MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ನೆಪೋಟಿಸಂ ಅಣ್ಣಾವ್ರ ಮನೆಯಿಂದ್ಲೇ ಶುರುವಾಯ್ತಲ್ಲ, ಶಿವಣ್ಣಂಗೆ ಯಾಕೆ ಪ್ರಶ್ನೆ ಕೇಳಲ್ಲ: ಸುದೀಪ್​ ಗರಂ

ನೆಪೋಟಿಸಂ ಅಣ್ಣಾವ್ರ ಮನೆಯಿಂದ್ಲೇ ಶುರುವಾಯ್ತಲ್ಲ, ಶಿವಣ್ಣಂಗೆ ಯಾಕೆ ಪ್ರಶ್ನೆ ಕೇಳಲ್ಲ: ಸುದೀಪ್​ ಗರಂ

'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಅಳಿಯ ಸಂಚಿತ್ ಕುರಿತ ನೆಪೋಟಿಸಂ ಪ್ರಶ್ನೆಗೆ ನಟ ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಣ್ಣಾವ್ರ ಕಾಲದಿಂದಲೂ ಇದ್ದು,  ಜನರ ಒಪ್ಪಿಗೆ ಮಾತ್ರ ಇಲ್ಲಿ ಮುಖ್ಯವಾಗುತ್ತದೆ ಹೊರತು ನೆಪೋಟಿಸಂ ಪದಕ್ಕೆ ಇಲ್ಲಿ ಅರ್ಥವಿಲ್ಲ ಎಂದರಯ

2 Min read
Author : Suchethana D
Published : Jun 06 2026, 04:27 PM IST
Share this Photo Gallery
  • FB
  • TW
  • Linkdin
  • Whatsapp
16
ನೆಪೋಟಿಸಂ: ಸುದೀಪ್​ ಗರಂ
Image Credit : Social Media

ನೆಪೋಟಿಸಂ: ಸುದೀಪ್​ ಗರಂ

ನೆಪೋಟಿಸಂ ಎನ್ನುವ ಮಾತು ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಹಿಂದಿನಿಂದಲೂ ಕೇಳಿಕೊಂಡಿರುವ ಬಂದಿರುವ ಮಾತು. ಮನೆಯಲ್ಲಿ ಅಪ್ಪ-ಅಮ್ಮ ನಟ, ನಟಿಯರಾಗಿದ್ದರೆ ಮಕ್ಕಳಿಗೂ ಸುಲಭದಲ್ಲಿ ಈ ಇಂಡಸ್ಟ್ರಿಯಲ್ಲಿ ಅವಕಾಶ ಸಿಗುತ್ತದೆ, ಬೇರೆಯವರು ಬೆಳೆಯುವುದು ಕಷ್ಟ ಎನ್ನುವ ಮಾತಿದು. ಇದೀಗ ಇದೇ ಮಾತು ಕಿಚ್ಚ ಸುದೀಪ್​ ಅವರಿಗೂ ಎದುರಾದಾಗ ಸ್ವಲ್ಪ ಖಾರವಾಗಿಯೇ ನುಡಿದಿದ್ದಾರೆ ಸುದೀಪ್​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
'ಮ್ಯಾಂಗೋ ಪಚ್ಚ'ದಲ್ಲಿ ಸುದೀಪ್​ ಅಕ್ಕನ ಮಗ
Image Credit : Social Media

'ಮ್ಯಾಂಗೋ ಪಚ್ಚ'ದಲ್ಲಿ ಸುದೀಪ್​ ಅಕ್ಕನ ಮಗ

ಅಷ್ಟಕ್ಕೂ, ಸುದೀಪ್ ಅಕ್ಕನ ಮಗ ಸಂಚಿತ್ 'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಪ್ರಚಾರದ ಸಮಯದಲ್ಲಿ, ಸುದೀಪ್​ ಅವರಿಗೆ ಪತ್ರಕರ್ತರು ನೆಪೋಟಿಸಂ ಬಗ್ಗೆ ಪ್ರಶ್ನೆ ಕೇಳಿದಾಗ, ಸಹಜವಾಗಿ ಇದು ಸುದೀಪ್​ ಅವರನ್ನು ಕೆರಳಿಸಿದೆ.

Related Articles

Related image1
Bhagyalakshmi Serialನಿಂದ ಜೈಲು ಪಾಲಾಗಿದ್ದ ತಾಂಡವ್​ ದಿಢೀರ್​ ಪ್ರತ್ಯಕ್ಷ: ನೇರ ಪ್ರಸಾರದಲ್ಲಿ ನಟ ಹೇಳಿದ್ದೇನು
Related image2
ಸೀರೆಯುಟ್ಟ ಸೀರಿಯಲ್​ ನಾಯಕಿಯರು ಅದೇನು ತಿಂತಾರೆ? ಕೈ-ಕಾಲು ಎತ್ತಿದ್ರೆ ರೌಡಿಗಳು ಮಟಾಷ್​; ಭಾರಿ ಚರ್ಚೆ
36
 ಶಿವರಾಜ್​ ಕುಮಾರ್​ ಅವರಿಗೂ ಕೇಳ್ತೀರಾ?
Image Credit : Instagram

ಶಿವರಾಜ್​ ಕುಮಾರ್​ ಅವರಿಗೂ ಕೇಳ್ತೀರಾ?

ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್​ ಕುಮಾರ್​ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್​ಕುಮಾರ್​ ಅವರ ಮಕ್ಕಳಿಗೂ ಕೇಳಬೇಕು, ಅಂಬಾನಿ ಅವರಿಗೂ ಕೇಳಬೇಕು. ನೀವು ಹಾಗೆ ಯಾಕೆ ಮಾಡಲ್ಲ ಎಂದ ಪ್ರಶ್ನಿಸಿದ್ದಾರೆ.

46
ಕನ್ನಡ ಜನ ಇಷ್ಟಪಟ್ಟರೆ ಮುಗೀತು
Image Credit : Social Media

ಕನ್ನಡ ಜನ ಇಷ್ಟಪಟ್ಟರೆ ಮುಗೀತು

ಬಾಂಬೆನಲ್ಲಿ ಹುಟ್ಟಿರೋ ಯಾವುದೋ ಒಂದು ಶಬ್ದ (ನೆಪೋಟಿಸಂ) ಇಲ್ಲಿ ಹೇಳೋದು ತಪ್ಪು. ಅಣ್ಣಾವ್ರ ಕಾಲದಿಂದಲೇ ಇದು ಇದೆ. ಯಾರ ಮಕ್ಕಳಿಗೆ ಕಲೆ ಒಲಿಯುತ್ತದೆಯೋ, ಯಾರನ್ನು ಜನರು ನೋಡಲು ಇಷ್ಟಪಡುತ್ತಾರೋ ಅವರು ಇಂಡಸ್ಟ್ರಿಗೆ ಬರುತ್ತಾರೆ. ಕನ್ನಡ ಜನ ಇಷ್ಟಪಟ್ಟರೆ ಮುಗೀತು. ಇದು ಯಾರ ಜಾಗ ಬೇಕಾದರೂ ಆಗಬಹುದು ಎಂದು ತಮ್ಮ ಮಾತಿಗೆ ಸುದೀಪ್​ ಸ್ಪಷ್ಟನೆ ನೀಡಿದ್ದಾರೆ.

56
ಶಿವಣ್ಣ, ಅಪ್ಪು ಸ್ಫೂರ್ತಿ
Image Credit : Colors

ಶಿವಣ್ಣ, ಅಪ್ಪು ಸ್ಫೂರ್ತಿ

ಇವತ್ತು ಶಿವಣ್ಣ ಮೇರು ನಟನಾಗಿ ಬೆಳೆದಿದ್ದಾರೆ. ನಾವು ಅವರಿಂದ ಸ್ಫೂರ್ತಿ ಪಡೆದು ಬೆಳೆದವರು. ಅಪ್ಪು ಅವರು ಎಂತಹ ಅದ್ಭುತ ಪ್ರತಿಭೆ ಎನ್ನುವುದು ಎಲ್ಲರಿಗೂ ಗೊತ್ತು. ಇವುಗಳಿಗೆ ನೆಪೋಟಿಸಂ ಅನ್ನೋದು ಬರಬಾರದು, ಅವರಿಂದ ಸ್ಫೂರ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ ಎಂದು ಸುದೀಪ್​ ಹೇಳಿದ್ದಾರೆ.

66
ನನ್ನ ಮನೆಯಿಂದ ಬಂದಿರೋದು ಇವರು
Image Credit : Asianet News

ನನ್ನ ಮನೆಯಿಂದ ಬಂದಿರೋದು ಇವರು

ನನ್ನ ಮನೆಯಿಂದ ಸಂಚಿತ್ ಬಂದಿದ್ದಾನೆ. ಅವನನ್ನು ಬಿಟ್ಟು ಅಕ್ಕನ ಮಕ್ಕಳು, ನನ್ನ ಕಸೀನ್ಸ್ ಮಕ್ಕಳು ಸಾಕಷ್ಟು ಜನ ಇದ್ದಾರೆ. ಯಾರು ಚಿತ್ರರಂಗಕ್ಕೆ ಬಂದಿಲ್ಲ. ಮಗಳು ಚೆನ್ನಾಗಿ ಹಾಡ್ತಾಳೆ, ಹಾಗಾಗಿ ಬಂದಿದ್ದಾಳೆ. ಸಂಚಿತ್‌ಗೆ ನಟನೆಯಲ್ಲಿ ಆಸಕ್ತಿಯಿದೆ, ಬಂದಿದ್ದಾನೆ. ನೆಪೋಟಿಸಂ ಎನ್ನುವ ಪದ ಸುಮಾರು ವರ್ಷಗಳಿಂದ ನಮಗೆ ಸೂಟ್ ಆಗಲ್ಲ. ಕೆಲವರಿಗೆ ಆ ಪದದ ಅರ್ಥ ಕೂಡ ಗೊತ್ತಿಲ್ಲ. ಗೊತ್ತಿರುವುದು ಕಲೆ ಮಾತ್ರ ಎಂದು ತೀಕ್ಷ್ಮ ಉತ್ತರ ನೀಡಿದ್ದಾರೆ ಕಿಚ್ಚ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಿಚ್ಚ ಸುದೀಪ್
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
Latest Videos
Recommended Stories
Recommended image1
'ಮೊಗ್ಗಿನ ಮನಸ್ಸು' ನಟಿ ಬಾಳಲ್ಲಿ ಭಾರೀ ಬಿರುಗಾಳಿ.. ಮುರಿದುಬಿತ್ತಾ ಮದುವೆ? ತಾಳ ತಪ್ಪಿದ್ದು ಎಲ್ಲಿ?
Recommended image2
ಚಿಂಟು ಅಣ್ಣನ ಹುಟ್ಟುಹಬ್ಬಕ್ಕೆ ಪ್ರಗತಿ ಶೆಟ್ಟಿ ಸ್ಪೆಷಲ್ ವಿಶ್… ಇವತ್ತಾದ್ರೂ ಸಿನಿಮಾ Update ಕೊಡ್ತಾರ ಶೆಟ್ರು?
Recommended image3
ಮತ್ತೆ ಶುರುವಾಯ್ತು ಕಾವೇರಿ ಕದನ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ತಮಿಳುನಾಡು ಸಿಎಂ ವಿಜಯ್?
Related Stories
Recommended image1
Bhagyalakshmi Serialನಿಂದ ಜೈಲು ಪಾಲಾಗಿದ್ದ ತಾಂಡವ್​ ದಿಢೀರ್​ ಪ್ರತ್ಯಕ್ಷ: ನೇರ ಪ್ರಸಾರದಲ್ಲಿ ನಟ ಹೇಳಿದ್ದೇನು
Recommended image2
ಸೀರೆಯುಟ್ಟ ಸೀರಿಯಲ್​ ನಾಯಕಿಯರು ಅದೇನು ತಿಂತಾರೆ? ಕೈ-ಕಾಲು ಎತ್ತಿದ್ರೆ ರೌಡಿಗಳು ಮಟಾಷ್​; ಭಾರಿ ಚರ್ಚೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved