MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • 40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ದಕ್ಷಿಣ ಭಾರತದ ನಟಿಯರು!

40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ದಕ್ಷಿಣ ಭಾರತದ ನಟಿಯರು!

ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಹೀರೋಯಿನ್ಸ್ ಮದುವೆ ಆಗದೆ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಅದರಲ್ಲೂ ಸೌತ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ಸ್ ಆಗಿ ಮಿಂಚಿದ ನಟಿಯರು ವಿವಿಧ ಕಾರಣಗಳಿಂದ ಒಂಟಿಯಾಗಿದ್ದಾರೆ. 40 ವರ್ಷ ದಾಟಿದ್ರೂ ಮದುವೆ ಆಗದ ಹೀರೋಯಿನ್ಸ್ ಯಾರು ಗೊತ್ತಾ?

2 Min read
Author : Sathish Kumar KH
Published : Jul 06 2025, 05:45 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

40 ದಾಟಿದರೂ ಮದುವೆ ಆಗದ ನಟಿಯರ ಪಟ್ಟೊಯಲ್ಲಿ ಮೊದಲಿಗೆ ತ್ರಿಷ ಹೆಸರು ಕೇಳಿಬರುತ್ತಿದೆ. ಈಗಲೂ ಬೇಡಿಕೆಯಲ್ಲಿರುವ ಅಪರೂಪದ ನಟಿ. 20 ವರ್ಷಗಳಿಂದ ಹೀರೋಯಿನ್ ಆಗಿ ಮುಂದುವರೆದಿದ್ದಾರೆ. ಸ್ಟಾರ್ ಹೀರೋಗಳ ಜೊತೆ ನಟಿಸಿದ ತ್ರಿಷ, ಈಗಲೂ ಸೀನಿಯರ್ ಹೀರೋಗಳ ಜೊತೆ ನಟಿಸುತ್ತಿದ್ದಾರೆ. 

ನಿರ್ಮಾಪಕ ವರುಣ್ಮಣಿಯನ್ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಕಾರಣಾಂತರಗಳಿಂದ ಮದುವೆಯಾಗದೇ ಇಬ್ಬರ ನಡುವೆ ಬ್ರೇಕಪ್ ಆಯ್ತು. ರಾಣಾ ಜೊತೆ ಡೇಟಿಂಗ್, ವಿಜಯ್ ಜೊತೆ ರಿಲೇಷನ್‌ಷಿಪ್ ಇದೆ ಅಂತ ಗಾಸಿಪ್ ಇದೆ. ಆದರೆ ತ್ರಿಷ ತಮ್ಮ ಮದುವೆ ಬಗ್ಗೆ ಏನೂ ಹೇಳಿಲ್ಲ.

26
Image Credit : Instagram

ಕನ್ನಡತಿಯಾಗಿರುವ ಬೆಂಗಳೂರು ಮೂಲದ ಬೆಡಗಿ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ಕೂಡ ಮದುವೆ ಆಗಿಲ್ಲ. ಇವರಿಗೆ 43 ವರ್ಷವಾದರೂ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಅರುಂಧತಿ, ಬಾಹುಬಲಿ, ಭಾಗಮತಿ ಸಿನಿಮಾಗಳಲ್ಲಿ ನಟಿಸಿದ ಅನುಷ್ಕಾ, ತಮಿಳಿನಲ್ಲೂ ಸ್ಟಾರ್ ನಟಿ. 

ಪ್ರಭಾಸ್ ಜೊತೆ ಲವ್ ಇದೆ ಅಂತ ಗಾಸಿಪ್ ಇದೆ. ಫ್ಯಾನ್ಸ್ AI ಟೆಕ್ನಾಲಜಿ ಬಳಸಿ ಮದುವೆ ಫೋಟೋ ವೈರಲ್ ಮಾಡಿದ್ದರು. ಆದರೆ ಇಬ್ಬರೂ ನಾವು ಫ್ರೆಂಡ್ಸ್ ಅಂತ ಹೇಳ್ತಾರೆ. ಅನುಷ್ಕಾ ಬ್ಯಾಚುಲರ್ ಆಗಿ ಉಳಿಯೋಕೆ ಕಾರಣ ಏನು ಅಂತ ಯಾರಿಗೂ ಗೊತ್ತಿಲ್ಲ.

Related Articles

Related image1
Milana Nagaraj: ಸಿನಿಮಾಕ್ಕೆ ಬರುವಾಗ ನನಗೆ ಪರೀಕ್ಷೆನೇ ಮಾಡಿರಲಿಲ್ಲ! ನಟಿ ಮಿಲನಾ ನಾಗರಾಜ್​ ಅಚ್ಚರಿಯ ಹೇಳಿಕೆ...
Related image2
ಗೆಳತಿಗೆ ಲಿಪ್‌ಲಾಕ್‌ ಮಾಡಿ ವೈರಲ್‌ ಆದ ನಟಿ ಸಂಯುಕ್ತಾ ಹೆಗ್ಡೆ, ಮದುಮಗ ಕಂಗಾಲ್‌!
36
Image Credit : Social Media

ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಟಬುಗೆ 53 ವರ್ಷ. ಆದರೂ ಮದುವೆ ಆಗಿಲ್ಲ. ಒಂಟಿ ಜೀವನ ಎಂಜಾಯ್ ಮಾಡ್ತಿದ್ದಾರೆ. ಅಜಯ್ ದೇವಗನ್ ಜೊತೆ ಲವ್ ಅಫೇರ್ ಇತ್ತು ಅಂತ ಹೇಳಲಾಗುತ್ತದೆ. ನಾಗಾರ್ಜುನ ಜೊತೆಗೂ ಲವ್ ಇತ್ತು ಅಂತ ಗಾಸಿಪ್ ಇದೆ. ಆದರೆ ಟಬು ಮದುವೆ ಆಗಲ್ಲ ಅಂತ ಹೇಳಿದ್ದಾರೆ.

46
Image Credit : our own

ಮದುವೆ ಆಗದ ಇನ್ನೊಬ್ಬ ನಟಿ ನಗ್ಮಾ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಹಲವು ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

 ಸಿನಿಮಾದಲ್ಲಿ ಹೀರೋಯಿನ್ ಅವಕಾಶಗಳು ಕಡಿಮೆಯಾದ ಮೇಲೆ ರಾಜಕೀಯಕ್ಕೆ ಹೋದರು. ಕ್ರಿಕೆಟರ್ ಗಂಗೂಲಿ ಜೊತೆ ಲವ್ ಇತ್ತು ಅಂತ ಹೇೆಳಲಾಗುತ್ತದೆ. 50 ದಾಟಿದ ನಗ್ಮಾ ಬ್ಯಾಚುಲರ್ ಲೈಫ್ ನಡೆಸ್ತಿದ್ದಾರೆ.

56
Image Credit : our own

ಕೇರಳದ ನಟಿ ಸಿತಾರ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಸೈ ಎನಿಸಿಕೊಂಡಿರುವ ಸಿತಾರ ಅವರು ಇದೀಗ ಧಾರಾವಾಹಿ ಮೂಲಕ ನಟನೆ ಮುಂದುವರೆಸಿದ್ದಾರೆ. ಇದೀಗ ತಾಯಿ ಪಾತ್ರಗಳನ್ನು ಮಾಡುತ್ತಿದ್ದಾರೆ. 

52 ವರ್ಷದ ಸಿತಾರ ಇನ್ನೂ ಮದುವೆ ಆಗಿಲ್ಲ. ನಾನು ಮದುವೆಯಾದರೆ ತಂದೆ-ತಾಯಿಯಿಂದ ದೂರ ಆಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಮದುವೆ ಆಗಿಲ್ಲ ಅಂತ ಹೇಳಿದ್ದಾರೆ. ನಿರ್ಮಾಪಕ ಮುರಳಿ ಜೊತೆ ಲವ್ ಇತ್ತು. ಆದರೆ ಅವರು 2010 ರಲ್ಲಿ ತೀರಿಕೊಂಡರು. ಅದಕ್ಕೆ ಸಿತಾರ ಮದುವೆ ಆಗಿಲ್ಲ ಅಂತಲೂ ಹೇಳಲಾಗುತ್ತದೆ.

66
Image Credit : Asianet News

ತೆಲುಗು, ತಮಿಳು ಸಿನಿಮಾಗಳಲ್ಲಿ ಫೇಮಸ್ ಆದ ನಟಿ ಕೌಸಲ್ಯ ಕೂಡ ಮದುವೆಯಾಗಿಲ್ಲ. ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಈಗ ಕ್ಯಾರೆಕ್ಟರ್ ಪಾತ್ರಗಳನ್ನು ಮಾಡುತ್ತಿದ್ದಾರೆ. 44 ವರ್ಷದ ಕೌಸಲ್ಯ ಇನ್ನೂ ಮದುವೆ ಆಗಿಲ್ಲ. ಲವ್ ಫೇಲ್ಯೂರ್ ಕಾರಣ ಅಂತ ಹೇಳ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಕ್ಷಿಣ ಭಾರತದ ನಟಿ
ಮದುವೆ
ನಟಿ
ತ್ರಿಷಾ ಕೃಷ್ಣನ್
ಅನುಷ್ಕಾ ಶೆಟ್ಟಿ

Latest Videos
Recommended Stories
Recommended image1
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?
Recommended image2
ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್; ಎಲ್ಲದಕ್ಕೂ ಅದೊಂದೇ ಕಾರಣವೇ?!
Recommended image3
ಕಟಾಂಜನದ ಒಳಗಿರೋ ದರ್ಶನ್ ಸ್ಥಿತಿಗೆ ದೇವರೇ ಗತಿ; ಟಿವಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದ ನಟನಿಗೆ ನ್ಯಾಯಾಧೀಶರ ಕೌಂಟರ್ ಏನು?
Related Stories
Recommended image1
Milana Nagaraj: ಸಿನಿಮಾಕ್ಕೆ ಬರುವಾಗ ನನಗೆ ಪರೀಕ್ಷೆನೇ ಮಾಡಿರಲಿಲ್ಲ! ನಟಿ ಮಿಲನಾ ನಾಗರಾಜ್​ ಅಚ್ಚರಿಯ ಹೇಳಿಕೆ...
Recommended image2
ಗೆಳತಿಗೆ ಲಿಪ್‌ಲಾಕ್‌ ಮಾಡಿ ವೈರಲ್‌ ಆದ ನಟಿ ಸಂಯುಕ್ತಾ ಹೆಗ್ಡೆ, ಮದುಮಗ ಕಂಗಾಲ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved