MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಸುಪ್ರೀಂ ತೀರ್ಪಿನ ಬಳಿಕ ಆತ್ಮ*ಹತ್ಯೆಗೆ ಯತ್ನಿಸಿದ್ರಾ ದರ್ಶನ್​? ಆತಂಕದಲ್ಲಿ ಫ್ಯಾನ್ಸ್​- ಡಿಜಿಪಿ ಏನು ಹೇಳಿದ್ರು

ಸುಪ್ರೀಂ ತೀರ್ಪಿನ ಬಳಿಕ ಆತ್ಮ*ಹತ್ಯೆಗೆ ಯತ್ನಿಸಿದ್ರಾ ದರ್ಶನ್​? ಆತಂಕದಲ್ಲಿ ಫ್ಯಾನ್ಸ್​- ಡಿಜಿಪಿ ಏನು ಹೇಳಿದ್ರು

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದು, ದರ್ಶನ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. 

1 Min read
Author : Suchethana D
Published : May 20 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
16
ಸುಪ್ರೀಂಕೋರ್ಟ್​ನಲ್ಲಿ ಸಿಗಲಿಲ್ಲ ಜಾಮೀನು
Image Credit : Asianet News

ಸುಪ್ರೀಂಕೋರ್ಟ್​ನಲ್ಲಿ ಸಿಗಲಿಲ್ಲ ಜಾಮೀನು

ರೇಣುಕಾಸ್ವಾಮಿ ಕೇಸ್​ನಲ್ಲಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿ ಇರುವ ನಟ ದರ್ಶನ್​ಗೆ ಮೊನ್ನೆ ಸುಪ್ರೀಂಕೋರ್ಟ್​ ಜಾಮೀನು ನಿರಾಕರಿಸಿದ್ದು, ಮತ್ತೊಂದು ವರ್ಷ ಜೈಲಿನಲ್ಲಿಯೇ ಕಳೆಯುವಂತಾಗಿದೆ. ದರ್ಶನ್​ ಅವರು ಇದಾಗಲೇ ತಮಗೆ ನೀಡ್ತಿರೋ ಸೌಲಭ್ಯ ಸರಿಯಿಲ್ಲ ಎಂದು ಕೋರ್ಟ್​ ಮೊರೆ ಹೋಗಿದ್ದರು. ಅವರಿಗೆ ನೀಡ್ತಿರೋ ಐಷಾರಾಮಿ ವ್ಯವಸ್ಥೆ ಕುರಿತು ಪೊಲೀಸ್​ ಇಲಾಖೆ ಕೋರ್ಟ್​ಗೆ ಮಾಹಿತಿ ನೀಡಿತ್ತು.

Add Asianetnews Kannada as a Preferred SourcegooglePreferred
26
ದರ್ಶನ್​ ಆತ್ಮ*ಹತ್ಯೆಗೆ ಯತ್ನ?
Image Credit : Asianet News

ದರ್ಶನ್​ ಆತ್ಮ*ಹತ್ಯೆಗೆ ಯತ್ನ?

ಈ ಜಟಾಪಟಿಯ ನಡುವೆಯೇ, ಮೊನ್ನೆ ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಖಿನ್ನತೆಗೆ ಜಾರಿದ್ದ ದರ್ಶನ್​ ಆತ್ಮ*ಹತ್ಯೆಗೆ ಯತ್ನಿಸಿದರು ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಇದು ದರ್ಶನ್​ ಅಭಿಮಾನಿಗಳನ್ನು ಶಾಕ್​ಗೊಳಿಸಿತು. ಆತಂಕದಿಂದ ಕೆಲವು ಅಭಿಮಾನಿಗಳು ಜೈಲಿಗೆ ಹೋಗಿದ್ದರು ಎಂದೂ ಹೇಳಲಾಗುತ್ತಿದೆ.

Related Articles

Related image1
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
Related image2
ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು
36
ಡಿಜಿಪಿ ಸ್ಪಷ್ಟನೆ
Image Credit : Asianet News and Instagram

ಡಿಜಿಪಿ ಸ್ಪಷ್ಟನೆ

ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ತಿಳಿದ ಬಳಿಕ ಇದೀಗ ಖುದ್ದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಡಿಜಿಪಿ ಅಲೋಕ್‌ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದೊಂದು ಶುದ್ಧ ಸುಳ್ಳು ಸುದ್ದಿ. ಯಾರೂ ಭಯಪಡಬೇಡಿ ಎಂದಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಇದು ಗಾಳಿಸುದ್ದಿ ಎಂದಿದ್ದಾರೆ ಡಿಜಿಪಿ ಅಲೋಕ್‌ ಕುಮಾರ್. ಅಂತಹ ಯಾವುದೇ ಘಟನೆ ನಡೆದಿಲ್ಲ. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ದರ್ಶನ್‌ ಚೆನ್ನಾಗಿದ್ದಾರೆ ಎಂದಿದ್ದಾರೆ.

46
ವಿವಾಹ ವಾರ್ಷಿಕೋತ್ಸವ
Image Credit : Asianet News

ವಿವಾಹ ವಾರ್ಷಿಕೋತ್ಸವ

ಇದಾಗಲೇ ಮೊನ್ನೆ ದರ್ಶನ್​ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವದ ನಿಮಿತ್ತ ವಿಜಯಲಕ್ಷ್ಮಿ ಅವರ ಮನವಿಯ ಮೇರೆಗೆ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ನಟ ದರ್ಶನ್ ಅವರು ಪತ್ನಿ ಹಾಗೂ ಮಗನನ್ನು ಅಪ್ಪಿಕೊಂಡು ಭಾವುಕರಾಗಿದ್ದರು

56
ವಿಜಯಲಕ್ಷ್ಮೀ ಮನವಿ
Image Credit : Asianet News

ವಿಜಯಲಕ್ಷ್ಮೀ ಮನವಿ

. ಪತ್ನಿ ವಿಜಯಲಕ್ಷ್ಮಿ ಸಹ ಕಾರಾಗೃಹ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದು ಪತಿ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದರು. ಈ ಮನವಿ ಸ್ಪಂದಿಸಿದ ಜೈಲು ಅಧಿಕಾರಿಗಳು ಇಂದು ಪತ್ನಿ ಹಾಗೂ ಮಗನ ಭೇಟಿಗೆ ಅವಕಾಶ ಕಲ್ಪಿಸಿದ್ದರು.

66
ಪತ್ನಿ-ಮಗನ ಭೇಟಿಗೆ ಅವಕಾಶ
Image Credit : ‍‍X

ಪತ್ನಿ-ಮಗನ ಭೇಟಿಗೆ ಅವಕಾಶ

ದರ್ಶನ್ ಕೂಡ ಪತ್ನಿ ಹಾಗೂ ಪುತ್ರನ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿ ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೈಲಿನ ನಿಯಮಾನುಸಾರ ಈ ಅನುವು ಮಾಡಿಕೊಡಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರೇಣುಕಾಸ್ವಾಮಿ ಪ್ರಕರಣ
ದರ್ಶನ್ ತೂಗುದೀಪ
ಪವಿತ್ರಾ ಗೌಡ
ವಿಜಯಲಕ್ಷ್ಮಿ ದರ್ಶನ್
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ

Latest Videos
Recommended Stories
Recommended image1
Amruthadhaare Serial ಭೂಮಿಕಾ ಕೈಯಲ್ಲೆಲ್ಲಾ ರಕ್ತ! ​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​- ಏನಿದು ಟ್ವಿಸ್ಟ್​
Recommended image2
Kishore Mother Accident: 'ಅಮ್ಮ ಚೆನ್ನಾಗಿದ್ದಾರೆ' ಎಂದ ಕಿಶೋರ್, ನಡೆದ ಇಡೀ ಘಟನೆಗೆ ಕಾರಣ-ಕ್ಲಾರಿಟಿ ಕೊಟ್ಟಿದ್ದಾರೆ ನೋಡಿ!
Recommended image3
Now Playing
ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
Related Stories
Recommended image1
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
Recommended image2
ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved