MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಹೊಸಬ್ರಿಗೆ ರಾಯಲ್‌ ಸೆಲ್ಯೂಟ್‌ ಮಾಡಿದ್ರಷ್ಟೇ ಉಳಿಗಾಲ: ಯೋಗರಾಜ್‌ ಭಟ್‌

ಹೊಸಬ್ರಿಗೆ ರಾಯಲ್‌ ಸೆಲ್ಯೂಟ್‌ ಮಾಡಿದ್ರಷ್ಟೇ ಉಳಿಗಾಲ: ಯೋಗರಾಜ್‌ ಭಟ್‌

ಪೃಥ್ವಿ ಶಾಮನೂರು ಮತ್ತು ಯಶ ಶಿವಕುಮಾರ್ ಅಭಿನಯಿಸಿರುವ ಪದವಿ ಪೂರ್ವ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಯೋಗರಾಜ್‌ ಭಟ್‌ ಮತ್ತು ನಟ ಜಗ್ಗೇಶ್ ಭಾಗಿಯಾಗಿದ್ದರು:ಫೋಟೋಕೃಪೆ: ಮನು

2 Min read
Vaishnavi Chandrashekar
Published : Dec 08 2022, 10:03 AM IST
Share this Photo Gallery
  • FB
  • TW
  • Linkdin
  • Whatsapp
18

‘ಪದವಿ ಪೂರ್ವ ಸಿನಿಮಾದಲ್ಲಿ 16 ರಿಂದ 18 ವರ್ಷದೊಳಗಿನ ಯುವ ಮನಸ್ಸುಗಳ ಕಥೆ ಇದೆ. ಎಲ್ಲ ಗೊತ್ತಿದೆ ಅಂದುಕೊಳ್ಳುವ, ಏನೂ ಮಾಡಲಾಗದ ವಯಸ್ಸದು. ಅಂಥವರ ಬಗ್ಗೆ ಸಿನಿಮಾ ಮಾಡಿದ್ದಾರೆ ಹೊಸ ನಿರ್ದೇಶಕ ಹರಿಪ್ರಸಾದ್‌. ಈತ ನ್ಯೂಯಾರ್ಕ್ ಫಿಲಂ ಅಕಾಡೆಮಿ ಪದವೀಧರ'

28

'ದೊಡ್ಡ ಹುದ್ದೆಯಲ್ಲಿದ್ದಾತ ನನ್ನ ಅಸಿಸ್ಟೆಂಟ್‌ ಆಗ್ತೀನಿ ಅಂತ ಬಂದಾಗ ಮುಚ್ಕೊಂಡು ಹೋಗ್ಬಿಡೋ ಅಂತ ಹೇಳಿದ್ದೆ. ಕ್ರಮೇಣ ಈತನ ಪ್ರತಿಭೆ ಕಂಡು ದಂಗಾಗಿದ್ದೆ. ಈಗ ನೋಡಿದರೆ ಈತ ಇಂಡಸ್ಟ್ರಿಗೆ ಕಾರ್ನರ್‌ ಸೈಟ್‌ ಆಗೋ ಭರವಸೆ ಕಾಣ್ತಿದೆ. ಹೊಸಬ್ರಿಗೆ ರಾಯಲ್‌ ಸೆಲ್ಯೂಟ್‌ ಮಾಡಿದ್ರಷ್ಟೇ ನಮಗೆ ಉಳಿಗಾಲ. ಇಲ್ಲಾಂದ್ರೆ ಯಾವುದೂ ಉದ್ಧಾರ ಆಗಲ್ಲ.’

38

ತಾನು ನಿರ್ಮಿಸುತ್ತಿರುವ ‘ಪದವಿಪೂರ್ವ’ ಸಿನಿಮಾದ ಟೀಸರ್‌ ಲಾಂಚ್‌ನಲ್ಲಿ ಯೋಗರಾಜ್‌ ಭಟ್‌ ಆಡಿರುವ ಮಾತುಗಳಿವು. ಈ ಸಿನಿಮಾದ ನಾಯಕಿ ಅಂಜಲಿ ಬಗೆಗೂ ಇಂಟರೆಸ್ಟಿಂಗ್‌ ವಿಚಾರವನ್ನು ಭಟ್ಟರು ಹೇಳಿದರು.

48

ಅಸಿಸ್ಟೆಂಟ್‌ ಡೈರೆಕ್ಟರ್‌ ಆಗ್ತೀನಿ ಅಂತ ಅಂಜಲಿ ನಮ್ಮ ಆಫೀಸಿಗೆ ಬಂದ ದಿನ ಅಸಿಸ್ಟೆಂಟ್‌ ಡೈರೆಕ್ಟರ್ಸ್‌ ಕಡಿಮೆ ಜನ ಇದ್ದರು. ಈಕೆ ಬರ್ತಾಳೆ ಅಂತ ಗೊತ್ತಾದದ್ದೇ ಮರುದಿನ ಹನ್ನೆರಡು ಜನ ಅಸಿಸ್ಟೆಂಟ್‌ ಡೈರೆಕ್ಟರ್ಸ್‌ ಹಾಜರ್‌. ಆಗಲೇ ಅಂದುಕೊಂಡೆ, ಈಕೆಯಲ್ಲೇನೋ ಅಟ್ರಾಕ್ಷನ್‌ ಇದೆ ಅಂತ. ಹೀಗಾಗಿ ನಟನೆಗೆ ಕರೆದೆ’ ಎಂದರು.

58

ಟೀಸರ್‌ ಲಾಂಚ್‌ ಮಾಡಿ ತಮ್ಮ ಎಂದಿನ ಹಾಸ್ಯದಲ್ಲಿ ಮಾತನಾಡಿದ ಜಗ್ಗೇಶ್‌, ‘ಇಬ್ಬರು ಮೂಗರು ಮದುವೆ ಆದರೆ ಲೈಫು ಸೂಪರ್‌. ಮಾತೇ ಮರೆತಂತೆ ಕೆಲಸ ಮಾಡುವ ನಿರ್ದೇಶಕ ಹರಿಪ್ರಸಾದ್‌ ಮತ್ತು ಸಿನಿಮಾಟೋಗ್ರಫರ್‌ ಸಂತೋಷ್‌ ರೈ ಪಾತಾಜೆ ನೋಡಿದ್ರೆ ಈ ಸಿನಿಮಾನೂ ಸೂಪರ್‌ ಅನಿಸುತ್ತಿದೆ.

68

ಹದಿಹರೆಯದ ವಯಸ್ಸೇ ಚಂದ. ಆ ವಯಸ್ಸಲ್ಲಿ ನಾನಿದ್ದಾಗ ನನ್ನ ತಂದೆಗೇನಾದ್ರೂ ಕೊಲೆ ಮಾಡುವ ಚಾನ್ಸ್‌ ಸಿಕ್ಕಿದ್ದಿದ್ರೆ ಸುಮಾರು 200 ಸಲ ಕೊಲೆಯಾಗ್ತಿದ್ದೆ. ಅಂಥಾ ಭಂಡನಾಗಿದ್ದೆ. ಯೋಗರಾಜ್‌ ಭಟ್ಟರಂಥಾ ಗುರುಗಳ ಮಾರ್ಗದರ್ಶನ ಸಿಕ್ಕ ಈ ಹೊಸ ತಂಡದವರು ಅದೃಷ್ಟವಂತರು’ ಅಂದರು.

78

ನಿರ್ದೇಶಕ ಹರಿಪ್ರಸಾದ್‌, ‘ಇದು 1996-97ರಲ್ಲಿ ನಡೆಯೋ ಕಥೆ. ಫ್ರೆಂಡ್‌ಶಿಪ್‌, ಲವ್‌ ಸ್ಟೋರಿ ಇದರಲ್ಲಿದೆ. ಇದನ್ನು ನೋಡುವ ಪ್ರೇಕ್ಷಕರು ತಮ್ಮ ಹದಿಹರೆಯದ ದಿನಗಳಿಗೆ ಹೋಗುವ ವಿಶ್ವಾಸವಿದೆ’ ಎಂದರು.

88

ನಿರ್ಮಾಪಕ ರವಿ ಶಾಮನೂರ್‌, ನಾಯಕ ಪೃಥ್ವಿ ಶಾಮನೂರು, ನಾಯಕಿಯರಾದ ಯಶ ಶಿವಕುಮಾರ್‌, ಅಂಜಲಿ, ಕಲಾವಿದ ನಟರಾಜ್‌, ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಮೊದಲಾದವರಿದ್ದರು.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಸ್ಯಾಂಡಲ್‌ವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved