ಕಾಕ್ರೋಚ್ ಜನತಾ ಪಕ್ಷ: ಬೆಂಗಳೂರಿಗೆ ನೋ ಎಂಟ್ರಿ- ಗುಪ್ತಚರ ಇಲಾಖೆ ಶಾಕಿಂಗ್ ವರದಿಯಲ್ಲಿ ಏನಿದೆ
ನಿರುದ್ಯೋಗದ ವಿಷಯದ ಮೇಲೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಕ್ಷವು ಯುವಜನರಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ, ಇದರ ಹಿಂದೆ ಇರುವ ಉದ್ದೇಶದ ಬಗ್ಗೆ ಗುಪ್ತಚರ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ. ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ, ಬೆಂಗಳೂರಿನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.

ಹವಾ ಸೃಷ್ಟಿಸ್ತಿರೋ ಕಾಕ್ರೋಚ್ ಜನತಾ ಪಕ್ಷ
ಕಾಕ್ರೋಚ್ ಜನತಾ ಪಕ್ಷ (Cockroach Janata Party) ಆರಂಭವಾಗಿ ವಾರದಲ್ಲಿಯೇ ಹವಾ ಸೃಷ್ಟಿಸುತ್ತಿದೆ. ನಿರುದ್ಯೋಗಿಗಳ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಯ ವಿರುದ್ಧ ಈ ಪಕ್ಷವನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇದು ಪ್ರೀ ಪ್ಲ್ಯಾನ್ಡ್, ಇದರ ಹಿಂದೆ ದೊಡ್ಡ ಎಜೆಂಡಾ ಇದೆ. ಮುಖ್ಯ ನ್ಯಾಯಮೂರ್ತಿಗಳ ಮಾತು ಒಂದು ನೆಪ ಅಷ್ಟೇ ಎನ್ನುವ ಮಾತೂ ಕೇಳಿಬರುತ್ತಿದೆ. ಇಲ್ಲಿನ ಫಾಲೋವರ್ಸ್ ಸಂಖ್ಯೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಿಗರೇ ಹೆಚ್ಚಾಗಿರುವುದಾಗಿ ಕೆಲವರು ಹೇಳುತ್ತಿದ್ದರೆ, ಇದರ ಸಂಸ್ಥಾಪಕ ಅಭೀಜಿತ್ ದೀಪ್ಕೆ ಇನ್ನೊಂದು ಅಂಕಿ ಅಂಶ ನೀಡಿ ಭಾರತೀಯರೇ ಹೆಚ್ಚು ಇರುವುದಾಗಿ ಹೇಳಿದ್ದಾರೆ. ಆದರೆ ಅದು ಮತ್ತು ಇದು ಎರಡೂ ಅಧಿಕೃತವಲ್ಲ ಎನ್ನುವುದು ಇದಾಗಲೇ ಸಾಬೀತಾಗಿದೆ.

ನಮ್ಮ ಯೋಚನೆ ಅದಲ್ಲ ಎಂದ ಸಂಸ್ಥಾಪಕ
ಇದರ ನಡುವೆಯೇ ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಯನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ಮತ್ತೊಂದು ಖಾತೆಯನ್ನು ಪಾರ್ಟಿ ತೆಗೆದಿದೆ. ಅಮೆರಿಕದಲ್ಲಿ ಕುಳಿತು ಭಾರತದ ಬಗ್ಗೆ ಇಷ್ಟೊಂದು ಯೋಚನೆ ಮಾಡುತ್ತಿರುವ ಅಭಿಜೀತ್ ಎನ್ನುವ ಯುವಕನಿಗೆ ಇಂದಿನ ಜೆನ್ Zಗಳು ಭಾರಿ ಸಪೋರ್ಟ್ ಕೊಡುತ್ತಿದ್ದಾರೆ. ಆದರೆ ಗುಪ್ತಚರ ಇಲಾಖೆ ಶಾಕಿಂಗ್ ವರದಿ ನೀಡಿರುವ ಬೆನ್ನಲ್ಲೇ ಪಾರ್ಟಿಯ ಇನ್ಸ್ಟಾಗ್ರಾಮ್ ಮಾತ್ರವಲ್ಲದೇ ಅಭಿಜೀತ್ ಅವರ ಸೋಷಿಯಲ್ ಮೀಡಿಯಾ ಕೂಡ ಹ್ಯಾಕ್ ಮಾಡಲಾಗಿದೆ ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಭಾರತದ ಜನರಿಗೆ ನ್ಯಾಯ ಕೊಡುವುದು ನಮ್ಮ ಕೆಲಸವಾಗಿತ್ತು. ಆದರೆ ಜೆನ್ Z ಗಳನ್ನು ಎತ್ತಿಕಟ್ಟಿ ನೇಪಾಳದಂಥ ದಂಗೆ ಮಾಡುವ ಉದ್ದೇಶ ಎನ್ನುತ್ತಿದ್ದಾರೆ. ಆದರೆ ಆ ರೀತಿಯ ಯಾವುದೇ ಉದ್ದೇಶ ನಮ್ಮದಲ್ಲ ಎಂದಿದ್ದಾರೆ ಅಭಿಜೀತ್.
ಬೆಂಗಳೂರಿನಲ್ಲಿ ನಿರ್ಬಂಧ
ಈ ನಡುವೆ, ಕಾಕ್ರೋಚ್ ಜನತಾ ಪಾರ್ಟಿಯ ಮೇ 24ರ, ಬೆಂಗಳೂರಿನ ಟೌನ್’ಹಾಲ್ ಬಳಿ ಕರೆದಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಖುದ್ದು ಸಿದ್ದರಾಮಯ್ಯನವರೇ ಖುಷಿಯಿಂದ ಈ ಪಕ್ಷದ ಟೀ-ಷರ್ಟ್ ಉದ್ಘಾಟನೆ ಮಾಡಿದ್ದರು. ಆದರೆ ಇದೀಗ ಅನುಮತಿ ನಿರಾಕರಿಸಿದ್ದು ಏಕೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಷ್ಟಕ್ಕೂ ಇದಕ್ಕೆ ಗುಪ್ತಚರ ಇಲಾಖೆ ನೀಡಿರುವ ವರದಿ ಕಾರಣವೇ ಎನ್ನುವ ಸಂದೇಹವೂ ಕೂಡ ಬಂದಿದೆ.
ಏನು ಹೇಳಿದೆ ಗುಪ್ತಚರ ಇಲಾಖೆ
ಕಾಕ್ರೋಚ್ ಜನತಾ ಪಾರ್ಟಿಯು, ದೇಶದ ಭದ್ರತಾ ಸಂಸ್ಥೆಗಳ ತೀವ್ರ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಭಾರೀ ಜನಸಜ್ಜುಗೊಳಿಸುವಿಕೆ, ವಿದೇಶಿ ಹಸ್ತಕ್ಷೇಪ ಮತ್ತು ಸಂಘಟಿತ ಅಶಾಂತಿಗೆ ಕಾರಣವಾಗಲಿದೆ ಎಂದು ಗುಪ್ತಚರ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದೆ. ನಿರುದ್ಯೋಗ, ಹಣದುಬ್ಬರದಂತಹ ಸೂಕ್ಷ್ಮ ವಿಚಾರಗಳನ್ನು ಬಳಸಿಕೊಂಡು ಯುವಕರನ್ನು ಪ್ರಚೋದಿಸುವ ಸಾಧ್ಯತೆಯಿದೆ.
ವಿದೇಶಿ ಮೂಲದ ಟೆಲಿಗ್ರಾಂ
ವೇಗವಾಗಿ ಬೆಳೆಯುತ್ತಿರುವ ಇದರ ನೆಟ್ವರ್ಕ್ ಜಾಲದ ಹಿಂದೆ, ಪಾಕಿಸ್ತಾನ ಸೇರಿ ವಿದೇಶಿ ಮೂಲದ ಟೆಲಿಗ್ರಾಂ ಖಾತೆಗಳು ಸಕ್ರಿಯವಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಇದೇ ವೇಳೆ, ಸೋಷಿಯಲ್ ಮೀಡಿಯಾ ಖಾತೆ ಓಪನ್ ಮಾಡಿದ ತಕ್ಷಣ ಇಷ್ಟೊಂದು ಫಾಲೋವರ್ಸ್ ಬಂದಿರುವ ಹಿಂದೆ ಇರುವುದೇನು ಎನ್ನುವುದು ಕೂಡ ತನಿಖೆಯಿಂದ ತಿಳಿಯಲಾಗುವುದು ಎಂದಿದ್ದಾರೆ. ಆರಂಭಿಕ ತನಿಖೆಯ ತನಿಖೆಯ ಪ್ರಕಾರ, 2021ರಲ್ಲಿ ಆಮ್ ಆದ್ಮಿ ಪಾರ್ಟಿ - ಗುಜರಾತ್ ಹೆಸರಿನಲ್ಲಿ ಆರಂಭವಾಗಿ, ನಂತರ ಹೆಸರನ್ನು ಕಾಕ್ರೋಚ್ ಜನತಾ ಪಾರ್ಟಿ ಎಂದು ಬದಲಾಯಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

