- Home
- Entertainment
- Sandalwood
- ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಕೇಳ್ತಿದ್ದಂತೆ ಸಿಟ್ಟಾದ ರಿಷಬ್ ಶೆಟ್ಟಿ; ಕನ್ನಡದಲ್ಲಿ 11 ಜನರಿಗಷ್ಟೇ ಆಹ್ವಾನ
ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಕೇಳ್ತಿದ್ದಂತೆ ಸಿಟ್ಟಾದ ರಿಷಬ್ ಶೆಟ್ಟಿ; ಕನ್ನಡದಲ್ಲಿ 11 ಜನರಿಗಷ್ಟೇ ಆಹ್ವಾನ
Rashmika Mandanna Vijay Deverakonda: ಅಂತೂ ಇಂತೂ ಕರ್ನಾಟಕದ ಸ್ಟಾರ್ಗಳಿಗೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರು ಮದುವೆಯ ಆಹ್ವಾನ ಪತ್ರಿಕೆ ತಲುಪಿದೆ. ಕನ್ನಡದಲ್ಲೇ ಸಿನಿಮಾ ಆರಂಭಿಸಿದ ರಶ್ಮಿಕಾ ಮಂದಣ್ಣ, ಬೇರೆ ಭಾಷೆಯಲ್ಲಿ ಹೆಸರು ಮಾಡಿದರು. ಈಗ ತೆಲುಗು ನಟನನ್ನು ಮದುವೆ ಆಗುತ್ತಿದ್ದಾರೆ.

ಮದುವೆ, ಆರತಕ್ಷತೆ
ಫೆಬ್ರವರಿ 26ರಂದು ಮದುವೆ ನಡೆಯಲಿದೆ. ಅಂದಹಾಗೆ ಮಾರ್ಚ್ 4ಕ್ಕೆ ಹೈದರಾಬಾದ್ನಲ್ಲಿ ಆರತಕ್ಷತೆ ನಡೆಯಲಿದೆ.
ಯಾರಿಗೆ ಆಹ್ವಾನ ಸಿಕ್ಕಿದೆ?
ಕನ್ನಡದಲ್ಲಿ ನಟ ಶಿವರಾಜ್ಕುಮಾರ್,ಕಿಚ್ಚ ಸುದೀಪ್, ನಟ ಯಶ್, ಅಶ್ವಿನಿ ಪುನೀತ್ ರಾಜ್ಕುಮಾರ್, ವಿ ರವಿಚಂದ್ರನ್ , ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕರಾದ ಎ ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ, ಆಶಿಕಾ ರಂಗನಾಥ್ ಸೇರಿ ಅನೇಕರಿಗೆ ಆಹ್ವಾನ ನೀಡಿದ್ದಾರೆ.
ಮೆಸೇಜ್ ಮಾಡಿರೋ ನಟಿ
ಒಟ್ಟೂ ಕನ್ನಡದಲ್ಲಿ 11 ಜನರಿಗೆ ಆರತಕ್ಷತೆಯ ಆಮಂತ್ರಣ ಪತ್ರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಆಹ್ವಾನ ಪತ್ರಿಕೆ ಜೊತೆಗೆ ವೈಯಕ್ತಿಕವಾಗಿ ಮೇಸೇಜ್ ಮಾಡಿ ಆಹ್ವಾನಿಸಿದ್ದಾರೆ.
ಶೆಟ್ಟರ ಬಳಗ ಮರೆತರು
ಮೊದಲ ಸಿನಿಮಾ ಅವಕಾಶ ಕೊಟ್ಟ ಶೆಟ್ಟರ ಬಳಗ ಮರೆತಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಗುಂಪಿನವರಿಗೆ ಆಹ್ವಾನ ಪತ್ರಿಕೆ ಹೋಗಿಲ್ಲ. ಅಂದಹಾಗೆ ರಿಷಬ್ ಶೆಟ್ಟಿ ಅವರಿಗೆ ರಶ್ಮಿಕಾ ಮದುವೆ ಆಹ್ವಾನ ಪತ್ರಿಕೆ ಸಿಕ್ಕಿದೆಯಾ ಎಂಬ ಪ್ರಶ್ನೆ ಕೇಳಿದಾಗ, ಅವರು ಏಕಾಏಕಿ ನಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

