MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • ಅಪ್ಪ-ಅಮ್ಮ ಮಕ್ಕಳಿಗೆ ದಿನಾ ಮುತ್ತು, ಅಪ್ಪುಗೆ ಕೊಟ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಅಪ್ಪ-ಅಮ್ಮ ಮಕ್ಕಳಿಗೆ ದಿನಾ ಮುತ್ತು, ಅಪ್ಪುಗೆ ಕೊಟ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

Parenting Tips: ತಂದೆ-ತಾಯಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಇರುತ್ತೆ. ಯಾವಾಗಲೂ ಅವರನ್ನು ಮುದ್ದು ಮಾಡುತ್ತಲೇ ಇರುತ್ತಾರೆ. ಆದರೆ ಪೋಷಕರು ಪ್ರೀತಿಯಿಂದ ಮಕ್ಕಳಿಗೆ ದಿನಾ ಒಂದು ಮುತ್ತು ಕೊಡುವುದು, ಅಪ್ಪಿಕೊಳ್ಳುವುದರಿಂದ ತುಂಬಾ ಪ್ರಯೋಜನಗಳಿವೆ ಅಂತಾರೆ ತಜ್ಞರು. ಅದೇನು ಅಂತ ತಿಳಿಯೋಣ. 

2 Min read
Ashwini HR
Published : Nov 22 2025, 06:45 PM IST
Share this Photo Gallery
  • FB
  • TW
  • Linkdin
  • Whatsapp
15
ಪೋಷಕರಿಗೆ ಸಲಹೆ
Image Credit : Freepik

ಪೋಷಕರಿಗೆ ಸಲಹೆ

ತಂದೆತಾಯಿ ಮಕ್ಕಳನ್ನು ಪ್ರೀತಿಸುವುದು ಮಾತ್ರವಲ್ಲ, ಆ ಪ್ರೀತಿಯನ್ನು ವ್ಯಕ್ತಪಡಿಸುವುದು ಕೂಡ ಮುಖ್ಯ. ದಿನಾ ಮಕ್ಕಳಿಗೆ ಒಂದು ಅಪ್ಪುಗೆ, ಮುತ್ತು ಕೊಡುವುದು ಸಣ್ಣ ವಿಷಯದಂತೆ ಕಂಡರೂ, ಮಕ್ಕಳ ಮನಸ್ಸಲ್ಲಿ ಅದು ಅಪಾರ ಭದ್ರತೆ, ಸಮಾಧಾನ, ಆತ್ಮವಿಶ್ವಾಸ ತುಂಬುತ್ತೆ. ಪೋಷಕರು ಮಕ್ಕಳ ಮೇಲಿನ ಪ್ರೀತಿಯನ್ನು ಮಾತಿನಲ್ಲಿ ಹೇಳುವುದಲ್ಲದೆ, ಕೃತಿಯಲ್ಲೂ ತೋರಿಸಿದರೆ ಅದು ಮಕ್ಕಳ ಮೆದುಳು, ಹೃದಯಕ್ಕೆ ಇನ್ನಷ್ಟು ಬಲವಾಗಿ ತಲುಪುತ್ತದೆ.  

25
ಅಪ್ಪಿಕೊಳ್ಳುವುದರಿಂದ ಆಗುವ ಲಾಭಗಳು
Image Credit : Freepik

ಅಪ್ಪಿಕೊಳ್ಳುವುದರಿಂದ ಆಗುವ ಲಾಭಗಳು

ದಿನಾ ಅಪ್ಪಿಕೊಳ್ಳುವುದರಿಂದ ಮಕ್ಕಳ ಮೆದುಳಲ್ಲಿ 'ಆಕ್ಸಿಟೋಸಿನ್' ಎಂಬ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುತ್ತೆ. ಇದು ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡುತ್ತೆ. ಭಯವನ್ನು ಹೋಗಲಾಡಿಸುತ್ತೆ. ಕೋಪವನ್ನು ನಿಯಂತ್ರಿಸುತ್ತೆ. ಮನುಷ್ಯರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಿಸಲು ಈ ಹಾರ್ಮೋನ್ ಮುಖ್ಯ ಪಾತ್ರ ವಹಿಸುತ್ತೆ. ಅದಕ್ಕೇ ಅಪ್ಪಿಕೊಂಡ ನಂತರ ಮಕ್ಕಳು ತಕ್ಷಣ ನಗುತ್ತಾರೆ. ಶಾಂತರಾಗುತ್ತಾರೆ.

Related Articles

Related image1
ಮಗುವಿಗೆ ಜ್ವರ ಬಂದಾಗ 15 ನಿಮಿಷದಲ್ಲಿ ಕಡಿಮೆ ಮಾಡುವುದು ಹೇಗೆ?, ವೈದ್ಯರು ಹೇಳಿದ ಮ್ಯಾಜಿಕ್ ತಂತ್ರ
Related image2
ಮಳೆಗಾಲದಲ್ಲಿ ಮಕ್ಕಳಿಗೆ ಶೀತ, ವೈರಲ್ ಜ್ವರದಿಂದ ರಕ್ಷಿಸುವ ಸೂಪರ್ ಫುಡ್‌ಗಳಿವು!
35
ಮುತ್ತು ಕೊಡುವುದರಿಂದ ಆಗುವ ಲಾಭಗಳು
Image Credit : Getty

ಮುತ್ತು ಕೊಡುವುದರಿಂದ ಆಗುವ ಲಾಭಗಳು

ಮಕ್ಕಳಿಗೆ ಮುತ್ತು ಕೊಟ್ಟಾಗ ಅವರಲ್ಲಿ ಒಂದು ವಿಶೇಷ ಭಾವನೆ ಮೂಡುತ್ತೆ ಅಂತಾರೆ ತಜ್ಞರು. ಮುತ್ತು ಕೊಟ್ಟಾಗ ಅವರ ಹೃದಯ ಬಡಿತ ಬದಲಾಗುತ್ತೆ. ಉಸಿರಾಟ ನಿಧಾನವಾಗುತ್ತೆ, ಮನಸ್ಸಲ್ಲಿ ಪ್ರೀತಿಯ ವಾತಾವರಣ ಸೃಷ್ಟಿಯಾಗುತ್ತೆ. ಮುಖ್ಯವಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಬೆಳಗ್ಗೆ ಮನೆಯಿಂದ ಹೊರಡುವಾಗ ಒಂದು ಮುತ್ತು, ಅಪ್ಪುಗೆ ಕೊಟ್ಟರೆ ದಿನವಿಡೀ ಅವರ ಮನಸ್ಸು ಶಾಂತವಾಗಿರುತ್ತೆ. ಪೋಷಕರ ಪ್ರೀತಿ ನೆನಪಿಗೆ ಬರುತ್ತೆ. ಇದರಿಂದ ಒಂಟಿತನ ದೂರವಾಗುತ್ತೆ. ಶಾಲೆಯಲ್ಲಿ ಯಾವುದೇ ಕೆಲಸವನ್ನು ಧೈರ್ಯವಾಗಿ ಮಾಡುತ್ತಾರೆ.  

45
ಮಕ್ಕಳು ತಪ್ಪು ಮಾಡಿದರೂ..
Image Credit : unsplash

ಮಕ್ಕಳು ತಪ್ಪು ಮಾಡಿದರೂ..

ಮಕ್ಕಳು ತಪ್ಪು ಮಾಡಿದರೂ, ಅವರು ನೋವಿನಲ್ಲಿದ್ದಾಗ, ಅಳುತ್ತಿರುವಾಗ ಅಪ್ಪಿಕೊಂಡರೆ ಅವರಿಗೆ ಶಕ್ತಿ ಸಿಗುತ್ತೆ. 'ನಾನು ನಿನ್ನ ಜೊತೆಗಿದ್ದೇನೆ, ಭಯಪಡುವ ಅಗತ್ಯವಿಲ್ಲ' ಎಂಬ ಭಾವನೆ ಅವರಲ್ಲಿ ಮೂಡುತ್ತೆ. ಇದರಿಂದ ಮಕ್ಕಳು ತಪ್ಪನ್ನು ಒಪ್ಪಿಕೊಳ್ಳಲು, ಕಲಿಯಲು, ಮತ್ತೆ ಪ್ರಯತ್ನಿಸಲು ಸಿದ್ಧರಾಗುತ್ತಾರೆ.

55
ಬಲವಾದ ಬಾಂಧವ್ಯ..
Image Credit : unsplash

ಬಲವಾದ ಬಾಂಧವ್ಯ..

ದಿನಾ ಹೀಗೆ ಪೋಷಕರ ಪ್ರೀತಿ ಪಡೆದ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ವ್ಯಕ್ತಿಗಳಾಗುತ್ತಾರೆ. ಶಿಸ್ತಿನಿಂದ ಇರುತ್ತಾರೆ. ಇತರರನ್ನು ಅರ್ಥಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಅಷ್ಟೇ ಅಲ್ಲ, ದಿನಾ ಮಕ್ಕಳನ್ನು ಹೀಗೆ ಪ್ರೀತಿಯಿಂದ ಹತ್ತಿರ ಸೆಳೆಯುವುದು ತಂದೆತಾಯಿಗೂ ಒಳ್ಳೆಯದು. ಮನಸ್ಸಿನ ಒತ್ತಡ ಕಡಿಮೆಯಾಗುತ್ತೆ. ದಿನವಿಡೀ ಕೆಲಸ ಮಾಡಿದ ಆಯಾಸ ದೂರವಾಗುತ್ತೆ. ಮನಸ್ಸು ಹಗುರವಾಗುತ್ತೆ. ಈ ಪ್ರೀತಿಯ ವಾತಾವರಣ ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಆರೋಗ್ಯ
ಮಕ್ಕಳ ಪಾಲನೆ ಸಲಹೆಗಳು
ಪೋಷಕರು
Latest Videos
Recommended Stories
Recommended image1
ರಾತ್ರಿ ವೇಳೆ ಹೀಗೆಲ್ಲಾ ಆದ್ರೆ ನಿರ್ಲಕ್ಷಿಸ್ಬೇಡಿ, ಇದು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು
Recommended image2
ಮದುವೆಯಾಗಿ 45 ದಿನದ ನಂತ್ರ ಹನಿಮೂನ್‌ಗೆ ಹೋಗ್ಬೇಕಂತೆ.. ಮೂಢನಂಬಿಕೆಯಲ್ಲ, ಬೇರೆಯದೇ ಕಾರಣವಿದೆ
Recommended image3
ಹಾರ್ದಿಕ್‌ ಪಾಂಡ್ಯ ಜೊತೆ ಎಂಗೇಜ್‌ಮೆಂಟ್‌ ಬಗ್ಗೆ ಮೌನ ಮುರಿದ ಮಹಿಕಾ ಶರ್ಮ!
Related Stories
Recommended image1
ಮಗುವಿಗೆ ಜ್ವರ ಬಂದಾಗ 15 ನಿಮಿಷದಲ್ಲಿ ಕಡಿಮೆ ಮಾಡುವುದು ಹೇಗೆ?, ವೈದ್ಯರು ಹೇಳಿದ ಮ್ಯಾಜಿಕ್ ತಂತ್ರ
Recommended image2
ಮಳೆಗಾಲದಲ್ಲಿ ಮಕ್ಕಳಿಗೆ ಶೀತ, ವೈರಲ್ ಜ್ವರದಿಂದ ರಕ್ಷಿಸುವ ಸೂಪರ್ ಫುಡ್‌ಗಳಿವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved