ಪದೇ ಪದೇ ಆರೋಗ್ಯ ಸಮಸ್ಯೆ, ಅಂದ್ಕೊಂಡಿದ್ದು ಆಗೋದಿಲ್ಲ; ದೃಷ್ಟಿ ಆಗಿರುತ್ತೆ; ಹೀಗೆ ಮಾಡಿ, ಸರಿ ಹೋಗುತ್ತೆ
ಮಗು ಪದೇ ಪದೇ ಕಿರಿಕಿರಿ ಮಾಡುತ್ತಿದೆಯಾ ಅಥವಾ ಆರೋಗ್ಯ ಕೆಡುತ್ತಿದೆಯಾ? ಹಾಗಿದ್ರೆ ದೃಷ್ಟಿ ಆಗಿರಬಹುದು. ಕೆಲವೊಮ್ಮೆ ದೊಡ್ಡವರಿಗೂ ಏನಾದರೊಂದು ಸಮಸ್ಯೆ ಆಗುತ್ತದೆ, ಇನ್ನೊಮ್ಮೆ ಅಂದುಕೊಂಡ ಕೆಲಸ ಆಗದೆ ಇರಬಹುದು. ಬಿಹಾರದಲ್ಲಿ ಇಂದಿಗೂ ಮಕ್ಕಳ ದೃಷ್ಟಿ ತೆಗೆಯಲು ಬಳಸುವ ಹಳೆಯ ಕಾಲದ ಸುಲಭ ಮನೆಮದ್ದುಗಳಿವು.

ದೃಷ್ಟಿ ಆಗಿರುತ್ತೆ, ಹುಷಾರ್
ನಿಮ್ಮ ಮಗು ಇದ್ದಕ್ಕಿದ್ದಂತೆ ಸಿಡುಕು ಸ್ವಭಾವ ತೋರಿಸ್ತಿದೆಯಾ? ಕಾರಣವೇ ಇಲ್ಲದೆ ಅಳುತ್ತಿದೆಯಾ ಅಥವಾ ಪದೇ ಪದೇ ಕಾಯಿಲೆ ಬೀಳ್ತಿದೆಯಾ? ಆಗ ಮನೆಯಲ್ಲಿರೋ ಹಿರಿಯರು ಹೇಳೋದು ಒಂದೇ ಮಾತು - 'ಮಗುಗೆ ದೃಷ್ಟಿ ಆಗಿದೆ'. ಬಿಹಾರದ ಹಳ್ಳಿಗಳಲ್ಲಿ ಇವತ್ತಿಗೂ ದೃಷ್ಟಿ ತೆಗೆಯೋಕೆ ಕೆಲವು ದೇಸಿ ವಿಧಾನಗಳು ತುಂಬಾನೇ ಫೇಮಸ್. ವಿಶೇಷ ಅಂದ್ರೆ, ಇವು ಕೇವಲ ನಂಬಿಕೆಗಳಲ್ಲ, ತಲೆಮಾರುಗಳಿಂದ ಬಂದ ಅನುಭವದ ಮಾತುಗಳು. ಹಾಗಿದ್ರೆ, ಬಿಹಾರದ ಆ ಫೇಮಸ್ ದೃಷ್ಟಿ ತೆಗೆಯುವ ವಿಧಾನ ಯಾವುದು?
ಮೆಣಸು-ಉಪ್ಪಿನ ಇಳುವು
ಮನೆಯ ಹೆಂಗಸರು ಒಣಮೆಣಸಿನಕಾಯಿ, ಉಪ್ಪು ಮತ್ತು ಸಾಸಿವೆ ಕಾಳುಗಳನ್ನು ಕೈಯಲ್ಲಿ ತೆಗೆದುಕೊಂಡು ಮಗುವಿನ ತಲೆಗೆ ಸುತ್ತುತ್ತಾರೆ. ನಂತರ ಅದನ್ನು ಬೆಂಕಿಗೆ ಹಾಕುತ್ತಾರೆ. ಒಂದುವೇಳೆ ಮೆಣಸಿನಕಾಯಿ ಸುಟ್ಟಾಗ ಘಾಟು ವಾಸನೆ ಬರದಿದ್ದರೆ, ದೃಷ್ಟಿ ತುಂಬಾ ಜಾಸ್ತಿ ಆಗಿದೆ ಅಂತ ನಂಬುತ್ತಾರೆ. ಈಗಿನ ಕಾಲದಲ್ಲಿ ಇದನ್ನೊಂದು 'ಅಬ್ಸರ್ವೇಷನ್ ಟೆಕ್ನಿಕ್' ಅಂತಾನೂ ಕರೆಯಲಾಗ್ತಿದೆ.
ಶನಿವಾರದ ಚಪ್ಪಲಿ-ಪೊರಕೆ ಟ್ರಿಕ್
ಹಳೆ ಚಪ್ಪಲಿ ಅಥವಾ ಪೊರಕೆಯಿಂದ ಮಗುವಿಗೆ ಇಳಿಸಿ, ಮನೆಯ ಬಾಗಿಲ ಬಳಿ ಇಡಿಸುವುದು ಕೂಡ ಒಂದು ಪದ್ಧತಿ. ಇದನ್ನ ಈಗಿನವರು 'ನೆಗೆಟಿವ್ ಎನರ್ಜಿ ರಿಲೀಸ್' ಮಾಡುವ ವಿಧಾನ ಅಂತ ನೋಡ್ತಿದ್ದಾರೆ. ಹೆಚ್ಚಾಗಿ ಶನಿವಾರದಂದು ಈ ರೀತಿ ಮಾಡುತ್ತಾರೆ.
ಸಾಸಿವೆ ಎಣ್ಣೆ ಬತ್ತಿ
ಹತ್ತಿಯಿಂದ ಮಾಡಿದ ಬತ್ತಿಯನ್ನು ಸಾಸಿವೆ ಎಣ್ಣೆಯಲ್ಲಿ ಅದ್ದಿ, ಮಗುವಿನ ತಲೆಗೆ ಇಳಿಸುತ್ತಾರೆ. ಆಮೇಲೆ ಅದನ್ನ ಉರಿಸುತ್ತಾರೆ. ಕೆಳಗೆ ಇಟ್ಟಿರೋ ನೀರಿನ ಪಾತ್ರೆಗೆ ಬೀಳುವ ಎಣ್ಣೆ ಹನಿಗಳ ಶಬ್ದವನ್ನು ದೃಷ್ಟಿ ಇಳಿಯಿತು ಅನ್ನೋದರ ಸಂಕೇತ ಅಂತ ಜನರು ಭಾವಿಸುತ್ತಾರೆ. ಎಣ್ಣೆ ಹನಿಗಳು ಎಷ್ಟು ಹೆಚ್ಚು ಬೀಳುತ್ತವೋ, ಅಷ್ಟು ಗಟ್ಟಿಯಾಗಿ ದೃಷ್ಟಿ ತಾಗಿದೆ ಅಂತಾನೂ ನಂಬಿಕೆ ಇದೆ. ಅದರಲ್ಲೂ, ಆಗ ತಾನೇ ಹುಟ್ಟಿದ ಮಕ್ಕಳ ದೃಷ್ಟಿ ತೆಗೆಯಲು ಈ ವಿಧಾನವನ್ನು ಪ್ರತಿದಿನ ಬಳಸುತ್ತಾರೆ. ಕೆಲವರು ಇದನ್ನ 'ಸೌಂಡ್ ಥೆರಪಿ' ತರಾನೇ ಅಂತ ಹೇಳ್ತಾರೆ, ಯಾಕಂದ್ರೆ ಇದರಿಂದ ಮನೆಯ ವಾತಾವರಣ ಶಾಂತವಾಗುತ್ತೆ ಮತ್ತು ಮಗುವಿಗೂ ಆರಾಮ ಸಿಗುತ್ತೆ.
ಮಣ್ಣು ಮತ್ತು ಹಸುವಿನ ಬಾಲದಿಂದ ಇಡಿಸುವುದು
ಹಳ್ಳಿ ಕಡೆಗಳಲ್ಲಿ ದಾರಿಯಲ್ಲಿ ಸಿಗುವ ಮಣ್ಣು, ಉಪ್ಪು-ಮೆಣಸಿನಕಾಯಿ ಸೇರಿಸಿ ಇಳಿಸುವುದು ಅಥವಾ ಹಸುವಿನ ಬಾಲದಿಂದ ಇಡಿಸುವುದು ಇವತ್ತಿಗೂ ಸಾಮಾನ್ಯ. ಇದು ಕೇವಲ ಒಂದು ಉಪಾಯವಲ್ಲ, ಬದಲಿಗೆ ಪ್ರಕೃತಿ ಮತ್ತು ಸಂಪ್ರದಾಯದ ಜೊತೆಗಿನ ಸಂಬಂಧದ ಒಂದು ಭಾಗ.
ತಜ್ಞರು ಏನು ಹೇಳ್ತಾರೆ?
ಈ ಎಲ್ಲಾ ವಿಧಾನಗಳು ನೇರವಾಗಿ ವೈದ್ಯಕೀಯ ಚಿಕಿತ್ಸೆ ಅಲ್ಲ ಅಂತ ತಜ್ಞರು ಒಪ್ಪಿಕೊಳ್ಳುತ್ತಾರೆ. ಆದರೆ, ಇದರಿಂದ ಕುಟುಂಬದವರು ಮಗುವಿನ ಮೇಲೆ ಹೆಚ್ಚು ಗಮನ ಹರಿಸುತ್ತಾರೆ, ಮಗುವಿನ ಸ್ಥಿತಿಯನ್ನು ಬೇಗ ಗಮನಿಸುತ್ತಾರೆ ಮತ್ತು ಅದಕ್ಕೆ ಭಾವನಾತ್ಮಕ ಭದ್ರತೆ ಸಿಗುತ್ತದೆ. ಆದರೆ ಒಂದು ವಿಷಯ ನೆನಪಿನಲ್ಲಿಡಿ, ಮಗು ನಿರಂತರವಾಗಿ ಅಳುತ್ತಿದ್ದರೆ, ಜ್ವರವಿದ್ದರೆ ಅಥವಾ ಊಟ ಮಾಡುತ್ತಿಲ್ಲವಾದರೆ, ಕೇವಲ ಮನೆಮದ್ದುಗಳನ್ನು ನಂಬಿ ಕೂರಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಕಪ್ಪು ದಾರ ಮತ್ತು ಬೊಟ್ಟು
ಮಕ್ಕಳಿಗೆ ಕಪ್ಪು ದಾರ ಕಟ್ಟುವುದು ಮತ್ತು ಕಾಡಿಗೆಯಿಂದ ದೃಷ್ಟಿ ಬೊಟ್ಟು ಇಡುವುದು ದೃಷ್ಟಿಯಿಂದ ರಕ್ಷಣೆ ಪಡೆಯಲು ಇರುವ ಅತಿ ಸುಲಭ ವಿಧಾನ. ಇವತ್ತಿಗೂ ನಗರ ಮತ್ತು ಹಳ್ಳಿಗಳ ಕುಟುಂಬಗಳಲ್ಲಿ ಈ ಟ್ರೆಂಡ್ ಮುಂದುವರೆದಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

