MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನಾನೊಬ್ಬನೇ ಸಾಯಲ್ಲ: ಸೂಪರ್‌ ಮಾರ್ಕೆಟ್‌ನಲ್ಲಿ ಮಲಗಿ, ತನ್ನ ಲಕ್ಷುರಿ ಅಪಾರ್ಟ್‌ಮೆಂಟ್‌ನ್ನು ಕೆಲಸದಾಕೆಗೆ ಕೊಟ್ಟ!

ನಾನೊಬ್ಬನೇ ಸಾಯಲ್ಲ: ಸೂಪರ್‌ ಮಾರ್ಕೆಟ್‌ನಲ್ಲಿ ಮಲಗಿ, ತನ್ನ ಲಕ್ಷುರಿ ಅಪಾರ್ಟ್‌ಮೆಂಟ್‌ನ್ನು ಕೆಲಸದಾಕೆಗೆ ಕೊಟ್ಟ!

ಒಂಟಿತನ ಒಮ್ಮೊಮ್ಮೆ ಎದ್ದು ಕಾಣಿಸೋದಿಲ್ಲ. ನಾವು ನಗುತ್ತೇವೆ, ಅಳುತ್ತೇವೆ, ಕೆಲಸ ಮಾಡುತ್ತಿರುತ್ತೇವೆ. ಹೀಗಿದ್ದರೂ, ಎಲ್ಲ ಇದ್ದರೂ ಕೂಡ ನಮಗೆ ಒಂಟಿತನ ಕಾಡುತ್ತದೆ. ಚೀನಾದಲ್ಲಿರುವ ವ್ಯಕ್ತಿಗೆ ಲಕ್ಷುರಿ ಫ್ಲ್ಯಾಟ್‌ ಇದ್ದರೂ ಕೂಡ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ.

2 Min read
Author : Padmashree Bhat
Published : May 24 2026, 04:07 PM IST
Share this Photo Gallery
  • FB
  • TW
  • Linkdin
  • Whatsapp
15
ಒಂಟಿಯಾಗಿ ಸಾಯಲು ಇಷ್ಟ ಇಲ್ಲ
Image Credit : instagram and ai photo

ಒಂಟಿಯಾಗಿ ಸಾಯಲು ಇಷ್ಟ ಇಲ್ಲ

10 ವರ್ಷಗಳ ಕಾಲ ಓರ್ವ ವ್ಯಕ್ತಿ ( ಕಿಯಾಂಗ್ಮಿಂಗ್‌ ) ತನ್ನದೇ ಆದ ಲಕ್ಷುರಿ ಫ್ಲ್ಯಾಟ್‌ ಇದ್ದರೂ ಕೂಡ, ಸೂಪರ್‌ ಮಾರ್ಕೆಟ್‌ನ ಸಿಬ್ಬಂದಿಯ ಎಂಟ್ರೆನ್ಸ್‌ನಲ್ಲಿ ನಿದ್ದೆ ಮಾಡಿದ್ದರು. ಅವರಿಗೆ ಫ್ಲಾಟ್‌ ಇದ್ದರೂ ಕೂಡ ಒಂಟಿಯಾಗಿ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ. ನನಗೆ ಒಂಟಿಯಾಗಿ ಸಾಯಲು ಇಷ್ಟ ಇಲ್ಲ ಎಂದು ಅವರು ಹೇಳುತ್ತಿದ್ದರು. ಡಿವೋರ್ಸ್‌ ಆಗಿತ್ತು, ಮಗ ಕೂಡ ದೂರ ಇದ್ದನು, ಒಂಟಿತನ ಕಾಡುತ್ತಿತ್ತು. ಎಷ್ಟೇ ವ್ಯವಸ್ಥೆ, ಲಕ್ಷುರಿ ಇದ್ದರೂ ಕೂಡ ಅವರಿಗೆ ಒಂಟಿತನ ಕಾಡುತ್ತಿತ್ತು.

Add Asianetnews Kannada as a Preferred SourcegooglePreferred
25
ಚಾಲೆ ಮೇಲೆ ಮಲಗುತ್ತಿದ್ದರು
Image Credit : Gemini AI

ಚಾಲೆ ಮೇಲೆ ಮಲಗುತ್ತಿದ್ದರು

ಸೂಪರ್‌ಮಾರ್ಕೆಟ್‌ನಲ್ಲಿ ಅವರು ಚಾಪೆಯ ಮೇಲೆ ಮಲಗುತ್ತಿದ್ದರು, ಜೇಬಿನಲ್ಲಿ ಹಣ ಇಟ್ಟುಕೊಳ್ಳುತ್ತಿದ್ದರು, ಹೋಟೆಲ್‌ನಲ್ಲಿ ದಿನವಿಡೀ ಕಳೆಯುತ್ತಿದ್ದರು. ಅವರನ್ನು ನೋಡಿದವರೆಲ್ಲ ಭಿಕ್ಷುಕ ಎಂದುಕೊಂಡರು. ಆದರೆ ಅವರು ಭಿಕ್ಷುಕ ಆಗಿರಲಿಲ್ಲ.

Related Articles

Related image1
1917ರಲ್ಲಿ ನಮ್ಮ ತಾತ ಬ್ರಿಟಿಷರಿಗೆ ₹35,000 ಸಾಲ ಕೊಟ್ಟಿದ್ರು, ಬಡ್ಡಿ ಸಮೇತ ವಾಪಸ್ ಕೊಡಿ ಅಂತ ಸೇಠ್ ಕುಟಂಬದ ಮೊಮ್ಮಗನ ಫೈಟ್!
Related image2
'ಕಾಂಗ್ರೆಸ್ ಬಿ ಫಾರಂ ಸಿಕ್ಕಿದೆಯೇ? ಪಕ್ಷ ಕಟ್ಟಿದ್ದೇ ನಮ್ಮ ತಾತ' ನಾಮಪತ್ರ ಸಲ್ಲಿಕೆ ವೇಳೆ ಸಮರ್ಥ್ ಶಾಮನೂರು ಸಮರ್ಥನೆ!
35
ಕುಟುಂಬವೇ ಇಲ್ಲ
Image Credit : Gemini AI

ಕುಟುಂಬವೇ ಇಲ್ಲ

ಕಿಯಾಂಗ್ಮಿಂಗ್‌ ಅವರಿಗೆ 2000 ರಲ್ಲಿ ಡಿವೋರ್ಸ್‌ ಆದ ಬಳಿಕ ಮಗ ಕೂಡ ದೂರ ಆದನು. ಅಪ್ಪ-ಮಗ ಮಾತನಾಡೋದು ನಿಲ್ಲಿಸಿದರು. ಒಂಟಿತನವು ನಿಜಕ್ಕೂ ಖಿನ್ನತೆ, ಹೃದಯ ಸಮಸ್ಯೆ, ದೌರ್ಬಲ್ಯ ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಕಿಯಾಂಗ್ಮಿಂಗ್ ಅವರು ಒಂಟಿಯಾಗಿ ಬದುಕಬಾರದು ಎಂದು ಹೀಗೆಲ್ಲ ಮಾಡಿದರು. ಆದರೆ ಎಷ್ಟೋ ಜನರು ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ.

45
ನಾನಿ ಮೀಟ್‌ ಆದರು
Image Credit : Getty

ನಾನಿ ಮೀಟ್‌ ಆದರು

2021 ರಲ್ಲಿ ಕಿಯಾಂಗ್ಮಿಂಗ್ ಅವರನ್ನು ಹುಹಾಂಗ್ ( ಕೆಲಸ ಮಾಡುವ ವ್ಯಕ್ತಿ ) ಫಸ್ಟ್‌ ಟೈಮ್‌ ಭೇಟಿಯಾದರು. ಆಮೇಲೆ ಸಂಪೂರ್ಣವಾಗಿ ಕಿಯಾಂಗ್ಮಿಂಗ್‌ ಅವರನ್ನು ನೋಡಿಕೊಂಡರು. ಅನೇಕರಿಗೆ ಈ ಬದಲಾವಣೆ ಅರ್ಥ ಆಯ್ತು. ಆಮೇಲೆ ಕಿಯಾಂಗ್ಮಿಂಗ್‌ ಅವರು ಹುಹಾಂಗ್‌ರನ್ನು ಮಗಳು ಎಂದು ಕರೆದರು. ಆಮೇಲೆ ತನ್ನ ಫ್ಲ್ಯಾಟ್‌ನ್ನು ಅವರಿಗೆ ಬಿಟ್ಟುಕೊಡಲು ರೆಡಿಯಾದರು.

55
ನ್ಯಾನಿಗೆ ಆಸ್ತಿ ಸಿಗಲಿಲ್ಲ
Image Credit : instagram

ನ್ಯಾನಿಗೆ ಆಸ್ತಿ ಸಿಗಲಿಲ್ಲ

ಇಂದು ಡಿವೋರ್ಸ್‌, ಸಿಟಿ ಜೀವನ ಎಂದು ಹಳ್ಳಿಯಲ್ಲಿ ವೃದ್ಧರು ಇರುತ್ತಾರೆ. ಅವಿಭಕ್ತ ಕುಟುಂಬ ಹೋಗಿ ವಿಭಕ್ತ ಕುಟುಂಬವಾಗಿದೆ. ಇಂದು ಅನಾರೋಗ್ಯದಲ್ಲಿ ಇರುವವರನ್ನು, ಅಶಕ್ತರನ್ನು, ವೃದ್ಧರನ್ನು ನೋಡಿಕೊಳ್ಳೋದು ಟಾಸ್ಕ್‌ ಆಗಿದೆ. ಹೀಗಾಗಿ ಆರೈಕೆ ಮಾಡುವುದು ಸ್ವತಃ ಒಂದು ಭಾವನಾತ್ಮಕ ಶ್ರಮವಾಗಿದೆ.

ಕಿಯಾಂಗ್ಮಿಂಗ್‌ ಅವರು ಹುಹಾಂಗ್‌ಗೆ ತನ್ನ ಆಸ್ತಿಯನ್ನು ವರ್ಗಾವಣೆ ಮಾಡೋದು ಸುಲಭ ಆಗಿರಲಿಲ್ಲ. ಚೀನಾದಲ್ಲಿರುವ ಕೋರ್ಟ್‌ ಈ ವಿಷಯವನ್ನು ಮಗನಿಗೆ ಹೇಳಬೇಕು ಎಂದರು, ಮಗ ಮಾತ್ರ ಆಸ್ತಿ ವರ್ಗಾವಣೆಯನ್ನು ಒಪ್ಪಲಿಲ್ಲ. ನ್ಯಾನಿ ಮೇಲೆ ಆರೋಪ ಮಾಡಿ ಆಮೇಲೆ ಆ ಫ್ಲಾಟ್‌ನ ಮಾಲೀಕತ್ವವನ್ನು ಪಡೆದನು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಚೀನಾ
ಅಜ್ಜ-ಅಜ್ಜಿ
ಸುದ್ದಿ
ಜೀವನಶೈಲಿ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಹೆಸರು, ಅಕೌಂಟ್ ನಂಬರ್, ಟ್ರಾನ್ಸಾಕ್ಷನ್... ಎಲ್ಲವೂ ಬಹಿರಂಗ; 20 ರೂ.ಗೆ ಭೇಲ್‌ಪುರಿ ಕೊಂಡ ಗ್ರಾಹಕನಿಗೆ ಶಾಕ್!
Recommended image2
ಪ್ರತಿ ನಿಮಿಷಕ್ಕೆ 1 ಕೋಟಿ ಪಡೆಯೋ 'ಮಹಾಲಕ್ಷ್ಮೀ' ಈಕೆ.. ಯಾಕೆ ಕೊಡ್ತಾರೆ ಅಷ್ಟೊಂದು? ಸೀಕ್ರೆಟ್ ಇದು..!
Recommended image3
ಮನೆಯಲ್ಲಿರೋ ಹೂವಿನ ಗಿಡದ ಎಲೆಗಳಿಗೆ ಕೀಟ ಅಂಟಿಕೊಳ್ಳುತ್ತಿದ್ರೆ ಈ ಮನೆಮದ್ದು ಬಳಸಿ
Related Stories
Recommended image1
1917ರಲ್ಲಿ ನಮ್ಮ ತಾತ ಬ್ರಿಟಿಷರಿಗೆ ₹35,000 ಸಾಲ ಕೊಟ್ಟಿದ್ರು, ಬಡ್ಡಿ ಸಮೇತ ವಾಪಸ್ ಕೊಡಿ ಅಂತ ಸೇಠ್ ಕುಟಂಬದ ಮೊಮ್ಮಗನ ಫೈಟ್!
Recommended image2
'ಕಾಂಗ್ರೆಸ್ ಬಿ ಫಾರಂ ಸಿಕ್ಕಿದೆಯೇ? ಪಕ್ಷ ಕಟ್ಟಿದ್ದೇ ನಮ್ಮ ತಾತ' ನಾಮಪತ್ರ ಸಲ್ಲಿಕೆ ವೇಳೆ ಸಮರ್ಥ್ ಶಾಮನೂರು ಸಮರ್ಥನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved