MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕೇದಾರನಾಥದಲ್ಲಿ ಕನ್ನಡದ ಬಾವುಟ ಹಾರಿಸಿದ ನಟ ಯುವ ರಾಜಕುಮಾರ್

ಕೇದಾರನಾಥದಲ್ಲಿ ಕನ್ನಡದ ಬಾವುಟ ಹಾರಿಸಿದ ನಟ ಯುವ ರಾಜಕುಮಾರ್

ಸ್ಯಾಂಡಲ್ ವುಡ್ ನಟ ಯುವರಾಜಕುಮಾರ್ ಕೇದಾರನಾಥಕ್ಕೆ ತೆರಳಿ, ಪರಶಿವನ ದರ್ಶನ ಪಡೆದು ಬಂದಿದ್ದಾರೆ, ಜೊತೆಗೆ ದೇವ ಮಂದಿರದಲ್ಲಿ ಕನ್ನಡದ ಬಾವುಟ ಹಾರಿಸಿದ್ದಾರೆ. ಅಲ್ಲದೇ ಯಾತ್ರೆಯಲ್ಲಿ ತಾನು ಜಿವನದ ಬಗ್ಗೆ ಏನೇನು ಕಲಿತೆ ಎನ್ನುವುದನ್ನು ನಟ ತಿಳಿಸಿದ್ದಾರೆ. ಇಲ್ಲಿದೆ ಆ ಕುರಿತು ಮಾಹಿತಿ.

2 Min read
Author : Pavna Das
Published : May 30 2026, 05:17 PM IST
Share this Photo Gallery
  • FB
  • TW
  • Linkdin
  • Whatsapp
17
ಕೇದರನಾಥದಲ್ಲಿ ಯುವ ರಾಜಕುಮಾರ್
Image Credit : Instagram

ಕೇದರನಾಥದಲ್ಲಿ ಯುವ ರಾಜಕುಮಾರ್

‘ಯುವ’ ಹಾಗೂ ‘ಎಕ್ಕ’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆಯನ್ನು ಮೂಡಿಸಿದ ನಟ ಯುವರಾಜಕುಮಾರ್ ಇದೀಗ ತಮ್ಮ ಬ್ಯುಸಿ ಜೀವನದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಕೇದರನಾಥನ ದರ್ಶನ ಪಡೆದು ಬಂದಿದ್ದಾರೆ. ಆ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನೂ ಕೂಡ ಹಂಚಿಕೊಂಡಿದ್ದಾರೆ ನಟ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಕೇದರನಾಥದಲ್ಲಿ ಕನ್ನಡ ಬಾವುಟ ಹಾರಿಸಿದ ನಟ
Image Credit : Instagram

ಕೇದರನಾಥದಲ್ಲಿ ಕನ್ನಡ ಬಾವುಟ ಹಾರಿಸಿದ ನಟ

ಯುವ ರಾಜ್ ಕುಮಾರ್ ಕೇದರನಾಥ ಮಂದಿರದ ಮುಂದೆ ಕರ್ನಾಟಕ ಬಾವುಟವನ್ನು ಹಾರಿಸುವ ಮೂಲಕ ತಾವು ಹೆಮ್ಮೆಯ ಕನ್ನಡಿಗ ಎನ್ನುವುದನ್ನು ತೋರಿಸಿದ್ದಾರೆ. ಇದರ ಜೊತೆಗೆ ನಟ ಕೇದಾರನಾಥ ಯಾತ್ರೆಯಿಂದ ನಾನು ಏನನ್ನು ಕಲಿತಿದ್ದೇನೆ ಎನ್ನುವುದನ್ನು ಶೇರ್ ಮಾಡಿದ್ದಾರೆ.

Related Articles

Related image1
Now Playing
Yuva Rajkumar: A-Z ಅಕ್ಷರದವರೆಗೂ ರೌಡಿಗಳ ಮ್ಯಾಟರ್ ಹೇಳಿದ ಯುವ ರಾಜ್‌ಕುಮಾರ್‌ Ekka Movie Song!
Related image2
ಮೋಸ ಮಾಡೋದು ಹೇಳ್ಕೊಟ್ಟಿಲ್ಲ:‌ ಪತಿ Yuva Rajkumar, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್‌ ಪೋಸ್ಟ್
37
ಕೇದಾರನಾಥ ಯಾತ್ರೆಯಲ್ಲಿ ಏನು ಕಲಿತೆ?
Image Credit : Instagram

ಕೇದಾರನಾಥ ಯಾತ್ರೆಯಲ್ಲಿ ಏನು ಕಲಿತೆ?

ಕೇದಾರನಾಥ ಯಾತ್ರೆಯಲ್ಲಿ ನಾನು ಏನು ಕಲಿತೆ? ನಾನು ನನ್ನನ್ನು ಕೇಳಿಕೊಂಡಾಗ ಬಂದ ಉತ್ತರವಿದು…. ನಾನು ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ್ದೆ , ಅದು ಸಂಪೂರ್ಣ ಅರ್ಥಪೂರ್ಣವಾಗಿತ್ತು, ಸಮುದ್ರವು ನೋವು, ಒತ್ತಡವನ್ನು ನಿವಾರಿಸಿ, ನಮಗೆ ವಿಶ್ರಾಂತಿಯನ್ನು ಕೊಡುತ್ತದೆ, ಆದರೆ ಪರ್ವತಗಳು, ಅದು ಒತ್ತಡ, ನೋವನ್ನು ಸಹಿಸಿಕೊಳ್ಳಲು ಮತ್ತು ವಿಶ್ರಾಂತಿಯನ್ನುಅನುಭವಿಸಲು ಕಲಿಸುತ್ತದೆ.

47
ಹರ್ ಹರ್ ಮಹಾದೇವ್ ಪದಗಳು ದೇಹದಲ್ಲಿ ಕಂಪಿಸಿದವು
Image Credit : Instagram

ಹರ್ ಹರ್ ಮಹಾದೇವ್ ಪದಗಳು ದೇಹದಲ್ಲಿ ಕಂಪಿಸಿದವು

ಹರ್ ಹರ್ ಮಹಾದೇವ್ ಎಂಬ ಪದಗಳು ಈ ಪ್ರಯಾಣದ ಉದ್ದಕ್ಕೂ ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಪ್ರತಿಯೊಂದು ಪ್ರಾಣಿಯಲ್ಲಿ, ಪ್ರತಿಯೊಂದು ಭೂದೃಶ್ಯದಲ್ಲಿ, ಪ್ರತಿಯೊಂದು ಅರ್ಥದಲ್ಲಿ, ವಿಶೇಷವಾಗಿ ನನ್ನ ದೇಹದ ಪ್ರತಿಯೊಂದು ಭಾಗದಲ್ಲೂ ಕಂಪಿಸಿದವು ಮತ್ತು ಪ್ರತಿಧ್ವನಿಸಿದವು. ನಾವು ಚಾರಣವನ್ನು ಪೂರ್ಣಗೊಳಿಸಿ ಬೇಸ್ ಕ್ಯಾಂಪ್‌ನಿಂದ ದೀರ್ಘಕಾಲ ನಡೆದು ಕೇದಾರನಾಥ ದೇವಾಲಯವನ್ನು ತಲುಪಿದ ಕ್ಷಣ, ಎಲ್ಲವೂ ನಿಂತು ಸ್ತಬ್ಧವಾಯಿತು.

57
ದೇವರ ಮುಂದೆ ನಿಂತಾಗ ಕಾಲವು ಸ್ಥಭ್ತವಾಯಿತು
Image Credit : Instagram

ದೇವರ ಮುಂದೆ ನಿಂತಾಗ ಕಾಲವು ಸ್ಥಭ್ತವಾಯಿತು

ಆ ಕ್ಷಣದಲ್ಲಿ ಸಮಯ ನಿಂತಿತ್ತು ಮತ್ತು ನಾನು ಆ ಕ್ಷಣದಲ್ಲಿಯೇ ಇದ್ದೆ, ಭೂತಕಾಲವಿಲ್ಲ, ಭವಿಷ್ಯವಿಲ್ಲ, ವರ್ತಮಾನ ಮಾತ್ರ. ನಿಜವಾದ ಅರ್ಥದಲ್ಲಿ ದೇವರು ನಿಮ್ಮ ಮುಂದೆ ಇದ್ದಾನೆ ಅಥವಾ ನೀವು ಅವನ ಸನ್ನಿಧಿಯಲ್ಲಿರುವಿರಿ ಎಂದು ನೀವು ನಿಜವಾಗಿಯೂ ಭಾವಿಸಿದಾಗ, ನೀವು ನಿಜವಾಗಿಯೂ ಏನೂ ಮಾತನಾಡಲು ಬಯಸುವುದಿಲ್ಲ. ನೀವು ನಿಜವಾಗಿಯೂ ಏನನ್ನೂ ಬಯಸುವುದಿಲ್ಲ. ಅವನ ಸನ್ನಿಧಿಗೆ ಬರುವ ಯೋಜನೆ ಅಲ್ಲಿ ತಲುಪುವಂತೆ ಮಾಡುವುದು ಎಲ್ಲವೂ ಅವನ ಯೋಜನೆ.

67
ಅವನಿಂದ ಎಲ್ಲವನ್ನೂ ಕಲಿತೆ
Image Credit : Instagram

ಅವನಿಂದ ಎಲ್ಲವನ್ನೂ ಕಲಿತೆ

ಪ್ರತಿ ಕ್ಷಣ, ಪ್ರತಿ ಹೆಜ್ಜೆ, ಪ್ರತಿಯೊಂದು ಕ್ರಿಯೆ ಮತ್ತು ಪ್ರತಿಯೊಂದು ಪ್ರತಿಕ್ರಿಯೆ, ನನ್ನನ್ನು ಈ ಸ್ಥಳಕ್ಕೆ ಕರೆತಂದದ್ದು, ಕಲಿತದ್ದು ಅಥವಾ ಕಲಿಯದಿರುವುದು ಏನೇ ಇರಲಿ ಎಲ್ಲವೂ ಅವನ ಕೃಪೆ. ಸರಿ ಅಥವಾ ತಪ್ಪು, ಒಳ್ಳೆಯದು ಅಥವಾ ಕೆಟ್ಟದು, ನಾನು ಇಲ್ಲಿದ್ದೇನೆ, ಅವನ ಸನ್ನಿಧಿಯಲ್ಲಿದ್ದೇನೆ ಮತ್ತು ನಿಖರವಾಗಿ ನಾನು ಇರಬೇಕಾದ ಸ್ಥಳದಲ್ಲಿಯೇ ಇದ್ದೇನೆ ಎಂದ ಅದಕ್ಕೆ ಅವನೇ ಕಾರಣ. ನಾನು ಇಂದಿನವರೆಗೆ ಮಾಡಿದ ಎಲ್ಲವೂ ನನ್ನನ್ನು ಇಲ್ಲಿಗೆ ಕರೆತಂದಿದ್ದರೆ, ನಾನು ಅದನ್ನು ಮತ್ತೆ ಮತ್ತೆ ಹೆಮ್ಮೆಯಿಂದ ಮಾಡುತ್ತೇನೆ. ಎಲ್ಲವೂ ಅವನೇ, ಹರ್ ಹರ್ ಮಹಾದೇವ.

77
ಎಲ್ಲದಕ್ಕೂ ಮೌನವೇ ಉತ್ತರ
Image Credit : Instagram

ಎಲ್ಲದಕ್ಕೂ ಮೌನವೇ ಉತ್ತರ

ನಾನು ಸುತ್ತಲೂ ನೋಡಿ ಹಿಮಾಲಯ ಪರ್ವತಗಳು, ಮಧ್ಯದಲ್ಲಿರುವ ಮಂದಿರ, ಜನರು, ಕುದುರೆಗಳು, ಪ್ರಾರ್ಥನೆಗಳು, ದೇವಾಲಯದ ಗಂಟೆಗಳು, ನದಿಯ ಘರ್ಜನೆ ಇತ್ಯಾದಿಗಳನ್ನು ಕೇಳಿದಾಗ ನಾನು ಕಲಿತ ಇನ್ನೊಂದು ವಿಷಯವೆಂದರೆ, ಮೌನದ ನಂತರ ಬರುವ ಅತ್ಯಂತ ದೊಡ್ಡ ಶಬ್ದ ಅದು ಎನ್ನುವುದು ಅರ್ಥವಾಯಿತು. ನನ್ನ ಮುಂದಿನ ಜೀವನದ ಬಗ್ಗೆ ಎಲ್ಲಾ ಪ್ರಶ್ನೆಗಳಿಗೆ ?ನನ್ನ ಮುಂದಿನ ನಡೆ ? ನನ್ನ ಮುಂದಿನ ಯೋಜನೆ ? ನನ್ನ ಮುಂದಿನ ಉತ್ತರ ? ಎಲ್ಲಾದಕ್ಕೂ ಮೌನವೇ ಉತ್ತರ .... ಏಕೆಂದರೆ ಹರ ಹರ ಮಹಾದೇವ್’’ ಎಂದು ಯುವರಾಜಕುಮಾರ್ ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಜೀವನಶೈಲಿ

Latest Videos
Recommended Stories
Recommended image1
ಸಿಡ್ನಿಯಲ್ಲಿ ಮುದ್ದು ಜೋಡಿ ಸೋನಲ್-ತರುಣ್… ಇದೇ ಮಾಡ್ಬೇಡಿ ಮಕ್ಳು ಮಾಡ್ಕೊಳಿ ಎಂದ ಫ್ಯಾನ್ಸ್
Recommended image2
Bigg Boss ನಾಯಿ ಸತೀಶ್​, ಇನ್ಮುಂದೆ ತೋಳ ಸತೀಶ್​- ಹೊಸ ಅವತಾರದ ಬಗ್ಗೆ ಹೇಳಿದ್ದೇನು
Recommended image3
ಹಾಯ್​, ಹಲೋ, ಗುಡ್​ಮಾರ್ನಿಂಗ್​ ಪಕ್ಕಕ್ಕಿಡಿ: 'Toxic' ನಿರ್ದೇಶಕಿಯ ವಿಚಿತ್ರ ಆದೇಶ- ನಟಿ ಕಿಯಾರಾ ಅಡ್ವಾಣಿ ಹೇಳಿದ್ದೇನು
Related Stories
Recommended image1
Now Playing
Yuva Rajkumar: A-Z ಅಕ್ಷರದವರೆಗೂ ರೌಡಿಗಳ ಮ್ಯಾಟರ್ ಹೇಳಿದ ಯುವ ರಾಜ್‌ಕುಮಾರ್‌ Ekka Movie Song!
Recommended image2
ಮೋಸ ಮಾಡೋದು ಹೇಳ್ಕೊಟ್ಟಿಲ್ಲ:‌ ಪತಿ Yuva Rajkumar, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್‌ ಪೋಸ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved