿತ್​ ಶೆಟ್ಟಿ ಸದ್ದು

ನಟಿ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಳಿಕ ರಕ್ಷಿತ್​ ಶೆಟ್ಟಿ ಸಕತ್​ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಇವರ ಎಂಗೇಜ್​ಮೆಂಟ್​ ರಶ್ಮಿಕಾ ಜೊತೆ ನಡೆದು ಕೊನೆಗೆ ಮದುವೆ ಮುರಿದುಬಿದ್ದ ಕಾರಣದಿಂದಾಗಿ. ಇದಕ್ಕಾಗಿ ರಕ್ಷಿತ್​ ಶೆಟ್ಟಿ ಅವರ ರಿಯಾಕ್ಷನ್​ ಏನು ಎನ್ನುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ನಡುವೆಯೇ, ಇದೀಗ ದೆಹಲಿ ಹೈಕೋರ್ಟ್​ ನಟನಿಗೆ ಭಾರಿ ಶಾಕ್​ ಕೊಟ್ಟಿದೆ.

26
25 ಲಕ್ಷ ರೂ ದಂಡ
Image Credit : instagram

25 ಲಕ್ಷ ರೂ ದಂಡ

ದೆಹಲಿಯ ಹೈಕೋರ್ಟ್​ Rakshit Shetty ಅವರಿಗೆ 25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದಕ್ಕೆ ಕಾರಣ ಬ್ಯಾಚುಲರ್​ ಪಾರ್ಟಿ ಸಿನಿಮಾ. ಇವರ ವಿರುದ್ಧ ಎಂಟಿಆರ್​ ಮ್ಯೂಸಿಕ್​ ಸಂಸ್ಥೆಯು ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕಾರಣ, 2012ರಲ್ಲಿ ಬಿಡುಗಡೆಯಾಗಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ತಮ್ಮ ಹಾಡನ್ನು ಕದ್ದಿದ್ದಾರೆ ಎನ್ನುವ ಕಾರಣಕ್ಕೆ. ಈ ಚಿತ್ರದ ನಿರ್ಮಾಪಕರು ರಕ್ಷಿತ್​ ಶೆಟ್ಟಿ.

Related Articles

Related image1
Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ
Related image2
'ಸಪ್ತ ಸಾಗರದಾಚೆ ಎಲ್ಲೋ' ಲವ್​ ಸ್ಟೋರಿ Rakshit shetty ರಿಯಲ್​ ಕಥೆನಾ? ನಟ ಏನಂದ್ರು ಕೇಳಿ
36
ಭಾರಿ ದಂಡದ ಹಿನ್ನೆಲೆ
Image Credit : our own

ಭಾರಿ ದಂಡದ ಹಿನ್ನೆಲೆ

ಈ ಹಿನ್ನೆಲೆಯಲ್ಲಿ, ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿಯ ಕೋರ್ಟ್​ ಭಾರಿ ದಂಡ ವಿಧಿಸಿದೆ. ಅತ್ಯಂತ ಚಿಕ್ಕ ಅವಧಿಯವರೆಗೆ ಮಾತ್ರ ಹಾಡನ್ನು ಬಳಸಲಾಗಿದೆ. ಇದು ಅಪರಾಧವಲ್ಲ ಎಂದು ರಕ್ಷಿತ್​ ಶೆಟ್ಟಿ ಪರ ವಕೀಲರ ವಾದವನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಬೇರೆ ಸಿನಿಮಾದಿಂದ ಒಂದು ಚಿಕ್ಕ ದೃಶ್ಯ ಕಾಪಿ ಮಾಡಿದರೂ ಅದು ಕಾಪಿರೈಟ್ ಉಲ್ಲಂಘನೆಯೇ ಆಗುತ್ತದೆ ಎಂದು ದಂಡ ವಿಧಿಸಿದೆ.

46
ದೆಹಲಿಯಲ್ಲಿ ಅರ್ಜಿ ಏಕೆ?
Image Credit : Social Media

ದೆಹಲಿಯಲ್ಲಿ ಅರ್ಜಿ ಏಕೆ?

ಅಷ್ಟಕ್ಕೂ ಕರ್ನಾಟಕದ್ದೇ ಆಗಿರೋ MTR Music Company ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿರುವ ಹಿಂದೆಯೂ ಉದ್ದೇಶವಿದೆ. ಬೆಂಗಳೂರಿನಲ್ಲಿ ಕಂಪೆನಿ ಇದ್ದರೂ, ಹಾಡನ್ನು ಕದ್ದಿರುವ ಬಗ್ಗೆ ಬೆಂಗಳೂರಿನಲ್ಲಿಯೇ FIR ದಾಖಲು ಆಗಿದ್ದರೂ, ಈ ಕಂಪೆನಿಯ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳುವುದು ದೆಹಲಿಯ ಕಂಪೆನಿ. ಲೀಗಲ್​ ಟೀಮ್​ ಇರುವುದು ದೆಹಲಿಯಲ್ಲಿ. ಇದೇ ಕಾರಣಕ್ಕೆ ದೆಹಲಿಯ ಕೋರ್ಟ್​ನಲ್ಲಿ ಕೇಸ್​ ದಾಖಲು ಮಾಡಲಾಗಿತ್ತು.

56
ಹಿಟ್​ ಸಿನಿಮಾಗಳ ರೈಟ್ಸ್​
Image Credit : Asianet News

ಹಿಟ್​ ಸಿನಿಮಾಗಳ ರೈಟ್ಸ್​

ಅಂದಹಾಗೆ, MTR ಮ್ಯೂಸಿಕ್​ ಇದಾಗಲೇ ಕೆಜಿಎಫ್​-2 ನಂಥ ಹಲವು ಹಿಟ್​ ಸಿನಿಮಾಗಳ ರೈಟ್ಸ್​ ಕೂಡ ಪಡೆದಿವೆ. ಇಂಟರೆಸ್ಟಿಂಗ್​ ವಿಷ್ಯ ಏನೆಂದರೆ, ಈ ಕಂಪೆನಿ ಇದಾಗಲೇ ಕಾಪಿರೈಟ್​ ಉಲ್ಲಂಘನೆಯ ಬಗ್ಗೆ ಹಲವು ಕೇಸ್​ಗಳನ್ನು ಹಾಕಿ ಜಯ ಸಾಧಿಸಿದೆ.

66
ರಾಹುಲ್​ ಗಾಂಧಿ ವಿರುದ್ಧವೂ ಕೇಸ್​
Image Credit : our own

ರಾಹುಲ್​ ಗಾಂಧಿ ವಿರುದ್ಧವೂ ಕೇಸ್​

2022ರಲ್ಲಿ ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಿಗೆ ಕೆಜಿಎಫ್ 2 ಸಿನಿಮಾದ ಮ್ಯೂಸಿಕ್ ಬಳಸಿದ್ದಕ್ಕಾಗಿ ಇದೇ ಸಂಸ್ಥೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ಕಾಪಿರೈಟ್ ಕೇಸ್ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಕ್ಷಿತ್ ಶೆಟ್ಟಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಕ್ರೈಮ್ ನ್ಯೂಸ್
ಭಾರತ ಸುದ್ದಿ

Latest Videos
Recommended Stories
Recommended image1
ಬೆಂಗಳೂರಲ್ಲಿ ಪುಟ್ಟ ಗೂಡು ಕಟ್ಟಿದ ನಟಿ ಅಕ್ಷತಾ ಪಾಂಡವಪುರ: ಗೃಹಪ್ರವೇಶದ ಫೋಟೊಗಳು
Recommended image2
Now Playing
ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Recommended image3
ಕಾಲಿಟ್ಟಲ್ಲೆಲ್ಲಾ ಧೂಳು.. ಕಟ್ಟಿದ್ದು ಹೇಗೆ ಕೋಟಿಗಳ ಕೋಟೆ..? ಇದು ರಿಯಲ್ ರಾಕಿ ಭಾಯ್ ರೋಚಕ ಕಥೆ!
Related Stories
Recommended image1
Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ
Recommended image2
'ಸಪ್ತ ಸಾಗರದಾಚೆ ಎಲ್ಲೋ' ಲವ್​ ಸ್ಟೋರಿ Rakshit shetty ರಿಯಲ್​ ಕಥೆನಾ? ನಟ ಏನಂದ್ರು ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved