- Home
- Karnataka Districts
- ಸಿಎಂ ಖುರ್ಚಿ ಗುದ್ದಾಟದಲ್ಲಿ 5 ಲಕ್ಷ ಮಕ್ಕಳು ಅತಂತ್ರ: ಪಾಲಿಸದ ಹೈಕೋರ್ಟ್ ಆದೇಶ- ಪಾಲಕರ ಕಣ್ಣೀರು
ಸಿಎಂ ಖುರ್ಚಿ ಗುದ್ದಾಟದಲ್ಲಿ 5 ಲಕ್ಷ ಮಕ್ಕಳು ಅತಂತ್ರ: ಪಾಲಿಸದ ಹೈಕೋರ್ಟ್ ಆದೇಶ- ಪಾಲಕರ ಕಣ್ಣೀರು
1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಹೈಕೋರ್ಟ್ ನಿರ್ದೇಶನ ನೀಡಿ ವಾರ ಕಳೆದರೂ ಸರ್ಕಾರ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿರುವ 5 ಲಕ್ಷಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಈ ಆದೇಶದಿಂದ ಮಕ್ಕಳ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುವ ಭೀತಿ ಎದುರಾಗಿದೆ.

ಮುಖ್ಯಮಂತ್ರಿ ವಿವಾದ
ಇತ್ತ ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯದ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ಗೊಂದಲಕ್ಕೆ ಒಂದು ಹಂತದಲ್ಲಿ ತೆರೆ ಬಿದ್ದಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಆಗಿದೆ. ಇನ್ನು ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಹೈಕಮಾಂಡ್ ಆದೇಶ ಹೊರಡಿಸಬೇಕು ಎಂದು ಹೇಳಲಾಗುತ್ತಿದೆ.
ಪಾಲಕರ ಕಣ್ಣೀರು
ಆದರೆ ಇವೆಲ್ಲವುಗಳ ನಡುವೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಐದು ಲಕ್ಷಕ್ಕೂ ಅಧಿಕ ಮಕ್ಕಳ ಪಾಲಕರು. ಇದಕ್ಕೆ ಕಾರಣ, ಹೈಕೋರ್ಟ್ ಆದೇಶವನ್ನು ಸರ್ಕಾರ ಇನ್ನೂ ಪಾಲನೆ ಮಾಡಿಲ್ಲ. ಅದು 1ನೇ ಕ್ಲಾಸ್ಗೆ ಪ್ರವೇಶ ಪಡೆಯುವಾಗ ಇರುವ ವಯೋಮಿತಿಗೆ ಸಂಬಂಧಿಸಿದ ಆದೇಶ.ಆದರೆ ಇವೆಲ್ಲವುಗಳ ನಡುವೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಐದು ಲಕ್ಷಕ್ಕೂ ಅಧಿಕ ಮಕ್ಕಳ ಪಾಲಕರು. ಇದಕ್ಕೆ ಕಾರಣ, ಹೈಕೋರ್ಟ್ ಆದೇಶವನ್ನು ಸರ್ಕಾರ ಇನ್ನೂ ಪಾಲನೆ ಮಾಡಿಲ್ಲ. ಅದು 1ನೇ ಕ್ಲಾಸ್ಗೆ ಪ್ರವೇಶ ಪಡೆಯುವಾಗ ಇರುವ ವಯೋಮಿತಿಗೆ ಸಂಬಂಧಿಸಿದ ಆದೇಶ.
ಐದು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ
ಶಿಕ್ಷಣ ಇಲಾಖೆಯು ಮಾರ್ಚ್ 28 ರಂದು ಹೊರಡಿಸಿದ್ದ ಆದೇಶದ ಪ್ರಕಾರ, 1ನೇ ತರಗತಿ ದಾಖಲಾತಿಗೆ ಕನಿಷ್ಠ ವಯಸ್ಸನ್ನು ಕಡ್ಡಾಯಗೊಳಿಸಲಾಗಿತ್ತು. ಬಳಿಕ ಅದನ್ನು 5 ವರ್ಷ 10 ತಿಂಗಳಿಗೆ ಬದಲಾಯಿಸಲಾಯಿತು. ಆದರೆ, ಈ ಆದೇಶದಿಂದಾಗಿ 2025-26ನೇ ಸಾಲಿನಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು (LKG/UKG) ಯಶಸ್ವಿಯಾಗಿ ಪೂರೈಸಿರುವ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.
ಪಾಲಕರ ಮೊರೆ
ಇದನ್ನು ಪ್ರಶ್ನಿಸಿ ಹಲವಾರು ಪಾಲಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಐದು ಲಕ್ಷಕ್ಕೂ ಅಧಿಕ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದಿನ ತರಗತಿಗೆ ಹೋಗಲು ಸಿದ್ಧರಾಗಿದ್ದಾರೆ. ಪ್ರಸ್ತುತ 5 ವರ್ಷ 5 ತಿಂಗಳು ಪೂರೈಸಿರುವ ಮಕ್ಕಳಿಗೂ ಒಂದನೇ ತರಗತಿ ದಾಖಲಾತಿಗೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮಕ್ಕಳ ಒಂದು ಅಮೂಲ್ಯ ವರ್ಷ ವ್ಯರ್ಥವಾಗುತ್ತದೆ ಎಂದು ಅವರ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು.
ವಾರದಲ್ಲಿ ಆದೇಶ
ಇದರ ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್, ವಯೋಮಿತಿ ಸಡಿಲಿಕೆ (Age Relaxation) ಮಾಡುವ ವಿಚಾರವನ್ನು ಕೇವಲ ಒಂದು ವಾರದೊಳಗೆ ಮರುಪರಿಶೀಲಿಸಿ, ಸೂಕ್ತ ಆದೇಶ ಹೊರಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ನಿರ್ದೇಶಿಸಿತ್ತು. ಒಂದು ವಾರ ಕಳೆದರೂ ಸರ್ಕಾರದಿಂದ ಯಾವುದೇ ಆದೇಶ ಹೊರಡದೇ ಇರುವುದು ಪಾಲಕರಿಗೆ ಆತಂಕ ತಂದಿದೆ.
ಪಾಲಕರು ಗೋಳು
ಜಾಲತಾಣಗಳಲ್ಲಿ ಪಾಲಕರು ನೋವು ಹೊರಹಾಕುತ್ತಿದ್ದಾರೆ. ಇನ್ನು ಎರಡೇ ದಿನ ಬಾಕಿ ಇದೆ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ. ನಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದು ನೋವಿನಿಂದ ಹೇಳುತ್ತಿದ್ದಾರೆ..

