MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ನಟಿ ಕಾರುಣ್ಯ ರಾಮ್ ತಂಗಿಯ ಜೂಜಾಟಕ್ಕೆ ಬೀದಿಗೆ ಬಿದ್ದ ಕುಟುಂಬ, ಸಂಪಾದಿಸಿದ ಗೌರವ ಸಹೋದರಿಯಿಂದ ಹೋಯ್ತೆಂದು ಕಣ್ಣೀರು!

ನಟಿ ಕಾರುಣ್ಯ ರಾಮ್ ತಂಗಿಯ ಜೂಜಾಟಕ್ಕೆ ಬೀದಿಗೆ ಬಿದ್ದ ಕುಟುಂಬ, ಸಂಪಾದಿಸಿದ ಗೌರವ ಸಹೋದರಿಯಿಂದ ಹೋಯ್ತೆಂದು ಕಣ್ಣೀರು!

ನಟಿ ಕಾರುಣ್ಯ ರಾಮ್,ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ಬೆಟ್ಟಿಂಗ್ ಆ್ಯಪ್ ಚಟ ಮತ್ತು ಸಾಲ, ವಂಚನೆ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಸುಮಾರು 25 ಲಕ್ಷ ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದು, ಆಕೆ ಮಾಡಿದ ತಪ್ಪಿಗೆ ಇಂದು ಬೆದರಿಕೆ ಬರುತ್ತಿದೆ ಎಂದಿದ್ದಾರೆ.

4 Min read
Author : Gowthami K
Published : Jan 15 2026, 05:47 PM IST
Share this Photo Gallery
  • FB
  • TW
  • Linkdin
  • Whatsapp
110
ತಂಗಿ ವಿರುದ್ಧ ನಟಿ ಕಾರುಣ್ಯ ರಾಮ್ ದೂರು
Image Credit : Asianet News

ತಂಗಿ ವಿರುದ್ಧ ನಟಿ ಕಾರುಣ್ಯ ರಾಮ್ ದೂರು

ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರು ತನ್ನ ಸ್ವಂತ ತಂಗಿ,   ಸಮೃದ್ಧಿ ರಾಮ್ ವಿರುದ್ಧ ಸಿಸಿಬಿ (Central Crime Branch) ಪೊಲೀಸರಿಗೆ ದೂರು ನೀಡಿರುವ ಘಟನೆ ರಾಜ್ಯದ ಚಿತ್ರರಂಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಬೆಟ್ಟಿಂಗ್  ಆ್ಯಪ್‌ ಗೀಳು, ಸಾಲ–ವಂಚನೆ ಆರೋಪ, ಸಾಮಾಜಿಕ ಜಾಲತಾಣಗಳಲ್ಲಿ ನಡೆದ ನಿಂದನೆ, ಹಾಗೂ ಪ್ರತಿದೂರುಗಳ ಸರಣಿ ಬೆಳಕಿಗೆ ಬಂದಿದೆ. ಇದೀಗ ಈ ಪ್ರಕರಣದಲ್ಲಿ ಟ್ವಿಸ್ಟ್ ಗಳು ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಬೆಟ್ಟಿಂಗ್ ಆ್ಯಪ್‌ ವಿರುದ್ಧ ಯಾವುದೇ ಪ್ರಚಾರ ಮಾಡಬೇಡಿ ಎಂದು ನಟಿ ಮನಇ ಮಾಡಿಕೊಂಡಿದ್ದಾರೆ.

