Bharat Ratna: ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?
ಭಾರತ ರತ್ನ ಪ್ರಶಸ್ತಿಯನ್ನು 1954 ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು. ಹಾಗಾದರೆ ಈ ಪ್ರಶಸ್ತಿಯನ್ನು ಪಡೆಯುವ ಜನರಿಗೆ ಯಾವ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಯೋಣ.

'ಭಾರತ ರತ್ನ'ವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ರಾಷ್ಟ್ರೀಯ ಸೇವೆಗಾಗಿ ನೀಡಲಾಗುತ್ತದೆ. ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಅಸಾಧಾರಣ ಕೊಡುಗೆ ನೀಡಿದ ಜನರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತ ರತ್ನ ಪ್ರಶಸ್ತಿಯನ್ನು 1954 ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು. ಹಾಗಾದರೆ ಈ ಪ್ರಶಸ್ತಿಯನ್ನು ಪಡೆಯುವ ಜನರಿಗೆ ಯಾವ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಯೋಣ.
* ಭಾರತ ರತ್ನ ಪಡೆಯುವ ವ್ಯಕ್ತಿಗೆ ಪದಕದ ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ.
* ಈ ಪ್ರಶಸ್ತಿಗೆ ಯಾವುದೇ ಹಣ ನೀಡಲಾಗುವುದಿಲ್ಲ.
* ಭಾರತ ರತ್ನ ಪ್ರಶಸ್ತಿ ಪಡೆಯುವವರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
* ನೀವು ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ವಿಶೇಷ ಅತಿಥಿಯಾಗಿಯೂ ಭಾಗವಹಿಸಬಹುದು.
* ವಿಮಾನ, ರೈಲು ಮತ್ತು ಬಸ್ನಲ್ಲಿ ಉಚಿತ ಪ್ರಯಾಣ ರಿಯಾಯಿತಿ ಸಿಗುತ್ತದೆ.
* ಭಾರತ ರತ್ನ ಪಡೆದ ಗೌರವಾನ್ವಿತ ವ್ಯಕ್ತಿಗಳು ಸಂಸತ್ತಿನ ಸಭೆಗಳು ಮತ್ತು ಅಧಿವೇಶನಗಳಿಗೆ ಹಾಜರಾಗಬಹುದು.
* ಇವರು ಯಾವುದೇ ರಾಜ್ಯಕ್ಕೆ ಭೇಟಿ ನೀಡಿದಾಗ ವಿವಿಐಪಿ ಸ್ಥಾನಮಾನ ಸಿಗಲಿದೆ.
* ಅಗತ್ಯವಿದ್ದರೆ ಸರ್ಕಾರದ ಖರ್ಚಿನಲ್ಲಿ Z ಕೆಟಗರಿ ಭದ್ರತೆ ನೀಡಲಾಗುತ್ತದೆ.
* ಒಂದು ವೇಳೆ ವಿದೇಶಕ್ಕೆ ಪ್ರಯಾಣಿಸಿದರೆ ಭಾರತ ಸರ್ಕಾರವು ತನ್ನ ರಾಯಭಾರಿ ಕಚೇರಿಗಳ ಮೂಲಕ ಲಭ್ಯವಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಲಿದೆ.
1954 ರಲ್ಲಿ ಬದುಕಿರುವ ವ್ಯಕ್ತಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಆದರೆ 1955ರಲ್ಲಿ ಮರಣೋತ್ತರವಾಗಿ ಭಾರತ ರತ್ನವನ್ನು ನೀಡಲು ಅವಕಾಶ ನೀಡಲಾಯಿತು.
ಡಿಸೆಂಬರ್ 2011ರವರೆಗೆ ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಡಿಸೆಂಬರ್ 2011ರಲ್ಲಿ, ಇದನ್ನು ತಿದ್ದುಪಡಿ ಮಾಡಲಾಯಿತು. ಅದರ ನಂತರ ಭಾರತ ರತ್ನವು ಯಾವುದೇ ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿಲ್ಲ.
ಭಾರತ ರತ್ನದ ಅಧಿಕೃತ ಘೋಷಣೆಯನ್ನು ಗೆಜೆಟ್ ಅಧಿಸೂಚನೆ ಹೊರಡಿಸಲಾಗುತ್ತದೆ. ಜನವರಿ 26 ರಂದು ಭಾರತ ರತ್ನ ಪ್ರದಾನ ಮಾಡಲಾಗುತ್ತದೆ. ಚಕ್ರವರ್ತಿ ರಾಜಗೋಪಾಲಾಚಾರಿ ಅವರಿಗೆ 1954 ರಲ್ಲಿ ಭಾರತ ರತ್ನವನ್ನು ಮೊದಲು ನೀಡಲಾಯಿತು. ಸಚಿನ್ ತೆಂಡೂಲ್ಕರ್ ಭಾರತ ರತ್ನವನ್ನು ಪಡೆದ ಏಕೈಕ ಆಟಗಾರ ಮತ್ತು ಅವರು ಭಾರತ ರತ್ನವನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ.