- Home
- News
- Politics
- 'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್ ಮೋದಿ ಬಗ್ಗೆ ಏನಂದ್ರು ಕೇಳಿ!
'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್ ಮೋದಿ ಬಗ್ಗೆ ಏನಂದ್ರು ಕೇಳಿ!
ತಮ್ಮ 'ಮೆಲ್ಲಿಸೈ' ಚಿತ್ರದ ಪ್ರಚಾರದ ವೇಳೆ ಮಾತನಾಡಿದ ನಟ ಕಿಶೋರ್, ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಸಿಕ್ಕರೆ 2014ಕ್ಕೆ ಹೋಗುತ್ತಿದ್ದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನು ಹೇಳಿದ್ರು ಕೇಳಿ.

ಖಳನಾಯಕನಾಗಿ ಮಿಂಚಿಂಗ್
ಕನ್ನಡ, ತಮಿಳು ತೆಲುಗು, ಮಲಯಾಳ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಕಿಶೋರ್, ಸದಾ ಸುದ್ದಿಯಲ್ಲಿ ಇರುವ ನಟ. ಸೋಷಿಯಲ್ ಮೀಡಿಯಾದಿಂದ ಹಿಡಿದು ಭಾಷಣಗಳಲ್ಲಿ ಅವರು ಆಡುವ ಮಾತುಗಳು ಕಾಂಟ್ರವರ್ಸಿಯಾಗುವುದೇ ಹೆಚ್ಚು. ರಾಜಕೀಯದಿಂದ ಹಿಡಿದು ಸಿನಿಮಾ ರಂಗದವರೆಗೂ ಅವರು, ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡು ಪ್ರಚಾರದಲ್ಲಿ ಇರುವುದನ್ನೇ ಬಯಸುವವರು. ಅದರಲ್ಲಿಯೂ ಬಿಜೆಪಿ, ಆರ್ಎಸ್ಎಸ್, ಪ್ರಧಾನಿ ಮೋದಿ ಅವರ ಬಗ್ಗೆಯಂತೂ ನೆಗೆಟಿವ್ ಮಾತನಾಡಿರುವ ಮೂಲಕ ಚಾಲ್ತಿಯಲ್ಲಿ ಇರುವ ನಟ ಕಿಶೋರ್.
ರಿವರ್ಸ್ ಅವಕಾಶ
ಇದೀಗ ಅವರು ತಮಿಳಿನ .'ಮೆಲ್ಲಿಸೈ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇದರ ಪ್ರಮೋಷನ್ ಸಮಯದಲ್ಲಿ capt.matsat ಎಂಬ ಸೋಷಿಯಲ್ ಮೀಡಿಯಾಗೆ ಸಂದರ್ಶನ ನೀಡುವ ಸಮಯದಲ್ಲಿ, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ. ನಿಮಗೆ ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆ ಎದುರಾಗಲು ಕಾರಣವೂ ಇದೆ. ಅದೇನೆಂದರೆ ಮೆಲ್ಲಿಸೈ ಚಿತ್ರದಲ್ಲಿ ಕಿಶೋರ್ ಅವರು ಶಾಲೆಯೊಂದರ PT ಮಾಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ನಲ್ಲಿ ನಮ್ಮ ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಎನ್ನುವ ಡೈಲಾಗ್ ಇದೆ. ಅದಕ್ಕಾಗಿ ಅವರಿಗೆ ಈ ಪ್ರಶ್ನೆಯನ್ನು ಕೇಳಲಾಗಿದೆ.
ಏನ್ ಹೇಳಿದ್ರು ನಟ?
ಅದಕ್ಕೆ ಕಿಶೋರ್ ಅವರು ಹೇಳಿದ್ದೇನು ಗೊತ್ತಾ? ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ, ಈ ವಿಡಿಯೋ ಹಾಕೋಕೆ ಸಾಧ್ಯನಾ' ಎಂದು ಪೀಠಿಕೆ ಇಡುತ್ತಲೇ, ಹಾಗೊಂದು ವೇಳೆ ಹಿಂದಕ್ಕೆ ಹೋಗಿ ಏನಾದರೂ ಬದಲಿಸುವ ಅವಕಾಶ ಸಿಕ್ಕರೆ 2014ಕ್ಕೆ ಹೋಗಿ ಪ್ರಧಾನಿಯನ್ನು ಬದಲಿಸಿಬಿಡುತ್ತೇನೆ ಎಂದಿದ್ದಾರೆ.
ದೇಶ ಬದಲಾಗ್ತಿತ್ತು
ನಾನು ಹೇಳ್ತಿರೋದು ನಿಜ. ಪ್ರಧಾನಿ ಒಂದು ವೇಳೆ ಬದಲಾಗಿದ್ದರೆ ಭಾರತ ದೇಶವೇ ಬದಲಾಗಿರುತ್ತಿತ್ತು. ಈಗ ಎಷ್ಟು ದ್ವೇಷ ಇದೆ. ಅದು ನಿಜಕ್ಕೂ ಭಯಾನಕವಾಗಿದೆ. ಇದನ್ನು ಬದಲಿಸಲು ದಶಕಗಳೇ ಬೇಕು, ಬಹಳ ಭಯಾನಕ ಜನ. ಪ್ರೀತಿ ಇಲ್ಲದಿದ್ದರೆ ಜನ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ..
ದ್ವೇಷವೇ ಬಂಡವಾಳ
ಒಬ್ಬರನ್ನೊಬ್ಬರು ದ್ವೇಷಿಸಿದರೆ ಹೇಗೆ ಒಟ್ಟಿಗೆ ಬಾಳಲು ಸಾಧ್ಯ ಹೇಳಿ ಎಂದು ಪ್ರಶ್ನಿಸಿರುವ ನಟ, ಆ ದ್ವೇಷವನ್ನು ಬಂಡವಾಳವಾಗಿ ಮಾಡಿಕೊಂಡು ಒಬ್ಬರು ಅಧಿಕಾರಕ್ಕೆ ಬರ್ತಾರೆ ಅಂದ್ರೆ ಬಹಳ ಭಯಾನಕ ಜನ ಅವರು. ಅಂಥವರು ಈಗ ಅಧಿಕಾರದಲ್ಲಿದ್ದಾರೆ. ಅಲ್ಲಿ ಟ್ರಂಪ್ ನೋಡಿ, ಇಲ್ಲಿ ಇವರನ್ನು ನೋಡಿ. ಎಲ್ಲರೂ ಅದೇ ರೀತಿ ಇದ್ದಾರೆ ಎಂದಿದ್ದಾರೆ.
ಅಧಿಕಾರ ದುರ್ಬಳಕೆ
ರಾಜಕೀಯ ಎನ್ನುವುದು ಈಗ ಅಧಿಕಾರ ಎನ್ನುವಂಥ ಸ್ಥಿತಿ ಇದೆ. ಆದರೆ ನಿಜಕ್ಕೂ ರಾಜಕೀಯ ಎಂದರೆ ಅಧಿಕಾರ ಅಲ್ಲ, ಕೆಲಸ ಮಾಡುವುದಕ್ಕೆ ರಾಜಕೀಯ ಎನ್ನಬೇಕು. ಜನರಿಗೆ ಸಹಾಯ ಮಾಡುವ ಮನಸ್ಥಿತಿ ರಾಜಕಾರಣಿಗಳಲ್ಲಿ ಇರಬೇಕು. ಮೋದಿ ಅವರು ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