210
ಸಾಲ ವಂಚನೆ ಆರೋಪ: ಅಕ್ಕ–ತಂಗಿಯ ವಿರುದ್ಧವೇ ದೂರು
Image Credit : Asianet News

ಸಾಲ ವಂಚನೆ ಆರೋಪ: ಅಕ್ಕ–ತಂಗಿಯ ವಿರುದ್ಧವೇ ದೂರು

ಈ ಪ್ರಕರಣದ ಮೂಲವು ಪ್ರತಿಭಾ ಶೆಟ್ಟಿ ಎಂಬುವವರು ನೀಡಿದ ದೂರಿನಿಂದ ಆರಂಭವಾಗಿದೆ. ಪ್ರತಿಭಾ ಅವರು, ನಟಿ ಕಾರುಣ್ಯ ರಾಮ್ ಹಾಗೂ ಅವರ ಸಹೋದರಿ ಸಮೃದ್ಧಿ ತಮ್ಮಿಂದ ಸ್ಟುಡಿಯೋ ಹಾಗೂ ವ್ಯವಹಾರ ನಡೆಸುವ ನೆಪದಲ್ಲಿ 3 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ 2025ರ ಮೇ 10ರಂದು ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ. ದೂರಿನಲ್ಲಿ, ಹಣವನ್ನು ವಾಪಸ್ ಕೇಳಿದಾಗ ಸಮೃದ್ಧಿ ಅವರು, “ಆದಾಗ ಕೊಡ್ತೀನಿ, ಬದುಕಿದ್ರೆ ಕೊಡ್ತೀನಿ, ನಿನ್ನ ಹೆಸರನ್ನ ಬರೆದು ಸಾಯ್ತೀನಿ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿ, ವಿಷಯವನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದರು.

Related Articles

Related image1
Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್
Related image2
ಕಾರುಣ್ಯ ರಾಮ್ ಜೊತೆ ಕಾಮಾಕ್ಯ ಮಂದಿರಕ್ಕೆ ಭೇಟಿ ಕೊಟ್ಟ ನಟ ಪ್ರೇಮ್ ಕುಟುಂಬ
310
ಫೇಸ್‌ಬುಕ್ ಕಮೆಂಟ್ ಪ್ರಕರಣ: ಕಾರುಣ್ಯ ರಾಮ್ ವಿರುದ್ಧ ಅಶ್ಲೀಲ ನಿಂದನೆ ಆರೋಪ
Image Credit : Asianet News

ಫೇಸ್‌ಬುಕ್ ಕಮೆಂಟ್ ಪ್ರಕರಣ: ಕಾರುಣ್ಯ ರಾಮ್ ವಿರುದ್ಧ ಅಶ್ಲೀಲ ನಿಂದನೆ ಆರೋಪ

ಈ ನಡುವೆ, ಸಾಲ ವಿವಾದದ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಪ್ರತಿಭಾ ಶೆಟ್ಟಿ ಅವರು ನಟಿ ಕಾರುಣ್ಯ ರಾಮ್ ಅವರ ಫೇಸ್‌ಬುಕ್ ಫೋಟೋಗೆ ಅವಹೇಳನಕಾರಿ ಹಾಗೂ ನಿಂದನಾತ್ಮಕ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರತಿಭಾ ಅವರು, “Award for Cheaters” ಎಂದು ಕಮೆಂಟ್ ಮಾಡಿದ್ದು ಮಾತ್ರವಲ್ಲದೆ, ಸಾಲು ಸಾಲು ಪದಗಳಲ್ಲಿ ನಿಂದನೆ ನಡೆಸಿದ್ದಾರೆ ಎಂದು ಕಾರುಣ್ಯ ರಾಮ್ ಆರೋಪಿಸಿದ್ದಾರೆ. ತಂಗಿ ಸಮೃದ್ಧಿ ಸಾಲ ನೀಡಿ ಅಸಮಾಧಾನಗೊಂಡು, ಅಕ್ಕನ ಫೋಟೋಗೆ ಈ ರೀತಿಯ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

410
ಸಿಸಿಬಿಗೆ ನಟಿ ಕಾರುಣ್ಯ ರಾಮ್ ದೂರು
Image Credit : Asianet News

ಸಿಸಿಬಿಗೆ ನಟಿ ಕಾರುಣ್ಯ ರಾಮ್ ದೂರು

ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ವಾಸವಿರುವ ನಟಿ ಕಾರುಣ್ಯ ರಾಮ್ ಅವರು ಸಿಸಿಬಿ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ಈ ದೂರು ಆಧಾರವಾಗಿ ಪ್ರಕರಣದ ಪ್ರಾಥಮಿಕ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ದೂರು ಸಾಬೀತಾದಲ್ಲಿ ಪ್ರತಿಭಾ ಶೆಟ್ಟಿ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಎಲ್ಲಾ ದಾಖಲೆಗಳು, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಹಾಗೂ ಹಿಂದಿನ ದೂರುಗಳ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.

510
ಕಾರುಣ್ಯ ರಾಮ್ ಕುಟುಂಬ ಹಿನ್ನೆಲೆ
Image Credit : Asianet News

ಕಾರುಣ್ಯ ರಾಮ್ ಕುಟುಂಬ ಹಿನ್ನೆಲೆ

ನಟಿ ಕಾರುಣ್ಯ ರಾಮ್ ಅವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿ. ಅವರಿಗೆ ಒಬ್ಬ ಸಹೋದರಿ ಹಾಗೂ ಒಬ್ಬ ಸಹೋದರ ಇದ್ದು, ಸಹೋದರ 12 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕಾರುಣ್ಯ ರಾಮ್ ಅವರ ಸಹೋದರಿ ಸಮೃದ್ಧಿ ಮೇಕಪ್ ಆರ್ಟಿಸ್ಟ್ ಆಗಿದ್ದರು. ಕೆಲ ಸೀರಿಯಲ್ ನಲ್ಲಿ ನಟಿಸಿದ್ದರು ಕೂಡ. ತಂಗಿ ಸಮೃದ್ಧಿಗಾಗಿ, ಕಾರುಣ್ಯ ರಾಮ್ ಅವರು ಮೇಕಪ್ ಸ್ಟುಡಿಯೋ ಸ್ಥಾಪಿಸಿಕೊಟ್ಟಿದ್ದರು. ಆದರೆ, ಆನ್‌ಲೈನ್ ಬೆಟ್ಟಿಂಗ್ ವ್ಯಸನದಿಂದ ಸಮೃದ್ಧಿ ವ್ಯವಹಾರಕ್ಕೆ ಗಮನ ನೀಡದೆ, ಬೆಟ್ಟಿಂಗ್ ಗೀಳಿನಿಂದ ಸುಮಾರು 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಲ ತೀರಿಸಲು ಸಾಧ್ಯವಾಗದೆ, ಸಮೃದ್ಧಿ ಮನೆ ಬಿಟ್ಟು ಹೋಗಿದ್ದಾರೆ. ಸಮೃದ್ಧಿ ಮನೆ ಬಿಟ್ಟು ಹೋಗಿ ಯಾರ ಕೈಗೂ ಸಿಕ್ಕದೆ ಇರುವುದೇ ಕಾರುಣ್ಯ ಇಂದು ಪೊಲೀಸ್ ಮೆಟ್ಟಲೇರಲು ಕಾರಣ.

610
ಮಾಧ್ಯಮಗಳಿಗೆ ನಟಿ ಕಾರುಣ್ಯ ರಾಮ್ ಮನವಿ
Image Credit : Asianet News

ಮಾಧ್ಯಮಗಳಿಗೆ ನಟಿ ಕಾರುಣ್ಯ ರಾಮ್ ಮನವಿ

ಈ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಕಾರುಣ್ಯ ರಾಮ್, ದೂರಿನ ಬಗ್ಗೆ ಶೀಘ್ರದಲ್ಲೇ ಎಲ್ಲಾ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇಂದು ನಾನು ನನ್ನ ಹೆತ್ತವರು ಹಾಗೂ ಆತ್ಮೀಯರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ದಯವಿಟ್ಟು ಈ ವಿಷಯದಲ್ಲಿ ಗೌಪ್ಯತೆಯನ್ನು ಕಾಪಾಡಿ ಎಂದು ಮನವಿ ಮಾಡಿದ್ದರು. ಈ ಪ್ರಕರಣದ ಕುರಿತು ಮುಂದಿನ ದಿನಗಳಲ್ಲಿ ಸಿಸಿಬಿ ತನಿಖೆಯ ಆಧಾರದ ಮೇಲೆ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

710
ಮೂರು ವರ್ಷಗಳಿಂದ ಈ ಸಮಸ್ಯೆಯ ಜೊತೆ ಹೋರಾಡುತ್ತಿದ್ದೇನೆ
Image Credit : Asianet News

ಮೂರು ವರ್ಷಗಳಿಂದ ಈ ಸಮಸ್ಯೆಯ ಜೊತೆ ಹೋರಾಡುತ್ತಿದ್ದೇನೆ

ಬೆಟ್ಟಿಂಗ್ ಆ್ಯಪ್ ಚೀಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾರುಣ್ಯ ರಾಮ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ದಿನವೇ ಇಂತಹ ಸಂಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಮೂರು ವರ್ಷಗಳಿಂದ ನಾನು ಈ ಸಮಸ್ಯೆಯನ್ನು ಒಂಟಿಯಾಗಿ ಹೊತ್ತುಕೊಂಡು ಹೋರಾಡುತ್ತಿದ್ದೇನೆ. ಇದನ್ನು ಯಾರಿಗೂ ಹೇಳಲು ಸಾಧ್ಯವಾಗದೆ ಮೌನವಾಗಿ ಬದುಕುತ್ತಿದ್ದೆ ಎಂದು ಕಾರುಣ್ಯ ರಾಮ್ ತಿಳಿಸಿದ್ದಾರೆ. ತಮ್ಮ ಕುಟುಂಬ ಈ ಬೆಟ್ಟಿಂಗ್ ಆ್ಯಪ್ ವ್ಯಸನಕ್ಕೆ ಬಲಿಯಾದ ಅನೇಕ ಕುಟುಂಬಗಳಲ್ಲಿ ಒಂದಾಗಿದೆ ಎಂದು ಹೇಳಿ ಅವರು ಭಾರೀ ನೋವು ವ್ಯಕ್ತಪಡಿಸಿದ್ದಾರೆ.

810
ಬೆಟ್ಟಿಂಗ್ ಆ್ಯಪ್‌ನಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ
Image Credit : Asianet News

ಬೆಟ್ಟಿಂಗ್ ಆ್ಯಪ್‌ನಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ

ಬೆಟ್ಟಿಂಗ್ ಆ್ಯಪ್‌ನಿಂದ ಎಷ್ಟೋ ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿವೆ. ದುರದೃಷ್ಟವಶಾತ್, ಅದರಲ್ಲಿ ನನ್ನ ಕುಟುಂಬವೂ ಒಂದಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದೇ ನನಗೆ ತುಂಬಾ ಬೇಸರದ ವಿಷಯ ಎಂದು ಅವರು ಹೇಳಿದರು. ಈ ಎಲ್ಲ ಸಮಸ್ಯೆಗಳು ತಮ್ಮ ತಂಗಿಯ ವ್ಯಸನದಿಂದಲೇ ಆರಂಭವಾದವು. ಸಂಪಾದನೆ ಮಾಡಿದ ಗೌರವ ಹಣ ಎಲ್ಲವೂ ಹೋಯ್ತು ಎಂದು ಕಾರುಣ್ಯ ರಾಮ್ ಸ್ಪಷ್ಟಪಡಿಸಿದರು.

“ತಂಗಿಯ ಸಮಸ್ಯೆಯಿಂದ ನಮ್ಮ ಕುಟುಂಬದ ಗೌರವ ಕಳೆದುಹೋಯಿತು”

ನಟಿ ಕಾರುಣ್ಯ ರಾಮ್ ಅವರ ಮಾತುಗಳಲ್ಲಿ ತೀವ್ರ ನೋವಿನಿಂದ ನನ್ನ ತಂಗಿ ಮಾಡಿಕೊಂಡ ತಪ್ಪಿನಿಂದ ನನ್ನ ಅಪ್ಪ–ಅಮ್ಮ ಮತ್ತು ನಾನು ವರ್ಷಗಳ ಕಾಲ ಕಟ್ಟಿಕೊಂಡಿದ್ದ ಗೌರವ ಎಲ್ಲವೂ ಹೋದಂತಾಗಿದೆ. ಈ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ತಂಗಿಯ ಕುರಿತು ಮಾತನಾಡಿದ ಕಾರುಣ್ಯ ರಾಮ್, ಈ ಬೆಟ್ಟಿಂಗ್ ವ್ಯಸನದಿಂದ ಹೊರಬಂದ ಮೇಲೆ ಮಾತ್ರ ಮನೆಗೆ ಬರುತ್ತೇನೆ ಎಂದು ಹೇಳಿ, ನನ್ನ ತಂಗಿ ಮನೆ ಬಿಟ್ಟು ಹೋಗಿದ್ದಾಳೆ. ಆಕೆ ಈಗ ನಮ್ಮ ಸಂಪರ್ಕದಲ್ಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಆ ನೋವನ್ನು ನನ್ನ ಅಪ್ಪ ಅಮ್ಮ ನಾನು ಅನುಭವಿಸುತ್ತಿದ್ದೇವೆ. ಆಕೆ ನಮ್ಮೊಂದಿಗಿಲ್ಲ. ಎಲ್ಲಿದ್ದಾಳೆಂದು ಗೊತ್ತಿಲ್ಲ.

910
“ಅನಾಮಧೇಯ ಮೆಸೇಜ್‌ಗಳು, ನಿರಂತರ ಕರೆಗಳು”
Image Credit : Asianet News

“ಅನಾಮಧೇಯ ಮೆಸೇಜ್‌ಗಳು, ನಿರಂತರ ಕರೆಗಳು”

ಆಕೆ ಈ ವ್ಯಸನಕ್ಕೆ ಬಿದ್ದಿದ್ದಾಳೆಂದು ಫ್ರೆಂಡ್ಸ್ ಮುಖಾಂತರ ಗೊತ್ತಾಯ್ತು. ಆಕೆ ಎಲ್ಲರ ಜೊತೆ ಸಾಲ ಮಾಡಿಕೊಂಡ ಪರಿಣಾಮವಾಗಿ ತಮಗೆ ಮತ್ತು ಕುಟುಂಬಕ್ಕೆ ಮಾನಸಿಕ ಕಿರುಕುಳ ಹೆಚ್ಚಾಗಿದೆ. ಇತ್ತೀಚೆಗೆ ನನಗೆ ಅನಾಮಧೇಯ ಸಂಖ್ಯೆಯಿಂದ ಅಸಭ್ಯ ಕಾಮೆಂಟ್‌ಗಳು ಮತ್ತು ಮೆಸೇಜ್‌ಗಳು ಬರುತ್ತಿವೆ. ದಿನದ ಹೊತ್ತಿನಲ್ಲೂ, ಮಧ್ಯರಾತ್ರಿಯಲ್ಲೂ ನಿರಂತರವಾಗಿ ಕರೆಗಳು ಬರುತ್ತಿವೆ. ನನ್ನ ತಂಗಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನನ್ನನ್ನೇ ಪ್ರಶ್ನಿಸುತ್ತಿದ್ದಾರೆ. ನಾವೇನು ಮಾಡಲು ಸಾಧ್ಯ. ನನಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಅಪ್ಪ ಅಮ್ಮನನ್ನು ನೋಡಿಕೊಳ್ಳುವವರು ಯಾರಿದ್ದಾರೆ.

1010
“ಅತಿರೇಕ ಮೀರಿದ್ದರಿಂದ ದೂರು ನೀಡಬೇಕಾಯಿತು”
Image Credit : Asianet News

“ಅತಿರೇಕ ಮೀರಿದ್ದರಿಂದ ದೂರು ನೀಡಬೇಕಾಯಿತು”

ಮಾನಸಿಕ ಕಿರುಕುಳ ಮಿತಿಮೀರಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಕಾರುಣ್ಯ ರಾಮ್ ತಿಳಿಸಿದರು. “ಈ ಎಲ್ಲವೂ ಅತಿರೇಕಕ್ಕೆ ಹೋಗಿದ್ದರಿಂದ ನಾನು ಕಾನೂನು ಮೊರೆ ಹೋಗಬೇಕಾಯಿತು. ನನಗೆ ನ್ಯಾಯ ಬೇಕು. ನನ್ನ ತಂದೆ–ತಾಯಿಗೆ ಮಾನಸಿಕ ಶಾಂತಿ ಬೇಕು,” ಎಂದು ಅವರು ಸ್ಪಷ್ಟವಾಗಿ ಹೇಳಿದರು. ಈ ಪ್ರಕರಣದಲ್ಲಿ ನನಗೆ ಮಾತ್ರವಲ್ಲ, ನನ್ನ ತಂದೆ–ತಾಯಿಗೂ ನ್ಯಾಯ ಸಿಗಬೇಕು. ನಾವು ಅನುಭವಿಸುತ್ತಿರುವ ಮಾನಸಿಕ ಯಾತನೆಗೆ ಕೊನೆ ಬರಬೇಕು. ಬೆಟ್ಟಿಂಗ್ ಆ್ಯಪ್‌ ಅನ್ನು ಯಾರೂ ಕೂಡ ಪ್ರಮೋಟ್ ಮಾಡಬಾರದು ನಾನು ಸರಕಾರಕ್ಕೂ ಇದನ್ನು ಮನವಿ ಮಾಡಿಕೊಳ್ಳುತ್ತೇನೆ. ನಮಗೆ ರಿಲೀಫ್ ಬೇಕು. ಕುಟುಂಬಕ್ಕೆ ನೆಮ್ಮದಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸ್ಯಾಂಡಲ್‌ವುಡ್
ಬೆಟ್ಟಿಂಗ್ ಆ್ಯಪ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
Recommended image2
ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ
Recommended image3
ಹಾಸನ ನಿವೇಶನ ವಿವಾದ: ನಿರ್ಮಾಪಕಿ ಪುಷ್ಮಾ ಅರುಣ್‌ಕುಮಾರ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆ
Related Stories
Recommended image1
Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್
Recommended image2
ಕಾರುಣ್ಯ ರಾಮ್ ಜೊತೆ ಕಾಮಾಕ್ಯ ಮಂದಿರಕ್ಕೆ ಭೇಟಿ ಕೊಟ್ಟ ನಟ ಪ್ರೇಮ್ ಕುಟುಂಬ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved