MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಹುಡುಗಿ ನೋಡಿದ್ದೇನೆ, ಮುಂದಿನ ವರ್ಷ ಮದ್ವೆ: ಮರು ವಿವಾಹದ ಬಗ್ಗೆ ಮೌನ ಮುರಿದ ಚಂದನ್ ಶೆಟ್ಟಿ

ಹುಡುಗಿ ನೋಡಿದ್ದೇನೆ, ಮುಂದಿನ ವರ್ಷ ಮದ್ವೆ: ಮರು ವಿವಾಹದ ಬಗ್ಗೆ ಮೌನ ಮುರಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ನಂತರ ಅನುಭವಿಸಿದ ನೋವಿನಿಂದ ಹೊರಬಂದಿದ್ದಾರೆ. ಮುಂದಿನ ವರ್ಷ ಮದುವೆಯಾಗಲು ಯೋಜಿಸಿದ್ದು, ಈಗಾಗಲೇ  ಹುಡುಗಿಯರನ್ನು ನೋಡಿರುವುದಾಗಿ ಮತ್ತು ಈ ಬಾರಿ ತರಾತುರಿ ಮಾಡದೆ ಪೋಷಕರ ಒಪ್ಪಿಗೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.

1 Min read
Author : Suchethana D
Published : Apr 04 2026, 04:28 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ನಿಂದ ಫೇಮಸ್​
Image Credit : Instagram

ಬಿಗ್​ಬಾಸ್​ನಿಂದ ಫೇಮಸ್​

Bigg Bossನಿಂದ ಫೇಮಸ್​ ಆಗಿರೋ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ (Niveditha Gowda) ವಿಷ್ಯ ಎಲ್ಲರಿಗೂ ತಿಳಿದದ್ದೇ. ನಿವೇದಿತಾಗೆ ಇನ್ನೂ ವಯಸ್ಸು 20 ಇರುವಾಗಲೇ ಬಿಗ್​ಬಾಸ್​ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್​ ಶೆಟ್ಟಿಯವರ ಲವ್​ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್​ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಡಿವೋರ್ಸ್ ಪಡೆದಾಗಿನಿಂದ, ತುಂಡುಡುಗೆಯಲ್ಲಿ ರೀಲ್ಸ್‌ ಮಾಡುವ ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿದ್ದರೆ, ತಮ್ಮ ಸಿನಿಮಾದಲ್ಲಿ ಮುಂದುವರೆದಿದ್ದಾರೆ ಚಂದನ್​ ಶೆಟ್ಟಿ.

26
ದಾಂಪತ್ಯ ಜೀವನಕ್ಕೆ ವಿದಾಯ
Image Credit : Instagram

ದಾಂಪತ್ಯ ಜೀವನಕ್ಕೆ ವಿದಾಯ

2024ರ ಜೂನ್​ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದೆ ಈ ಜೋಡಿ. ಇದಾಗಲೇ ನಿವೇದಿತಾ ಕೂಡ 2ನೇಮದ್ವೆ ಬಗ್ಗೆ ಮಾತನಾಡಿದ್ದರು. ಚಂದನ್ ಶೆಟ್ಟಿ ನಟನಾಗ್ಬೇಕು ಅಂತ ಕನಸು ಕಂಡಿದ್ದರು. ಆಗ ಬಂದ ಮೊದಲ ಕಥೇಯೇ ಈ "ಎಲ್ರ ಕಾಲೆಳೆಯುತ್ತೆ ಕಾಲ" ಚಿತ್ರ. ಈ ಚಿತ್ರಕ್ಕೆ ರಾಜಗುರು ಕಥೆ ಬರೆದಿದ್ದಾರೆ.

Related Articles

Related image1
ಸುಖಮಯ ದಾಂಪತ್ಯಕ್ಕೆ ಕ್ವಾಲಿಟಿ ಎಷ್ಟಿರಬೇಕು, ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ Nivedita Gowda!
Related image2
ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?
36
ಎರಡನೆಯ ಮದುವೆಯ ಬಗ್ಗೆ
Image Credit : Instagram

ಎರಡನೆಯ ಮದುವೆಯ ಬಗ್ಗೆ

ಇದಾಗಲೇ ಡಿವೋರ್ಸ್​ ಪಡೆದು ಎರಡು ವರ್ಷಗಳಾಗುತ್ತಾ ಬಂದಿದ್ದು, ಚಂದನ್​ ಶೆಟ್ಟಿ ಅವರು ಇದೀಗ ಎರಡನೆಯ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹುಡುಗಿ ನೋಡಿಬಂದಿರುವ ಬಗ್ಗೆಯೂ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

46
ತುಂಬಾ ಎಫೆಕ್ಟ್​ ಆಗಿತ್ತು
Image Credit : Instagram

ತುಂಬಾ ಎಫೆಕ್ಟ್​ ಆಗಿತ್ತು

ವಿಚ್ಛೇದನ ಪಡೆದಾಗ ತಮ್ಮ ಮನಸ್ಸಿಗೆ ತುಂಬಾ ಬೇಸರವಾಗಿತ್ತು, ಅದು ಕೆಲಸದ ಮೇಲೂ ಪರಿಣಾಮ ಬೀರಿತ್ತು. ಈಗ ಆ ನೋವಿನಿಂದ ಹೊರಬಂದಿದ್ದೇನೆ. ಮದುವೆ ಮುರಿದು ಬಿತ್ತು ಎಂದು ಅದರ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಮುಂದಿನ ವರ್ಷ ಮದುವೆಯಾಗುವ ಪ್ಲ್ಯಾನ್​ ಮಾಡಿದ್ದೇನೆ ಎಂದಿದ್ದಾರೆ ನಟ.

56
ಮುಂದಿನ ವರ್ಷ ಮದುವೆ
Image Credit : chandan shetty instagram

ಮುಂದಿನ ವರ್ಷ ಮದುವೆ

ನನಗೆ ಡಿವೋರ್ಸ್ ಆದಾಗ ತುಂಬಾನೆ ಹರ್ಟ್ ಆಗಿತ್ತು. ಸಂಗೀತ ಸಾಧನೆಯಲ್ಲಿ ಮನಸ್ಸು ಶಾಂತವಾಗಿರಬೇಕು. ಆದರೆ ಡಿವೋರ್ಸ್​ನಿಂದ ಕೆಲಸದ ಮೇಲೂ ಎಫೆಕ್ಟ್ ಆಗಿತ್ತು. ಒಳ್ಳೆ ಟ್ಯೂನ್ ಮಾಡಲು ಬೇಕಾದ ಪ್ರಶಾಂತ ಮನಸ್ಸು ಇರಲಿಲ್ಲ. ಎಲ್ಲಾ ಕೆಲಸ ನಿಧಾನವಾಯ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ಮತ್ತೊಂದು ಮದುವೆಯ ಬಗ್ಗೆ ಯೋಚನೆ ಮಾಡಿದ್ದೇನೆ ಎಂದಿದ್ದಾರೆ.

66
ಮೊದಲಿನ ತಪ್ಪು ಮಾಡಲ್ಲ
Image Credit : Instagram

ಮೊದಲಿನ ತಪ್ಪು ಮಾಡಲ್ಲ

ಒಂದಿಬ್ಬರು ಹುಡುಗಿಯರನ್ನು ನೋಡಿದ್ದೇನೆ. ಸಮಾಧಾನವಾಗಿ ಟೈಮ್​ ತೆಗೆದುಕೊಂಡು ನಿರ್ಧಾರ ಮಾಡುತ್ತೇನೆ. ಮೊದಲಿನ ಮದುವೆಯಲ್ಲಿ ಮಾಡಿರೋ ತಪ್ಪು ಮತ್ತೆ ಮಾಡಲ್ಲ. ಅಪ್ಪ ಮತ್ತು ಅಮ್ಮ ಒಪ್ಪಿಕೊಂಡ ಮೇಲೆ ಮದುವೆ ಆಗುತ್ತೇನೆ. ಮೊದಲಿನ ರೀತಿ ತರಾತುರಿ ಮಾಡುವುದಿಲ್ಲ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಚಂದನ್ ಶೆಟ್ಟಿ
ನಿವೇದಿತಾ ಗೌಡ
ಮನರಂಜನಾ ಸುದ್ದಿ
ಬಿಗ್ ಬಾಸ್ ಕನ್ನಡ
ಸಂಬಂಧಗಳು
ಮದುವೆ
ಪ್ರೇಮ ವಿವಾಹ

Latest Videos
Recommended Stories
Recommended image1
5 ರೂಪಾಯಿಯ ಗುಟ್ಕಾಕ್ಕಾಗಿ ನಡೆದ ಭೀಕರ ಹತ್ಯೆ; ಚಾಕು ಇರಿತಕ್ಕೆ ಚಾಲಕ ಬಲಿ
Recommended image2
ದೀಪಾ ಸಾಲದಂತ ಈಗ ನಂದಿನಿ ಬೇರೆ! Serial ಡೈರೆಕ್ಟರ್ಸ್​ಗೆ ಪುರುಷರ ಮೇಲೆ ಕರುಣೆನೇ ಇಲ್ವಾ- ಭಾರಿ ಅಸಮಾಧಾನ
Recommended image3
ಸುದ್ದಿ ಸುಳ್ಳಲ್ಲ.. ರಶ್ಮಿಕಾ ಮಂದಣ್ಣಗೆ ಅತ್ತೆ ಪರಂಪರಾಗತ ಚಿನ್ನದ ಬಳೆಗಳನ್ನು ಕೊಟ್ಟಿದ್ದಕ್ಕೆ ಸಾಕ್ಷಿ ಇಲ್ಲಿದೆ ನೋಡಿ!
Related Stories
Recommended image1
ಸುಖಮಯ ದಾಂಪತ್ಯಕ್ಕೆ ಕ್ವಾಲಿಟಿ ಎಷ್ಟಿರಬೇಕು, ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ Nivedita Gowda!
Recommended image2
ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved