MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಕಾರುಣ್ಯ ರಾಮ್ ಜೊತೆ ಕಾಮಾಕ್ಯ ಮಂದಿರಕ್ಕೆ ಭೇಟಿ ಕೊಟ್ಟ ನಟ ಪ್ರೇಮ್ ಕುಟುಂಬ

ಕಾರುಣ್ಯ ರಾಮ್ ಜೊತೆ ಕಾಮಾಕ್ಯ ಮಂದಿರಕ್ಕೆ ಭೇಟಿ ಕೊಟ್ಟ ನಟ ಪ್ರೇಮ್ ಕುಟುಂಬ

ಸ್ಯಾಂಡಲ್ ವುಡ್ ತಾರೆಯರಾದ ಲವ್ಲಿ ಸ್ಟಾರ್ ಪ್ರೇಮ್, ಪುತ್ರಿ ಅಮೃತಾ ಹಾಗೂ ಕುಟುಂಬದವರು ಹಾಗೂ ನಟಿ ಕಾರುಣ್ಯ ರಾಮ್ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ. 

1 Min read
Pavna Das
Published : Jul 18 2025, 03:31 PM IST| Updated : Jul 18 2025, 03:35 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಚಂದನವನದ ಸ್ಟಾರ್ ಗಳು ಕಾಮಾಕ್ಯ ಮಂದಿರತ್ತ (Kamakhya Temple) ಮುಖ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ತಾರೆಯರು ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯುತ್ತಿದ್ದಾರೆ.

26
Image Credit : Instagram

ಕೆಲವು ದಿನಗಳ ಹಿಂದೆ ದೀಪಿಕಾ ದಾಸ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಭೂಮಿ ಶೆಟ್ಟಿ ಸೇರಿ ಹಲವು ನಟಿಯರು ಸಾಲು ಸಾಲಾಗಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದು ಬಂದಿದ್ದರು. ಇದೀಗ ಮತ್ತೊಂದಿಷ್ಟು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ.

Related Articles

Related image1
Kamakhya Temple: ಬ್ರಹ್ಮಪುತ್ರ ನದಿ ಏಕೆ ಮೂರು ದಿನಗಳ ಕಾಲ ಕೆಂಪಾಗುತ್ತದೆ?
Related image2
Sandalwood Queen Ramya: ನನಗೆ ಸೀಕ್ರೇಟ್​ ಆಗಿ ಮದುವೆಯಾಗಿ, ಮಕ್ಕಳೂ ಇವೆ... ನೋವಿನಿಂದ ನಟಿ ರಮ್ಯಾ ಹೇಳಿದ್ದೇನು?
36
Image Credit : Instagram

ಹೌದು ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಕುಟುಂಬದ ಜೊತೆಗೆ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪ್ರೇಮ್ ಪುತ್ರಿ ಅಮೃತಾ ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇವರಿಗೆ ನಟಿ ಕಾರುಣ್ಯ ರಾಮ್ (Karunya Ram) ಸಾತ್ ಕೊಟ್ಟಿದ್ದಾರೆ.

46
Image Credit : Instagram

ನಟೀ ಕಾರುಣ್ಯ ರಾಮ್ ಹಾಗೂ ಕುಟುಂಬ ಅದೇ ರೀತಿ, ಪ್ರೇಮ್, ಅಮೃತಾ (Amrutha Prem), ಜ್ಯೋತಿ ಹೀಗೆ ಹಲವು ಜನರು ಜೊತೆಯಾಗಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ, ಅಲ್ಲಿ ದೇವಿ ದರ್ಶನ ಪಡೆದು, ಪೂಜೆ ಮಾಡಿ ಬಂದಿದ್ದಾರೆ.

56
Image Credit : Instagram

ಕಾಮಾಕ್ಯ ಮಂದಿರವು ಶಕ್ತಿ ಪೀಠವಾಗಿದ್ದು, ಇಲ್ಲಿ ಪೂಜೆ ಮಾಡಿದರೆ, ಎಂತಹುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಸಿಗುತ್ತದೆ. ಎಲ್ಲಾ ತೊಂದರೆಯಿಂದ ಹೊರ ಬರಬಹುದು ಎನ್ನಲಾಗುತ್ತದೆ. ನಟ ದರ್ಶನ್ ಜೈಲಿನಲ್ಲಿದ್ದಾಗ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಈ ದೇಗುಲಕ್ಕೆ ಬಂದು ಬೇಡಿಕೊಂಡಿದ್ದರು, ದರ್ಶನ್ ಬಿಡುಗಡೆಯಾದ ಬಳಿಕ ಮತ್ತೆ ಬಂದು ಪೂಜೆ ಸಲ್ಲಿಸಿದ್ದರು.

66
Image Credit : Instagram

ಕಾಮಾಕ್ಯ ಮಂದಿರವು ಮಾಟ ಮಂತ್ರಗಳಿಗೂ ಸಹ ತುಂಬಾನೆ ಜನಪ್ರಿಯತೆ ಪಡೆದಿದೆ. ಇಲ್ಲಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಅಂಬುವಾಚಿ ಮೇಳೆ ನಡೆಯುತ್ತಿದ್ದು, ಈ ಸಮಯದಲ್ಲಿ ದೇವಿಯ ಋತುಸ್ರಾವವನ್ನು ಸಂಭ್ರಮಿಸಲಾಗುತ್ತದೆ. ಆವಾಗ ದೇಗುಲದ ಹಿಂದೆ ಹರಿಯುವ ಬ್ರಹ್ಮಪುತ್ರ ನದಿ ಸಹ ಕೆಂಪು ಬಣ್ಣದಲ್ಲಿ ಹರಿಯುತ್ತದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ದೇವಸ್ಥಾನ
ಸ್ಯಾಂಡಲ್‌ವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved