Bigg Bossಗೆ ಹೋಗ್ತಾರಾ ರಾಧಾ ಮಿಸ್ಸು? ನಟಿ ಶ್ವೇತಾ ಪ್ರಸಾದ್ ಹೇಳಿದ್ದೇನು ಕೇಳಿ...
ರಾಧಾ ಮಿಸ್ಸು ಎಂದೇ ಫೇಮಸ್ ಆಗಿರೋ ನಟಿ ಶ್ವೇತಾ ಪ್ರಸಾದ್ ಈ ಬಾರಿಯ ಬಿಗ್ಬಾಸ್ಗೆ ಹೋಗ್ತಾ ಇದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ...

ರಾಧಾ ರಮಣದ ರಾಧಾ ಮಿಸ್ಸು
'ರಾಧಾ ರಮಣ' ಸೀರಿಯಲ್ ಎಂದಾಕ್ಷಣ ನೆನಪಿಗೆ ಬರುವುದು, ಮುಗ್ಧ ಮನಸ್ಸಿನ, ಸಿಂಪಲ್ ಹುಡುಗಿ ಆರಾಧನಾ. ಈ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಶ್ವೇತಾ ಪ್ರಸಾದ್. ಕಿರುತೆರೆಯಲ್ಲಿ ಗುರುತಿಸಿಕೊಂಡು, ಸಾಕಷ್ಟು ಪ್ರಚಾರದಲ್ಲಿ ಇರುವಾಗಲೇ, 'ರಾಧಾ ರಮಣ' ಸೀರಿಯಲ್ ಬಳಿಕ ಕಿರುತೆರೆಯಿಂದ ಸ್ವಲ್ಪ ದೂರವೇ ಇರುವ ನಟಿ, ಸದ್ಯ ತಮ್ಮದೇ ಆದ ಎನ್ಜಿಓ ಶುರು ಮಾಡಿಕೊಂಡಿದ್ದಾರೆ.
ನಿರ್ಮಾಪಕಿಯಾಗಿಯೂ ಶ್ವೇತಾ ಪ್ರಸಾದ್
ಇದರ ಜೊತೆಜೊತೆಗೇನೆ ಇತ್ತೀಚೆಗಷ್ಟೇ ತೆರೆಕಂಡಿರುವ 'ಮರ್ಯಾದೆ ಪ್ರಶ್ನೆ' ಎಂಬ ಸಿನಿಮಾದ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶ್ವೇತಾ ಪ್ರಸಾದ್, ತಮ್ಮ ಪತಿ ರೇಡಿಯೋ ಜಾಕಿ (RJ) ಪ್ರದೀಪ್ ಜೊತೆ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಈಚೆಗೆ ಅಮೃತಧಾರೆಯಲ್ಲಿಯೂ ಟ್ವಿಸ್ಟ್ ಕೊಡಲು ಬಂದಿದ್ದರು ನಟಿ. ರಾಧಾ ಮಿಸ್ಸು ಅಮೃತಧಾರೆಯಲ್ಲಿ ಮಧುರಾ ಆಗಿ ಕಾಣಿಸಿಕೊಂಡಿದ್ದರು.
ಬಿಗ್ಬಾಸ್ಗೆ ಹೋಗ್ತಾರಾ ರಾಧಾ ಮಿಸ್ಸು?
ಇದೀಗ ನಟಿ ಬಿಗ್ಬಾಸ್ಗೆ ಹೋಗ್ತಾ ಇದ್ದಾರೆ ಎನ್ನುವ ಭಾರಿ ಸುದ್ದಿಯಾಗಿದೆ. ಈ ಬಗ್ಗೆ ನಟಿಗೆ ಕೇಳಿದಾಗ ನಟಿ ಏನಂದ್ರು ಗೊತ್ತಾ? ಈ ಕುರಿತು ಬಾಸ್ ಟಿವಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ನಾನದನ್ನು ಹೇಳಲ್ಲ. ಅದು ತುಂಬಾ ಸಸ್ಪೆನ್ಸ್. ಹೋದ್ರೂ ಹೋಗ್ಬಹುದು ಎಂದಿದ್ದಾರೆ.
ಬಿಗ್ಬಾಸ್ಗೆ ಹೋಗ್ತಾರಾ ರಾಧಾ ಮಿಸ್ಸು?
ಈ ಹಿಂದೆ ಹಲವು ಬಾರಿ ಆಫರ್ ಬಂದಿತ್ತು. ರಿಜೆಕ್ಟ್ ಮಾಡಿದ್ದೆ. ಈ ಸಲ ಏನು ಅಂತ ಶೀಘ್ರದಲ್ಲಿಯೇ ಹೇಳ್ತೇನೆ. ಹೋಗುವುದಾದರೆ ಪತಿಗೂ ಹೇಳಿಯೇ ಹೋಗ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಈ ಬಾರಿ ಬಿಗ್ಬಾಸ್ನಲ್ಲಿ ಕಾಣಿಸಿಕೊಳ್ಳುವ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಪರ-ವಿರೋಧದ ನಿಲುವು ವ್ಯಕ್ತವಾಗಿದೆ. ಬಿಗ್ಬಾಸ್ ಫ್ಯಾನ್ಸ್ ಖುಷಿಪಟ್ಟರೆ, ಇನ್ನು ಕೆಲವರು ನಿಮಗೆ ಒಳ್ಳೆಯ ಹೆಸರು ಇದೆ, ಇಂಥ ಷೋಗೆ ಹೋಗಿ ಹೆಸರು ಹಾಳು ಮಾಡಿಕೊಳ್ಳಬೇಡಿ ಎನ್ನುತ್ತಿದ್ದಾರೆ.
ಶ್ವೇತಾ ರಿಯಲ್ ಲವ್ ಸ್ಟೋರಿ
ಇನ್ನು ಶ್ವೇತಾ ಮತ್ತು ಪ್ರದೀಪ್ ದಂಪತಿ ಕುರಿತು ಹೇಳುವುದಾದರೆ, ಈಗ ಶ್ವೇತಾ ಅವರು ನಿರ್ಮಾಪಕಿ ಆಗಿರುವ ಮರ್ಯಾದೆ ಪ್ರಶ್ನೆ' ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಮಧ್ಯಮ ವರ್ಗದ ಜನರ ಜೀವನವನ್ನು ಇದರಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ನಟರಾದ ರಾಜೇಶ್ ಅಡಿಗ, ಶೈನ್ ಶೆಟ್ಟಿ, ತೇಜು ಬೆಳವಾಡಿ, ಸುನಿಲ್ ರಾವ್ ಮುಂತಾದ ಕಲಾವಿದರ ಇದ್ದಾರೆ. ಈ ಮೂಲಕ ಶ್ವೇತಾ ಅವರು, ಕನ್ನಡ ಕಿರುತೆರೆ ಜನಪ್ರಿಯ ನಟಿ, ಸ್ವಂತ ಉದ್ದಿಮೆ ನಡೆಸುತ್ತಿರುವ ಸ್ಟ್ರಾಂಗ್ ಮಹಿಳೆ ಎನ್ನುವ ಜೊತೆಗೆ ಯಶಸ್ವಿ ನಿರ್ಮಾಪಕಿ ಎನ್ನುವ ಬಿರುದು ಕೂಡ ಪಡೆದುಕೊಂಡಿದ್ದಾರೆ.
ಶ್ವೇತಾ ರಿಯಲ್ ಲವ್ ಸ್ಟೋರಿ
ಇನ್ನು ಈ ಜೋಡಿಯ ಲವ್ಸ್ಟೋರಿ ಕುರಿತು ಹೇಳುವುದಾದರೆ, ಕಾಲೇಜ್ ದಿನಗಳಿಂದ ಶ್ವೇತಾ ಮತ್ತು ಪ್ರದೀಪ್ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಇವರು ಮದುವೆಯಾಗಿ ಹಲವು ವರ್ಷವಾದ್ರೂ ಯಾಕೆ ಮಗು ಮಾಡಿಕೊಂಡಿಲ್ಲ ಅನ್ನುವ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಲಾಗುತ್ತಿದೆ.
ಮಗುವಿನ ಬಗ್ಗೆ ಮಾತನಾಡಿದ್ದ ಶ್ವೇತಾ ಪ್ರಸಾದ್
ಇದರಿಂದ ರೋಸಿ ಹೋಗಿದ್ದ ಶ್ವೇತಾ ಅವರು ಒಮ್ಮೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿದ್ದರು. ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ.ಇದು ನಮ್ಮ ವೈಯಕ್ತಿಕ ವಿಚಾರ, ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆದುಕೊಳ್ಳುವುದು, ಬಿಡುಗ ಆಯ್ಕೆ ಮಹಿಳೆಗೆ ಬಿಟ್ಟುಬಿಡಿ. ಯಾವಾಗ ಎಲ್ಲಿ, ಹೇಗೆ ಎನ್ನುವುದು ಅವಳಿಗೆ ಗೊತ್ತಿರುತ್ತದೆ ಎಂದಿದ್ದರು.