- Home
- Entertainment
- Sandalwood
- 'ಇನ್ನೆಷ್ಟು ಲಕ್ಷ್ಮೀ ಬರಬೇಕು ತಾಯಿ, ಸ್ವಲ್ಪ ನಮ್ಮನೆಗೂ ಕಳಿಸಿ..' ರಾಧಿಕಾ ಕುಮಾರಸ್ವಾಮಿ ವರಮಹಾಲಕ್ಷ್ಮೀ ಪೂಜೆ ವೈರಲ್!
'ಇನ್ನೆಷ್ಟು ಲಕ್ಷ್ಮೀ ಬರಬೇಕು ತಾಯಿ, ಸ್ವಲ್ಪ ನಮ್ಮನೆಗೂ ಕಳಿಸಿ..' ರಾಧಿಕಾ ಕುಮಾರಸ್ವಾಮಿ ವರಮಹಾಲಕ್ಷ್ಮೀ ಪೂಜೆ ವೈರಲ್!
ನಟಿ ರಾಧಿಕಾ ಕುಮಾರಸ್ವಾಮಿ ಈಗ ಸೋಶಿಯಲ್ ಮೀಡಿಯಾದಿಂದ ಮಾತ್ರವೇ ಆಪ್ತರಾಗಿದ್ದಾರೆ. ಅವರ ಯಾವುದೇ ಸುದ್ದಿಗಳು ಸಿಗೋದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವೇ ಎನ್ನುವಂತಾಗಿದೆ.

ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅದ್ದೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಮೂಲಕ ಲಕ್ಷ್ಮೀ ಕೃಪೆಗೆ ಪಾತ್ರರಾಗಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಎಲ್ಲಿಯೂ ಸುದ್ದಿಯಲ್ಲಿ ಇಲ್ಲದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳು ಶಮಿಕಾ ಕುಮಾರಸ್ವಾಮಿಯ ವಿಚಾರದಲ್ಲಿಯೇ ಬ್ಯುಸಿಯಾಗಿದ್ದಾರೆ.
ಶಮಿಕಾ ಕುಮಾರಸ್ವಾಮಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎನ್ನುವ ಸುದ್ದಿಗಳಿದ್ದರೂ, ಅದಿನ್ನೂ ಖಚಿತವಾಗಿಲ್ಲ.
'ವರಮಹಾಲಕ್ಷ್ಮಿ ದೇವಿಯು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೀಡಿ ಕಾಪಾಡಲಿ.. ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು..' ಎಂದು ಅವರು ಬರೆದುಕೊಂಡಿದ್ದಾರೆ.
ಚಿನ್ನದ ಬಣ್ಣದ ಸೀರೆಯುಟ್ಟು, ಆಕರ್ಷಕ ಆಭರಣಗಳೊಂದಿಗೆ ರಾಧಿಕಾ ಕುಮಾರಸ್ವಾಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಇಡೀ ವಿಡಿಯೋದಲ್ಲಿ ಅವರು ಒಬ್ಬರೇ ಕಾಣುತ್ತಿದ್ದು, ಬಹಳ ಅದ್ದೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ್ದಾರೆ ಎನ್ನುವುದನ್ನು ಅಲಂಕಾರ ನೋಡಿಯೇ ತಿಳಿದುಕೊಳ್ಳಬಹುದಾಗಿದೆ.
ಬೆಳ್ಳಿಯ ಆರತಿ, ಬೆಳ್ಳಿಯ ವಸ್ತುಗಳಿಂದಲೇ ರಾಧಿಕಾ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದ್ದು, ಇದು ನೆಟ್ಟಿಗರ ಗಮನವನ್ನೂ ಸೆಳೆದಿದೆ.
ಶುಕ್ರವಾರ ಹಂಚಿಕೊಂಡಿರುವ ಈ ವಿಡಿಯೋವನ್ನು ಈವರೆಗೂ 57 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಹೆಚ್ಚಿನವರೆಲ್ಲೂ ನಿಮಗೆ ವಯಸ್ಸೇ ಆಗೋದಿಲ್ವಾ ಎಂದು ಕೇಳಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಫೋಟೋ & ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದೀರಿ. ನೀವು ಭೀಮನ ಅಮವಾಸ್ಯೆಯ ಫೋಟೋ ಹಾಕ್ತೀರಿ ಅಂತಾ ನೋಡ್ತಿದ್ದೆ ಎಂದು ಒಬ್ಬರು ಬರೆದಿದ್ದಾರೆ.
ನಿಮ್ಮ ಮನೆಯಲ್ಲಿ ಲಕ್ಷ್ಮೀ ತಾಂಡವವಾಡ್ತಿದ್ದಾಳೆ. ಇನ್ನೆಷ್ಟು ಲಕ್ಷ್ಮೀ ಬರಬೇಕು ತಾಯಿ. ಸ್ವಲ್ಪ ಲಕ್ಷ್ಮಿಯನ್ನ ನಮ್ಮನೆಗೂ ಕಳಿಸಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಹಾಗೇನಾದರೂ ವರಮಹಾಲಕ್ಷ್ಮೀ ಹಬ್ಬದ ಅಲಂಕಾರಕ್ಕೆ ಏನಾದರೂ ಪ್ರಶಸ್ತಿ ನೀಡೋದಾಗಿದ್ದರೆ, ನಿಮಗೆ ಖಂಡಿತಾ ಪ್ರಶಸ್ತಿ ಬರ್ತಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ.
ಈ ವಯಸ್ಸಲ್ಲೂ ನೀವೆಷ್ಟು ಮುದ್ದಾಗಿ ಕಾಣುತ್ತಿದ್ದೀರಿ. ಮತ್ತೆ ನೀವು ಯಾಕೆ ಸಿನಿಮಾಗಳನ್ನು ಮಾಡಬಾರದು ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಇನ್ನು ವಿಡಿಯೋದಲ್ಲಿ ತೋರಿಸಿರುವ ಹಾಗೆ ರಾಧಿಕಾ ಕುಮಾರಸ್ವಾಮಿ ಭರ್ಜರಿಯಾಗಿ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡಿದ್ದಾರೆ ಅನ್ನೋದು ಅಲಂಕಾರದಿಂದಲೇ ಕಾಣಬಹುದಾಗಿದೆ.
ಹಣ್ಣು, ಹೂವುಗಳೊಂದಿಗೆ ಮಾತ್ರವಲ್ಲದೆ, ಬೆಳ್ಳಿಯ ದೀಪಗಳು, ಸೀರೆ, ವಿಶೇಷ ಸಿಹಿ ತಿನಿಸುಗಳನ್ನು ದೇವರ ಮುಂದೆ ಇಟ್ಟು ರಾಧಿಕಾ ಕುಮಾರಸ್ವಾಮಿ ಸಂಭ್ರಮಿಸಿದ್ದಾರೆ.
ಇನ್ನು ಸಿನಿಮಾದ ವಿಚಾರವಾಗಿ ಬರೋದಾದರೆ, ರಾಧಿಕಾ ಕುಮಾರಸ್ವಾಮಿ ಅಜಗ್ರಥ ಹೆಸರಿನ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಬಾಲಿವುಡ್ನ ಶ್ರೇಯಸ್ ತಲ್ಪಾಡೆ ನಟಿಸಿದ್ದಾರೆ. ಕಳೆದ ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.