MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಮೈಸೂರು ಯುವತಿಗೆ ಕನ್ನಡದ ವಚನ ಹೇಳಿ ತಾಳಿ ಕಟ್ಟಿದ ನೆದರ್‌ಲ್ಯಾಂಡ್ ಯುವಕ!

ಮೈಸೂರು ಯುವತಿಗೆ ಕನ್ನಡದ ವಚನ ಹೇಳಿ ತಾಳಿ ಕಟ್ಟಿದ ನೆದರ್‌ಲ್ಯಾಂಡ್ ಯುವಕ!

ಮೈಸೂರಿನ ಯುವತಿ ವಿದ್ಯಾಳನ್ನು ನೆದರ್‌ಲ್ಯಾಂಡ್‌ನ ರುಟ್ಗೆರ್ ಭಾರತೀಯ ಸಂಪ್ರದಾಯದಂತೆ ವಚನ ಹೇಳಿ ಮದುವೆಯಾದರು. ವಿದ್ಯಾ ವಿದೇಶದಲ್ಲಿ ಓದುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕುಟುಂಬದವರ ಆರಂಭಿಕ ವಿರೋಧದ ನಂತರ, ಮದುವೆಗೆ ಒಪ್ಪಿಗೆ ಸೂಚಿಸಿದರು.

1 Min read
Sathish Kumar KH
Published : Feb 17 2025, 05:00 PM IST| Updated : Feb 17 2025, 05:15 PM IST
Share this Photo Gallery
  • FB
  • TW
  • Linkdin
  • Whatsapp
15

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಯುವತಿ ವಿದ್ಯಾಳನ್ನು ಪ್ರೀತಿ ಮಾಡಿದ ನೆದರ್‌ಲ್ಯಾಂಡ್‌ನ ಯುವಕ ರುಟ್ಗೆರ್ ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಭಾರತೀಯ ಪದ್ದತಿಯಂತೆ ವಚನ ಹೇಳಿ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾರೆ.

25

ಭಾರತೀಯ ಸಂಸ್ಕೃತಿಗೆ ವಿದೇಶಿ ಯುವಕ ಮಾರು ಹೋಗಿದ್ದಾರೆ. ಹೀಗಾಗಿ, ಮೈಸೂರು ಮೂಲದ‌ ಯುವತಿಯನ್ನು ನೆದರ್‌ಲ್ಯಾಂಡ್ ಯುವಕ ಇಂದು ಮದುವೆ ಮಾಡಿಕೊಂಡಿದ್ದಾನೆ. ಮೈಸೂರಿನ ವಿಜಯನಗರ‌ 2ನೇ ಹಂತದ ಖಾಸಗಿ ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ಮದುವೆ ನಡೆದಿದೆ. ವಚನ ಕಲ್ಯಾಣ ಮಹೋತ್ಸವದ  ಮೂಲಕ ಮೈಸೂರು ಯುವತಿಗೆ ತಾಳಿ ಕಟ್ಟಿದ ವಿದೇಶಿ ಯುವಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

35

ಮೈಸೂರಿನ ಹೂಟಗಳ್ಳಿಯ ನಿವಾಸಿ ಟಿ.ಎಸ್. ವಿದ್ಯಾ ಅವರನ್ನು ನೆದರ್‌ಲ್ಯಾಂಡ್ ದೇಶದ ರುಟ್ಗೆರ್ ಮದುವೆ ಮಾಡಿಕೊಂಡಿದ್ದಾನೆ. ವಿದ್ಯಾ ಫಾರಿನ್‌ಗೆ ಓದಲು ಹೋಗಿದ್ದ ವೇಳೆ ಇಬ್ಬರ ನಡುವೆ ಕಾಲೇಜು ಸಮಯದಲ್ಲಿಯೇ ಪ್ರೇಮಾಂಕುರ ಆಗಿತ್ತು. ಇದಾದ ನಂತರ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಇದಕ್ಕೆ ವಿದ್ಯಾ ಮನೆಯವರು ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರದದ ದಿನಗಳಲ್ಲಿ ಮಗಳ ಇಚ್ಛೆಯಂತೆ ಮದುವೆ ಮಾಡಿಕೊಡಲು ಒಪ್ಪಿಗೆ ಸೂಚಿಸಿದರು.

45

ಮಗಳ ಮದುವೆಯನ್ನು ವಚನ ಕಲ್ಯಾಣ ಮಹೋತ್ಸವದ ಮೂಲಕ ಮದುವೆ ಮಾಡಿಕೊಡಲು ನಿರ್ಧರಿಸಿದರು. ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದ ಪೀಠಾಧಿಪತಿ ಡಾ. ಗುರುಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿಂದು ವಚನ ಕಲ್ಯಾಣ ಮಹೋತ್ಸವ‌ ನೆರವೇರಿತು. ಅಪರೂಪದ ಮದುವೆಗೆ ಎರಡು ಕಡೆಯ ಕುಟುಂಬಗಳ ಸದಸ್ಯರು ಸಾಕ್ಷಿಯಾದರು.

55

ವಿದ್ಯಾಳನ್ನು ಮದುವೆಯಾಗಲು ಯುವಕ ರುಟ್ಗೆರ್ ಹಾಗೂ ಆತನೊಂದಿಗೆ ಸಂಬಂಧಿಕರು, ಸ್ನೇಹಿತರು ಸೇರಿ 35 ಜನರು ನೆದರ್‌ಲ್ಯಾಂಡ್‌ನಿಂದ ಮೈಸೂರಿಗೆ ಆಗಮಿಸಿದ್ದರು. ಇನ್ನು ವಿದ್ಯಾಳ ಕುಟುಂಬದ ಎಲ್ಲ ಬಂಧುಗಳೂ ಕೂಡ ಮದುವೆಗೆ ಹಾಜರಾಗಿದ್ದರು. ಎಲ್ಲರೂ ನವ ದಂಪತಿಗಳಿಗೆ ಶುಭ ಕೋರಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಮೈಸೂರು
ಮದುವೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved