MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಯಜುವೇಂದ್ರ ಚಾಹಲ್ ಹೇಳಿಕೆ ಬಳಿಕ ಆಧ್ಯಾತ್ಮದ ಕಡೆ ವಾಲಿದ ಧನಶ್ರೀ ವರ್ಮಾ

ಯಜುವೇಂದ್ರ ಚಾಹಲ್ ಹೇಳಿಕೆ ಬಳಿಕ ಆಧ್ಯಾತ್ಮದ ಕಡೆ ವಾಲಿದ ಧನಶ್ರೀ ವರ್ಮಾ

ಯಜುವೇಂದ್ರ ತಮ್ಮ ವಿಚ್ಛೇದನದ  ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಧನಶ್ರೀ ವರ್ಮಾ ಸದ್ದಿಲ್ಲದೆ ಪ್ರತಿಕ್ರಿಯಿಸಿದ್ದಾರೆ. ಪದಗಳಿಂದಲ್ಲ, ಬದಲಾಗಿ ಹೃದಯಸ್ಪರ್ಶಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ.

2 Min read
Ashwini HR
Published : Aug 05 2025, 11:02 AM IST| Updated : Aug 05 2025, 11:21 AM IST
Share this Photo Gallery
  • FB
  • TW
  • Linkdin
  • Whatsapp
16
ಒಂಟಿ ಜೀವನವನ್ನು ಆನಂದಿಸುತ್ತಿರುವ ಧನಶ್ರೀ
Image Credit : instagram

ಒಂಟಿ ಜೀವನವನ್ನು ಆನಂದಿಸುತ್ತಿರುವ ಧನಶ್ರೀ

ಈ ವರ್ಷದ ಆರಂಭದಲ್ಲಿ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರಿಂದ ವಿಚ್ಛೇದನ ಪಡೆದ ನಂತರ ಧನಶ್ರೀ ವರ್ಮಾ ಪ್ರಸ್ತುತ ಒಂಟಿ ಜೀವನವನ್ನು ಆನಂದಿಸುತ್ತಿದ್ದಾರೆ. ಮೂಲತಃ ನೃತ್ಯ ಸಂಯೋಜಕಿಯಾಗಿರುವ ಧನಶ್ರೀ ವರ್ಮಾ ತಮ್ಮ ಜೀವನದ ಬಹುಪಾಲು ಸಮಯವನ್ನು ದುಬೈನಲ್ಲಿ ಕಳೆದಿದ್ದಾರೆ. ಇತ್ತೀಚೆಗೆ ಯುಎಇಗೆ ಭೇಟಿ ನೀಡಿದ್ದ ಅವರು ನಗರದಲ್ಲಿನ ಬದಲಾವಣೆಗಳನ್ನು ನೋಡಿ ಖುಷಿಪಟ್ಟರು.

26
ಸದ್ದಿಲ್ಲದೆ ಪ್ರತಿಕ್ರಿಯಿಸಿದ ಧನಶ್ರೀ
Image Credit : instagram

ಸದ್ದಿಲ್ಲದೆ ಪ್ರತಿಕ್ರಿಯಿಸಿದ ಧನಶ್ರೀ

ಯಜುವೇಂದ್ರ ತಮ್ಮ ವಿಚ್ಛೇದನ ಮತ್ತು ವೈರಲ್ ಆದ 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಟಿ-ಶರ್ಟ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಧನಶ್ರೀ ವರ್ಮಾ ಸದ್ದಿಲ್ಲದೆ ಪ್ರತಿಕ್ರಿಯಿಸಿದ್ದಾರೆ. ಪದಗಳಿಂದಲ್ಲ, ಬದಲಾಗಿ ಹೃದಯಸ್ಪರ್ಶಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ.

36
ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಧನಶ್ರೀ
Image Credit : instagram

ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಧನಶ್ರೀ

ಹೌದು, ಇದೀಗ ಧನಶ್ರೀ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ದುಬೈ ಭೇಟಿಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿರುವುದನ್ನು ಗಮನಿಸಬಹುದು. ಈ ಫೋಟೋದಲ್ಲಿ ಅವರು ನಗರವು ಸಂಸ್ಕೃತಿ ಮತ್ತು ಸಮುದಾಯವನ್ನು ಹೇಗೆ ಅಳವಡಿಸಿಕೊಂಡಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ದುಬೈ ಆಹಾರ ಮತ್ತು ನೈಟ್ ಲೈಫ್‌ ಕೂಡ ಎಂಜಾಯ್ ಮಾಡಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Dhanashree Verma (@dhanashree9)

46
ಏನಿದೆ ಪೋಸ್ಟ್‌ನಲ್ಲಿ?
Image Credit : Instagram own

ಏನಿದೆ ಪೋಸ್ಟ್‌ನಲ್ಲಿ?

ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಧನಶ್ರೀ, ದುಬೈನಲ್ಲಿ ಬೆಳೆದ ನನಗೆ ಹಲವು ನೆನಪುಗಳು ಮರುಕಳಿಸಿದವು. ಈಗ ನಗರವು ಎಷ್ಟು ವಿಕಸನಗೊಂಡಿದೆ ಎಂಬುದನ್ನು ನೋಡುವುದು ಹೃದಯಸ್ಪರ್ಶಿಯಾಗಿತ್ತು. ಒಂದು ಪ್ರಮುಖ ಅಂಶವೆಂದರೆ ಈ ಸುಂದರವಾದ ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಶಾಂತಿ, ಶಕ್ತಿ ನೀಡುತ್ತದೆ. ನಗರವು ಸಂಸ್ಕೃತಿ ಮತ್ತು ಸಮುದಾಯವನ್ನು ಅಳವಡಿಸಿಕೊಳ್ಳುವಲ್ಲಿ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂಬುದನ್ನು ನೀವೂ ನೋಡಬಹುದು ಎಂದು ಬರೆದುಕೊಂಡಿದ್ದಾರೆ.

56
ಪಾಡ್‌ಕಾಸ್ಟ್‌ನಲ್ಲಿ ಮೌನ ಮುರಿದ ಚಾಹಲ್
Image Credit : X/Yuzvendra Chahal

ಪಾಡ್‌ಕಾಸ್ಟ್‌ನಲ್ಲಿ ಮೌನ ಮುರಿದ ಚಾಹಲ್

ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಚಾಹಲ್ ಮೊದಲ ಬಾರಿಗೆ ತಮ್ಮ ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ಕೆಲವೇ ದಿನಗಳ ನಂತರ ಧನಶ್ರೀ ಈ ಪೋಸ್ಟ್ ಶೇರ್ ಮಾಡಿದ್ದಾರೆ. 

66
ಚಾಹಲ್ ಹೇಳಿದ್ದೇನು?
Image Credit : yuzvendra chahal dhanashree verma Instagrama

ಚಾಹಲ್ ಹೇಳಿದ್ದೇನು?

ವಿಚ್ಛೇದನ ಅರ್ಜಿ ಕುರಿತ ವಿಚಾರಣೆಯ ಅಂತಿಮ ದಿನದಂದು "ಬಿ ಯುವರ್ ಓನ್ ಶುಗರ್ ಡ್ಯಾಡಿ" ಎಂದು ಬರೆದಿದ್ದ ಟಿ-ಶರ್ಟ್ ಧರಿಸಿದ್ದ ವೈರಲ್ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಚಾಹಲ್, " ಇದರಲ್ಲಿ ಡ್ರಾಮಾ ಏನೂ ಇಲ್ಲ. ನಿಂದನೆಗಾಗಿ ಅಲ್ಲ, ನಾನು ಒಂದು ಸಂದೇಶವನ್ನು ನೀಡಲು ಬಯಸಿದ್ದೆ ಮತ್ತು ನಾನು ಅದನ್ನು ಮಾಡಿದೆ." ಎಂದಿದ್ದರು.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸಂಬಂಧಗಳು
ಜೀವನಶೈಲಿ
ವಿಚ್ಛೇದನ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved