MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಯುದ್ಧದ ಸಮಯದಲ್ಲಿ ಸಮಾಜದ ಸೀಕ್ರೆಟ್ ಅನಾವರಣ; ಇವೆಲ್ಲಕ್ಕೂ ಕೊನೆ ಎಂದು..?!

ಯುದ್ಧದ ಸಮಯದಲ್ಲಿ ಸಮಾಜದ ಸೀಕ್ರೆಟ್ ಅನಾವರಣ; ಇವೆಲ್ಲಕ್ಕೂ ಕೊನೆ ಎಂದು..?!

ಕಷ್ಟ ಸುಖದ ನಡುವೆಯೂ ಸಹ ಆಚಾರ , ಪದ್ಧತಿ , ಸಂಪ್ರದಾಯದ ಕಡೆ ಎಲ್ಲರ ಗಮನ. ಭೂತ ಕೋಲದ ಆಚರಣೆ ಬದುಕು ಶೇಖರ ಹಾಗೂ ಅವನ ಕುಟುಂಬದು. ಬಡತನದ ಜೀವನದಲ್ಲಿ ನೆಮ್ಮದಿ ಹುಡುಕಾಟ. ಇದರ ನಡುವೆ ಶೇಖರ ಹಾಗೂ ಗುಣಪಾಲ್ ನಡುವೆ ವೈಮನಸ್ಯ..

3 Min read
Author : Shriram Bhat
Published : May 10 2025, 03:41 PM IST
Share this Photo Gallery
  • FB
  • TW
  • Linkdin
  • Whatsapp
112

ಸಾಮಾನ್ಯವಾಗಿ ಅಧಿಕಾರ , ಹಣ ಇದ್ದವನ ಬಳಿ ದರ್ಪ, ಅಹಂಕಾರ ಇದ್ದೇ ಇರುತ್ತೆ. ಆದರೆ ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ಮೃಗದಂತೆ ವರ್ತಿಸುವ ವ್ಯಕ್ತಿಯ ಮುಂದೆ ಜನಸಾಮಾನ್ಯರ ಬದುಕು ಕಷ್ಟವೇ ಸರಿ. 

212

ಅಂತದ್ದೇ ಒಂದು ಕಥಾನಕದೊಂದಿಗೆ ಹಳ್ಳಿಯ ಗ್ರಾಮ ಪಂಚಾಯಿತಿಯ ಅಧಿಕಾರಿಯ ನಡುವೆ ಜನರ ಬದುಕು ಬವಣೆಯ ಸುತ್ತ ಬೆಸೆದಿರುವ ನೋವಿನ ತಳಮಳ ಹೇಗೆಲ್ಲಾ ಸಾಗುತ್ತದೆ ಎಂಬುವುದನ್ನು ಪರದೆಯ ಮೇಲೆ  ತಂದಿರುವಂತಹ ಚಿತ್ರವೇ "ದಸ್ಕತ್". 
 

Related Articles

Related image1
ಆಪರೇಷನ್ ಸಿಂದೂರ ಕೇವಲ ಪ್ರತ್ಯುತ್ತರವಲ್ಲ, ಪ್ರಬಲ ಸಂದೇಶ: ಮೋದಿಗೆ ಪತ್ರ ಬರೆದ ಕಿಚ್ಚ ಸುದೀಪ್
Related image2
ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿದ್ದ Aamir Khan! ಈ ಪಾಕಿಸ್ತಾನ ಬೆಂಬಲಿತ ರಾಷ್ಟ್ರಕ್ಕೆ ಕಾಲಿಡಲ್ಲ ಎಂದ ಗಾಯಕ
312

ದಟ್ಟ ಅರಣ್ಯದ ನಡುವಿರುವ  ಕೇಪುಲಪಲ್ಕೆ ಎಂಬ ಊರು. ಆ ಗ್ರಾಮದ ಜನರ ಬದುಕು ಸುಖಕ್ಕಿಂತ ಸಮಸ್ಯೆ , ಒದ್ದಾಟವೇ ಹೆಚ್ಚು. ಸರ್ಕಾರ ನೀಡುವ ಸೌಲತ್ತಿಗಾಗಿ ಕಾಯುವ ಇವರ ಬದುಕಿಗೆ ಗ್ರಾಮ ಪಂಚಾಯತಿ ಆಧಾರ. ಆದರೆ ಗುಣಪಾಲ ( ಯುವ ಶೆಟ್ಟಿ) ಗ್ರಾಮ ಪಂಚಾಯತಿಯ ಅಧಿಕಾರಿ  ಸದಾ ದರ್ಪದ ನಡೆ, ತನ್ನ ವೈರಿಯನ್ನ ಕೊಲ್ಲುವಷ್ಟು ದ್ವೇಷ,  ಕಚೇರಿಯಲ್ಲಿ ಯಾವುದೇ ಕೆಲಸಕ್ಕೆ ಸಹಿ , ಮೊಹರು , ರೇಷನ್ ಕಾರ್ಡ್ ಗೆ ಹಣ ಕೊಟ್ಟವರಿಗೆ ಮಾತ್ರ ಅನುಕೂಲದ ದಾರಿ. 

412

ಗ್ರಾಮದ ಜನರನ್ನ ಎದುರಿಸುತ್ತ ತಾನು ತನ್ನ ಮಗಳು ಬಾಗಿ (ಭವ್ಯ ಪೂಜಾರಿ) ಯೊಂದಿಗೆ ವಾಸ. ಮನೆ ಬಾಗಿಲಿಗೆ ಯಾರನ್ನೂ ಸೇರಿಸಿದವನ ಮನೆ ಕಾಯಲು ನಾಯಿ ಸಾಕುತ್ತಾನೆ. ಬಾಲ್ಯದಿಂದಲೂ ಶೇಖರ , ಕೇಶವ , ಬಾಡು  , ದೀಪು ಸೇರಿದಂತೆ ಎಲ್ಲಾ ವಯಸ್ಸಿನ ಗೆಳೆಯರ ಗುಂಪು  ಬೆಳೆದ ತಮ್ಮ ತಮ್ಮ ಕಾಯಕದ ಜೊತೆಗೆ ಜೀವನ ಸಾಗುತ್ತಾರೆ. 
 

512

ಕಷ್ಟ ಸುಖದ ನಡುವೆಯೂ ಸಹ ಆಚಾರ , ಪದ್ಧತಿ , ಸಂಪ್ರದಾಯದ ಕಡೆ ಎಲ್ಲರ ಗಮನ. ಭೂತ ಕೋಲದ ಆಚರಣೆ ಬದುಕು ಶೇಖರ ( ದೀಕ್ಷಿತ್ ) ಹಾಗೂ ಅವನ ಕುಟುಂಬದು. ಬಡತನದ ಜೀವನದಲ್ಲಿ ನೆಮ್ಮದಿ ಹುಡುಕಾಟ. ಇದರ ನಡುವೆ ಶೇಖರ ಹಾಗೂ ಗುಣಪಾಲ್ ನಡುವೆ ವೈಮನಸ್ಯ , ದ್ವೇಷ.  

612

ಶೇಖರನ ತಂದೆ ರೇಷನ್ ಕಾರ್ಡ್ ಪಡೆಯಲು ಅಧಿಕಾರಿಯನ್ನ ಭೇಟಿ ಮಾಡಿದಾಗ ಅವಮಾನ.  ಒಂದಲ್ಲ ಒಂದು ವಿಚಾರಕ್ಕೆ ಶೇಖರ ಹಾಗೂ ಅಧಿಕಾರಿಯ ನಡುವೆ ಗುದ್ದಾಟ , ಮಾತಿನ ಚಿಕ್ಕಮಕಿ ನಡೆಯುತ್ತಲೇ ಇರುತ್ತೆ.

712

ಏನು ಆಗದಿದ್ದರೂ ತಾನೇ ಬಗೆಹರಿಸುವೆ ಎನ್ನುವಂತಹ ಅಧ್ಯಕ್ಷ ಗೋಪಾಲಣ್ಣ(ದೀಪಕ್ ರೈ ಪಾಣಾಜೆ), ಇನ್ನು ಈ ಹುಡುಗರ ತಂಡದಲ್ಲಿ ಬಾಡ ಅಧಿಕಾರಿಯ ಮಗಳು ಭಾಗಿ ಯನ್ನು ಪ್ರೀತಿಸುತ್ತಾನೆ. ಗ್ರಾಮದ ಜನರಿಗೆ ಒಂದು ಸಹಿ ಹಾಗೂ ಮೊಹರಗಾಗಿ ನರಭಕ್ಷಕನಂತೆ ಹಣಕ್ಕಾಗಿ ಒತ್ತಡ ಕೊಡುವ ಈ ಅಧಿಕಾರಿಯ ನಡುವಳಿಕೆ , ದರ್ಪವನ್ನು ನೋಡಿ ಕೋಪ ಬಂದರು ಏನು ಮಾಡಲಾಗದಂತ ಸ್ಥಿತಿ.

812

ಇದರ ನಡುವೆ ಒಂದಷ್ಟು ಘಟನೆಗಳು   ದುರಂತದ ಹಂತಕ್ಕೆ ಹೋಗಿ ನಿಲ್ಲುತ್ತದೆ. ಅಧಿಕಾರದ ದರ್ಪ ಏನಾಗುತ್ತೆ... ಜನಸಾಮಾನ್ಯರ ಕಷ್ಟ ನಿಲ್ಲುತ್ತಾ... ದಾಸ್ಕತ್ ಹೇಳುವ ಸತ್ಯ ಏನು... ಇದಕ್ಕಾಗಿ ಎಲ್ಲರೂ ಒಮ್ಮೆ ಚಿತ್ರ ನೋಡಬೇಕು.ಈ ಚಿತ್ರದ ಕಥೆ ನೈಜಕ್ಕೆ ಹತ್ತಿರವೆನಿಸಿದೆ. ಸಮಾಜದಲ್ಲಿ ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಅಟ್ಟಹಾಸ , ದರ್ಪ , ಹಣದ ವ್ಯಾಮೋಹ ಜನಸಾಮಾನ್ಯರಿಗೆ ಹೇಗೆಲ್ಲಾ ತೊಂದರೆಗಳನ್ನು ನೀಡುತ್ತಾ ಬಂದಿದೆ ಎಂಬುವುದನ್ನು ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. 

912

ಇನ್ನು ಕುಗ್ರಾಮದಲ್ಲಿ ಜನರ ಪಾಡು ಕೇಳುವಂತಿಲ್ಲ, ಸತ್ಯದ ಕನ್ನಡಿಯನ್ನು ಹೊರ ಜಗತ್ತಿಗೆ ತೆರೆದಿಟ್ಟಂತಿರುವ ಈ ಚಿತ್ರದಲ್ಲಿ ಗೆಳೆತನ , ವಾತ್ಸಲ್ಯ , ಪ್ರೀತಿ , ದ್ವೇಷದ ಜೊತೆ ವಾಸ್ತವತೆ ಬಗ್ಗೆ ಬೆಳಕು ಚೆಲ್ಲಿರುವ ರೀತಿ ಗಮನ ಸೆಳೆಯುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಕಚೇರಿಯ ಕಾರ್ಯ ವೈಖರಿ , ವ್ಯವಸ್ಥೆ ಬದಲಾದಂತಿದೆ. ಆದರೂ ಈ ತಂಡದ ಪ್ರಯತ್ನ ಮೆಚ್ಚುವಂಥದ್ದು. 

1012

ತುಳು ಭಾಷೆಯಲ್ಲಿ ನಿರ್ಮಾಣವಾಗಿ  ಬಿಡುಗಡೆ ನಂತರ ಕನ್ನಡ ಜನತೆ ಈ ಸಿನಿಮಾ ನೋಡಬೇಕೆಂಬ ಉದ್ದೇಶದಿಂದ ಕನ್ನಡದಲ್ಲಿ ಡಬ್ ಮಾಡಿಸಿ ಪ್ರೇಕ್ಷಕರ ಮುಂದೆ ತಂದಂತಹ ನಿರ್ಮಾಪಕ ಜಗದೀಶ್. ಎನ್. ಅರೇಬನ್ನಿಮಂಗಲ.  ಈ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕ ವರ್ಗ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಿದೆ.

1112

ಇನ್ನು ಪ್ರಮುಖ ಪಾತ್ರಧಾರಿಗಳಾದ ದೀಕ್ಷಿತ್. ಕೆ. ಅಂಡಿನ್ಜೆ , ಮೋಹನ್ ಶೇಣಿ , ನೀರಜ್ ಕುಂಜರ್ಪ, ಮಿಥುನ್ ರಾಜ್ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ವಿಶೇಷವಾಗಿ ಗುಣಪಾಲ ಪಾತ್ರ ಮಾಡಿರುವ ಯುವ ಶೆಟ್ಟಿ ಕನ್ನಡಕ್ಕೆ ಮತ್ತೊಬ್ಬ ಉತ್ತಮ ಪ್ರತಿಭೆ ಸಿಕ್ಕಂತಾಗಿದೆ. ತನ್ನ ಪಾತ್ರದ ಮೂಲಕ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. 

1212

ಭಾಗಿ ಪಾತ್ರದಲ್ಲಿ ಯುವ ನಟಿ ಭವ್ಯ ಪೂಜಾರಿ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ದೀಪಕ್ ರೈ ಪಾಣಾಜೆ ,  ನವೀನ್ ಬಾಂಡೇಲ್, ಚಂದ್ರಹಾಸ್ ಉಳ್ಳಾಲ್, ಯೋಗೀಶ್ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಒಂದು ಸಹಿ (ದಸ್ಕತ್) ಹಿಂದಿರುವ ಕರಾಳ ಸತ್ಯದ ಬಗ್ಗೆ  ಜಾಗೃತಿ ಮೂಡಿಸಿರುವ ಈ ಚಿತ್ರ ಎಲ್ಲರೂ ಒಮ್ಮೆ ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
'ನಮ್ಮ ಹನುಮ ಕನ್ನಡಿಗ' : ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!
Recommended image2
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Recommended image3
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Related Stories
Recommended image1
ಆಪರೇಷನ್ ಸಿಂದೂರ ಕೇವಲ ಪ್ರತ್ಯುತ್ತರವಲ್ಲ, ಪ್ರಬಲ ಸಂದೇಶ: ಮೋದಿಗೆ ಪತ್ರ ಬರೆದ ಕಿಚ್ಚ ಸುದೀಪ್
Recommended image2
ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿದ್ದ Aamir Khan! ಈ ಪಾಕಿಸ್ತಾನ ಬೆಂಬಲಿತ ರಾಷ್ಟ್ರಕ್ಕೆ ಕಾಲಿಡಲ್ಲ ಎಂದ ಗಾಯಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved